Author: kannadanewsnow05

ಮೈಸೂರು : ಡಿಸಿಎಂ ಡಿಕೆ ಶಿವಕುಮಾರ್ CM ಆಗೋ ವಿಚಾರವಾಗಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ ಎಂದು ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದರು. ಮೈಸೂರಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಈ ಹಿಂದೆ ಪತ್ರ ಬರೆದಿದ್ದೆ, ಈಗ ಬರೆದ್ರೆ ಓಡುವವರು ಯಾರಿದ್ದಾರೆ? ಪತ್ರ ಓದುವುದಕ್ಕೆ ರಾಹುಲ್ ಗಾಂಧಿಗೆ ಪುರುಸೊತ್ತು ಎಲ್ಲಿದೆ? ಸಿಎಂ ಸಿದ್ದರಾಮಯ್ಯ ಪತ್ರ ಓದುವುದಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದರೆ ಅವರು ಹೈಕಮಾಂಡ್ ಅವರನ್ನು ಕೇಳಿದ್ದಾರೆ ನಾನೇ ಹೈಕಮಾಂಡ್ ಅಂತ ಹೇಳಿಕೊಳ್ಳುವ ಧೈರ್ಯ ಸಹ ಇಲ್ಲ ಎಂದು ತಿಳಿಸಿದರು.

Read More

ಚಿತ್ರದುರ್ಗ : ಪೋಕ್ಸೋ ಕೇಸ್ ನಲ್ಲಿ ನಿರ್ದೋಷಿ ಎಂದು ಕೋರ್ಟ್ ತೀರ್ಪು ಬಳಿಕ ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇದರ ಬೆನ್ನಲ್ಲೆ, ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮುರುಘಾಶ್ರೀ ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆಂಬ ಗಂಭೀರ ಆರೋಪ ಚಿತ್ರದುರ್ಗದಲ್ಲಿ ಕೇಳಿಬಂದಿದೆ. ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗಷ್ಟೇ ಮೊದಲ ಪೋಕ್ಸೊ ಕೇಸಲ್ಲಿ ಖುಲಾಸೆಯಾಗಿದ್ದು, ಎರಡನೇ ಕೇಸ್ ವಿಚಾರಣೆಯ ಹಂತದಲ್ಲಿದೆ. ಇದರ ಬೆನ್ನಲ್ಲೇ ಮುರುಘಾಶ್ರೀ ಪೋಕ್ಸೊ ಕೇಸಲ್ಲಿ ಆರೋಪಿಯಾಗಿದ್ದಾಗ ಮಠದ ಆಡಳಿತದಲ್ಲಿ ಯಾವ್ದೇ ಹಸ್ತಕ್ಷೇಪ ಮಾಡದಂತೆ ಸುಪ್ರಿಂ ಕೋರ್ಟ್ ಆದೇಶಿಸಿದ್ದರೂ ಸಹ ಕೋರ್ಟ್ ಆದೇಶವನ್ನು ಮೀರಿ 2025ರ ಅ.6ರಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿರುವ ಸುಮಾರು 2 ಕೋಟಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬುವರಿಗೆ ಸ್ಪೆಷಲ್ ಜಿಪಿಎ ನೀಡಿ ಮಾರಾಟ ಮಾಡಿದ್ದಾರೆಂಬ ಗಂಭೀರ ಆರೋಪವನ್ನು ಮಠದ ಭಕ್ತರಾದ ಪ್ರಕಾಶ್ ಮಾಡಿದ್ದಾರೆ. ಮುರುಘಾಶ್ರೀ ಪೋಕ್ಸೊ ಆರೋಪದಲ್ಲಿ ಸಿಲುಕಿದ ಹಿನ್ನಲೆಯಲ್ಲಿ ಸರ್ಕಾರದಿಂದ ಮಠಕ್ಕೆ ಆಡಳಿತ ಸಮಿತಿ ನೇಮಿಸಲಾಗಿದೆ. ಆದರೆ ಆಡಳಿತ ಸಮಿತಿ…

Read More

ಬೆಂಗಳೂರು : ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಡಿ.31ರಂದು ಬೆಳಿಗ್ಗೆ 6ರಿಂದ ತಡರಾತ್ರಿ 1ರವರೆಗೆ ಮದ್ಯದ ವಹಿವಾಟಿಗೆ ಅನುಮತಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಹೌದು ಬೆಂಗಳೂರಿಗೆ ಅನ್ವಯವಾಗುವಂತೆ ವಿಶೇಷ ಸಾಂದರ್ಭಿಕ ಅಬಕಾರಿ ಸನ್ನದುದಾರರಿಗೆ (CL-5) ಡಿಸೆಂಬರ್‌ 31ರಂದು ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿ 1ರವರೆಗೆ ಮದ್ಯದ ವಹಿವಾಟು ಮತ್ತು ಮದ್ಯ ಸೇವನೆಗೆ ಅನುಮತಿ ನೀಡಿ ನಗರ ಪೊಲೀಸ್‌ ಆಯುಕ್ತರು ಆದೇಶಿಸಿದ್ದಾರೆ. CL-5 ತಾತ್ಕಾಲಿಕವಾಗಿ (24 ಗಂಟೆಗಳಿಗೆ) ಮದ್ಯದ ಸನ್ನದು ಆಗಿದ್ದು, ವಿಶೇಷ ಸಂದರ್ಭಗಳಲ್ಲಿ ಮದ್ಯ ಬಳಕೆಗೆ ಅನುಮತಿ ನೀಡುತ್ತದೆ. ಈ ಸನ್ನದು ಮುಖ್ಯವಾಗಿ ಖಾಸಗಿ ಪಾರ್ಟಿಗಳು, ನಿರ್ದಿಷ್ಟ ದಿನಗಳಂದು ನಡೆಯುವ ಸಮಾರಂಭಗಳಿಗೆ ಮದ್ಯ ಮಾರಾಟ ಅಥವಾ ಪೂರೈಕೆ ಮಾಡಲು ಅನುಮತಿ ನೀಡುತ್ತದೆ. ಈ ಲೈಸೆನ್ಸ್‌ ಹೊಂದಿರುವವರು ಸಾಮಾನ್ಯವಾಗಿ ಹೊಸ ವರ್ಷದಂತಹ ವಿಶೇಷ ಸಂದರ್ಭಗಳಲ್ಲಿ ಒಂದು ದಿನ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶವಿರುತ್ತದೆ. CL-5 ಸನ್ನದುದಾರರಿಗೆ ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 10.30ರಿಂದ ರಾತ್ರಿ 12ರವರೆಗೆ ಮಾತ್ರ ಮದ್ಯದ ವಹಿವಾಟು ನಡೆಸಲು…

Read More

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ವಾರ್ ನಡೆಯುತ್ತಿದ್ದು ಡೆವಿಲ್ ಸಿನಿಮಾ ಬಿಡುಗಡೆ ಬಳಿಕ ಕೆಲವು ಕಿಡಿಗೇಡಿಗಳು ನಟ ಕಿಚ್ಚ ಸುದೀಪ್ ಹಾಗೂ ಸಾನ್ವಿ ಅವರ ಫೋಟೋ ಎಡಿಟ್ ಮಾಡಿ ಟ್ರೊಲ್ ಮಾಡಿದರು ಇದೀಗ ಈ ವಿಚಾರವಾಗಿ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡಿದ್ದು, ನನ್ನ ದೇಹ ಚರ್ಚೆಯ ವಿಷಯವಲ್ಲ ಎಂದು ತನನ್ನು ನೆಗೆಟಿವ್ ಟ್ರೋಲ್ ಮಾಡುವವರಿಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕುಟುಕಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸಾನ್ವಿ ಸುದೀಪ್ ಸ್ಟೋರಿ ಹಾಕಿದ್ದಾರೆ. ನನ್ನ ದೇಹವು ಚರ್ಚೆಯ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಾದರೇ ನಾನು ಕೇಳುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. ಶನಿವಾರ ನಡೆದ ಮಾರ್ಕ್ ಕೃತಜ್ಞತಾ ಸುದ್ದಿಗೋಷ್ಠಿಯಲ್ಲಿ ಸುದೀಪ್‌ಗೆ ಮಗಳ ಬಗ್ಗೆ ನೆಗೆಟಿವ್ ಟ್ರೋಲ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ತನ್ನ ಮಗಳ ವಿರುದ್ಧ ಮಾತಾಡುವವರಿಗೆ ಕಿಚ್ಚ ಸುದೀಪ್ ಖಡಕ್ ಕೌಂಟರ್ ಕೊಟ್ಟಿದ್ದರು. ನಮಗೆ ಪ್ರೋತ್ಸಾಹ ಕೊಡುವವರ ಬಗ್ಗೆ ಮಾತಾಡೋಣ, ನನ್ನ ಬಗ್ಗೆ, ನನ್ನ ಮಗಳ ಬಗ್ಗೆ…

Read More

ಬೆಂಗಳೂರು : ನಗರದ ಬಹುತೇಕ ಪ್ರಯಾಣಿಕರ ಮೊದಲ ಆಯ್ಕೆ ಕೂಡ ಮೆಟ್ರೋ. ಆದರೆ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಕೆಲವರು, ರೂಲ್ಸ್‌ಗಳ ಕಡೆ ಹೆಚ್ಚು ಗಮನ ನೀಡದೆ, ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಅದರಲ್ಲೂ ಮೊಬೈಲ್ ಬಳಕೆಯಿಂದಲೇ ಬಹುತೇಕ ರೂಲ್ಸ್ ಬ್ರೇಕ್‌ಗೆ ಕಾರಣವಾಗುತ್ತಿದೆ. ಇದರಿಂದ, ಸಹ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದು, ಒಂದೇ ತಿಂಗಳಲ್ಲಿ ಬಿಎಂಆರ್‌ಸಿಎಲ್‌ಗೆ ಸಾವಿರಾರು ಸಂಖ್ಯೆಯಲ್ಲಿ ದೂರು ದಾಖಲಾಗಿದೆ. ಪರಿಣಾಮ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಮೆಟ್ರೋ ಆಡಳಿತ ಮಂಡಳಿ ಮಹತ್ವದ ನಿರ್ಧಾರಕ್ಕೆ ಬಂದಿದೆ. ಮೆಟ್ರೋ ಟ್ರಾವೆಲಿಂಗ್ ವೇಳೆ ಸೌಂಡ್ ಜಾಸ್ತಿ ಇಟ್ಟುಕೊಂಡು ಮೊಬೈಲ್ ಬಳಕೆ ಮಾಡಬಾರದು ಅನ್ನೋ ನಿಯಮ ಇದ್ದರೂ ಉಲ್ಲಂಘನೆ ಆಗುತ್ತಿದೆ. ಇದೇ ಕಾರಣಕ್ಕೆ ದಂಡಾಸ್ತç ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಮೊಬೈಲ್ ಅಲ್ಲಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅಲ್ಲಲ್ಲಿ ಊಟ, ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರು ಕಂಡು ಬರುತ್ತಲೇ ಇದೆ. ಡಿಸೆಂಬರ್…

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ವಿಚ್ಛೇದನ ಬಳಿಕ ಪತಿಯ ಗೆಳೆಯನನ್ನು ಮದುವೆಯಾದ ಮಹಿಳೆ ಇದರಿಂದ ರೊಚ್ಚಿಗೆದ್ದು ಸ್ನೇಹಿತನ ಮೇಲೆ ವಿಕ್ರಂ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ ಮಲಬಕೊಪ್ಪ ಪೆಟ್ರೋಲ್ ಬಂಕ್ ಬಳಿ ಈ ಒಂದು ಘಟನೆ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಕ್ರಂ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಪತ್ನಿ ಛಾಯಾಗೆ ಆರೋಪಿ ವಿಕ್ರಂ ವಿಚ್ಛೇದನ ನೀಡಿದ್ದ. ಹಲ್ಲೆಗೆ ಒಳಗಾದ ವಿನೋದ್ ಆರೋಪಿ ವಿಕ್ರಂ ಇಬ್ಬರು ಸ್ನೇಹಿತರು. ವಿಚ್ಛೇದನ ಬಳಿಕ ತನ್ನ ಪತ್ನಿಗೆ ಸ್ನೇಹಿತನೇ ಮದುವೆಯಾದ ಹಿನ್ನೆಲೆಯಲ್ಲಿ, ವಿಕ್ರಮ್ ಸಿಟ್ಟಿಗೆದ್ದು ವಿನೋದ್ ಮೇಲೆ ಆರೋಪಿ ವಿಕ್ರಂ ಹಲ್ಲೆ ಮಾಡಿದ್ದಾನೆ. ಲಾರಿ ಚಾಲಕ ವಿನೋದ್ ಮೇಲೆ ವಿಕ್ರಂ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾನೆ. ಹಲ್ಲೆಗೆ ಒಳಗಾದಂತಹ ವಿನೋದ್ ಗೆ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿಕ್ರಂ ಗಾಗಿ ಪೊಲೀಸರು ಇದಿಗ ಹುಡುಕಾಟ

Read More

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಕೊನೆಗೂ ಚಿರತೆ ಬಿದ್ದಿದೆ. ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ರಂಗೇನಹಳ್ಳಿಯಲ್ಲಿ ಅರಣ್ಯ ಇಲಾಖೆ ಇಟ್ಟಂತಹ ಬೋನಿಗೆ ಚಿರತೆ ಕೊನೆಗೂ ಬಿದ್ದಿದೆ. ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಮಪುರ, ಗೊಲ್ಲರಹಟ್ಟಿ, ಶಿವಪುರ, ಲಕ್ಕೇನಹಳ್ಳಿ, ಇಸ್ಲಾಂಪುರ ಭಾಗದಲ್ಲಿ ಚಿರತೆ ಓಡಾಡುತ್ತಿತ್ತು. ಇದರಿಂದ ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಜಾನುವಾರು ಸಾಕು ನಾಯಿಗಳನ್ನು ಚಿರತೆ ಹೊತ್ತು ಒಯ್ದಿತ್ತು. ಹಾಗಾಗಿ ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು ಈ ಭಾಗದ ಜನ ನಿಟ್ಟುಸಿರುಬಿಟ್ಟಿದ್ದಾರೆ

Read More

ಬೆಂಗಳೂರು : ಮದುವೆಯಾಗೋದಾಗಿ ನಂಬಿಸಿ ಯುವತಿಯ ಜೊತೆ ಲಿವ್​​ ಇನ್​​ ರಿಲೇಶನ್​​ಶಿಪ್​​ನಲ್ಲಿದ್ದು ವಂಚಿಸಿದ್ದಲ್ಲದೆ, ಆಕೆಯ ಅಪ್ರಾಪ್ತ ಸಹೋದರಿ ಮೇಲೂ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳರಲ್ಲಿ ನಡೆದಿದೆ. ಅಷ್ಟೆ ಅಲ್ಲದೇ ಸಂತ್ರಸ್ತೆ ಯುವತಿಯಿಂದ ಲಕ್ಷಾಂತರ ಹಣ ಪಡೆದು ವಂಚನೆ ಎಸಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಶುಭಾಂಶು ಶುಕ್ಲಾ(27)ನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಯ ಕುಟುಂಬಕ್ಕೂ ಬಲ್ಲವನಾಗಿದ್ದ. ಬಳಿಕ ಬಾಲಕಿ ಸಹೋದರಿಯನ್ನ ಪ್ರೀತಿ ಬಲೆಯಲ್ಲಿ ಬೀಳಿಸಿದ್ದ ಈತ, ಮಾಸ್ಟರ್​​ ಪ್ಲ್ಯಾನ್​​ ಮಾಡಿ ಆಕೆಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ತನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದ ಸಂತ್ರಸ್ತೆ, ಈತನನನ್ನು ನಂಬಿ ಜೊತೆಗೆ ತೆರಳಿದ್ದಳು. ನಂತರ ಫ್ಲ್ಯಾಟ್​ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಮತ್ತೊಂದು ಅಪ್ರಾಪ್ತ…

Read More

ಬೆಂಗಳೂರು : ಹೊಸ ವರ್ಷಾಚರಣೆ ಬಂದರೆ ಸಾಕು ಯುವಜನತೆ ಡ್ರಗ್ಸ್ ಮಾದಕ ದ್ರವ್ಯ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಇದೀಗ ಟ್ರ್ಯಾಕ್ಸ್ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ 55.88 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಡಿಸೆಂಬರ್ 26ರಂದು ಮಹಾರಾಷ್ಟ್ರದ ANTF ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನ ಮೂರು ಕಡೆ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ಇಬ್ಬರು ಯೋಗಿರಾಜ್ ಕುಮಾರ್ ಹಾಗೂ ನಯನ್ ಪವರ್ ಈ ಒಂದು ದಂಧೆಯ ಕಿಂಗ್ ಪಿನ್ ಗಳಾಗಿದ್ದಾರೆ. ದೇಶದ ಅನೇಕ ಕಡೆಗೆ ಡ್ರಗ್ಸ್ ಫ್ಯಾಕ್ಟರಿಗಳನ್ನು ಆರೋಪಿಗಳು ನಡೆಸುತ್ತಿದ್ದರು. ಬೆಂಗಳೂರು ನಗರದಲ್ಲಿ ಮೂರು ಕಡೆ ಡ್ರಗ್ಸ್ ಫ್ಯಾಕ್ಟ್ರಿಗಳು ನಡೆಸುತ್ತಿದ್ದರು ಕಾರ್ಖಾನೆ ಹಾಗೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎನ್‌ಜಿ ಗೊಲ್ಲಹಳ್ಳಿ ಪ್ರದೇಶ ಅವಲಹಳ್ಳಿ ಠಾಣ ಎರಪ್ಪನಹಳ್ಳಿ ಮನೆಯಲ್ಲಿ ಡ್ರಗ್ಸ್ ಸಂಗ್ರಹ ಮಾಡುತ್ತಿದ್ದರು. ಇದೀಗ ಹೊಸ ವರ್ಷದ ಹೊತ್ತಿನಲ್ಲಿ ಪೊಲೀಸರು ಅತಿ ದೊಡ್ಡ ಭೇಟಿ ಆಡಿದ್ದಾರೆ ಬೆಂಗಳೂರಿನಲ್ಲಿ ಮೂರು…

Read More

ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಗದ್ದುಗೆಯ ಕಿತ್ತಾಟದ ನಡುವೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕುರಿತು ಕೋಡಿಮಠದ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಇದರ ಮಧ್ಯ ವೇದಿಕೆ ಮೇಲೇನೆ ಡಿಕೆ ಶಿವಕುಮಾರ್ ಗೆ ಮಹಿಳೆಯೊಬ್ಬರು ಯಾವಾಗ CM ಆಗ್ತೀರಾ ಸರ್ ಅಂತ ಪ್ರಶ್ನೆ ಕೇಳಿದ್ದಾರೆ. ಹೌದು ಬೆಂಗಳೂರಿನ ಬಸವನಗುಡಿ ಅವರೇ ಬೆಳೆ ಮೇಳದಲ್ಲಿ ಈ ಒಂದು ಘಟನೆ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮುಗಿಸಿ ಹೊರಡುವಾಗ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸರ್ ಯಾವಾಗ ನೀವು ಸಿಎಂ ಆಗ್ತೀರ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಹಿಳೆ ಮಾತು ಕೇಳಿಸಿಕೊಂಡು ಡಿಕೆ ಶಿವಕುಮಾರ್ ಏನು ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಇನ್ನು ಬೆಳಗಾವಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು,ಸ್ಪೋಟಕ ಭವಿಷ್ಯ ನುಡಿದಿದ್ದರೆ. ಹಾಲು ಮತದ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೋದು ಅಷ್ಟು ಸುಲಭವಾದುದ್ದಲ್ಲ. ಅದು ಕಷ್ಟವಾಗಿದೆ. ಸಿದ್ಧರಾಮಯ್ಯ ಅವರು ತಾವಾಗಿಯೇ ಅಧಿಕಾರ ಬಿಟ್ಟು ಕೊಟ್ರೆ ಮಾತ್ರವೇ ಬೇರೆಯವರಿಗೆ…

Read More