Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ಗುರುತು ಪರಿಚಯ ಇಲ್ಲದವರು ಬಂದು ಬಾಡಿಗೆ ಮನೆ ಇದೆ ಅಂತ ಕೇಳುತ್ತಾರೆ. ಇದೀಗ ಗೃಹ ಸಚಿವರು ನಗರದಲ್ಲಿ ಬಾಡಿಗೆ ಕೊಡುವವರ ಮೇಲೆ ಹದ್ದಿನ ಕಣ್ಣು ಇಡುತ್ತೇವೆ, ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಕೆಲ ಬಾಂಗ್ಲಾ ವಲಸಿಗರನ್ನ ಹಿಡಿದಿದ್ದೇವೆ, ಅವರನ್ನು ಕಳುಹಿಸುವ ಪ್ರಕ್ರಿಯೆ ಮಾಡ್ತಿದೀವಿ. ಕೊತ್ತನೂರು, ಲಿಂಗರಾಜಪುರದಲ್ಲಿ ಆಫ್ರಿಕಾದವರು ಜಾಸ್ತಿ ಇದ್ದಾರೆ. ಅಲ್ಲಿ ಬಾಡಿಗೆ ಕೊಡೋರು ಎಚ್ಚರಿಕೆ ವಹಿಸಬೇಕು. ದಾಖಲಾತಿ, ವೀಸಾ ಪರಿಶೀಲಿಸಬೇಕು ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಬಾಂಗ್ಲಾ ವಲಸಿಗರು ಬೆಂಗಳೂರಲ್ಲಿ ಬೀಡುಬಿಟ್ಟ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾರ್ಡರ್ ನೋಡೋರು ಯಾರು? ಕೇಂದ್ರ ಸರ್ಕಾರ. ಅಲ್ಲಿ ರಕ್ಷಣಾ ಇಲಾಖೆ, ಕೇಂದ್ರ ಸರ್ಕಾರ ಇರುತ್ತದೆ. ಅಲ್ಲಿ ಬಿಗಿಯಾದ ಬಂದೋಬಸ್ತ್ ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಯುವತಿಯನ್ನು ಕೊಲೆ ಮಾಡಲು ಯುವಕ ಸ್ಕೆಚ್ ಹಾಕಿರುವ ಘಟನೆ ವರದಿಯಾಗಿದೆ. ಯುವತಿಯನ್ನು ಕೊಲ್ಲಲು ಹಾಡು ಹಗಲೇ ಯುವಕ ಗನ್ ಹಿಡಿದು ಓಡಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಹೌದು ಯುವತಿಯನ್ನು ಕೊಲ್ಲಲು ಆನ್ಲೈನ್ ಮುಖಾಂತರ ಯುವಕ ಏನ್ ಖರೀದಿ ಮಾಡಿದ್ದ ಎನ್ನಲಾಗಿದೆ. ಆದರೆ ಯುವತಿಯ ಸಮಯಪ್ರಜ್ಞೆಯಿಂದ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ತಕ್ಷಣ ಪೊಲೀಸರು ಗನ್ ಸಮೇತ ಬಿಹಾರ್ ಮೂಲದ ಯುಗಗಳನ್ನು ವಶಕ್ಕೆ ಪಡೆದಿದ್ದಾರೆ. ಯುವಕ ಗನ್ ಹಿಡಿದು ಓಡಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಡೆಂಟಲ್ ವಿದ್ಯಾರ್ಥಿನಿ ಒಬ್ಬಳು ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ತಳಲಾರದೆ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಬೊಮ್ಮನಹಳ್ಳಿಯ ಯಶಸ್ವಿನಿ (19) ಎನ್ನುವ ವಿದ್ಯಾರ್ಥಿನಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಶಸ್ವಿನಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ. ಆತ್ಮಹತ್ಯೆಗೆ ಮುನ್ನ ಯಶಸ್ವಿನಿ ಕಣ್ಣೀರು ಹಾಕಿದ್ದಾಳೆ. ಪರೀಕ್ಷೆಯ ವೇಳೆ ಓಎಂಆರ್ ಶೀಟ್ ಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು ಉಪನ್ಯಾಸಕ ಮತ್ತು ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡಿದ್ದಾರೆ. ಬೊಮ್ಮನಹಳ್ಳಿಯ ಆಕ್ಸ್ಫರ್ಡ್ ಕಾಲೇಜಿನಲ್ಲಿ ಯಶಸ್ವಿನಿ ಡೆಂಟಲ್ ಮೂರನೇ ವರ್ಷದಲ್ಲಿ ಓದುತ್ತಿದಳು. ಇನ್ನು ಆತ್ಮಹತ್ಯೆಗೂ ಮುನ್ನ ಯಶಸ್ವಿನಿ ಡೆತ್ ನೋಟ್ ಬರೆದಿಟ್ಟು ಸಾವನಪ್ಪಿದ್ದಾಳೆ. ಡೆತ್ ನೋಟ್ನಲ್ಲಿ ನನ್ನ ಸಾವಿಗೆ ಯಾರು ಕಾರಣ ಅಲ್ಲ ನಾನು ಬದುಕೋಕೆ ಯೋಗ್ಯಲಲ್ಲ ನನ್ನನ್ನು ಕ್ಷಮಿಸಿಬಿಡಿ ನಾನು ಒಳ್ಳೆಯ ಮಗಳಲ್ಲ ಸಾರಿ…

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಇದೀಗ ಮುಂದುವರೆದಿದೆ. ಬರ್ಗಿ ಬಳಿ ಜಮೀನಿನಲ್ಲಿ ಮೇಯುತಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರ್ಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಗ್ರಾಮದ ಜಮೀನಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ದಾಳಿಯಿಂದ ಗ್ರಾಮದ ನಿವಾಸಿಗಳು ಇದೀಗ ಕಂಗಾಲಾಗಿದ್ದಾರೆ. ವಾರದ ಹಿಂದೆಯೇ ಗ್ರಾಮದ ಮುಕ್ತಿ ಕಾಲೋನಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ಪದೇ ಪದೇ ಹುಲಿ ದಾಳಿಯಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ.

Read More

ಬೆಂಗಳೂರು : ಸಿಡಿ ಫ್ಯಾಕ್ಟರಿ ಇದ್ದಿದ್ದೆ ಹೊಳೆನರಸೀಪುರ ಪದ್ಮನಾಭನಗರದಲ್ಲಿ. ಆ ಫ್ಯಾಕ್ಟರಿಯಲ್ಲಿ ಸಿಡಿ ಯಾರು ಮ್ಯಾನುಫ್ಯಾಕ್ಚರ್ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಅಡಿಕೆ ಸುರೇಶ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು ಎಚ್ ಡಿ ಕುಮಾರಸ್ವಾಮಿ ಅವರೇ ನಿಮ್ಮ ಇಲಾಖೆಯಿಂದ ಏನು ಮಾಡಿದ್ದೀರಿ? ಜೆಡಿಎಸ್ ನವರಿಗೆ ಕೆಲಸ ಇಲ್ಲ. ಇಡೀ ದೇಶದಲ್ಲಿ ಅತ್ಯಂತ ಹೀನಾಯವಾದ ಕೃತ್ಯ ಎಂದರೆ ಅದು ಹಾಸನದಲ್ಲಿ ನಡೆದ ದುರ್ಘಟನೆ.ಅದರ ಬಗ್ಗೆ ಒಂದು ವಿಷಾದ ವ್ಯಕ್ತ ಪಡಿಸಲಿಕ್ಕೆ ಆಗದೆ ಇರುವಂತಹ ಜೆಡಿಎಸ್ ಮುಖಂಡರುಗಳು ಯಾರ್ಯಾರು ಬಿಟ್ ಮಾಡುತ್ತಿದ್ದಾರೆ ಅವರಿಗೆ ಇದರ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಏನಿದೆ? ಎಚ್ ಡಿ ಕುಮಾರಸ್ವಾಮಿ ಅವರೇ, ಮೊದಲು ಎಚ್ ಎಂ ಟಿ ಅವರಿಗೆ ನ್ಯಾಯ ಕೊಡಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Read More

ಬೆಳಗಾವಿ : ಬೆಳಗಾವಿಯಲ್ಲಿ ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಬೆಳಗಾವಿಯ ಸೆಂಟರ್ ನ ಪ್ರಶ್ನೆ ಪತ್ರಿಕೆ ಇದೀಗ ಲೀಕ್ ಆಗಿದೆ. ಕಿಡಿಗಿಡಿಗಳು ಶಿಕ್ಷಣ ಇಲಾಖೆಗೆ ಚಾಲೆಂಜ್ ಹಾಕಿ ಬೆದರಿಕೆ ಹಾಕಿ ಇಂದು ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ. 2026ರ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ-1 ಇನ್ಸ್ಟಾಗ್ರಾಮ್ ನಲ್ಲಿ ಆಗಿದೆ ಪ್ರತಿ ವರ್ಷವೂ ಡೆಲ್ಟಾ ಇನ್ಸ್ಟಾ ಖಾತೆ ಆಕ್ಟಿವ್ ಆಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಾಗಿ ಶಿಕ್ಷಣ ಇಲಾಖೆಗೆ ಬೆದರಿಕೆ ಹಾಕಿದ್ದಾರೆ. ಇಲಾಖೆಗೆ ಚಾಲೆಂಜ್ ಮಾಡಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ ಈ ಕುರಿತು ದೂರು ನೀಡಿದರು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಗಾಗಿ ಇದೀಗ ಪ್ರಶ್ನೆ ಪತ್ರಿಕೆ ಮತ್ತೆ ಲೀಕ್ ಮಾಡಿದ್ದಾರೆ. ಕಳೆದ ವರ್ಷವೂ ಡೆಲ್ಟಾ ಎಸ್ ಎಸ್ ಎಲ್ ಸಿ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪ್ರಶ್ನೆ…

Read More

ಬೆಂಗಳೂರು : ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು ‘ಟ್ಯಾಕ್ಸಿಕ್’ ಅವರು ಕಾಣಿಸಿಕೊಳ್ಳುತ್ತಿದ್ದು ಅವರ ಈ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾಗಳು ಯಾವ ಚಿತ್ರರಂಗಗಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಪ್ರೂವ್‌ ಮಾಡುವುದಕ್ಕೆ ನಟ ಯಶ್‌ ಈ ಸಿನಿಮಾದ ಮೂಲಕ ನಿರೂಪಿಸಲು ಮುಂದಾಗಿರುವುದು ಕನ್ನಡರಿಗೆ ಹೆಮ್ಮೆ ಕೂಡ. ಇದೀಗ ಟಾಕ್ಸಿಕ್ ಸಿನಿಮಾ ಟೀಸರ್ ಮಾದರಿಯಲ್ಲಿಯೇ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ನಲ್ಲಿ AI ಮೂಲಕ ವಿಡಿಯೋ ಒಂದನ್ನು ಎಡಿಟ್ ಮಾಡಿ ಹರಿ ಬಿಟ್ಟಿದ್ದು, ಭಾರಿ ವೈರಲ್ ಆಗಿದೆ. ಆದರೆ ಇಲ್ಲಿ ಡೈಲಾಗ್ ಗಳು ಬೇರೆ ಇದ್ದು, ರಾಜರಾಜಕಾರಣಕ್ಕೆ ಸಂಬಂಧಪಟ್ಟಂತೆ ಇವೆ. maddur-haiklu ಎಂಬ ಪೇಜ್ ನಲ್ಲಿ ವಿಡಿಯೋದಲ್ಲಿ ನಾವು ಈ ರಾಜ್ಯವನ್ನು ಶಾಂತಿಯುತವಾಗಿ ಲೂಟಿ ಮಾಡಲು ಬಯಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಾರೆಂದು ನಿಮಗೆ ಅನಿಸುತ್ತಾ? ಅಂತ ಕೇಳ್ತಾರೆ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಯುವತಿರಿಗೆ ಎಷ್ಟರ ಮಟ್ಟಿಗೆ ಸೇಫ್ ಎನ್ನುವುದು ಇದೀಗ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ರ್‍ಯಾಪಿಡೊ ಚಾಲಕ ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಗೆ ತೆರಳಲು ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಳು. ಬೈಕ್ ನಲ್ಲಿ ಕುಳಿತು ಮುಂದೆ ಬ್ಯಾಗ್ ಇಟ್ಟಿದ್ದರು. ಈ ವೇಳೆ ಬೈಕ್ ನಲ್ಲಿಯೇ ಆರೋಪಿ ಹಿಂದೆ ಸರಿದಿದ್ದಾನೆ ಆಗ ಯುವತಿ ಯಾಕೆ ಹಿಂದೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿ ಬೈದಿದ್ದಾಳೆ.ಈ ವೇಳೆ ಯುವತಿಯ ಖಾಸಗಿ ಅನಾಂಗ ಮುಟ್ಟಿ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಬಳಿಕ ಯುವತಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಪ್ರಕರಣದ ದಾಖಲಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ವಿವೇಕ್ ಎಂದು ತಿಳಿದುಬಂದಿದ್ದು, ವಿವೇಕ್ ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಅಸಭ್ಯ ವರ್ತನೆ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ರಸ್ತೆಯ ಬದಿ ನಿಂತಿದ್ದ ಆರು ಜನ ಪವಾಡ ಸದೃಶದಲ್ಲಿ ಪಾರಾಗಿದ್ದಾರೆ. ಇಂದಿರಾನಗರದಲ್ಲಿ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ದಿವೈಡರ್ ಹಾರಿ ಕಾರು ರಸ್ತೆಗೆ ನುಗ್ಗಿದೆ. ಸಿನಿಮಾ ಸ್ಟಂಟ್ ಮಾದರಿಯಲ್ಲಿ ಕಾರು ಹಾರಿದೆ. ಬೈಕ್ ಸವಾರರು ಪಾದ ಜಾರಿಗಳು ಜಸ್ಟ್ ಮಿಸ್ ಆಗಿದ್ದಾರೆ. ಇಂದಿರಾ ನಗರದ 18ನೇ ಮುಖ್ಯರಸ್ತೆಯಲ್ಲಿ ಆಗಿರುವಂತಹ ಘಟನೆ ಇದು. ಈ ವೇಳೆ ಆರು ಜನ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರು ಸಹ ಸಾಕಷ್ಟು ನೋವು ಪ್ರಾಣಹಾನಿ ಆಗುವ ಸಂಭವವಿತ್ತು. ಕಾರು ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ. ರಸ್ತೆ ಬದಿಯ ಡಿವೈಡರಿಗೆ ಕಾರು ಡಿಕ್ಕಿ ಆದ ಶಬ್ದ ಕೇಳಿ ರಸ್ತೆ ಬದಿಯಲ್ಲಿ ನಿಂತವರು ಅಲರ್ಟ್ ಆಗಿದ್ದಾರೆ. ಕೂಡಲೇ ಆರು ಜನ ಪಾದಚಾರಿಗಳು ಯುವಕರು ಹಾಗೂ ಇಬ್ಬರು ಯುವತಿಯರು ಬಚಾವ್ ಆಗಿದ್ದಾರೆ. ಅಲ್ಲದೆ ಇಬ್ಬರು ಬೈಕ್ ಸವಾರರು ಕೂಡ ಗ್ರೇಟ್ ಎಸ್ಕೇಪ್…

Read More

ಅವಿನಾಶ್‌ ಆರ್ ಭೀಮಸಂದ್ರ ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು ‘ಟ್ಯಾಕ್ಸಿಕ್’ ಅವರು ಕಾಣಿಸಿಕೊಳ್ಳುತ್ತಿದ್ದು ಅವರ ಈ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾಗಳು ಯಾವ ಚಿತ್ರರಂಗಗಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಪ್ರೂವ್‌ ಮಾಡುವುದಕ್ಕೆ ನಟ ಯಶ್‌ ಈ ಸಿನಿಮಾದ ಮೂಲಕ ನಿರೂಪಿಸಲು ಮುಂದಾಗಿರುವುದು ಕನ್ನಡರಿಗೆ ಹೆಮ್ಮೆ ಕೂಡ. ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು ‘ಟ್ಯಾಕ್ಸಿಕ್’ ನ ಟೀಸರ್‌ನಲ್ಲಿ ಬರುವ ಕಾರಿನಲ್ಲಿ ನಡೆಯುವ ಆ ದೃಶ್ಯವೊಂದರ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದು, ನಾನಾ ಮಂದಿ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವು ಮಂದಿ ಆ ದೃಶ್ಯ ಸರಿ ಎನ್ನುತ್ತಿದ್ದು, ನಟ ಯಶ್ ಮತ್ತು ನಿರ್ದೇಶಕರ ಸೃಜನ ಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವು ಮಂದಿ ಆ ಕಾರಿನೊಳಗೆ ನಡೆಯುವ ದೃಶ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದು, ಮನೆ ಮಂದಿ ನೋಡುವ ಸಿನಿಮಾ ಇದಾಗಿರುವುದಿಲ್ಲ ಅಂಥ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೇ ಆ ದೃಶ್ಯಕ್ಕೆ ಸಂಬಂಧಪಟ್ಟಂತೆ ಅನೇಕ…

Read More