Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ಇಂದು ವಿಧಾನಸಭೆಯಲ್ಲಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ತಿದ್ದುಪಡಿ ಸೇರಿದಂತೆ 5 ವಿಧೇಯಕಗಳನ್ನ ಅಂಗೀಕಾರ ಮಾಡಲಾಯಿತು. 5 ವಿಧೇಯಕಗಳು 1) ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2) ಬಾಂಬೆ ಸಾರ್ವಜನಿಕ ನ್ಯಾಸ (ಕರ್ನಾಟಕ ತಿದ್ದುಪಡಿ) ವಿಧೇಯಕ 3) ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 4) ಔಷಧ ಮತ್ತು ಪ್ರಸಾಧನಾ ಸಾಮಗ್ರಿ ಕರ್ನಾಟಕ (ತಿದ್ದುಪಡಿ) ವಿಧೇಯಕ 5) ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ (2ನೇ ತಿದ್ದುಪಡಿ) ಬಿಲ್ ಅಂಗೀಕಾರವಾಯಿತು
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಟ್ರಯಲ್ ವಿಚಾರಣೆ ನಡೆಯಿತು ವಿಚಾರಣೆಯ ಬಳಿಕ ಕೋರ್ಟ್ ನಾಳೆಗೆ ವಿತರಣೆ ಮುಂದೂಡಿ ಆದೇಶ ಹೊರಡಿಸಿದರು. ಇದೆ ವೇಳೆ ಪ್ರಕರಣದ ಆರೋಪಿ ಪವಿತ್ರ ಗೌಡ ಇರುವ ಸೆಲ್ ಗೆ ಟಿವಿ ಅಳವಡಿಸಿಲು ಜಡ್ಜ್ ಸೂಚನೆ ನೀಡಿದರು ಅಲ್ಲದೆ ದಿನಪತ್ರಿಕೆ ಗ್ರಂಥಾಲಯದ ಪುಸ್ತಕ ಒದಗಿಸಲು ಸೂಚನೆ ನೀಡಿದ್ದಾರೆ ಟಿವಿ ರೇಡಿಯೋ ದಿನಪತ್ರಿಕೆ ಮ್ಯೂಸಿಕ್ ಮೆಡಿಟೇಶನ್ ಮನೆ ಊಟಕ್ಕೆ ಪವಿತ್ರ ಗೌಡ ಪರ ವಕೀಲರು ಬೇಡಿಕೆ ಇಟ್ಟಿದ್ದರು. ಆದರೆ ಟಿವಿ ದಿನಪತ್ರಿಕೆ ಹಾಗೂ ಗ್ರಂಥಾಲಯದ ಪುಸ್ತಕ ಒದಗಿಸಲು ಮಾತ್ರ ಜಡ್ಜ್ ಆದೇಶಿಸಿದ್ದಾರೆ.
ಬೆಂಗಳೂರು : ಇತ್ತೀಚಿಗೆ ಮೈಸೂರಲ್ಲಿ ಸ್ನಾನಕ್ಕೆ ಎಂದು ಗೀಸರ್ ಆನ್ ಮಾಡಿದ್ದಾಗ ಗೀಸರ್ ಅನೀಲ ಸೋರಿಕೆಯಾಗಿ ಇಬ್ಬರು ಸಹೋದರಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಅಲ್ಲದೇ ಬೆಂಗಳೂರಲ್ಲಿ ಇತ್ತೀಚೆಗಷ್ಟೇ ಸ್ನಾನ ಮಾಡುವುದಕ್ಕೆ ಬಾತ್ ರೂಮ್ ಗೆ ಹೋದ ತಾಯಿ ಮಗು ಗ್ಯಾಸ್ ಗೀಸರ್ ನಿಂದಾಗಿ ಸಾವನ್ನಪ್ಪಿದ್ದರು. ಇದೆ ರೀತಿ ಇನ್ನು ಹಲವಾರು ದುರಂತಗಳು ನಡೆದಿದ್ದವು. ಆದರೆ ಗೀಸರ್ ಬಳಸೋಕು ಮುನ್ನ ಅದನ್ನು ಯಾವ ರೀತಿ ಬಳಸಬೇಕು? ಯಾವ ಮುನ್ನೆಚರಿಕೆ ವಹಿಸಬೇಕು ಅನ್ನೋದನ್ನ ತಿಳಿಯೋಣ ಮೊದಲಿಗೆ ಗೀಸರ್ ಬಗ್ಗೆ ಮಾಹಿತಿ ತಿಳಿದುಕೊಂಡರೆ ಬಹಳ ಒಳ್ಳೆಯದು ಮನೆಯ ಬಾತ್ ರೂಮ್ ನಲ್ಲಿ ಗೀಸರ್ ಅನ್ನು ಫಿಕ್ಸ್ ಮಾಡುವ ಸಂದರ್ಭದಲ್ಲಿ, ಪರಿಣಿತರೊಂದಿಗೆ ಅಥವಾ ಎಲೆಕ್ಟ್ರೀಷಿಯನ್ ಜೊತೆಗೆ ಈ ಗೀಸರ್ ಗೆ ಸಂಬಂಧ ಪಟ್ಟ ಮಾಹಿತಿಯನ್ನು ಸರಿಯಾಗಿ ಕೇಳಿ ತಿಳಿದುಕೊಳ್ಳಿ.ಗೀಸರ್ ಸೆಟ್ಟಿಂಗ್ ಮಾಡುವ ಕನೆಕ್ಷನ್ ನಲ್ಲಿ ಆಚೆ ಈಚೆ ಆಗಿದ್ದರೆ ಅಥವಾ ಗ್ಯಾಸ್ ಲೀಕೇಜ್ ಆಗಿದ್ದರೆ ಏನೆಲ್ಲಾ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಬಾತ್ ರೂಮ್ ನಲ್ಲಿ ಕಿಟಕಿ ಅಥವಾ…
ಶಿವಮೊಗ್ಗ : ಧರ್ಮಸ್ಥಳ ಪ್ರಕರಣದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಾಸ್ಕ್ ಮ್ಯಾನ್ ಎಂದೇ ಪ್ರಖ್ಯಾತನಾಗಿದ್ದ ಸಿ.ಎನ್. ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ, ಬಿಡುಗಡೆಯ ಭಾಗ್ಯವಿಲ್ಲದೆ ಜೈಲಿನಲ್ಲಿಯೇ ಉಳಿಯುವಂತಾಗಿತ್ತು. ಇದರಿಂದ ಮಂಕಾಗಿದ್ದ ಚಿನ್ನಯ್ಯ ಇದೀಗ ಶಿವಮೊಗ್ಗ ಸೆಂಟ್ರಲ್ ಜೈಲಿನಿಂದ ಚಿನ್ನಯ್ಯ ರಿಲೀಸ್ ಆಗಿದ್ದಾನೆ. ಇಂದು (ಡಿಸೆಂಬರ್ 17) ಚಿನ್ನಯ್ಯ ಪತ್ನಿ ಮಲ್ಲಿಕಾ ಒಂದು ಲಕ್ಷ ಬಾಂಡ್ ಕೊಟ್ಟಿದ್ದು, ಜೊತೆಗೆ ಇಬ್ಬರು ಜಾಮೀನುದಾರರು ಮತ್ತು ಒಬ್ಬರ ಶ್ಯೂರಿಟಿ ಕೊಡಿಸಿದ್ದಾರೆ. ಬಳಿಕ ಕೋರ್ಟ್, ಡಿಸೆಂಬರ್ 17 ರಂದು ಚಿನ್ನಯ್ಯನ ಬಿಡುಗಡೆಗೆ ಆದೇಶ ಹೊರಡಿಸಿದೆ. ಜಾಮೀನು ಷರತ್ತು ಪೂರೈಸಿದ 23 ದಿನಗಳ ನಂತರ ಚಿನ್ನಯ್ಯ ರಿಲೀಸ್ ಆಗಿದ್ದಾನೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನಯ್ಯ ಪತ್ನಿ ಮಲ್ಲಿಕಾ ಶೂರಿಟಿ ನೀಡಿದ್ದಾರೆ. 4 ತಿಂಗಳಿಂದ ಶಿವಮೊಗ್ಗ ಜೈಲಲ್ಲಿ ಇದ್ದರೂ. ಶೂರಿಟಿ ಪೂರೈಸಿದ ನಂತರ ಚಿನ್ನಯ್ಯ ಇದೀಗ ಬಿಡುಗಡೆ ಆಗಿದ್ದಾನೆ. ಪತ್ನಿ ಮಲ್ಲಿಕಾ, ಸಹೋದರ ರತ್ನಾ ಜೊತೆಗೆ ಸಿ.ಎಸ್ ಚಿನ್ನಯ್ಯ ಮನೆಗೆ ತೆರಳಿದ್ದಾನೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದ ಕುರಿತು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ನಲ್ಲಿ ಟ್ರಯಲ್ ಪುನರಾರಂಭಗೊಂಡಿತು.ಈ ವೇಳೆ ಕೋರ್ಟ್ ಪವಿತ್ರಾಗೌಡ ಪರ ವಕೀಲರ ವಾದ ಆಲಿಸಿ ವಿಚಾರಣೆ ನಾಳೆಗೆ ಮುಂದೂಡಿತು. ವಿಚಾರಣೆಯ ವೇಳೆ ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆಗೆ ಆರೋಪಿ ಪವಿತ್ರ ಗೌಡ ಪರ ವಕೀಲ ಬಾಲನ್ ಅವರು ಪಾರ್ಟಿ ಸವಾಲು ಹಾಕಿದ್ದು, ಜೂನ್ 11ರಂದು ಪೊಲೀಸರು ವಿಚಾರಣೆ ಮಾಡಿದ್ದರ ಎಂದು ಕೇಳಿದರು ಇಲ್ಲ ಜೂನ್ 14ರಂದು ಉತ್ತರಿಸಿದ್ದೇನೆ ಎಂದು ರತ್ನಪ್ರಭಾತ ತಿಳಿಸಿದರು. 2024 ಜೂನ್ 8ರಂದು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಅಪೋಲೋ ಫಾರ್ಮಸಿಗೆ ಹೋಗಿ ಕೆಲಸ ಮಾಡಿದ್ದ ಹೌದಾ ಅಂತ ಪವಿತ್ರಾ ಪರ ವಕೀಲ ಬಾಲನ್ ಕೇಳಿದಾಗ ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಅವರು ಇಲ್ಲ ಎಂದು ಉತ್ತರಿಸಿದರು. ಶವಾಗಾರದಲ್ಲಿ…
ಬೆಳಗಾವಿ : ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿರುವ 15 ವರ್ಷ ಮೀರಿದ ವಾಹನಗಳಿಗೆ ಒಂದು ವರ್ಷ ವಿಸ್ತರಣೆಯ ಜೊತೆಗೆ, ಸುಸ್ಥಿತಿಯಲ್ಲಿರುವ ಕೆಲ ವಾಹನಗಳಿಗೆ ಗುಜರಿ ನೀತಿಯಡಿ ವಿನಾಯಿತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಪರಿಷತ್ತಿನಲ್ಲಿ ಸದಸ್ಯರಾದ ಗೋವಿಂದ ರಾಜು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎನ್.ಐ.ಸಿ. ಅವರು ಒದಗಿಸಿರುವ ಮಾಹಿತಿಯ ಪ್ರಕಾರ ಡಿ.4ರ ಅಂತ್ಯಕ್ಕೆ 15 ವರ್ಷದ ಅವಧಿ ಮೀರಿದ ಒಟ್ಟು 18,552 (ಸಾರಿಗೆ ಸಂಸ್ಥೆಗಳ ಬಸ್ಸುಗಳನ್ನು ಹೊರತುಪಡಿಸಿ) ಸರ್ಕಾರಿ ವಾಹನಗಳ ನೋಂದಣಿಯನ್ನು ಕೇಂದ್ರ ಸರ್ಕಾರವು ವಾಹನ್ ಪೋರ್ಟಲ್ನಲ್ಲಿ ರದ್ದುಪಡಿಸಿದೆ. ಈ 18,552 ವಾಹನಗಳ ಪೈಕಿ ಆರ್ವಿಎಸ್ಎಫ್ನಲ್ಲಿ ಒಟ್ಟು 1,493 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ. 17,059 ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಬಾಕಿ ಇರುತ್ತದೆ ಎಂದರು. ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ 15 ವರ್ಷ ಮೀರಿದ ವಾಹನಗಳನ್ನು…
ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ. ಬಾರವ್ವ ಕೋಬಡಿ (60) ಹಾಗೂ ಲಕ್ಷ್ಮೀಬಾಯಿ ರುದ್ರಗೌಡರ (65) ಎಂದು ತಿಳಿದುಬಂದಿದೆ. ಕಟಾವು ವೇಳೆ ಮುಂದೆ ನೋಡದೆ ಡ್ರೈವರ್ ವಾಹನ ಚಲಾಯಿಸಿದ್ದಾನೆ ಇಬ್ಬರೂ ಮಹಿಳೆಯರ ತಲೆ ಯಂತ್ರದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಕಬ್ಬಿಣ ಗದ್ದೆಗೆ ಕೂಲಿ ಕೆಲಸಕ್ಕೆ ಎಂದು ಇಬ್ಬರು ಮಹಿಳೆಯರು ಬಂದಿದ್ದರು. ಚಾಲಕನ ನಿರ್ಲಕ್ಷದಿಂದ ಕೂಲಿಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ತಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.
BREAKING : ಕಾರವಾರದಲ್ಲಿ ಜಿಪಿಎಸ್ ಟ್ರ್ಯಾಕರ್ ಹೊಂದಿದ ಸೀಗಲ್ ಹಕ್ಕಿ ಪತ್ತೆ : ನೌಕಾನೆಲೆಯಲ್ಲಿ ಚೀನಾ ಗೂಢಚರ್ಯೆ ಶಂಕೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವಲಸಿಗ ಸಿಗಲ್ ಪಕ್ಷಿಯಲ್ಲಿ ಚೀನಾದ ಜಿಪಿಎಸ್ ಟ್ರಾಕರ್ ಪತ್ತೆಯಾಗಿದೆ. ಟ್ರಾಕರ್ ಹೊಂದಿದ ಸಿಗಲ್ ಪಕ್ಷಿಯನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕದಂಬ ನೌಕಾನೆಲ್ಲಿ ಪ್ರದೇಶದಲ್ಲಿ ನಿನ್ನೆ ಸಿಗಲ್ ಹಕ್ಕಿ ಕಾಣಿಸಿಕೊಂಡಿತ್ತು ಉತ್ತರ ಕನ್ನಡ ಜಿಲ್ಲೆಯ ಕದಂಬ ನೌಕಾನೆಲೆ ಪ್ರದೇಶದಲ್ಲಿ ಹಕ್ಕಿ ಕಾಣಿಸಿಕೊಂಡಿತು. ಟ್ರ್ಯಾಕರ್ ಹೊಂದಿದೆ ಸೀಗಲ್ ಹಕ್ಕಿ ಕಂಡು ಪೊಲೀಸರು ಆತಂಕಗೊಂಡಿದ್ದಾರೆ ಈ ಟ್ರಾಕ್ಟರ್ ಬಗ್ಗೆ ಕಾರವಾರ ಪೊಲೀಸರು ಸದ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಪಿಎಸ್ ಟ್ರಾಕರ್ ನಲ್ಲಿ ಚೀನಾದ ವಿಜ್ಞಾನ ಅಕಾಡೆಮಿಯ ಬರಹ ಹೊಂದಿದೆ ನಮೂದಿಸಲಾಗಿದೆ. ಇಕೋ ಎನ್ವಿರಾನ್ಮೆಂಟ್ ಎಂದು ನಮೂದಿಸಲಾಗಿದೆ. ಸಿಗಲ್ ಹಕ್ಕಿಗಳ ಚಲನವಲನ ಮತ್ತು ಅವುಗಳ ಆಹಾರ ಪದ್ಧತಿ ಹಾಗೂ ವಲಸೆ ಸಮೀಕ್ಷೆಗೆ ಈ ಒಂದು ಜಿಪಿಎಸ್ ಟ್ರಾಕರ್ ಅಳವಡಿಸಲಾಗುತ್ತದೆ.ಕಚೇರಿಗೆ ಶಿಫ್ಟ್ ಮಾಡಲಾಗಿದೆ ಚೀನಾದ ಅಕಾಡೆಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಪರ್ಕಿಸುತ್ತಿದ್ದಾರೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರೇಷನ್ ಕಾರ್ಡ್ಗೆ ಅರ್ಜಿ ಹಾಕಿ ಕಾಯುತ್ತಿದ್ದವರಿಗೆ ಗುಡ್ನ್ಯೂಸ್ ಅನ್ನು ಆಹಾರ ಸಚಿವ ಕೆಎಚ್ ಮುನಿಯಪ್ಪ ನೀಡಿದ್ದಾರೆ. ಹೌದು, ಅವರು ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವ ಸಲುವಾಗಿ ಒಟ್ಟು 3.96 ಲಕ್ಷ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಈಗಾಗಲೇ ಅರ್ಜಿಗಳನ್ನು ವಿಲೇವಾರಿ ಮಾಡಿದ್ದು ಮುಂದಿನ ಒಂದುವರೆ ತಿಂಗಳಲ್ಲಿ ಅರ್ಹರಿಗೆ ಹೊಸ ರೇಷನ್ ಕಾರ್ಡ್ಗಳನ್ನು ನೀಡಲಾಗುತ್ತೆ ಎಂದರು. ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವ ಸಲುವಾಗಿ ಒಟ್ಟು 3.96 ಲಕ್ಷ ಅರ್ಜಿಗಳು ಬಂದಿದ್ದವು, ಈ ಪೈಕಿ ಮಾನದಂಡವನ್ನು ಪೂರೈಸಿರುವ ಪೈಕಿ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಲಾಗಿದ್ದು, ಬಾಕಿ ಉಳಿದ ಮಂದಿಗೆ ಶೀಘ್ರದಲ್ಲಿ ಅಂದರೆ ಒಂದು ತಿಂಗಳೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂತ ಅವರು ಹೇಳಿದರು. ಇನ್ನೂ ಇದೇ ವೇಳೆ ಅವರು ಮಾತನಾಡುತ್ತ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳನ್ನು ಹತ್ತಿಕ್ಕಿವ ನಿಟ್ಟಿನಲ್ಲಿ ಎಪಿಎಲ್ಗೆ ಬದಲಾವಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಕಾರ್ಡ್ಗಳನ್ನು ನೀಡಲಾಗುತ್ತಿದೆ…
ಬೆಳಗಾವಿ : ಇಂದು ಸುವರ್ಣ ಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕೆಲವು ರೈತರು ಭೇಟಿಯಾಗಲು ಬಂದಿದ್ದರು. ತಮ್ಮ ಊರಿನ ಕನ್ನಡ ಶಾಲೆಯ ಅಭಿವೃದ್ಧಿ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಲು ಭೇಟಿಯಾಗಲು ಸುವರ್ಣಸುವುದಕ್ಕೆ ಬಂದಿದ್ದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ರೈತರು, ಗರಂ ಆಗಿದ್ದಾರೆ. ಕನ್ನಡ ಶಾಲೆ ಅಭಿವೃದ್ಧಿಯ ಬಗ್ಗೆ ರೈತರು ಭೇಟಿಗೆ ಬಂದಿದ್ದರು ಸಚಿವರನ್ನು ಭೇಟಿ ಮಾಡಲು ಬಂದಾಗ ನಾನು ಎಲ್ಲ ಮಾಡಿದ್ದೀನಿ ಮೊದಲು ಹೊರಗೆ ಹೋಗಿ ಅಂತ ರೈತರಿಗೆ ಹೇಳಿದ್ದಾರೆ. ರೈತರನ್ನು ಸಿಬ್ಬಂದಿಗಳು ಕಚೇರಿಯಿಂದ ಹೊರಗಡೆ ಹಾಕಿದ್ದಾರೆ. ಆಗ ರೈತರು ಅವನೊಬ್ಬ ಶಿಕ್ಷಣ ಸಚಿವ ಗೂಂಡಾಗಳನ್ನು ಇಟ್ಟುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದಾನೆ ಎಂದು ಸಚಿವ ಮಧು ಬಂಗಾರಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಿವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.














