Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರಗಿ : ದಲಿತ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಆರೋಪದ ಮೇರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಿಪಾಯಿ ಹುದ್ದೆಯ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಿಪಾಯಿ ಹುದ್ದೆಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಕುಮಾರ ಕಡಗಂಚಿ ವಜಾಗೊಂಡ ಸಿಬ್ಬಂದಿ ಎಂದು ತಿಳಿದುಬಂದಿದೆ. ಎಂ.ಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ, ಅಶ್ಲೀಲ ಪದಗಳಿಂದ ನಿಂದನೆ ಮಾಡುವುದು, ಜಾತಿಯನ್ನು ಗುರಿಯಾಗಿಸಿ ಹೀಯಾಳಿಸುವುದು ಹಾಗೂ ಜೀವ ಬೆದರಿಕೆ ಹಾಕಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ವಿದ್ಯಾರ್ಥಿನಿಯ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಆರೋಪಿಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ವಿದ್ಯಾರ್ಥಿನಿ ಕಳೆದ ಒಂದು ವರ್ಷದಿಂದ ಆರೋಪಿ ವಿಜಯಕುಮಾರ್ ನನ್ನ ಬಳಿ ಬಂದು ಮೈಗೆ ತಾಗಿಕೊಂಡು ನಿಲ್ಲುವುದು, ನನ್ನ ದೇಹದ ಬಗ್ಗೆ ಮಾತನಾಡುವುದು ಮಾಡುತ್ತಿದ್ದ. ನನಗೆ ಗೊತ್ತಿಲ್ಲದಂತೆ ವಿಡಿಯೊ ಮಾಡಿ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ತನ್ನ ಗಮನಕ್ಕೆ…
ಬೆಂಗಳೂರು : ಗ್ಯಾಸ್ ಸಿಲಿಂಡರ್ ಅಭಾವದ ನಡುವೆಯೇ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾಸ್ ಸೋರಿಕೆಯಾಗಿ ದೋಸೆ ಹೋಟೆಲ್ ನಲ್ಲಿ ಭೀಕರವಾದ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ನಗರದ ಚಿಕ್ಕಪೇಟೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಘಟನೆಯಲ್ಲಿ ದೋಸೆ ಹೋಟೆಲ್ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಪ್ರಣಾಪಾಯ ಸಂಭವಿಸಿಲ್ಲ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಚಾಮರಾಜನಗರ : ಇಲ್ಲೊಬ್ಬ ಕಳ್ಳ ವಿಚಿತ್ರವಾಗಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಿದ್ದಾನೆ. ಕಳ್ಳತನಕ್ಕು ಮೊದಲು ದೇವರಿಗೆ ಕೈಮುಗಿದು ಬಳಿಕ ಹಣೆಗೆ ಕುಂಕುಮ ಹಚ್ಚಿಕೊಂಡು ಅಲ್ಲಿಯೇ ಇದ್ದ ಹುಂಡಿಯ ಹಣ ಕದ್ದು ಖತರ್ನಾಕ್ ಕಳ್ಳ ಪರಾರಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹೌದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಶಕ್ತಿ ದೇವತೆ ಶ್ರೀ ಪಟ್ಟದರಾಣಿ ದೇವಾಲಯದ ಹುಂಡಿ ಹಣ ಕಳವಾಗಿದೆ. ಓರ್ವ ಕಳ್ಳ ದೇವರಿಗೆ ಕೈ ಮುಗಿದು ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದಿದ್ದಾನೆ. ಈ ಹಿಂದೆಯೂ ಹುಂಡಿ ಹಣ ಕಳ್ಳತನವಾಗಿದ್ದು, ನಂತರ ಸಿಸಿಟಿವಿ ಅಳವಡಿಸಲಾಗಿತ್ತು. ದೇಗುಲದ ಮುಖ್ಯ ಬಾಗಿಲಿಗೆ ನೇತು ಹಾಕಿದ್ದ ಹುಂಡಿಯ ಬೀಗ ಒಡೆದ ಕಳ್ಳ, ಹಣ ಎಗರಿಸಿದ್ದಾನೆ. ಬೆಡ್ಶೀಟ್ ಹೊದ್ದುಕೊಂಡು ಬಂದಿರುವ ಆತ, ಮೊದಲಿಗೆ ದೇವರಿಗೆ ಕೈ ಮುಗಿದು ಬಳಿಕ ಕುಂಕುಮ ಹಚ್ಚಿಕೊಂಡಿದ್ದಾನೆ. ನಂತರ, ಹುಂಡಿಯ ಬೀಗ ತೆರೆದು ನೋಟುಗಳನ್ನು ಕೈ ತುಂಬಾ ಹಿಡಿದು ಬ್ಯಾಗ್ಗೆ ತುಂಬಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉತ್ತರಕನ್ನಡ : ಆಸ್ತಿ ವಿಚಾರಕ್ಕೆ ಮಗನನ್ನೇ ಕೊಲೆ ಮಾಡಿದ ತಂದೆ ಹಾಗೂ ಇಬ್ಬರು ಸಂಬಂಧಿಕರು ಸೇರಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಶಿರಸಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಹಳಿಯಾಳ ಪೊಲೀಸ್ ಠಾಣ ವ್ಯಾಪ್ತಿಯ ಬಿಡೊಳ್ಳಿ ಗ್ರಾಮದಲ್ಲಿ ಕೇಶವ ಎಂಬ ಯುವಕನ ಕೊಲೆ ನಡೆದಿತ್ತು. ಈ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ. ಅಕ್ಷಯ್ ಅಲಿಯಾಸ್ ಆಕಾಶ್ ಕಿತ್ತೂರಕರ್, ಪಾಂಡುರಂಗ ಕಿತ್ತೂರಕರ್ ಹಾಗೂ ಲತಾ ಅಲಿಯಾಸ್ ತುಳಸಾಯಿ ಕಿತ್ತೂರಕರ್ ಎಂಬುವವರೇ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಇವರಿಗೆ ಜೀವಾವಧಿ ಶಿಕ್ಷೆ ಸಹಿತ ತಲಾ 25 ರೂ.ಗಳ ದಂಡ ವಿಧಿಸಿ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಆದೇಶ ಹೊರಡಿಸಿದ್ದಾರೆ. ಪಾಂಡುರಂಗ ಕಿತ್ತೂರಕರ್ನ ಮೊದಲ ಹೆಂಡತಿಯ ಮಗನಾದ ಕೇಶವ ತನಗೆ ಬರಬೇಕಾದ ಆಸ್ತಿಯ ಪಾಲನ್ನು ಕೇಳಿದ್ದೇ ಆತನ ಪ್ರಾಣಕ್ಕೆ ಸಂಚಕಾರವಾಗಿತ್ತು. ಮಗನಿಗೆ ಆಸ್ತಿ ನೀಡುವುದನ್ನು…
ಬೆಂಗಳೂರು : ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಈಗ ಅಲರ್ಟ್ ಆಗಿದ್ದಾರೆ. ರಾಜ್ಯ ಸಚಿವ ಸಂಪುಟ ಪುನರಚನೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಇದೀಗ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಿದೆ. ಏಪ್ರಿಲ್ 17ರ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೈಕಮಾಂಡ್ ಅವರನ್ನು ಭೇಟಿಯಾಗಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಹಿರಿಯ ಶಾಸಕರು ದೆಹಲಿ ಯಾತ್ರೆ ಕೈಗೊಳ್ಳಲಿದ್ದು ನಾಳೆ ಕಾಂಗ್ರೆಸ್ಸಿನ 20 ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಲಿದ್ದಾರೆ ಅಶೋಕ್ ಪಟ್ಟಣ ಟಿಬಿ ಜಯಚಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ದೆಹಲಿ ಪ್ರಯಾಣ ಬೆಳೆಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ ರಣದೀಪ ಸಿಂಗ ಸುರ್ಜೆವಾಲಾ ಬೇಟಿಗೆ ಶಾಸಕರು ಸಿದ್ಧತೆ ನಡೆಸಿದ್ದಾರೆ. ಪಕ್ಷಕ್ಕಾಗಿ ನಾವು ಇಷ್ಟು ವರ್ಷ ದುಡಿದಿದ್ದೇವೆ. ನಮಗೂ ಒಮ್ಮೆ ಸಚಿವರ ಆಗುವ ಆಸೆ ಇದೆ. ಎರಡೂವರೆ ವರ್ಷದ ಬಳಿಕ ಅವಕಾಶ ಕೊಡುತ್ತೀವಿ ಅಂತ ಹೇಳಲಾಗಿತ್ತು. ಸರ್ಕಾರ ರಚನೆಯಾಗಿ ಮೂರು ವರ್ಷ ಕಳೆಯುತ್ತಾ ಬಂದಿದೆ ಇನ್ನುಳಿದ ಎರಡು…
ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಬಳಿ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಕಳೆದ ಎರಡು ದಿನಗಳ ಶೋಧದ ವೇಳೆ ಅಕ್ರಮ ಆಸ್ತಿ ಪತ್ತೆಯಾಗಿದೆ. ಪರಿಶೀಲನೆ ವೇಳೆ 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ಹಣ ಠೇವಣಿ ಹಾಗೂ ಕಾರು ಮತ್ತು ಬೈಕುಗಳು ಪತ್ತೆಯಾಗಿವೆ. ಸೌವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿಯಲ್ಲಿ 18 ಸೈಟ್ ಗಳು ಪತ್ತೆಯಾಗಿವೆ. ಬೆಳಗಾವಿಯ ಆಂಜನೇಯ ನಗರ ಸೇರಿದಂತೆ ಒಟ್ಟು 7 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. DUDC ಎಇಇ ಅಜಯ್ ಸಿಂಗ್ ರಜಪೂತ್ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದಲ್ಲಿ 3 ಮನೆ ಕಚೇರಿ ಮತ್ತು ಬ್ಯಾಂಕ್ ಲಾಕರ್ ಗಳನ್ನು ಪರಿಶೀಲನೆ ಮಾಡಿದರು ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಗೆ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು ಮನೆಯಲ್ಲಿ ಇದೀಗ ತನಿಖೆ ಮುಂದುವರೆದಿದೆ.
ಚಾಮರಾಜನಗರ : ಮುಳ್ಳುಹಂದಿ ಜೊತೆ ಹೋರಾಟದಲ್ಲಿ ಚಿರತೆ ಒಂದು ಪ್ರಾಣ ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೇಟೆಯ ವೇಳೆ ಮುಳ್ಳು ಹಂದಿಯ ಚೂಪಾದ ಮುಳ್ಳುಗಳು ತೊಗಲಿ ಸ್ಥಳದಲ್ಲಿಯೇ ಚಿರತೆ ಪ್ರಾಣ ಬಿಟ್ಟಿದೆ ಬೇಟೆಗೆ ಬಂದ ಚಿರತೆಯ ಮೇಲೆ ಮುಳ್ಳುಹಂದಿ ಪ್ರತಿ ದಾಳಿ ನಡೆಸಿದೆ ಚಿರತೆಯ ಬಾಯಿ ಮತ್ತು ಎದೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು ಸ್ಥಳದಲ್ಲೇ ಚಿರತೆ ಪ್ರಾಣ ಬಿಟ್ಟಿದೆ ಮುಳ್ಳಿನಲ್ಲಿರುವ ವಿಷದ ಅಂಶದಿಂದ ನರಳಿ ನರಳಿ ಚಿರತೆ ಪ್ರಾಣ ಬಿಟ್ಟಿದೆ ಸ್ಥಳಕ್ಕೆ ಬಂಡಿಪುರ ಸಂರಕ್ಷಿತ ಆರಣ್ಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಯಚೂರು : ಇಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೀಗ ಆತನ ವಿರುದ್ಧ ಶಿಕ್ಷಕಿ ಲವ್ ಸೆಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ, ಶಿಕ್ಷಕಿಗೆ ಇಂಜಿನಿಯರ್ ವಂಚಿಸಿದ ಆರೋಪ ಬೆಳಕಿಗೆ ಬಂದಿದೆ. ಸದ್ಯ ಇಂಜಿನಿಯರ್ ವಿರುದ್ಧ ಶಿಕ್ಷಕಿ ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರೀತಿ ಪ್ರೇಮ ಅಂತ ಇಬ್ಬರು 7-8 ವರ್ಷಗಳ ಕಾಲ ಓಡಾಡಿದ್ದಾರೆ. ಕಾಲೇಜಿನಗಳಿಂದ ಯುವತಿ ಮತ್ತು ಮಲ್ಲಿಕಾರ್ಜುನ ನಡುವೆ ಲವ್ ಇತ್ತು. ಮಂತ್ರಾಲಯ ಆಲಮಟ್ಟಿ ಡ್ಯಾಮ್ ಸೇರಿ ವಿವಿಧೆಡೆ ಇಬ್ಬರು ಸುತ್ತಾಡಿದ್ದಾರೆ. ಈ ವೇಳೆ ಹಲವು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪ ಕೇಳಿ ಬಂದಿದೆ. ನ್ಯಾಯಕ್ಕಾಗಿ ಇಂಜಿನಿಯರ್ ಮಲ್ಲಿಕಾರ್ಜುನ ವಿರುದ್ಧ ಶಿಕ್ಷಕಿ ದೂರು ಸಲ್ಲಿಸಿದ್ದಾರೆ. ಫೋಟೋಗಳು, ಆಡಿಯೋ ವಿಡಿಯೋ ಮತ್ತು ಮೆಸೇಜುಗಳ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ರಾಯಚೂರಿನ ಮಹಿಳಾ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರಿನ ಬಗ್ಗೆ ಪೊಲೀಸರು ತನಿಖೆ…
ಮಂಡ್ಯ :- ಆಟೋಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ) ಪರೀಕ್ಷಾ ಕೇಂದ್ರ ಸ್ಥಾಪಿಸುವ ಕುರಿತಂತೆ ಚರ್ಚಿಸಲು ಏ.13ರಂದು ವಿಧಾನಸೌಧದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿಯಾಗಿದೆ ಇತ್ತಿಚೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಎಆರ್ ಎಐ ಪರೀಕ್ಷಾ ಕೇಂದ್ರಕ್ಕೆ ಜಾಗ ಕೊಟ್ಟರೆ ಸಾಲದು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಹೀಗಾಗಿ ಅಭಿವೃದ್ಧಿಪಡಿಸಿ ಕೊಡುವಂತೆ ಜಟಾಪಟಿ ನಡೆದಿತ್ತು. ನೀವು ಯಾವ ಯೋಜನೆಯನ್ನು ತರುತ್ತಿರಿ ಹೇಳಿ ನಿಮಗೆ ಯಾವ ಜಾಗ ಬೇಕು ಅದನ್ನು ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಿ ಕೊಡುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ ನೀಡಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊಂಡಿಯಾಗಿ ನೀವೇ ಒಂದು ಸಭೆ ಆಯೋಜಿಸಿ ಎಂದು ಸಲಹೆ ನೀಡಿದ್ದರು. ಹೀಗಾಗಿ ಸಭೆಯನ್ನು ವಿಧಾನಸೌಧದಲ್ಲೆ ಮಾಡೋಣ ಅಲ್ಲಿ ರಾಜ್ಯದ ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು…
ಬೆಂಗಳೂರು : ಐಸ್ ಕ್ರೀಮ್ ತಿನ್ನುವ ಮೊದಲು ಇದೀಗ ಎಚ್ಚರದಿಂದ ಇರುವುದು ಒಳ್ಳೆಯದು. ಏಕೆಂದರೆ ಐಸ್ ಕ್ರೀಮ್ ನಲ್ಲಿ ಪ್ಲಾಸ್ಟಿಕ್ ರಬ್ಬರ್ ಒಂದು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಈ ಒಂದು ಘಟನೆ ನಡೆದಿದ್ದು, ಐಸ್ ಕ್ರೀಮ್ ನಲ್ಲಿ ಪ್ಲಾಸ್ಟಿಕ್ ರಬ್ಬರ್ ನೋಡಿ ಗ್ರಾಹಕರು ಒಬ್ಬರು ಹೌಹಾರಿದ್ದಾರೆ. ಉಡುಪಿಯ ಗ್ರಾಂಡ್ ಹೋಟೆಲ್ ನಲ್ಲಿ ಈ ರೀತಿ ಐಸ್ ಕ್ರೀಮ್ ನಲ್ಲಿ ರಬ್ಬರ್ ಪತ್ತೆಯಾಗಿದೆ. ಬೆಂಗಳೂರಿನ ನೆಲಮಂಗಲ ನಗರದ ಸೊಂಡೆಕೊಪ್ಪ ಬೈಪಾಸ್ ನಲ್ಲಿ ಐಸ್ ಕ್ರೀಂ ತಿನ್ನುವ ಸಂದರ್ಭದಲ್ಲಿ ಬಾಯಿಗೆ ರಬ್ಬರ್ ಸಿಕ್ಕಿದೆ. ಇದನ್ನ ಪ್ರಶ್ನೆ ಮಾಡಿದಕ್ಕೆ ಕೆಲವೊಂದು ಸಲ ಕಾಮನ್ ಬಿಡಿ ಎಂದು ಹೋಟೆಲ್ ಮಾಲೀಕ ಉಡಾಫೆ ಆಗಿ ಹೇಳಿಕೆ ನೀಡಿದ್ದು, ಗ್ರಾಹಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದು ಈ ವಿಚಾರವಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.














