Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಲ್ಲಿ ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವು ವಿಚಾರವಾಗಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕೊಡುವ ನಿರ್ಧಾರವೇ ಅಕ್ರಮವಾಗಿದೆ. ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಬೇಕು. ಯಾರದ್ದೋ ಮಾತು ಕೇಳಿ ಮನಸೋ ಇಚ್ಛೆ ತೀರ್ಮಾನ ಸಾಧ್ಯವೇ? ಕೆಸಿ ವೇಣುಗೋಪಾಲ ಬೆದರಿಕೆ ಬೆನ್ನೆಲೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಉಲ್ಟಾ ಹೊಡೆದರು. ಅಕ್ರಮ ವಲಸಿಗರಿಗೆ ಮನೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದರು. ಬೆಳಗಾವಿಯಲ್ಲಿ ಮಾತನಾಡಿದ ವಿಜಯೇಂದ್ರ, ನಿಯಮಗಳಿಗೆ ತೋರಿ ಹೊಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ. ಕಾನೂನು ವಿರುದ್ಧವಾಗಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಂಡಿದ್ದಾರೆ ಅತೀ ವೃಷ್ಟಿಯಿಂದ ಹಾನಿಯಾಗಿದೆ ರೈತರು ಪರಿಹಾರ ನಿರೀಕ್ಷೆಯಲ್ಲಿದ್ದರು ಪರಿಹಾರ ಘೋಷಿಸದೆ ಕೇಂದ್ರ ಸರ್ಕಾರದತ್ತ ಸಿಎಂ ಸಿದ್ದರಾಮಯ್ಯ ಬೊಟ್ಟು ಮಾಡಿದರು. ಪರಿಹಾರ ಕೊಡಿ ಅಂದರೆ ಪ್ರಧಾನಿಗೆ ಪತ್ರ ಬರೆದಿದ್ದೆ ಸಿಎಂ ಸಿದ್ದರಾಮಯ್ಯ ಸಾಧನೆ ಆಗಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಅಕ್ರಮ ವಲಸಿಗರಿಗೆ ಮನವಿ…
ಬೆಳಗಾವಿ : ರಾಜ್ಯದಲ್ಲಿ ಡಾಬಾ ಪಾನ್ ಶಾಪ್ ನಲ್ಲೂ ಕೂಡ ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತಿದೆ. ರಾಜ್ಯದ 6ನೇ ಗ್ಯಾರಂಟಿ ಕುಡುಕರ ರಾಜ್ಯ ಎಂದು ಘೋಷಣೆ ಮಾಡಿ. ಸಿಎಂ ಸಿದ್ದರಾಮಯ್ಯ ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಜನ ದಂಗೆ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಎರಡು ತಿಂಗಳ ಕಂತು 5 ಸಾವಿರ ಕೋಟಿ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಸಿಎಂ ಸಿದ್ದರಾಮಯ್ಯ ಸದನಕ್ಕೆ ಸಮರ್ಪಕವಾಗಿ ಉತ್ತರ ಕೊಡಬೇಕಿತ್ತು 5,000 ಕೋಟಿಯ ಬಗ್ಗೆ ಏನು ಅವ್ಯವಹಾರ ಆಗಿದೆ ಗೊತ್ತಿಲ್ಲ ಗ್ಯಾರಂಟಿ ಗಳಿಗೆ ಹಣ ಸಂಗ್ರಹಿಸುವುದೇ ದೊಡ್ಡ ಸವಾಲಾಗಿದೆ ಎಂದು ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಬೈಕ್ ಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೆ ಸಾವು, ಮಗುವಿನ ಸ್ಥಿತಿ ಗಂಭೀರ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿ ಇದ್ದಂತಹ ಇಬ್ಬರು ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಗಂಭೀರ ಆಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಓವರ್ ಟೆಕ್ ಮಾಡಲು ಹೋಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳದಲ್ಲೇ ಇಬ್ಬರು ಸವಾರರು ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಅಪಘಾತದಲ್ಲಿ ಮೃತಪಟ್ಟವರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ತುಮಕೂರು : ಕಳೆದ ಶನಿವಾರ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ತಾಯಿ ಮಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪರಪುರುಷನ ಸಹವಾಸ ಮಾಡಿದ್ದಕ್ಕೆ, ಆತ ಅಕ್ರಮ ಸಂಬಂಧದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಬ್ಲಾಕ್ ಮೇಲ್ ಗೆ ಹೆದರಿ ತಾಯಿ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶನಿವಾರ 8 ವರ್ಷದ ಮಗುವಿನ ಜೊತೆಗೆ ಕೆರೆಗೆ ಹಾರಿ ಹಂಸಲೇಖ ಆತ್ಮಹತ್ಯೆಗೆ ಶರಣಾಗಿದ್ದರು. ಮಲ್ಲಿಕಾರ್ಜುನ ಎಂಬಾತನ ಜೊತೆಗೆ ಹಂಸಲೇಖ ಅಕ್ರಮ ಸಂಬಂಧ ಹೊಂದಿದ್ದಳು. ಈ ವೇಳೆ ಮಲ್ಲಿಕಾರ್ಜುನ ಅಕ್ರಮ ಸಂಬಂಧದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಪುತ್ರ ಗುರುಪ್ರಸಾದ್ ಜೊತೆಗೆ ಹಂಸಲೇಖ ಮನೆ ಬಿಟ್ಟು ಹೋಗಿದ್ದರು. ಶುಕ್ರವಾರ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದು ಶನಿವಾರ ತನ್ನ 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಮಲ್ಲಿಕಾರ್ಜುನ್ ಎಂಬತನ ವಿರುದ್ಧ ಪೊಲೀಸರು FIR…
ಮಂಗಳೂರು : ಪುತ್ತೂರಿನಲ್ಲಿ ಬಿಜೆಪಿ ನಾಯಕನ ಪುತ್ರ ಕೃಷ್ಣ ಜೆ ರಾವ್ ಯುವತಿಯೊಬ್ಬರನ್ನು ಪ್ರೀತಿಸಿ ಗರ್ಭವತಿಯನ್ನಾಗಿಸಿ ಆಕೆಗೆ ಮಗು ಜನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ DNA ಪರೀಕ್ಷೆಯಲ್ಲಿ ಮಗುವಿಗೆ ತಂದೆಯೆಂದು ಸಾಬೀತಾದರೂ, ಶಿಶು ಜನಿಸಿ 6 ತಿಂಗಳಾದರೂ ಆರೋಪಿ ಮದುವೆಯಾಗಲು ಒಪ್ಪುತ್ತಿಲ್ಲ. ಪ್ರಮುಖ ಬಿಜೆಪಿ ನಾಯಕರ ಸಂಧಾನ ವಿಫಲವಾಗಿದೆ. ಹೌದು ನ್ಯಾಯಾಲಯದ ನಿರ್ದೇಶನದಂತೆ ಡಿಎನ್ಎ ಟೆಸ್ಟ್ ಮಾಡಿ, ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ಸಾಬೀತಾದರೂ ಆತ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಬಿಜೆಪಿಯ ಪ್ರಮುಖ ನಾಯಕರು, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಅನೇಕರು ಸಂಧಾನಕ್ಕೆ ಯತ್ನಿಸಿದ್ದರೂ ವಿಫಲವಾಗಿದೆ. ಪರಿಣಾಮವಾಗಿ ಕಾನೂನು ಹೋರಾಟವೊಂದೇ ನಮಗೆ ಉಳಿದಿರುವ ದಾರಿ ಎಂದು ಸಂತ್ರಸ್ತೆಯ ಕುಟುಂಬ ಹೇಳಿಕೊಂಡಿದೆ. ಪ್ರಕರಣ ಹಿನ್ನೆಲೆ? ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್, ಶಾಲಾ ದಿನಗಳಿಂದ ಪರಿಚಿತವಾಗಿದ್ದ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ವಂಚಿಸಿದ್ದಾನೆ ಎಂಬ ಆರೋಪ ಸುಮಾರು 7-8 ತಿಂಗಳುಗಳ ಹಿಂದೆ ಕೇಳಿಬಂದಿತ್ತು.…
ವೈಕುಂಠ ಏಕಾದಶಿ ಶುಭವಾಗಲಿ ಶ್ರೀ ಮಹಾವಿಷ್ಣು ಸ್ತೋತ್ರಗಳ -೧- || ಶ್ರೀ ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್ || ಅರ್ಜುನ ಉವಾಚ:- ಕಿಂ ನು ನಾಮ ಸಹಸ್ರಾಣಿ ಜಪಂತೆ ಚ ಪುನ: ಪುನ: | ಯಾನಿ ನಾಮಾನಿ ದಿವ್ಯಾನಿ ತಾನಿ ಚಾಸ್ಸ್ಚಕ್ಷ್ವ ಕೇಶವ ||೧|| ಭಾವಾರ್ಥ:-ಅರ್ಜುನನು ಕೇಳುವನು: ಕೇಶವಾ! ಮನುಜರು ಒಂದೇ ತೆರನಾಗಿ ನಿನ್ನ ಒಂದು ಸಾವಿರ ನಾಮಗಳನ್ನು ಯಾಕಾಗಿ ಪುನ: ಪುನ: ಜಪಿಸುತ್ತಾರೆ? ನಿನ್ನ ಆ ದಿವ್ಯ ನಾಮಗಳ ಬಗ್ಗೆ ವಿವರಿಸಿ ಹೇಳುವಂತವನಾಗು. ಭಗವಾನುವಾಚ:- ಮತ್ಸ್ಯಂ ಕೂರ್ಮಂ ವರಾಹಂ ಚ ವಾಮನಂ ಚ ಜನಾರ್ದನಮ್ | ಗೋವಿಂದಂ ಪುಂಡರೀಕಾಕ್ಷಂ ಮಾಧವಂ ಮಧುಸೂದನಮ್ ||೨|| ಭಾವಾರ್ಥ:-ಭಗವಂತನು ಹೇಳುತ್ತಾನೆ: ಅರ್ಜುನಾ; ಮತ್ಸ್ಯ,ಕೂರ್ಮ; ವರಾಹ,ವಾಮನ, ಜನಾರ್ದನ,ಗೋವಿಂದ,ಪುಂಡರೀಕಾಕ್ಷ,ಮಾಧವ,ಮಧುಸೂದನ—– ಪದ್ಮನಾಭಂ ಸಹಸ್ರಾಕ್ಷಂ ವನಮಾಲಿಂ ಹಲಾಯುಧಮ್ | ಗೋವರ್ಧನಂ ಹೃಷೀಕೇಶಂ ವೈಕುಂಠಂ ಪುರುಷೋತ್ತಮ್ ||೩|| ಭಾವಾರ್ಥ:-ಪದ್ಮನಾಭ, ಸಹಸ್ರಾಕ್ಷ, ವನಮಾಲಿ, ಹಲಾಯುಧ, ಗೋವರ್ಧನ, ಹೃಷೀಕೇಶ, ವೈಕುಂಠ, ಪುರುಷೋತ್ತಮ———– ವಿಶ್ವರೂಪಂ ವಾಸುದೇವಂ ರಾಮಂ ನಾರಾಯಣಂ ಹರಿಮ್ | ದಾಮೋದರಂ ಶ್ರೀಧರಂ ಚ ವೇದಾಂಗಂ ಗರುಢಧ್ವಜಮ್…
ಬೆಂಗಳೂರು : ಬೆಂಗಳೂರಿನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇದೀಗ ನಂದಿನಿ ಉಳಿದುಕೊಂಡಿದ್ದ ಪಿಜಿಯ ಕೊಠಡಿಯಲ್ಲಿ ಒಂದು ಡೈರಿ ಪತ್ತೆಯಾಗಿದೆ. ಅನ್ನು ಕೆಂಗೇರಿ ಠಾಣೆ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಡೈರಿಯಲ್ಲಿ ಹಲವು ಅಂಶಗಳನ್ನು ನಂದಿನಿ ಉಲ್ಲೆಖಿಸಿದ್ದಾರೆ. ನನಗೆ ಸರ್ಕಾರಿ ಕೆಲಸ ಇಷ್ಟ ಇಲ್ಲ ಎಂದು ಡೈರಿಯಲ್ಲಿ ನಂದಿನಿ ಉಲ್ಲೇಖ ಮಾಡಿದ್ದಾರೆ ನನಗೆ ಆಕ್ಟಿಂಗ್ ಇಷ್ಟ ಇದೆ ಮನೆಯಲ್ಲಿ ಯಾರು ನನ್ನ ಮಾತು ಕೇಳುತ್ತಿಲ್ಲ ಆತ್ಮಹತ್ಯೆಗೆ ಮುನ್ನ ನಂದಿನಿ ತನ್ನ ಡೈರಿಯಲ್ಲಿ ಈ ವಿಚಾರವಾಗಿ ಉಲ್ಲೇಖಿಸಿದ್ದಾರೆ. ಕೆಂಗೇರಿ ಪೊಲೀಸರು ಡೈರಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ. ಮೂಲತಃ ನಂದಿನಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿಯಾಗಿದ್ದರು. ಬೆಂಗಳೂರಿನ ಕೆಂಗೇರಿಯ ಪಿಜಿಯಲ್ಲಿ ಅವರು ನೆಲೆಸಿದ್ದರು. ಆರ್ ಆರ್ ನಗರದಲ್ಲಿ ಆಕ್ಟಿಂಗ್ ತರಬೇತಿಯನ್ನು ಪಡೆದಿದ್ದರು. ಹೆಸರುಘಟ್ಟದ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ಸರಿಯಾಗಿ ಹೋಗದೆ ಆಕ್ಟಿಂಗ್ ಕ್ಲಾಸ್ ಗೆ ಹೋಗುತ್ತಿದ್ದರು. 2019 ರಿಂದ ಕನ್ನಡದ…
ಬೆಂಗಳೂರು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮವನ್ನು ಇದೀಗ ಬಂದ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ಡಿಸೆಂಬರ್ 31ರ ಮಧ್ಯಾನದಿಂದ ನಂದಿ ಗಿರಿಧಾಮ ಬಂದ್ ಇರಲಿದೆ. ಜನವರಿ 1 ಬೆಳಗ್ಗೆ 10ರವರೆಗೆ ಕ್ಲೋಸ್ ಇರುತ್ತದೆ. ಹೊಸ ವರ್ಷಾಚರಣೆಗೆ ವಾಹನ ಸಂಚಾರದಲ್ಲಿ ಕೂಡ ಬದಲಾವಣೆ ಆಗಿದ್ದು ಡಿಸೆಂಬರ್ 31 ರಿಂದ ರಾತ್ರಿ 9 ರಿಂದ ರಿಂದ ಸಂಚಾರ ಬದಲಾವಣೆ ಆಗಲಿದೆ ಎಮ್ಜಿ ರಸ್ತೆ, ಕ್ವೀನ್ಸ್ ವೃತ್ತದ ಕಡೆಯಿಂದ ಪ್ರಯಾಣಿಸುವವರು ಹಲಸೂರಿನಿಂದ ಮುಂದಕ್ಕೆ ತೆರಳುವ ವಾಹನ ಚಾಲಕರು, ಅನಿಲ್ ಕುಂಬಳೆ ವೃತ್ತದಲ್ಲಿ ಎಡ ರಸ್ತೆ ಮೂಲಕ ತಿರುವು ಪಡೆದುಕೊಳ್ಳಬೇಕು. ಸೆಂಟ್ರಲ್ ಸ್ಟ್ರೈಟ್ ಬಿ ಆರ್ ವಿ ಜಂಕ್ಷನ್ ಬಲ ರಸ್ತೆ ಮೂಲಕ ತಿರುವು ಪಡೆದುಕೊಳ್ಳಬೇಕು ಕಬ್ಬನ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂಜಿ ರಸ್ತೆಗೆ ತೆರಳಬಹುದಾಗಿದೆ. ಹಲಸೂರು ಕಡೆಯಿಂದ ಕಂಟ್ರೋಲ್ಮೆಂಟ್ ಕಡೆಗೆ ತೆರಳಲು ಟ್ರಿನಿಟಿ ವೃತ್ತದಲ್ಲಿ ಬಲ…
ನವದೆಹಲಿ : ಉನ್ನವು ಅತ್ಯಾಚಾರ ದೋಷಿಗೆ ಶಿಕ್ಷೆ ಕಡಿತ ಮತ್ತು ಜಾಮೀನು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಪರಾಧಿ ಕುಲದೀಪ್ ಸೇಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಕುಟುಂಬಕ್ಕೆ ಇದೀಗ ನಿರಾಳ ಆಗಿದ್ದು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಈ ವೇಳೆ ಕುಲದೀಪ್ ಸಿಂಗಾರ್ ನನ್ನು ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು ಅಪರಾಧಿಗೆ ಜಾಮೀನು ನೀಡಿದ್ದನು ಪ್ರಶ್ನಿಸಿ ಸಿ ಬಿ ಐ ಮೇಲ್ಮನೆ ಅರ್ಜಿ ಸಲ್ಲಿಸಿತ್ತು. ಉತ್ತರಪ್ರದೇಶದ ನಾವು ಅತ್ಯಾಚಾರ ಪ್ರಕರಣ ಗಂಭೀರವಾದದ್ದು ಅಪರಾಧಿ ಕುಲದೀಪ್ ಶಂಕರ್ ಗೆ ಜಾಮೀನು ನೀಡಬಾರದು ಎಂದು ಸಿಬಿಐ ಮನವಿ ಮಾಡಿಕೊಂಡಿತ್ತು. ಸಿಬಿಐ ವಾದವನ್ನು ಇದೀಗ ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಆರೋಪಿ ಕುಲದೀಪ್ ಸೆಂಗಾರ್ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ
ಬಾಗಲಕೋಟೆ : ಕಳೆದ ಕ್ರಿಸ್ಮಸ್ ಹಬ್ಬದಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಳಿ ಖಾಸಗಿ ಬಸ್ ಒಂದು ಹೊತ್ತಿ ಉರಿದು ಏಳು ಜನರು ಸಜೀವವಾಗಿ ದಹನಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಬಾಗಲಕೋಟೆ: ಬೆಂಗಳೂರಿಂದ ರಾಜಸ್ಥಾನದ ಜೋಧಪುರ್ಗೆ ಹೊರಟಿದ್ದ ಖಾಸಗಿ ಬಸ್ಸಿನ ಎಂಜಿನ್ನಲ್ಲಿ ಹೊಗೆ ಕಾಣಿಸಿದೆ. ಇಳಕಲ್ ತಾಲೂಕಿನ ಗೂಡೂರು ಬಳಿ ಬಿಆರ್ ಟ್ರಾವೆಲ್ಸ್ ಬಸ್ ಚಲಿಸುತ್ತಿದ್ದಾಗ ಹೊಗೆ ಕಾಣಿಸಿದೆ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾನೆ. ಪ್ರಯಾಣಿಕರು ಲಗೇಜ್ನೊದಿಗೆ ಇಳಿದಿದ್ದಾರೆ. ಈಗ ಇಳಕಲ್ನಿಂದ ಮೆಕ್ಯಾನಿಕ್ ಕರೆಸಿ ರಿಪೇರಿ ಕೆಲಸ ಆರಂಭವಾಗಿದೆ. ರಿಪೇರಿ ಯಶಸ್ವಿಯಾದರೆ ಈ ಬಸ್ಸು ರಾಜಸ್ಥಾನಕ್ಕೆ ತೆರಳಲಿದೆ. ರಿಪೇರಿ ಆಗದೇ ಇದ್ದರೆ ಬೇರೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗುವುದು ಎಂದು ಬಿಆರ್ ಟ್ರಾವೆಲ್ಸ್ ಹೇಳಿದೆ.














