Author: kannadanewsnow05

ಚಿಕ್ಕಬಳ್ಳಾಪುರ : ನಿನ್ನೆ ತಾನೇ ಹಿಂದೆ ಅಷ್ಟೇ ಬೆಂಗಳೂರಿನಲ್ಲಿ ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗಿಸಿದ ಪ್ರಕರಣ ನಡೆದಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ಕೂಡ CET ಪರೀಕ್ಷೆ ವೇಳೆ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಆರೋಪ ಕೇಳಿ ಬಂದಿದೆ. ಪರೀಕ್ಷೆಗೆ ಬಂದಿದ ವಿದ್ಯಾರ್ಥಿಯ ಜನಿವಾರವನ್ನು ತೆಗೆಸಿದ ಆರೋಪ ಕೇಳಿ ಬಂದಿದೆ. ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ಈ ಒಂದು ಘಟನೆ ನಡೆದಿದ್ದು ವಿದ್ಯಾರ್ಥಿ ಸುಪ್ರೀತ್ ಎಂಬತನ ಜನಿವಾರವನ್ನು ಸಿಬ್ಬಂದಿ ತೆಗೆಸಿದ್ದಾರೆ. ಮೊದಲ ದಿನ ಪರೀಕ್ಷೆಗೆ ಬಂದಾಗ ಜನಿವಾರ ತೆಗಿಸಿ ಕತ್ತರಿಸುವ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ನಡೆಗೆ ಸುಪ್ರೀತ್ ಆಕ್ಷೇಪ ವ್ಯಕ್ತಪಡಿಸಿದ್ದ. 12 ದಿನಗಳ ಹಿಂದೆ ಅಷ್ಟೇ ಪ್ರೀತಿಗೆ ಉಪನಯನ ಸಹ ಮಾಡಲಾಗಿತ್ತು ಇವಳೆ ಪರೀಕ್ಷೆ ಬರೆಯಲು ಬಂದಾಗ ಬಂದುಗಳು ಹಾಸನ ಜನವಾರವನ್ನು ಕತ್ತರಿಸಿ ತೆಗೆದು ಹಾಕಿದ್ದು ಸಿಬ್ಬಂದಿ ವಿರುದ್ಧ ಸುಪ್ರೀತ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.

Read More

ಬೆಂಗಳೂರು : ಕಾಂಗ್ರೆಸ್ ನಲ್ಲಿ ಇದೀಗ ಮತ್ತೆ ನಾಯಕತ್ವಕ್ಕಾಗಿ ರಣತಂತ್ರ ಜೋರಾಗಿದೆ. ಯಾವಾಗ ರಿಸೀವ್ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ದೆಹಲಿ ಭೇಟಿ ನೀಡಿದರೊ ಇತ್ತ ಸಿಎಂ ಸಿದ್ದರಾಮಯ್ಯ ಆಪ್ತರಿಂದಲೂ ರಿಂದಲೂ ಕೂಡ ಇದೀಗ ಪ್ಲಾನ್ ಬಿ ತಯಾರಿ ನಡೆದಿದ್ದು ಮತ್ತೊಂದು ಸುತ್ತಿನ ಕ್ರಾಂತಿಗೆ ಸಿಎಂ ಸಿದ್ದರಾಮಯ್ಯ ಹೊಸ ದಾಳ ಉರುಳಿಸಲು ಸಿಎಂ ಸಿದ್ದರಾಮಯ್ಯ ಬಣ ಸಜ್ಜಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಬದಲಾವಣೆಯ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ ಎಂದು ಆಪ್ತರ ಬಳಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದು ಆದರೂ ಎಲ್ಲದಕ್ಕೂ ಸಿದ್ಧರಾಗಿರುವಂತೆ ಸಚಿ ವರು ಸಲಹೆ ಕೊಟ್ಟಿದ್ದಾರೆ. ಅಹಿಂದ ಸಚಿವರಿಂದ ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಡಲು ಆಪ್ತ ನಾಯಕರು ಯತ್ನಿಸುತ್ತಿದ್ದಾರೆ. ಸಂಪೂರ್ಣ ಲೆಕ್ಕಾಚಾರ ಹಾಕಿದ್ದು, ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಲು ಆಪ್ತ ಸಚಿವರು ಸಿದ್ಧತೆ ಮಾಡಿದ್ದಾರೆ. ಮೇ ತಿಂಗಳ ಬೆಳವಣಿಗೆಗಳ ಮೇಲೆ ಸಿಎಂ ಬಣ ಲೆಕ್ಕಾಚಾರ ಹಾಕಿದ್ದು, ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಸಚಿವರಿಗೆ ಗುಮಾನಿ ಇದೇ…

Read More

ಬೆಂಗಳೂರು : ಮೇ ಮೊದಲ ವಾರದಲ್ಲಿ ರಾಜ್ಯ ರಾಜಕೀಯದ ಹೈಡ್ರಾಮಾ ಫಿಕ್ಸ್ ಎಂಬಂತಾಗಿದೆ. ಮೇ 6 ಬಳಿಕ ದೆಹಲಿಗೆ ರಾಜ್ಯ ರಾಜಕಾರಣ ಶಿಫ್ಟ್ ಆಗಲಿದ್ದು ಈ ಬಾರಿ ಹೈಕಮಾಂಡ್ ಅಂಗಳದಲ್ಲಿ ಬಿಗಿಪಟ್ಟಿಗೆ ಡಿಕೆ ಶಿವಕುಮಾರ್ ತಯಾರಿ ಮಾಡಿಕೊಂಡಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿ ಯಾತ್ರೆಗೆ ತಯಾರಿ ಮಾಡಿಕೊಂಡಿದ್ದು, ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ತಂಡ ಅಧಿಕಾರ ಹಂಚಿಕೆ ಮೊದಲು ತೀರ್ಮಾನ ಆಗಬೇಕು ಎಂದು ಪಟ್ಟು ಹಿಡಿದಿದೆ. ಸಂಪತ ವಿಸ್ತರಣೆಗೂ ಮುನ್ನ ಅಧಿಕಾರ ಹಂಚಿಕೆಯ ಬಗ್ಗೆ ತೀರ್ಮಾನಿಸಲು ಪಟ್ಟಣದಲ್ಲಿ ಸಂಪುಟ ಪುನರ್ ರಚನೆ ವಿಷಯವನ್ನೇ ಸಿಎಂ ಸಿದ್ದರಾಮಯ್ಯ ತಂಡಕೊಡ ಪ್ರತಿಪಾದಿಸುತ್ತಿದೆ ಪಂಚ ರಾಜ್ಯಗಳ ಚುನಾವಣೆ ಬಳಿಕ ಹೈಕಮಾಂಡ್ ಇಂದ ಪ್ರತ್ಯೇಕ ಸಭೆ ನಡೆಯಲಿದೆ.

Read More

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿ ನಡೆದಿದೆ. ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿಯಲು ನದಿಗೆ ಬಂದ ಕಾಡಾನೆ ಏಕಾಏಕಿ ಪ್ರವಾಸಿಗರ ಮೇಲೆ ಎರಗಿದೆ. ಈ ವೇಳೆ ಪ್ರವಾಸಿಗರು ಸ್ಥಳದಿಂದ ಎದ್ನೋಬಿದ್ನೋ ಎಂದು ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅಲ್ಲಿಂದ ಕಾಡಿನೊಳಗೆ ಕಾಲ್ಕಿತ್ತಿದೆ. ಕಾಡಾನೆ ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಟಿಸಲಗ ಪ್ರವಾಸಿಗರ ಮೇಲೆ ದಾಳಿ ಮಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರ ಕೊಲೆ ನಡೆದಿದ್ದು, ಹೋಟೆಲ್ ಗೆ ನುಗ್ಗಿ ಮೀಟರ್ ಬಡ್ಡಿಯ ದಂದೆಯ ಕಿಂಗ್ ಪಿನ್ ಅನ್ನು ಕೊಲೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಿನ್ನೆ ರಾತ್ರಿ ಒಂದು ಕೊಲೆ ನಡೆದಿದೆ. ಹೋಟೆಲ್ನಲ್ಲಿ ಬಡ್ಡಿ ದಂಧೆಕೋರ ಕಿಂಗ್ ಪಿನ್ ನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಎಂ ಎನ್ ಡಿ ಅಲಿಯಾಸ್ ಜಮೀರ್ ಅಹ್ಮದ್ ದರ್ಗಾ ವಾಲೆಯನ್ನು ಹತ್ಯೆಗೆದಿದ್ದಾರೆ. ಮೀಟರ್ ಬಡ್ಡಿ ದಂಧೆಯ ಕಿಂಗ್ ಪಿನ್ ಆಗಿದ್ದ ಜಮೀರ್ ದರ್ಗಾವಾಲೆಯನ್ನು ಒಂದು ವರ್ಷದ ಹಿಂದೆ ಕಿಡ್ನಾಪ್ ಮಾಡಲಾಗಿತ್ತು. ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಕಿಡ್ನಾಪ್ ಮಾಡಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ನಿನ್ನೆ ರಾತ್ರಿ 11:00 ಹೋಟೆಲ್ಗೆ ಊಟಕ್ಕೆ ಎಂದು ಜಮೀರ್ ಬಂದಿದ್ದಾಗ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ದೀಪನ್ ಭೇಟಿ ನೀಡಿದ್ದು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಶಾಸಕ ಟಿಡಿ ರಾಜೇಗೌಡಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಶೃಂಗೇರಿ ಕ್ಷೇತ್ರದ ಅಂಚೆ ಮತ ಮರುವಣಿಗೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಮೇ 2 ರಂದು ಬೆಳಿಗ್ಗೆ 9 ಗಂಟೆಗೆ ಅಂಚೆ ಮರು ಮತ ಎಣಿಕೆ ನಡೆಯಲಿದೆ. ಚಿಕ್ಕಮಂಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮರು ಮತ ಎಣಿಕೆ ನಡೆಯಲಿದೆ. ಟಿಡಿ ರಾಜೇಗೌಡ ಆಯ್ಕೆ ಆಸಿಂದು ಕೋರಿ ಜೀವರಾಜ್ ಅರ್ಜಿ ಸಲ್ಲಿಸಿದ್ದರು. ಜೀವರಾಜ್ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿಯಾಗಿದ್ದು, ಏಪ್ರಿಲ್ 6 ರಂದು ಮರು ಎಣಿಕೆಗೆ ಆದೇಶ ನೀಡಿ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಎರಡು ವಾರಗಳ ಕಾಲಾವಕಾಶ ಮಧ್ಯಂತರ ತಡೆ ನೀಡಿದ್ದ ಹೈಕೋರ್ಟ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಇದೀಗ ಅಂಚೆ ಮತಗಳ ಮರು ಎಣಿಕೆ ಮಾಡಲು ಹೈಕೋರ್ಟ್ ಮತ್ತೆ ಆದೇಶ…

Read More

ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೀಕರವಾದ ಕೊಲೆ ನಡೆದಿದ್ದು ಮಗನ ಕುಡಿತದ ಚಟದಿಂದ ಬೇಸತ್ತ ತಾಯಿಯೊಬ್ಬಳು ಹೆತ್ತ ಮಗನ್ನೇ ಕೊಲೆ ಮಾಡಿರುವ ಘಟನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.ಎನ್ ಆರ್ ಮೊಹಲ್ಲಾ ನಿವಾಸಿ ರಮೇಶ್ (43) ಕೊಲೆಯಾದ ವ್ಯಕ್ತಿ. ಮಗ ರಮೇಶ್ ನನ್ನು ತಾಯಿ ಮಂಜುಳಾ ಭೀಕರವಾಗಿ ಕೊಲೆ ಮಾಡಿದ್ದು, ಪೊಲೀಸರು ಮಂಜುಳಾಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮಂಜುಳಾ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮಗ ರಮೇಶ್ ದಿನಾಲು ತಾನು ಕುಡಿಯುವುದಕ್ಕೆ ಹಣ ಕೊಡು ಎಂದು ಪೀಡಿಸುತ್ತಿದ್ದ. ಹೀಗಾಗಿ ಆತನ ಹಿಂಸೆ ತಾಳಲಾರದೆ ಚಾಮುಂಡಿ ಬೆಟ್ಟಕ್ಕೆ ಕರೆದೋಯ್ದು ಕೊಲೆ ಮಾಡಿದ್ದಾರೆ. ಕಲ್ಲಿನಿಂದ ಹೊಡೆದು ಮಗನನ್ನು ತಾಯಿ ಕೊಲೆ ಮಾಡಿದ್ದಾರೆ ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಾಸನ : ಹಾಸನ ಜಿಲ್ಲೆಯಲ್ಲಿ ಮತ್ತೆ ಲಾಂಗು ಮತ್ತು ಜಳಪಿಸಿದ್ದು ದುಷ್ಕರ್ಮಿಗಳಿಂದ ಉದ್ಯಮಿ ಮಂಜೇಗೌಡ ಎನ್ನುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಮಾರಣಾಂತಿಕವಾಗಿ ಹಳೆ ನಡೆಸಿ ದುರುಳರು ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಜೋಡಿ ಗುಬ್ಬಿ ಗ್ರಾಮದ ಉದ್ಯಮಿ ಮಂಜೇಗೌಡ ಗೆ ಗಂಭೀರವಾದ ಗಾಯಗಳಾಗಿದ್ದು, ಪೆಟ್ರೋಲ್ ಬಂಕ್ ಮತ್ತು ಟ್ರ್ಯಾಕ್ಟರ್ ಶೋರೂಮ್ ಮಾಲೀಕರಾಗಿದ್ದಾರೆ. ಟ್ರಾಕ್ಟರ್ ಶೋರೂಮ್ ಬಳಿ ನಿಂತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳಿಂದ ಲಾಂಗು ಮಚ್ಚುಗಳಿಂದ ದಾಳಿ ನಡೆದಿದೆ. ಮರಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್ ಧರಿಸಿ ಬಂದಿದ್ದರು ಎನ್ನಲಾಗಿದೆ. ಸದ್ಯ ಮಂಜೇಗೌಡ ಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮೈಸೂರಿಗೆ ಕಳುಹಿಸಿದ್ದಾರೆ. ಹಳೆಯ ವೈಶಮ್ಯ ಹಿಡಯಲಿ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತಂತೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಇರಾನ್ ಅಮೇರಿಕಾ ಯುದ್ಧದ ನಡುವೆಯೂ ಇಂದು ಮತ್ತೆ ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದಲ್ಲಿ ಎರಡನೇ ಹಂತದ ಸಂಧಾನ ಮಾತುಕತೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಅಮೆರಿಕಾ ಮೂಲದ ಎರಡು ಹಡುಗುಗಳನ್ನು ಇರಾನ್ ವಶಕ್ಕೆ ಪಡೆದುಕೊಂಡಿದೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ. ಹೌದು ಕಚ್ಚಾ ತೈಲ ಹೊತ್ತು ಸಾಗುತ್ತಿದ್ದ ಅಮೇರಿಕಾದ ಎರಡು ಹಡಗುಗಳನ್ನು IRGC ವಶಕ್ಕೆ ಪಡೆದುಕೊಂಡಿದೆ. ಅಮೆರಿಕಕ್ಕೆ ಸೇರಿದೆ ಎನ್ನಲಾದ ಎರಡು ಹಡಗುಗಳನ್ನು ಇದೀಗ ಸೀಜ್ ಮಾಡಿದೆ. ಇನ್ನು ಇದರ ನಡುವೆ ಇಂದು ಅಮೆರಿಕ ಇರಾನ್ ನಡುವೆ ಎರಡನೇ ಹಂತದ ಸಂಧಾನ ನಡೆಯಲಿದೆ ನಾವು ಪಾಕಿಸ್ತಾನ ಮೆಜೆಸ್ಟಿಕ್ ಸಂಧಾನ ಸಭೆಯಲ್ಲಿ ಭಾಗಿಯಾಗುತ್ತೇವೆ ಆದರೆ ಅಮೇರಿಕಾ ಜೊತೆಗೆ ನೇರ ಮಾತುಕತೆ ಇಲ್ಲ ಎಂದು ಇರಾನ್ ನೇರವಾಗಿ ಹೇಳಿದೆ ಅಮೆರಿಕದ ನಾಯಕನ ಜೊತೆ ಮುಖಾಮುಖಿಯಾಗಿ ನಾವು ಚರ್ಚೆ ಮಾಡಲ್ಲ ಪಾಕಿಸ್ತಾನ ನಾಯಕರ ಜೊತೆ ಮುಖಾಮುಖಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದೆ. ನಮ್ಮ ಅಭಿಪ್ರಾಯವನ್ನು ಪಾಕಿಸ್ತಾನ ನಾಯಕರಿಗೆ ತಿಳಿಸುತ್ತೇವೆ ಎಂದು ಇರಾನ್ ಹೇಳಿದೆ.…

Read More

ತುಮಕೂರು : ಇಂದಿನಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್ 20 ಕ್ರೀಡಾಕೂಟ ನಡೆಯಲಿದೆ. ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಇಂದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಆದರೆ ಕ್ರೀಡಾಂಗಣದ ಶೌಚಾಲಯದಲ್ಲಿ ಇದೀಗ ಸೂಜಿ ಮತ್ತು ಸಿರಿಂಜ್ ಪತ್ತೆಯಾಗಿದ್ದು ಈ ಒಂದು ಸೂಜಿ ಮತ್ತು ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಕ್ರೀಡೆ ಆರಂಭವಾದ ಮೊದಲ ದಿನವೇ ಸೂಜಿ ಮತ್ತು ಸಿರಿಂಜ್ ಗಳು ಪತ್ತೆಯಾಗಿವೆ. ಕ್ರೀಡಾಪಟುಗಳಿಂದ ಉತ್ತೇಜಕ ಮದ್ದು ಸೇವನೆ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದು ಬೆಳಿಗ್ಗೆ ಕ್ರೀಡಾಕೂಟಕ್ಕೆ ಸಚಿವ ಜಿ ಪರಮೇಶ್ವರ್ ಚಾಲನೆ ನೀಡಿದರು. ದೇಶದ 28 ರಾಜ್ಯಗಳಿಂದ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಆಯ್ಕೆ ಆಗುವವರು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಇದೆ. ಇಂದು ಬೆಳಿಗ್ಗೆ 1,500 ಮೀಟರ್ ಊಟ ಜಾವೆಲಿನ್ ಎಸೆತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದಿದೆ. ಇದರ ಬೆನ್ನಲ್ಲೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್…

Read More