Subscribe to Updates
Get the latest creative news from FooBar about art, design and business.
Author: kannadanewsnow05
ರಾಮನಗರ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ ಮತ್ತೊಂದು ಕಡೆ ಯತೀಂದ್ರ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಹಲವು ಸಚಿವರು ಶಾಸಕರುಗಳೇ ವಿರೋಧ ವ್ಯಕ್ತಪಡಿಸಿದ್ದಾರೆ ಇದರ ಮಧ್ಯ ಶಾಸಕ ಇಕ್ಬಾಲ್ ಹುಸೇನ್ ಜನವರಿ ಆರರಂದು ಡಿಕೆ ಶಿವಕುಮಾರ್ ಸಿಎಂ ಆಗೋದು ಪಕ್ಕ ಅಂತ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಸಲೀಂ ಅಹಮದ್ ಜನವರಿ 6 ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಮಗೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದು ಒಂದೇ ಗುರಿ ಜನವರಿ 6 ಅಥವಾ ಜನವರಿ 9ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಜನವರಿ 6 ರಂದು ಅಥವಾ 9 ರಂದು 99% ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಅಧಿವೇಶನ ಆದಮೇಲೆ ಸಿಎಂ ಆಗುತ್ತಾರೆ ಅದರಲ್ಲಿ ಏನು ತಪ್ಪಿದೆ? ಡಿಕೆ ಶಿವಕುಮಾರ್ ಅವರಿಗೆ ಒಂದು ಅವಕಾಶವಿದೆ ಶಿವಕುಮಾರ್ ಅವರು…
ಬೆಂಗಳೂರು : ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 12ರ ಶೋ ಭರ್ಜರಿಯಾಗಿ ಪ್ರದರ್ಶನ ಆಗುತ್ತಿದ್ದು ಈ ಒಂದು ಬಿಗ್ ಬಾಸ್ ಫಿನಾಲೆಯಲ್ಲಿ ಯಾರು ರಣರಪ್ಪ ಆಗುತ್ತಾರೋ ಅವರಿಗೆ 2ಲಕ್ಷ ರೂಪಾಯಿ ನೀಡುತ್ತೇನೆ ಎಂದು ಬಿಗ್ ಬಾಸ್ ಸೀಸನ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಮಾಡಿದ್ದಾರೆ. ಹೌದು ಹಳ್ಳಿಕಾರ್ ಸಂತೋಷ್ ಎಂದೇ ಹೆಸರು ಪಡೆದಿರುವ ವರ್ತೂರ್ ಸಂತೋಷ್, ರನ್ನರ್ ಅಪ್ ಗಳಿಗೆ 10 ಲಕ್ಷ ನೀಡ್ತೇನೆ, ಆದ್ರೆ ನನ್ನದೊಂದು ಷರತ್ತಿದೆ ಎಂದ್ದಿದ್ದರು. ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ನೀಡ್ಬೇಕು, ಇಡೀ ರಾಜ್ಯಕ್ಕೆ ಹಳ್ಳಿಕಾರ್ ಎತ್ತುಗಳನ್ನು ಪರಿಚಯಿಸಬೇಕು ಎಂದಿದ್ದರು. ಈ ಮಧ್ಯೆ ಕಲರ್ಸ್ ಕನ್ನಡ ಬಿಗ್ ಬಾಸ್ ಮನೆಗೆ ಹಳ್ಳಿಕಾರ್ ಎತ್ತುಗಳ ಪ್ರವೇಶಕ್ಕೆ ಒಪ್ಪಿಗೆ ನೀಡಿಲ್ಲ. ಇದೇ ಕಾರಣಕ್ಕೆ ವರ್ತೂರ್ ಸಂತೋಷ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ರನ್ನರ್ ಅಪ್ ಗೆ ನೀಡುವ ಹಣದ ಬಗ್ಗೆ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಗೆ…
ಬೆಂಗಳೂರು : ನಾನು ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ ನಾಳೆ ಕಲ್ಬುರ್ಗಿಯಲ್ಲಿ ಸಭೆ ನಡೆಸಿ ಪಕ್ಷದ ಚಿನ್ಹೆಯ ಬಗ್ಗೆ ನಿರ್ಧರಿಸುತ್ತೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಹಲವು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ನಿಮ್ಮ ಪಾರ್ಟಿಗೆ ಸೇರಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬಸವಣ್ಣ ಮತ್ತು ಅಂಬೇಡ್ಕರ್ ಸಿದ್ಧಾಂತದಂತೆ ನಡೆಯುತ್ತೇವೆ. ರಾಹುಲ್ ಗಾಂಧಿಗೆ ಇಂದಿರಾಗಾಂಧಿಯ ಶಕ್ತಿ ಬರಲಿಲ್ಲ ಮೋದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಶಕ್ತಿ ಬರಲಿಲ್ಲ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಕರ್ನಾಟಕ ಇಬ್ಬಾಗ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಮಾರಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದರು.
ಹಾವೇರಿ : ಕಳೆದ 2 ದಿನಗಳ ಹಿಂದೆ ಜಿಲ್ಲೆಯಲ್ಲಿ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಪ್ಪಲಿ ಹಾರ ಹಾಕಿ ಶಿಕ್ಷಕನ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಾವೇರಿಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಶಿಕ್ಷಕ ಜಗದೀಶ್ ಗೆ ಪೋಷಕರು ಹಾಗೂ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿತ್ತು. ಇದೀಗ ಚಪ್ಪಲಿ ಹಾರ ಹಾಕಿದವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಸವಣೂರು ಪಟ್ಟಣದ ಸರ್ಕಾರಿ ಉರ್ದು ಉನ್ನತಿಕರಿಸದ ಶಾಲೆಯ ಶಿಕ್ಷಕನಿಗೆ ಥಳಿಸಿದ್ದಾರೆ.ಅಲ್ಲದೇ ಚಪ್ಪಲಿ ಹಾರ ಹಾಕಿ ಶಿಕ್ಷಕನನ್ನು ಸವಣೂರು ಠಾಣೆಗೆ ವಿದ್ಯಾರ್ಥಿನಿಯರ ಪೋಷಕರು ಕರೆತಂದಿದ್ದಾರೆ. ಧರ್ಮದೇಟು ನೀಡಿ ಜಗದೀಶ್ ನನ್ನು ಪೊಲೀಸರಿಗೆ ಪೋಷಕರು ಒಪ್ಪಿಸಿದ್ದರು.
ಕಲಬುರ್ಗಿ : ಬಿಜೆಪಿ ಅಧಿಕಾರದಲ್ಲಿ ಅವಧಿಯಲ್ಲಿ ಕೆಕೆಆರ್ಡಿಬಿ ಹಗರಣದ ತನಿಖೆಗೆ ಸಂಬಂಧಪಟ್ಟಂತೆ 2 ವರ್ಷಗಳ ಸುದೀರ್ಘ ತನಿಖೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ನಿವೃತ್ತ IAS ತನಿಖಾ ತಂಡ 180 ಪುಟಗಳ ವರದಿಯನ್ನು ತನಿಖಾ ತಂಡ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ 2020 ರಿಂದ 2023ರ ವರೆಗೆ ನೂರಾರು ಕೋಟಿ ಅಕ್ರಮ ನಡೆದಿದ್ದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ಒಂದು ಅಕ್ರಮ ನಡೆದಿತ್ತು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘಕ್ಕೆ ನೀಡಿದ ಅನುದಾನ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಕ್ರಮದ ಕುರಿತು ಸಿಎಂ ಸಿದ್ದರಾಮಯ್ಯ ತನಿಖೆಗೆ ಸೂಚಿಸಿದರು. ಕೆಕೆಆರ್ಡಿಬಿ ಹಣ ಆರ್ ಎಸ್ ಎಸ್ ಚಟುವಟಿಕೆಗೆ ಬಳಸಿರುವ ಆರೋಪ ಸಹ ಕೇಳಿಬಂದಿದೆ. ಪ್ರಿಯಾಂಕ ಖರ್ಗೆ ಆರೋಪದ ಬೆನ್ನಲ್ಲೇ ಸರ್ಕಾರಕ್ಕೆ ತನಿಖಾ ತಂಡ ವರದಿ ಸಲ್ಲಿಸಿದೆ. ಅಕ್ರಮವಾಗಿ 8ನೇ ಜಿಲ್ಲೆಯ ರಚಿಸಿದ್ದ KKHRAC ಸಂಘ. ಕಲಬುರ್ಗಿ ಸೇಡಂ ಉಪ ಪ್ರದೇಶವನ್ನೇ ಜಿಲ್ಲೆ ಎಂದು ನಮೂದು ಮಾಡಲಾಗಿತ್ತು…
ದಿಕ್ಕುಗಳು ಶುಭದ ಸಂಕೇತಗಳಾಗಬಹುದು ಕೆಲವು ಸಂಪ್ರದಾಯಗಳ ಆಧಾರದ ಮೇಲೆ. ಹಿಂದೂ ಸಂಪ್ರದಾಯದಲ್ಲಿ, ದಿಕ್ಕುಗಳು ಶುಭ ಮತ್ತು ಅಶುಭಗಳ ಹೆಸರುಗಳನ್ನು ಹೊಂದಿದ್ದು, ಶುಭದ ದಿಕ್ಕುಗಳಲ್ಲಿ ನಡೆದ ಕ್ರಿಯೆಗಳು ಹೆಚ್ಚು ಪ್ರಾಸಂಗಿಕವಾಗಿ ಹೋಗಬಹುದು. ಹಾಗಾಗಿ ಯಾವುದೇ ಶುಭ ಕಾರ್ಯ ನಡೆಯುವ ವೇಳೆ ಕೊಡ ಸೂಕ್ತ ದಿಕ್ಕು ಗಳ ಆಧಾರದ ಮೇಲೆ ಪೂಜೆ ಸಲ್ಲಿಸಲಾಗುವುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ…
ಹುಬ್ಬಳ್ಳಿ : ಹುಬ್ಬಳ್ಳಿ ನಗರದ ವೀರ ಮಾರುತಿ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಯ್ಯಪ್ಪ ಮಾಲಾಧಾರಿಗಳಿದ್ದ ಶೆಡ್ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ಪೂಜೆ ಮಾಡಿ ದೀಪ ಹಚ್ಚಿ ಮಾಲಾಧಾರಿಗಳು ಹೊರಗಡೆ ಹೋಗಿದ್ದಾರೆ ಈ ವೇಳೆ ದೀಪದಿಂದ ಇಡೀ ಮನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಲ್ಲಿ ಯಶಸ್ವಿ ಆಗಿದ್ದಾರೆ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು : ಮಹಿಳೆ ಒಬ್ಬರಿಗೆ ಧನಸಹಾಯ ಮಾಡುವ ನೆಪದಲ್ಲಿ ಸ್ವಾಮೀಜಿ ಒಬ್ಬರು ಮಂಚಕ್ಕೆ ಕರೆದಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇದು ಮೆಳೆಕೋಟೆಯ ಬ್ರಹ್ಮಾನಂದ ಗುರುಜಿ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮೆಳೆಕೋಟೆಯ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಸ್ವಾಮೀಜಿ ವಿರುದ್ಧ ಈ ಆರೋಪ ಕೇಳಿಬಂದಿದೆ. ಸೈಟ್ ತೆಗೆದುಕೊಳ್ಳಲು ಬಡ ಮಹಿಳೆ ಧನಸಹಾಯ ಕೇಳಿದರು. ಹಣ ಕೇಳಿದಕ್ಕೆ ರೂಮ್ಗೆ ಬರುವಂತೆ ಸ್ವಾಮೀಜಿ ಕರೆದಿರುವ ಆರೋಪ ಕೇಳಿಬಂದಿದೆ ನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಿಯೋ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಬಳಿ 12 ಲಕ್ಷ ಹಣವಿಲ್ಲ 8 ಲಕ್ಷ ಮಾತ್ರ ಇದೆ ಅಂತ ದಂಪತಿಗಳು ಹೇಳಿದ್ದರು. 5 ಲಕ್ಷ ನಾನು ಸಹಾಯ ಮಾಡುತ್ತೇನೆ ಅಂತ ಸ್ವಾಮೀಜಿಗಳು ಹೇಳಿದ್ದಾರೆ. ಮಹಿಳೆಯಿಂದ 5 ಲಕ್ಷ ಅಡ್ವಾನ್ಸ್ ಬೇರೊಬ್ಬರಿಗೆ ಕೊಡಿಸಿದ್ದರು . ಹಣ ನೀಡಿ ವರ್ಷ…
ಮಡಿಕೇರಿ : ಮಡಿಕೇರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಹನಿ ಟ್ರ್ಯಾಪ್ ಗೆ ಬಲಿಯಾದ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ವರದಿಯಾಗಿದೆ. ಹೋಂ ಸ್ಟೇ ಇಂದ ಯುವಕ ಬೆತ್ತಲಾಗಿ ಓಡಿ ಬಂದಿದ್ದು ಆತನನ್ನು ಹಿಡಿದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ನಡೆಸಿದಾಗ ಫೇಸ್ಬುಕ್ ಗೆಳತಿಗಾಗಿ ಮಹೇಶ್ ಎನ್ನುವ ಯುವಕ ಮಡಿಕೇರಿಗೆ ಬಂದಿದ್ದ ಹೋಂ ಸ್ಟೇನಲ್ಲಿ ಹನಿ ಟ್ರ್ಯಾಪ್ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದ್ದು ಹನಿ ಟ್ರ್ಯ್ಯಾಪಿಗೆ ಒಳಗಾಗಿ ಮಹೇಶ್ ಬೆತ್ತಲಾಗಿ ಹೋಂ ಸ್ಟೇ ನಿಂದ ಬೆತ್ತಲಾಗಿ ಹೊರಗಡೆ ಓಡಿ ಬಂದಿದ್ದನ್ನು ನೋಡಿ ಜನ ಶಾಕ್ ಆಗಿದ್ದಾರೆ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಹನಿಟ್ರ್ಯಾಪ್ ಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಫೇಸ್ಬುಕ್ ನಲ್ಲಿ ಮಹೇಶ್ಗೆ ಮಹಿಳೆ ಪರಿಚಯವಾಗಿದ್ದಾಳೆ, ಮಡಿಕೇರಿ ಮೂಲದ ಮಹಿಳೆಯ ಜೊತೆಗೆ ಮಹೇಶ್ ಸ್ನೇಹ ಬೆಳೆಸಿದ್ದಾಳೆ, ಮಡಿಕೇರಿಗೆ ಬರುವಂತೆ ಯುವಕನಿಗೆ ಮಹಿಳೆ ಕರೆದಿದ್ದಾಳೆ . ಮಂಗಳದೇವಿ ನಗರದಲ್ಲಿ ಇರುವ ಹೋಂ ಸ್ಟೇಗೆ ಮಹೇಶ್ ಬಂದಿದ್ದಾನೆ ಹೋಂಸ್ಟೇನಲ್ಲಿ ಮಹೇಶ್ಗೆ ಹನಿ ಟ್ರ್ಯಾಪ್…
ಬೆಂಗಳೂರು : ನಿನ್ನೆ ಬೆಂಗಳೂರಲ್ಲಿ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಆಫ್ಜಲ್ನನ್ನು ಬೆಂಗಳೂರಿನ ಬಸವನಗುಡಿ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಶೂಟಿಂಗ್ ಪ್ರಾಕ್ಟೀಸ್ ವೇಳೆ ಆಫ್ಜಲ್ನಿಂದ ಶೂಟ್ ಮಾಡಿದ್ದ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ. ಅಫ್ಜಲ್ ನಿನ್ನೆ ತನ್ನ ಫ್ಲಾಟ್ ಕಿಟಕಿ ಬಳಿ ಫೈರಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಉದ್ಯಮಿ ರಾಜಗೋಪಾಲ್ ಗೆ ಗುಂಡು ತಗುಲಿತ್ತು. ಗಾಯಾಳು ವಿಚಾರಣೆ ಮಾಡಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಉದ್ಯಮಿ ರಾಜಗೋಪಾಲ್ ಗೆ ಯಾವುದೇ ಬೆದರಿಕೆ ಕರೆ ಬಂದಿರಲಿಲ್ಲ. ಪರಿಶೀಲನೆ ವೇಳೆ ಅಫ್ಜಲ್ ಫ್ಲ್ಯಾಟ್ನಿಂದ ಫೈರ್ ಆಗಿರುವುದು ಪತ್ತೆಯಾಗಿದೆ. ಸದ್ಯ ಆಫ್ಜಲನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ನಿನ್ನೆ ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ಈ ಒಂದು ಘಟನೆ ನಡೆದಿತ್ತು.














