Subscribe to Updates
Get the latest creative news from FooBar about art, design and business.
Author: kannadanewsnow05
ಬಳ್ಳಾರಿ : ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಬಳ್ಳಾರಿ–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಿರುಮಲ ಹೋಟೆಲ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಹೋಟೆಲ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ವ್ಯಾಪಕವಾಗಿ ಹಬ್ಬಿತು. ಸ್ಫೋಟದ ಭಾರಿ ಶಬ್ಧಕ್ಕೆ ನಿದ್ದೆಯಲ್ಲಿದ್ದ ಕುಟುಂಬಸ್ಥರು ಬೆಚ್ಚಿಬಿದ್ದು ತಕ್ಷಣ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾದರು. ಹೋಟೆಲ್ ಮಾಲೀಕ ಈರಣ್ಣ ಸೇರಿದಂತೆ ಒಟ್ಟು 9 ಮಂದಿ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಒಳಗಿದ್ದರೆಂದು ತಿಳಿದುಬಂದಿದೆ. ಘಟನೆಯಲ್ಲಿ ಬಾಲಕ ಶ್ರೀನಿವಾಸ (10) ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಉಳಿದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಗೆ ಸಂಬಂಧಿಸಿದಂತೆ ತೆಕ್ಕಲಕೋಟೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬೀದರ್ : ರಥದ ಚಕ್ರಕ್ಕೆ ಸಿಲುಕಿ ಓರ್ವ ಭಕ್ತನ ಕಾಲು ಕಟ್ ಆಗಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರು ಭಕ್ತರಿಗೆ ಗಾಯಗಳಾಗಿದ್ದು ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಈ ಒಂದು ದುರಂತ ಸಂಭವಿಸಿದೆ. ಬೀದರ್ ನ ಬಸವಕಲ್ಯಾಣದಲ್ಲಿ ಈ ಒಂದು ಜಾತ್ರೆ ನಡೆಯುತ್ತಿದ್ದು ಈ ಒಂದು ಜಾತ್ರೆಯಲ್ಲಿ ಈ ಒಂದು ದುರಂತ ಸಂಭವಿಸಿದೆ. ಬಸವಕಲ್ಯಾಣದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು ಇಂದು ಬೆಳಿಗ್ಗೆ ಈ ಒಂದು ಜಾತ್ರೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಆದಂತಹ ಅವಘಡದಿಂದ ಓರ್ವ ಭಕ್ತ ಕಾಲು ಕಟ್ಟಾಗಿದೆ. ಏನೋ ಘಟನೆಯಲ್ಲಿ ಇನ್ನು ಮೂವರು ಭಕ್ತರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ತಕ್ಷಣ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು : ಬೈಕ್ ನಲ್ಲಿ ತೆರಳುವಾಗ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಇದೀಗ ಬೆಂಗಳೂರಿನ ಯಲಹಂಕದಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಬ್ಯಾಡ್ ಟಚ್ ಮಾಡಿದ್ದ ಘಟನೆ ವರದಿಯಾಗಿದೆ. ಯಲಹಂಕದ ಕೋಗಿಲು ಮುಖ್ಯರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಯಲಹಂಕದಲ್ಲಿ ಯುವತಿರಿಬ್ಬರೂ ರಸ್ತೆಯ ಮೇಲೆ ನಡೆದುಕೊಂಡು ಹೋಗ್ತಿದ್ದರು. ಈ ವೇಳೆ ಬೈಕ್ ಮೇಲೆ ಬಂದ ಪುಂಡರು ಯುವತಿಯರಿಗೆ ಅಸಹ್ಯವಾಗಿ ವರ್ತನೆ ಮಾಡಿದ್ದು ಹರೀಶ್ ಮತ್ತು ಪ್ರಜ್ವಲ್ ಎಂಬ ಕುಂಡವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬೆಂಗಳೂರಿನ ಯಲಹಂಕ ಪೋಲಿಸರಿಂದ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಪುಂಡರು ಯುವತಿಯರನ್ನು ಅಸಭ್ಯವಾಗಿ ಟಚ್ ಮಾಡಿ ಎಸ್ಕೇಪ್ ಆಗಿರುವ ವಿಡಿಯೋ ಕೂಡ ಇದೀಗ ಬರಲಾಗಿದೆ.
ಬೆಂಗಳೂರು : ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ 2 ಕೋಟಿ ರೂಪಾಯಿ ವಂಚನೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಬಂಧಿ ಯುವಕನಿಗೆ ಜ್ಯುವೆಲರಿ ಮಾಲೀಕ ಹಾಗೂ ಮಹಿಳೆ ಸೇರಿ ಎರಡು ಕೋಟಿ ರೂಪಾಯಿ ವಂಚನೆ ಎಸೆಗಿದ್ದಾರೆ. ಮದುವೆ ಖುಷಿಯಲ್ಲಿ ಇದ್ದ ಯುವಕ ಇದೀಗ ಕಂಗಾಲು ಆಗಿದ್ದಾನೆ. ಎಂಪಿ ಜುವೆಲರ್ಸ್ ಮಾಲೀಕ ಮತ್ತು ಮಹಿಳೆ ಸೇರಿ ಯುವಕನಿಗೆ ವಂಚನೆ ಎಸಗಿದ್ದಾರೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಈ ಒಂದು ಎಂಪಿ ಜುವೆಲರ್ಸ್ ಇದ್ದು ಚಿನ್ನದ ಅಂಗಡಿ ಮಾಲೀಕ ಇಂದ್ರಚಂಚ ಮತ್ತು ಸವಿತಾ ರೆಡ್ಡಿ ಯುವಕನಿಂದ ಎರಡು ಕೋಟಿ ಪಡೆದು ವಂಚನೆ ಎಸಗಿದ್ದಾರೆ. ಇದೀಗ ಇಂದ್ರಚಂದ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಎರಡು ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ಮದುವೆಗೆ ಚಿನ್ನ ಖರೀದಿಸಲು ಪುನೀತ್ ಎಂಬ ಯುವಕ ನಿರ್ಧರಿಸಿದ್ದ ಪುನೀತ್ಗೆ ಸಂಬಂಧಿ ಸವಿತಾ ರೆಡ್ಡಿ ಖೇಡ್ಡ ತೋಡಿದ್ದಾಳೆ. ಆನೇಕಲ್ ನ ಪುನಿತ್ಗೆ ಇಬ್ಬರು ಸೇರಿ 2 ಕೋಟಿ ವಂಚನೆ…
ಬೆಂಗಳೂರು : ಬೆಂಗಳೂರಿನಲ್ಲಿ 410 ಕೋಟಿ ಮೊತ್ತದ ನಕಲಿ ಜಿಎಸ್ಟಿ ರಶೀದಿ ವಂಚನೆಯ ಜಾಲ ಪತ್ತೆಯಾಗಿದ್ದು, ಇದೀಗ ಪೊಲೀಸರು ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದ ಕಿಂಗ್ ಪಿನ್ ತೌಸೀಕ್ ಅಲಿಯಾಸ್ ಮೊಹಮ್ಮದ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಆರೋಪಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದು, ಸರಕು ಸರಬರಾಜು ಮಾಡದೆಯೇ ನಕಲಿ ಸೃಷ್ಟಿಸಿ ವಂಚನೆ ಎಸಗಿದ್ದಾನೆ. ಸರಕಾರಕ್ಕೆ ಬರಬೇಕಿದ್ದ 102.5 ಕೋಟಿ ರೂಪಾಯಿ ತೆರಿಗೆ ಹಣ ಲೂಟಿ ಮಾಡಿದ್ದಾನೆ. ಬೇರೆಯವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಬಳಸಿ ಜಿ ಎಸ್ ಟಿ ನೋಂದಣಿ ಮಾಡಿಕೊಂಡಿದ್ದ. ಬೇರೆಯವರ ದಾಖಲೆಗಳನ್ನು ಬಳಸಿ ಆರೋಪಿಗಳು ಜಿಎಸ್ಟಿ ನೋಂದಣಿ ಪಡೆದಿದ್ದರು. ನೋಟಿಸ್ ನೀಡುತ್ತಿದ್ದಂತೆ ಕಂಪನಿ ರದ್ದು ಮಾಡಿ ಎಸ್ಕೇಪ್ ಆಗಿತ್ತು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.
ನೇಪಾಳ : ಭ್ರಷ್ಟಾಚಾರ ವಿರೋಧಿ ವೇದಿಕೆಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳ ನಂತರ, ನೇಪಾಳದ ಗೃಹ ಸಚಿವ ಸುಡಾನ್ ಗುರುಂಗ್ ಅವರು ತಮ್ಮ ಹಣಕಾಸಿನ ವಹಿವಾಟುಗಳ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 38 ವರ್ಷದ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು, ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಹೇಳಿದರು. ಇಂದಿನಿಂದ ಜಾರಿಗೆ ಬರುವಂತೆ ನಾನು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಬರೆದಿದ್ದಾರೆ, ರಾಜೀನಾಮೆ ನೀಡುವುದರಿಂದ ಹಿತಾಸಕ್ತಿ ಸಂಘರ್ಷ ಅಥವಾ ತನಿಖೆಯ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಬಹುದು ಎಂದು ಹೇಳಿದರು. ಸಾಮಾಜಿಕ ಮಾಧ್ಯಮಗಳ ಮೂಲಕ ಗುರುಂಗ್ ತಮ್ಮ ರಾಜೀನಾಮೆಯನ್ನು ಘೋಷಿಸಿದರು. “ನನ್ನನ್ನು ಒಳಗೊಂಡ ವಿಷಯಗಳಲ್ಲಿ ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಧಿಕಾರದಲ್ಲಿರುವಾಗ ತನಿಖಾ ಪ್ರಕ್ರಿಯೆಯ ಮೇಲೆ ಯಾವುದೇ ಹಿತಾಸಕ್ತಿ ಸಂಘರ್ಷ ಅಥವಾ ಪ್ರಭಾವವನ್ನು ತಪ್ಪಿಸಲು, ನಾನು ಇಂದು ಗೃಹ ಸಚಿವ ಹುದ್ದೆಗೆ ರಾಜೀನಾಮೆ…
ಕೊಪ್ಪಳ : ರಾಜ್ಯಾದ್ಯಂತ ಕೆಲವು ಕಡೆ ಬಿಸಿಲು ಹೆಚ್ಚಾಗಿದ್ದು ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಗುಡುಗು ಸಹಿತ ಭಾರಿ ಮಳೆ ಆಗುತ್ತಿದೆ. ಇದೀಗ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಕಾರು ಮುತ್ತಿಗೆ ಹಾಕಿ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ಹೌದು, ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕಾರು ತಡೆದು ಖಾಲಿ ಕೊಡ ಹಿಡಿದು ಮಹಿಳೆಯರು ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಶಿವರಾಜ್ ತಂಗಡಿ ಅವರ ಕಾರನ್ನು ಕಡೆದು ಮುತ್ತಿಗೆ ಹಾಕಿ ನೀರಿನ ಸಮಸ್ಯೆ ಬಗೆಹರಿಸುವಂತೆ ಅಳಲು ತೋಡಿಕೊಂಡಿದ್ದಾರೆ.. ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ನಾವು ಬೇರೇನು ಕೇಳುತ್ತಿಲ್ಲ ಬರಿ ನೀರು ಕೇಳುತ್ತಿದ್ದೇವೆ ಎಂದು ಜನ ಸಚಿವರು ನೋವು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ರಸ್ತೆ ಅಪಘಾತ ಸಂಭಾವಿಸಿದ್ದು, ಕುಂದಗೋಳ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಕಾರು ಡಿಕ್ಕಿ ಹೊಡೆದ ರಬಸಕ್ಕೆ ವ್ಯಕ್ತಿಯ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿದೆ. ಕಾರಿನ ಇಂಜಿನ್ ಒಳಗೆ ವ್ಯಕ್ತಿಯ ರುಂಡ ಬಿದ್ದಿದ್ದು, ರಸ್ತೆ ಬದಿ ಜೆಸಿಬಿ ರಿಪೇರಿ ಮಾಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ವ್ಯಕ್ತಿಯ ರುಂಡ ಮುಂಡ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ಮೃತನನ್ನು ಚಿದಾನಂದ ಕಟೆಗಾರ ಎಂದು ತಿಳಿದುಬಂದಿದೆ. ಕಾರಿನಲ್ಲಿ ಇದ್ದಂತಹ ಐದು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ, ವಿವಾಹೇತರ ಸಂಬಂಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದರಿಂದ ಅದೆಷ್ಟೋ ಸಂಸಾರಗಳು ಹಾಳಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದು, ಮದುವೆಯಾದ ಮಹಿಳೆಯರು ಗಂಡ ಮಕ್ಕಳನ್ನು ಬಿಟ್ಟು ತಮ್ಮ ಪ್ರಿಯಕರನ ಜೊತೆಗೆ ಪರಾರಿಯಾಗಿರುವ ಘಟನೆಗಳು ವರದಿಯಾಗಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ . ಹೌದು ಬೆಂಗಳೂರಲ್ಲಿ ಜಿಮ್ ಟ್ರೇನರ್ ಪತ್ನಿ ಸ್ನೇಹಿತನ ಜೊತೆಗೆ ಪರಾರಿಯಾಗಿದ್ದು ಇದೀಗ ಪತಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾನೆ. ನನಗೆ ನ್ಯಾಯ ಕೊಡಿಸುವಂತೆ ಜಿಮ್ ಟ್ರೈನರ್ ನಿತೇಶ್ ಎಂಬಾತ ಇದೀಗ ಆಳಲು ತೋಡಿಕೊಂಡಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಜಯನಗರ ನಿವಾಸಿ ನಿತೇಶ್ ಸ್ನೇಹಿತ ನವೀನ್ ಮನೆಯಲ್ಲಿಯೇ ಬಾಡಿಗೆಗೆ ಇದ್ದರು. ನವೀನ ಜೊತೆಗೆ ನಿತೇಶ್ ಪತ್ನಿ ಸಂಪರ್ಕದಲ್ಲಿ ಇದ್ದಳು. ದಿನಾಲು ಕರೆ ಮಾಡುವುದು ಚಾಟ್ ಮೆಸೇಜ್ ಮಾಡೋದು ಎಲ್ಲವೂ ಆಗುತ್ತಿತ್ತು. ಈ ವಿಷಯ ತಿಳಿದು ಪತ್ನಿಗೆ ನಿತೇಶ್ ಬುದ್ಧಿ ಹೇಳುತ್ತಾರೆ ನಿತೇಶ್ ಪತ್ನಿ ಹುಡುಗಿ ಹೆಸರಿನಲ್ಲಿ ನವೀನ್ ನಂಬರ್ ಸೇವ್…
ಬಾಗಲಕೋಟೆ : ಆರೋಪಿಯೊಬ್ಬನನ್ನು ಪ್ರಕರಣದಿಂದ ಕೈ ಬಿಡಲು ಪಿಎಸ್ಐ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದಿದೆ. ಬಂಧಿತರನ್ನು ಕೆರೂರು ಠಾಣೆಯ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೇದೆ ಸಂತೋಷ್ ಬಿರಾದರ್ ಎಂದು ಗುರುತಿಸಲಾಗಿದೆ. ಇಸ್ಪೀಟ್ ಆಡುವಾಗ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪ್ರಕರಣದಿಂದ ಕೈಬಿಡಲು ಹಾಗೂ ಆತನ ಬೈಕ್ ಬಿಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.70 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್.ಪಿ ಮಹಾಲಿಂಗ್ ನಂದಗಾಂವಿ ಮಾರ್ಗದರ್ಶನದಲ್ಲಿ, ಲೋಕಾ ಡಿವೈಎಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.ಲಂಚದ ಬೇಡಿಕೆ ಬಗ್ಗೆ ಮುತ್ತಪ್ಪ ನಾಯ್ಕರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಫೋನ್ ಕರೆ ರೆಕಾರ್ಡಿಂಗ್ ಆಧಾರದ ಮೇಲೆ ದಾಳಿ ಮಾಡಿ ಇಬ್ಬರನ್ನು ಲೋಕಾಯುಕ್ತ ಬಂಧಿಸಿದೆ.…














