Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ಖಾಸಗಿ ಕಾರ್ಯಕ್ರಮದಲ್ಲಿ ಶಾಸಕರ ಜೊತೆ ಭಾಗಿ ಆಗಿದ್ದ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಶಾಸಕರ ಆಪ್ತರೊಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಯ ಅಥಣಿ ತಾಲೂಕಿನ ತಂವಶಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅಥಣಿ ತಾಲೂಕು ಹಾಲುಮತ ಕುರುಬ ಸಮಾಜದ ಅಧ್ಯಕ್ಷ, ಜಿ.ಪಂ. ಮಾಜಿ ಸದಸ್ಯ ರಾವಸಾಬ ಬೆವನೂರು (74) ಮೃತರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಹಾಲುಮತ ಸಮಾಜದ ತಾಲೂಕಾ ಅಧ್ಯಕ್ಷ ರಾವಸಾಬ ಬೇವನೂರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ ಲಕ್ಷ್ಮಣ ಸವದಿ ಮತ್ತು ರಾವಸಾಬ ಬೇವನೂರು ಅವರು ತೆರಳಿದ್ದರು. ಮನೆಯ ಒಳಗಡೆ ಒಟ್ಟಿಗೆ ಫೋಟೋಶೂಟ್ ಮುಗಿಸಿ ಹೊರಗಡೆ ಬರುತ್ತಿದ್ದಂತೆ ಶಾಸಕರ ಆಪ್ತನಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಜನರು ರಾವಸಾಬ ಅವರನ್ನು ಬದುಕಿಸಲು ಪ್ರಯತ್ನಪಟ್ಟಿದ್ದಾರೆ. ಆದ್ರೆ, ದುರದೃಷ್ಟವಶಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.…
ತೆಲಂಗಾಣ : ಇಂದು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಆಗಲಿದೆ. ಮಾಜಿ ಮುಖ್ಯಮಂತ್ರಿ ಕೆ ಸಿ ಆರ್ ಪುತ್ರಿ ಕವಿತಾ ಅವರು ಇಂದು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪುತ್ರಿ ಕೆ ಕವಿತಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರೆ. ಮಾಜಿ ಎಂಎಲ್ಸಿ ಹಾಗೂ ತೆಲಂಗಾಣ ಜಾಗೃತಿ ಸಂಘಟನೆ ಅಧ್ಯಕ್ಷರಾಗಿದ್ದಾರೆ. ಇಂದು ಮುನಿರಾಬಾದ್ ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದು ಬೆಳಗ್ಗೆ 10 ಗಂಟೆಗೆ ಹೊಸ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. ಸುಮಾರು 50,000 ಜನರನ್ನು ಸೇರಿಸಿ ಹೊಸ ಪಕ್ಷದ ಹೆಸರು ಮಾಡಿದ್ದಾರೆ ಸದ್ಯ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆ ಆಗಿರುವ ಕೆ ಕವಿತಾ ತಮ್ಮ ಹೊಸ ಪಕ್ಷಕ್ಕೆ ತೆಲಂಗಾಣ ಜಾಗೃತಿ ಹೆಸ್ರು ನೋಡುತ್ತಾರೊ ಅಥವಾ ಹಿಂದೆ ತಮ್ಮ ತಂದೆ ಆರಂಭಿಸಿದ ಟಿ ಆರ್ ಎಸ್ ಹೆಸರೇ ನೀಡುತ್ತಾರೋ ಕಾದುನೋಡಬೇಕಾಗಿದೆ. ತಂದೆ ಕೆಸಿಆರ್ ಹಾಗೂ ಸೋದರ ಕೆ ಟಿ ರಾಮರಾವ್ಗೆ…
ಬೆಂಗಳೂರು : ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಪತಿ ಪ್ರಸ್ತುತ ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ಪಾವತಿಸಲು ನಿರ್ದೇಶಿಸಿರುವ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ.ಮನ್ಮಧರಾವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ. ದುಡಿಯುವ ಶಕ್ತಿಯುಳ್ಳ ಪತಿ ಕಾನೂನುಬದ್ಧ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪತ್ನಿ ಉದ್ಯೋಗದಲ್ಲಿದ್ದರೂ, ಪತಿಯ ಆದಾಯ ಗಳಿಸುವ ಸಾಮರ್ಥ್ಯವನ್ನು ಪರಿಗಣಿಸಿ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹಾಗೂ ಬಾಕಿ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸಲು ಸೂಚಿಸಿದೆ. ಪತಿ ಪರ ವಕೀಲರು, ಪತಿ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಕಾರಣಾಂತರಗಳಿಂದ ಉದ್ಯೋಗ ಕಳೆದುಕೊಂಡಿದ್ದರು.…
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಯಲಹಂಕದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಗೆ ಎದುರುಗಡೆಯಿಂದ ಬಂದ ಇಬ್ಬರೂ ಪುಂಡರು ಖಾಸಗಿ ಅಂಗಕ್ಕೆ ಮುಟ್ಟಿ ಅಸಭ್ಯವಾಗಿ ವರ್ತನೆ ತೋರಿದ್ದ ಘಟನೆ ವರದಿಯಾಗಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪುಂಡರನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಯಲಹಂಕ ಪೊಲೀಸರಿಂದ ಫುಡ್ ಡೆಲಿವರಿ ಬಾಯ್ ಹರೀಶ್ ಮತ್ತು ಪ್ರಜ್ವಲ್ ಎಂಬಂತರನ್ನು ಅರೆಸ್ಟ್ ಮಾಡಿದ್ದಾರೆ. ಯುವತಿಯ ಜೊತೆಗೆ ಅನುಚಿತ ವರ್ತನೆ ತೋರಿದ್ದಾರೆ ಬೆಂಗಳೂರಿನ ಕೋಗಿಲು ಮುಖ್ಯ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿತ್ತು. ಯುವಕರ ಪುಂಡಾಟ ಕಾರಿನ ಡ್ಯಾಶ್ ಕ್ಯಾಮರದಲ್ಲಿ ಸರಿಯಾಗಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇದೀಗ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ನವದೆಹಲಿ: ಮುಂದಿನ ಡಿಸೆಂಬರ್ ನೊಳಗೆ ದೇಶಾದ್ಯಂತ ಹಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಅಡೆತಡೆ ಇಲ್ಲದ ಎಐ ಆಧರಿತ ಮುಕ್ತ ಟೋಲ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಭಾರತ ತನ್ನ ಸಾರಿಗೆ ವೆಚ್ಚ ಇ ಉತ್ತಮ ಮೂಲಸೌಲಭ್ಯವನ್ನು ಅಭಿ ವೃದ್ಧಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾ ರಿಗಳಲ್ಲಿ ಮಲ್ಟಿ ಲೇನ್ ಪ್ರೀಫ್ಲೋ (ಎಂಎಲ್ಎಫ್ಎಫ್) ಸಾರಿಗೆ ವೆಚ್ಚ ಇಳಿಸಲು ಟೋಲಿಂಗ್ ನೀತಿ ಜಾರಿಗೆ ತರಲುದ್ದೇಶಿಸಿದೆ. ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎನ್ಪಿಆರ್), ಎಐ ಅನಾ ಲಿಟಿಕ್ಸ್ ಮತ್ತು ಆರ್ಎಫ್ಐಡಿ ಆಧರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ(ಫಾಸ್ಟಾ ಗ್) ವ್ಯವಸ್ಥೆ ಯನ್ನೊಳ ಗೊಂಡ ಹೊಸ ವಿಧಾನದ ಮೂಲಕ ಟೋಲ್ ಈ ಸಂಗ್ರ ಹಿಸಲಾಗುತ್ತದೆ. ವ್ಯವಸ್ಥೆಯಡಿ ಟೋಲ್ ಪ್ಲಾಜಾಗಳಲ್ಲಿ ಎನ್ಪಿಆರ್ ಕ್ಯಾಮೆರಾ ಗಳು ಮತ್ತು ಫಾಸ್ಟ್ರಾಗ್ ರೀಡರ್ಗಳ ಮೂಲಕ ವಾಹನಗಳನ್ನು ಗುರು ತಿಸಲಾಗುತ್ತದೆ. ಇದಕ್ಕಾಗಿ ವಾಹ ನಗಳು ಈಗಿನಂತೆ ಟೋಲ್ ಪ್ಲಾಜಾ ಗಳಲ್ಲಿ ನಿಲ್ಲಬೇಕಿಲ್ಲ. ಟೋಲ್ ಪಾವತಿ…
ಬೆಂಗಳೂರು : ಒಳ ಮೀಸಲು ಬಿಕ್ಕಟ್ಟು ಬಗೆಹರಿದಿರುವಂತೆ 56,432 ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಉದ್ಯೋಗಾಕಾಂಕ್ಷಿಗಳು ನೇಮಕ ಪ್ರಕ್ರಿಯೆಗಾಗಿ ತುದಿಗಾಲಲ್ಲಿ ಕಾದಿದ್ದಾರೆ. ಅಂದಹಾಗೆ ಸರ್ಕಾರದ ಅಂಶಗಳ ಪ್ರಕಾರ ಸರ್ಕಾರದ ಇಲಾಖೆಗಳಲ್ಲಿ 2,84,881 ಖಾಲಿ ಹುದ್ದೆಗಳಿವೆ. ಈ ಪೈಕಿ 56,432 ಹುದ್ದೆಗಳನ್ನು ತುಂಬವ ಪ್ರಕ್ರಿಯೆ ನಡೆಸಲು ಪ್ರಾಧಿಕಾರಗಳಿಗೆ ಈಗಾಗಲೇ ಸೂಚನೆ ನೀಡಲಾಗಿತ್ತು. ಇದೀಗ ಮರು ಅನುಮತಿ ನೀಡಲಾಗುತ್ತದೆ. ಈ 56,432 ಹುದ್ದೆಗಳಲ್ಲಿ, ಸುಮಾರು 32,132 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ (ಹೈದರಾಬಾದ್ ಕರ್ನಾಟಕ) ಸ್ಥಳೀಯ ಮೀಸಲಾತಿ ವ್ಯಾಪ್ತಿಗೆ ಬರುತ್ತವೆ. ಉಳಿದವು ರಾಜ್ಯಮಟ್ಟದ ಸಾಮಾನ್ಯ ಹುದ್ದೆಗಳಾಗಿವೆ. ಹೈ-ಕಾ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಪುನಃ ಅನುಮತಿ ಪಡೆಯಬೇಕಾಗಿಲ್ಲ. ಪರಿಭಾವಿತ ಎಂದೇ ಪರಿಗಣನೆಯಾಗುತ್ತದೆ. ಇನ್ನು ರಾಜ್ಯ ಮಟ್ಟದ ಹುದ್ದೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಅನುಮೋದನೆ ನೀಡುವಾಗ, ಆಯಾ ಇಲಾಖೆಗಳಿಗೆ ಆರ್ಥಿಕ ವರ್ಷದ ಬಜೆಟ್ ಮಿತಿಯೊಳಗೆ ವೇತನ ಭರಿಸಲು ಸಾಧ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಹಂತ ಹಂತವಾಗಿ ಭರ್ತಿ ಮಾಡಲು ಸೂಚನೆ ನೀಡಿದೆ. ಜತೆಗೆ ಅಯಾ ನೇಮಕ…
ಬೆಂಗಳೂರು : ಐಪಿಎಲ್ 2026ರ ಕೊನೆಯ ಪಂದ್ಯವನ್ನು ನಿನ್ನೆ ಬೆಂಗಳೂರಿನ ಪುಟ್ಟಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತನ್ನ ಕೊನೆಯ ಪಂದ್ಯ ಗುಜರಾತ್ ವಿರುದ್ಧ ಆಡಿತು. ಈ ಒಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ದೇವದತ್ ಪಡಿಕಲ್ ಅಬ್ಬರಿಸಿದ್ದು, 5 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಸಾಯಿ ಸುದರ್ಶನ್ ಭರ್ಜರಿ ಶತಕದೊಂದಿಗೆ 20 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. 206 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ಐದು ವಿಕೆಟ್ಗಳ ಭರ್ಜರಿ ಜಯ ಗಳಿಸಿತು. ಗುಜರಾತ್ ಪರ ಸಾಯಿ ಸುದರ್ಶನ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 58 ಬಾಲ್ಗಳಿಗೆ 11 ಫೋರ್, 5 ಸಿಕ್ಸರ್ ಜೊತೆ ಸೆಂಚುರಿ ಬಾರಿಸಿದರು. ನಾಯಕ ಶುಭಮನ್ ಗಿಲ್ 32, ಜೋಶ್ ಬಟ್ಲರ್ 25, ವಾಷಿಂಗ್ಟನ್ ಸುಂದರ್ 19, ಜೇಸನ್ ಹೋಲ್ಡರ್ 23 ರನ್ ಗಳಿಸಿ ತಂಡ…
ಉತ್ತರಕನ್ನಡ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಡವಟ್ಟಿನಿಂದಾಗಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಅನ್ಯಾಯಕ್ಕೊಳಗಾಗಿದ್ದ ಶಿರಸಿಯ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್, ಈಗ 625ಕ್ಕೆ 603 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕೇವಲ 24 ಗಂಟೆಗಳಲ್ಲಿ ಇಡೀ ಫಲಿತಾಂಶವೇ ಬದಲಾಗಿದ್ದು, ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದಾಗ ಲೀಸಾ ಖಾನಮ್ ಅವರ ಅಂಕಪಟ್ಟಿಯಲ್ಲಿ ಕೆಲವು ವಿಷಯಗಳಿಗೆ ‘ಗೈರು ಹಾಜರು’ ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಕಷ್ಟಪಟ್ಟು ಓದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಬರಸಿಡಿಲು ಬಡಿದಂತಾಗಿತ್ತು. ಈ ಗೊಂದಲದ ಬಗ್ಗೆ ಶಾಸಕರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿದರು. ತಾಂತ್ರಿಕ ದೋಷವನ್ನು ಸರಿಪಡಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಲೀಸಾ ಅವರು ಫೇಲ್ ಆಗಿರಲಿಲ್ಲ, ಬದಲಾಗಿ 603 ಅಂಕ (96.48%) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಬೋರ್ಡ್ ತನ್ನ ತಪ್ಪನ್ನು ತಿದ್ದಿಕೊಂಡು ಹೊಸ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ತನ್ನ ಶ್ರಮಕ್ಕೆ…
ಬೆಂಗಳೂರು: ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ಸಮಗ್ರ ವಿಚಾರಣೆ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯವು ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ಘಟನೆಯ ಹಿನ್ನೆಲೆ ದಿನಾಂಕ 23/04/2026 ರಂದು ನಡೆದ 2026ನೇ ಸಾಲಿನ ಸಿ.ಇ.ಟಿ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ಪರೀಕ್ಷೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಕೃಪಾನಿಧಿ ಪದವಿ ಪೂರ್ವ ಕಾಲೇಜು (Krupanidhi PU College) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಿ ನಂತರ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು. ಈ ವಿಷಯವು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಕ್ರಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರೀಕ್ಷಾ ವಸ್ತ್ರಸಂಹಿತೆಯ ಬಗ್ಗೆ ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದರೂ, ಇಂತಹ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಮಾಡಿದಂತೆ ಕಂಡುಬರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಇ.ಎ ಕಾರ್ಯನಿರ್ವಾಹಕ ನಿರ್ದೇಶಕರು ನೀಡಿದ ದೂರಿನನ್ವಯ ತನಿಖೆಗೆ…
ಬೆಂಗಳೂರು : ಒಳ ಮೀಸಲಾತಿ ಹಂಚಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಇದೀಗ ನಿರ್ಧಾರ ತೆಗೆದುಕೊಳ್ಳಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ದಲಿತ ಎಡಗೈ 5.25 ಮತ್ತು ಬಲಗೈ 5.25 ಹಾಗೂ ಇತರರಿಗೆ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ವರ್ಗ ನಿಗದಿಪಡಿಸಲಾದ ಮೀಸಲಾತಿ ಪ್ರಮಾಣ ಎಡಗೈ ಸಮುದಾಯ (SC-Left) 5.25% ಬಲಗೈ ಸಮುದಾಯ (SC-Right) 5.25% ಇತರ ಪರಿಶಿಷ್ಟ ಜಾತಿಗಳು (Others/Touchables) 4.5% ಈ ನಿರ್ಧಾರದ ಪ್ರಾಮುಖ್ಯತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಸಾಮಾಜಿಕ ನ್ಯಾಯ: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬ ಎಡಗೈ ಸಮುದಾಯದ ಬೇಡಿಕೆಯನ್ನು ಈ ನಿರ್ಧಾರವು ಬಹುಮಟ್ಟಿಗೆ ಈಡೇರಿಸಿದೆ. ಸುಪ್ರೀಂ ಕೋರ್ಟ್ ಹಸಿರು ನಿಶಾನೆ: ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರವಿದೆ…














