Author: kannadanewsnow05

ಬೆಂಗಳೂರು : ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಇತ್ತೀಚಿನ ವರದಿಗಳು ಲಭ್ಯವಿದ್ದು, ನಿರುದ್ಯೋಗಿ ಯುವಜನತೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯಂತ ಪ್ರಮುಖ ಮಾಹಿತಿಯಾಗಿದೆ. 2026ರ ಫೆಬ್ರವರಿ ಅಂತ್ಯದ ವರದಿಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 2.84 ಲಕ್ಷದಿಂದ 2.94 ಲಕ್ಷದವರೆಗೆ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಪ್ರಮುಖ ಇಲಾಖಾವಾರು ಖಾಲಿ ಹುದ್ದೆಗಳ ವಿವರ ಮತ್ತು ಸರ್ಕಾರದ ಮುಂದಿನ ಕ್ರಮಗಳ ಮಾಹಿತಿ ಈ ಕೆಳಗಿನಂತಿದೆ: ಇಲಾಖಾವಾರು ಖಾಲಿ ಹುದ್ದೆಗಳ ವಿವರ (ಅಂದಾಜು) ರಾಜ್ಯದ ಒಟ್ಟು 43ಕ್ಕೂ ಹೆಚ್ಚು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಪ್ರಮುಖ ಇಲಾಖೆಗಳ ಮಾಹಿತಿ ಹೀಗಿದೆ: ಇಲಾಖೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ ಶಿಕ್ಷಣ ಇಲಾಖೆ 79,694 ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ 37,572 ಒಳಾಡಳಿತ (ಪೊಲೀಸ್ ಇಲಾಖೆ) 28,188 ಉನ್ನತ ಶಿಕ್ಷಣ ಇಲಾಖೆ 13,599 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 11,020 ಕಂದಾಯ ಇಲಾಖೆ 10,867 ಗ್ರಾಮೀಣಾಭಿವೃದ್ಧಿ ಮತ್ತು…

Read More

ನಮ್ಮ ದೇಹದ ಸುಮಾರು 60\% – 70\% ಭಾಗ ನೀರಿನಿಂದ ಕೂಡಿದೆ. ಆರೋಗ್ಯವಾಗಿರಲು ನೀರು ಕುಡಿಯುವುದು ಎಷ್ಟು ಮುಖ್ಯವೋ, ಅತಿಯಾಗಿ ಕುಡಿಯುವುದು ಅಷ್ಟೇ ಅಪಾಯಕಾರಿ. ಸಾಮಾನ್ಯವಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ “ಅತಿಯಾದರೆ ಅಮೃತವೂ ವಿಷ” ಎಂಬ ಮಾತು ನೀರಿನ ವಿಷಯದಲ್ಲೂ ನಿಜ.ಇದರ ಬಗ್ಗೆ ವಿವರ ಇಲ್ಲಿದೆ ಹೆಚ್ಚು ನೀರು ಕುಡಿಯುವುದರಿಂದ ಆಗುವ ಅನುಕೂಲಗಳು (Benefits) ನೀರು ನಮ್ಮ ದೇಹದ ಕಾರ್ಯನಿರ್ವಹಣೆಗೆ ಅತಿ ಮುಖ್ಯ. ಸರಿಯಾದ ಪ್ರಮಾಣದಲ್ಲಿ (ಅಗತ್ಯಕ್ಕೆ ತಕ್ಕಂತೆ ಹೆಚ್ಚು) ನೀರು ಕುಡಿಯುವುದರಿಂದ ಈ ಕೆಳಗಿನ ಲಾಭಗಳಿವೆ: ಚರ್ಮದ ಕಾಂತಿ: ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ನೈಸರ್ಗಿಕ ಹೊಳಪು ಪಡೆಯುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ: ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ದೇಹದ ತಾಪಮಾನ ನಿಯಂತ್ರಣ: ಬೆವರಿನ ಮೂಲಕ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಮೂತ್ರಪಿಂಡದ ಆರೋಗ್ಯ: ಕಿಡ್ನಿಯಲ್ಲಿ ಕಲ್ಲುಗಳಾಗುವುದನ್ನು ತಡೆಯಲು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ. ಶಕ್ತಿ…

Read More

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ಸರಣಿ ಅಪಘಾತವನ್ನು ಸಂಭವಿಸಿದೆ. ಬ್ರೇಕ್ ಫೇಲ್ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ ನುಗ್ಗಿದೆ. ಲಾರಿ ನುಗ್ಗಿದ ರಭಸಕ್ಕೆ ಎರಡು ಕಾರು 3 ಬೈಕುಗಳು ಜಖಂಗೊಂಡಿವೆ. ಕಾರಿನಲ್ಲಿದ್ದವರು ಮತ್ತು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್ಪೋರ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಲೋಡ್ ತುಂಬಿಕೊಂಡು ಬರುವಾಗ ಏಕಾಏಕಿ ಲಾರಿಯ ಬ್ರೇಕ್ ಫೇಲ್ ಆಗಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಕೋಲಾರ : ಕೋಲಾರದಲ್ಲಿ ಗೌರವವಾದ ದುರಂತ ಒಂದು ಸಂಭವಿಸಿದ್ದು, ಇಂಜಿನಿಯರ್ ಕಾಲೇಜಿನ ಲೆಕ್ಚರರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇದೀಗ ವರದಿಯಾಗಿದೆ. ಕೋಲಾರ ತಾಲ್ಲೂಕು ಖಾದ್ರಿಪುರ ಗ್ರಾಮದಲ್ಲಿ ಮೊನೀಶ್ (36) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ. ಕೋಲಾರದ ಎಂಜಿನಿಯರಿAಗ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು ಎಂದು ತಿಳಿದುಬಂದಿದೆ. ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ಪತ್ತೆಯಾಗಿದೆ ಅಗತ್ಯಕ್ಕಿಂತ ಹೆಚ್ಚು ಫ್ಲೋರೈಡ್ ಮತ್ತು ನೈಟ್ರೆಟ್ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ನೀರು ಕುಡಿಯಲು ಶುದ್ಧವಾಗಿಲ್ಲ. ಕುಡಿಯೋ ನೀರು ಗುಣಮಟ್ಟದ ವರದಿಯಲ್ಲಿ ಬೆಚ್ಚಿ ಬೀಳಿಸುವ ವರದಿ ಬಯಲಾಗಿದೆ. 1,274 ಹಳ್ಳಿಗಳ ಪೈಕಿ 209 ಹಳ್ಳಿಗಳಲ್ಲಿ ಫ್ಲೋರೈಡ್ ಮತ್ತು ಅತಿಯಾದ ಪ್ರಮಾಣದಲ್ಲಿ ಇದೆ. 282 ಹಳ್ಳಿಗಳಲ್ಲಿ ನೈಟ್ರೇಟ್ ಅತಿ ಹೆಚ್ಚು ಪ್ರಮಾಣದಲ್ಲಿದೆ ಈ ಅಶುದ್ಧ ನೀರು ಸೇವಿಸಿ ಚಿಕ್ಕಬಳ್ಳಾಪುರ ಜನ ಇದೀಗ ಕಿಡ್ನಿ ಸಮಸ್ಯೆಯಿಂದ ನರಳಾಡುತ್ತಿದ್ದಾರೆ. ಒಂದು ಲೀಟರ್ ನೀರಿನಲ್ಲಿ 1.5mg ಬದಲಿಗೆ 2.2mg ಪತ್ತೆಯಾಗಿದೆ. ಇನ್ನೂ ಒಂದು ಲೀಟರ್ ನೀರಿನಲ್ಲಿ 45mgಗಿಂತ ಹೆಚ್ಚು ನೈಟ್ರೇಟ್ ಅಂಶ ಪತ್ತೆಯಾಗಿದೆ.ಕುಡಿಯುವ ನೀರು ವಿಷಕಾರಿಯಾಗಿದೆ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರು ಯೋಗ್ಯವಾಗಿಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ (Fluoride) ಮತ್ತು ನೈಟ್ರೇಟ್ (Nitrate) ಅಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಕಂಡುಬಂದಿರುವುದು ನಿಜಕ್ಕೂ ಆತಂಕಕಾರಿ ವಿಷಯ.…

Read More

ನವದೆಹಲಿ : ನವದೆಹಲಿಯ ಕೆಂಪು ಕೋಟೆಯ ಬಳಿ ಐ ಟ್ವೆಂಟಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮ್ಮು ಕಾಶ್ಮೀರದಲ್ಲಿ NIA ಅಧಿಕಾರಿಗಳು ಮತ್ತೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಇಬ್ಬರು ಶಂಕಿತರನ್ನು ಬಂಧಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಕುರಿತ ಪ್ರಮುಖ ವಿವರಗಳು ಇಲ್ಲಿವೆ: ಬಂಧಿತರ ವಿವರ ಹೆಸರುಗಳು: ಜಮೀರ್ ಅಹ್ಮದ್ ಅಹಂಗರ್ (ಗಂದರ್ಬಲ್ ನಿವಾಸಿ) ಮತ್ತು ತುಫೈಲ್ ಅಹ್ಮದ್ ಭಟ್ (ಶ್ರೀನಗರ ನಿವಾಸಿ). ಆರೋಪ: ಇವರು ಭಯೋತ್ಪಾದಕ ಸಂಘಟನೆ ಅನ್ಸಾರ್ ಗಜ್ವತ್-ಉಲ್-ಹಿಂದ್ (AGH) ನ ಸಕ್ರಿಯ ಓವರ್ ಗ್ರೌಂಡ್ ವರ್ಕರ್ಸ್ (OGWs) ಎಂದು ಗುರುತಿಸಲಾಗಿದೆ. ಪಾತ್ರ: ಸ್ಫೋಟದ ಪ್ರಮುಖ ಸಂಚುಕೋರ ಉಮರ್ ಉನ್ ನಬಿಗೆ ಇವರು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರು ಎಂಬ ಗಂಭೀರ ಆರೋಪವಿದೆ. ಪ್ರಕರಣದ ಹಿನ್ನೆಲೆ ಘಟನೆ: ನವೆಂಬರ್…

Read More

ಕೊಪ್ಪಳ : ತಲ್ವಾರ್ನಿಂದ ಕೇಕ್ ಕತ್ತರಿಸಿ ಬರ್ತ್ಡೇ ಆಚರಣೆ ಮಾಡಲಾಗಿದೆ. ಕೊಪ್ಪಳದಲ್ಲಿ ಈ ಒಂದು ಘಟನೆ ನಡೆದಿದೆ. ಯಮನೂರಪ್ಪ ಇಸ್ಲಾಂಪುರ ಎನ್ನುವಂತ ಯುವಕ ತಲ್ವಾರ್ನಿಂದ ಕೇಕ್ ಕತ್ತರಿಸಿದ್ದು ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘಿಸಿದ್ದಾನೆ. ಫೆಬ್ರುವರಿ 24ರಂದು ಈ ಒಂದು ಘಟನೆ ನಡೆದಿದ್ದು ತಲ್ವಾರ್ನಿಂದ ಕೇಕ್ ಅನ್ನು ಯಮನೂರಪ್ಪ ಕಟ್ ಮಾಡಿದ್ದಾನೆ. ಇದೆಲ್ಲ ಕೂಡ ಕಾನೂನು ಬಾಹಿರ ಎಂದು ಹೇಳಿದರೂ ಕೂಡ ಇಂತಹ ಘಟನೆಗಳು ಮರುಕಳಿಸುತ್ತಿವೆ. ಸಾಲಾಗಿಟ್ಟಿರುವ ಕೇಕನ್ನು ತಲ್ವಾರ್ನಿಂದ ಯಮನೂರಪ್ಪ ಕಟ್ ಮಾಡಿದ್ದಾನೆ. ಈ ಕುರಿತು ಕನಕಗಿರಿ ಠಾಣೆಯಲ್ಲಿ ಯಮನೂರಪ್ಪ ವಿರುದ್ಧ ಕೇಸ್ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ತಾಯಿಯ ಎದುರೇ ಮಗನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಪವನ್ ಕುಮಾರ್ ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿಯ ಥಣಿಸಂದ್ರ ದಲ್ಲಿ ಈ ಒಂದು ಘಟನೆ ನಡೆದಿದೆ. ಮಧ್ಯರಾತ್ರಿ ದುಷ್ಕರ್ಮಿಗಳು ಲಾಂಗ್ ನಿಂದ ಕೊಚ್ಚಿ ರೌಡಿಶೀಟರ್ ಅನ್ನು ಕೊಲೆ ಮಾಡಿದ್ದಾರೆ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಜೆ ಹಳ್ಳಿ ಠಾಣೆ ರೌಡಿಶೀಟರ್ ಆಗಿದ್ದ ಪವನ್ ಕುಮಾರ್ ಕೊಲೆ ಕೇಸ್ ಒಂದರಲ್ಲಿ ಆರೋಪಿಯಾಗಿದ್ದ. ಮೂರು ತಿಂಗಳ ಹಿಂದೆ ಪವನ್ ಕುಮಾರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಪವನ್ ಕುಮಾರ್ ನನ್ನ ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

Read More

ಬೆಂಗಳೂರು : ತಾಯಿಗೆ ರಜೆ ನಿರಾಕರಿಸಿದರೆ, ಅದು ಮಕ್ಕಳ ಮೇಲೆ ಒತ್ತಡವಾಗಬಹುದು. ಸಿಸಿಎಲ್‌ ರಜೆ ಮಗುವಿನ ಹಕ್ಕು. ಹಾಗಾಗಿ ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕಾಗಿದ್ದು, ಈ ರಜೆಯ ಕೋರಿಕೆ ಬಂದಾಗ ಅದನ್ನು ನಿರಾಕರಿಸದೆ, ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ನೌಕರರಿಂದ ಬೇರೆ ರಜೆಗಳಿಗೆ ಬೇಡಿಕೆ ಬಂದಾಗ ಮಂಜೂರು ಮಾಡಲು ವಿವೇಚನಾ ಅಧಿಕಾರ ಉದ್ಯೋಗದಾತರಿಗಿರಲಿದೆ. ಆದರೆ ಸಿಸಿಎಲ್​ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ತಿಳಿಸಿರುವ ಹೈಕೋರ್ಟ್​​, ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸೆಂಟರ್‌ ಫಾರ್‌ ಡೆವಲಪ್​ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕವಿತಾ ವಡ್ಡೆ ಅವರಿಗೆ ಫೆ.6ರಿಂದ ಮೇ 20ರವರೆಗೆ ಚೈಲ್ಡ್​ ಕೇರ್‌ ಲೀವ್‌ ನೀಡಲು ನಿರ್ದೇಶನ ನೀಡಿದೆ. ರಜೆ ನೀಡುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ) ಫೆ.5ರಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌…

Read More

ಬೆಂಗಳೂರು : ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 12 ರಾಜ್ಯಗಳಲ್ಲಿ ಬರೋಬ್ಬರಿ 32 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ರಾಜ್ಯದಲ್ಲೂ ಎರಡು ನಕಲಿ ವಿಶ್ವವಿದ್ಯಾಲಯ ಪತ್ತೆಯಾಗಿವೆ. ಈ ನಕಲಿ ವಿಶ್ವವಿದ್ಯಾಲಯಗಳ ಪೈಕಿ ದೆಹಲಿ 1ನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ನಂತರ ಪಡೆದ ಪದವಿಗಳು ನಿಷ್ಪ್ರಯೋಜಕವಾಗುತ್ತವೆ ಎಂದು ಯುಜಿಸಿ ಸ್ಪಷ್ಟವಾಗಿ ಎಚ್ಚರಿಸಿದೆ. ಜೊತೆಗೆ ಈ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಉದ್ಯೋಗಕ್ಕಾಗಿ ಮಾನ್ಯತೆ ನೀಡಬಾರದು ಎಂದಿದೆ. ಯಾವುದೇ ವಿದ್ಯಾರ್ಥಿಯು ಯಾವುದೇ ಸಂಸ್ಥೆಯಲ್ಲಿ ತರಾತುರಿಯಲ್ಲಿ ಪ್ರವೇಶ ಪಡೆಯಬಾರದು. ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅಧಿಕೃತ ವೆಬ್‌ಸೈಟ್‌ನಲ್ಲಿ ಅನುಮೋದಿತ ವಿಶ್ವವಿದ್ಯಾಲಯಗಳ ಪ್ರಸ್ತುತ ಪಟ್ಟಿಯನ್ನು ಪರಿಶೀಲಿಸಬೇಕು. ಇದು UGC ಕಾಯ್ದೆ 1956 ರ ಅಡಿಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಹೆಸರುಗಳನ್ನು ಒಳಗೊಂಡಿದೆ. ಇದರ ಮೂಲಕ ಅವರು ಪ್ರವೇಶ ಪಡೆಯಲಿರುವ ಸಂಸ್ಥೆಯು ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುತ್ತದೆ. ಕೇಂದ್ರ ಸರ್ಕಾರವು ನಿರಂತರವಾಗಿ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ.…

Read More