Subscribe to Updates
Get the latest creative news from FooBar about art, design and business.
Author: kannadanewsnow05
ಮಹಾರಾಷ್ಟ್ರ : ಕಳೆದ ಕೆಲವು ದಿನಗಳ ಹಿಂದೆ ತಾನೆ ಮಹಾರಾಷ್ಟ್ರದಲ್ಲಿ ವಿಮಾನ ತುರ್ತು ಭೂಸ್ಪರ್ಶ ಆಗಿ ಉಪಮುಖ್ಯಮಂತ್ರಿ ಅಜಿತ್ ಕುಮಾರ್ ದಾರುಣವಾಗಿ ಸಾವನ್ನಪ್ಪಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಪಾಲ್ಘರ್ ಎಂಬಲ್ಲಿ ಖಾಸಗಿ ಹೆಲಿಕ್ಯಾಪ್ಟರ್ ತುರ್ತು ಬೋಸ್ಪರ್ಶವಾಗಿದೆ ಹೌದು ಮಹಾರಾಷ್ಟ್ರದ ಪಾಲ್ಗರ್ ಎಂಬಲ್ಲಿ ತಾಂತ್ರಿಕ ದೋಷದಿಂದ ಖಾಸಗಿ ಹೆಲಿಕ್ಯಾಪ್ಟರ್ l ಶಾಲಾ ಮೈದಾನದಲ್ಲಿ ತುರ್ತು ಭೂಸ್ಪರ್ಶವಾಗಿದ್ದು, ಹೆಲಿಕ್ಯಾಪ್ಟರ್ ನಲ್ಲಿದ್ದ ಪ್ರಯಾಣಿಕರು ಎಲ್ಲರು ಸುರಕ್ಷಿತರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ. ಅಲ್ಲದೇ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ವಿಚಾರವಾಗಿ ನಾನು ಮತ್ತೆ ಡಿಕೆ ಶಿವಕುಮಾರ್ ಸಹ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಪಟ್ಟದ ಆಟಕ್ಕೆ ಸಿಎಂ ಸಿದ್ದರಾಮಯ್ಯ ರಾಂಗ್ ಆದರು. ನಾನಾಗಲಿ ಡಿಕೆ ಶಿವಕುಮಾರ್ ಅಗಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಹೇಳುತ್ತೇನೆ. ಹಬ್ಬ ಮುಗಿಯಲಿ ಹಬ್ಬ ಮುಗಿದ ಮೇಲೆ ಹೇಳುತ್ತೇನೆ ಎಂದು ತಿಳಿಸಿದರು. ಪಟ್ಟದ ವಿಚಾರವಾಗಿ ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ. ಬೇರೆ ಏನು ಕೇಳೋಕೆ ಇಲ್ವಾ? ಯಾರೂ ಹೇಳಿದ್ದರೋ ಅವರಿಗೆ ಕೇಳಿ ಡಿಕೆ ಸುರೇಶ್ ಏನ್ ಹೇಳುತ್ತಾರೋ ಅವರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು. ಇನ್ನು ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ವಿಚಾರವಾಗಿ, ಅವರ ಸ್ವಂತ ದುಡ್ಡಲ್ಲಿ ಹೋದರೆ ಬೇಡ ಅನ್ನೋಕಾಗುತ್ತ ಎಂದು ತಿಳಿಸಿದರು.
ಬೆಂಗಳೂರು : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ. ಅಲ್ಲದೇ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ವಿಚಾರವಾಗಿ ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಪಟ್ಟದ ಆಟಕ್ಕೆ ಸಿಎಂ ಸಿದ್ದರಾಮಯ್ಯ ರಾಂಗ್ ಆದರು. ನಾನಾಗಲಿ ಡಿಕೆ ಶಿವಕುಮಾರ್ ಅಗಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಹೇಳುತ್ತೇನೆ. ಹಬ್ಬ ಮುಗಿಯಲಿ ಹಬ್ಬ ಮುಗಿದ ಮೇಲೆ ಹೇಳುತ್ತೇನೆ ಎಂದು ತಿಳಿಸಿದರು. ಪಟ್ಟದ ವಿಚಾರವಾಗಿ ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ. ಬೇರೆ ಏನು ಕೇಳೋಕೆ ಇಲ್ವಾ? ಯಾರೂ ಹೇಳಿದ್ದರೋ ಅವರಿಗೆ ಕೇಳಿ ಡಿಕೆ ಸುರೇಶ್ ಏನ್ ಹೇಳುತ್ತಾರೋ ಅವರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು. ಇನ್ನು ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ವಿಚಾರವಾಗಿ, ಅವರ ಸ್ವಂತ ದುಡ್ಡಲ್ಲಿ ಹೋದರೆ ಬೇಡ ಅನ್ನೋಕಾಗುತ್ತ ಎಂದು ತಿಳಿಸಿದರು.
ಬೆಂಗಳೂರು : ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರಿ ಚರ್ಚೆ ನಡೆಯುತ್ತಿದ್ದು ಅದರ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ನನಗೆ ಈಗಲೂ ಭರವಸೆ ಇದೆ ಸಿಎಂ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ ಎಂದು ಡಿಕೆ ಸುರೇಶ ತಿಳಿಸಿದರು. ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಯಾರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಅವರನ್ನೇ ಕೇಳಬೇಕು ಡಿಕೆ ಶಿವಕುಮಾರ್ ವಿದೇಶಿ ಪ್ರವಾಸ ಆಯೋಜನೆ ಮಾಡಿದ್ದಲ್ಲ ವಿದೇಶ ಪ್ರವಾಸಕ್ಕೂ ಡಿಕೆ ಶಿವಕುಮಾರ್ ಗು ಯಾವುದೇ ಸಂಬಂಧವಿಲ್ಲ ಅದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ ಈ ಬಗ್ಗೆ ವಿದೇಶ ಪ್ರವಾಸದ ಆಯೋಜಕರು ಕೇಳಿ ಎಂದು ಡಿಕೆ ಸುರೇಶ್ ತಿಳಿಸಿದರು.
ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಒಂದು ನಡೆದಿದ್ದು ಬೆಂಗಳೂರಿನಲ್ಲಿ ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ ನೀಡಿರುವ ಹೇಯ ಕೃತ್ಯ ಇದೀಗ ವರದಿಯಾಗಿದೆ. ವಿದ್ಯಾ ಸಂಸ್ಥೆಯ ಮಾಲೀಕನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಹೌದು ಬೆಂಗಳೂರಿನಲ್ಲಿ ವಿದ್ಯಾ ಸಂಸ್ಥೆಯ ಮಾಲೀಕ ತನ್ನ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಚಾರ ಮಗನಿಗೆ ಏನಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ಮುಂದೆಯೇ ಮಾವ ಓದುತ್ತಿದ್ದ. ಥಣಿಸಂದ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಲ್ ಆಗಿರುವ ಮಹಿಳೆ, ಕಿರುಕುಳ ನೀಡುವ ಮಹಿಳೆಯ ಮಾವ ಕಾವಲ್ ಬೈರಸಂದ್ರದ ಶಾಲೆಯ ಫೌಂಡರ್ ಆಗಿದ್ದಾನೆ. ಮನೆಯಲ್ಲಿ ಸೊಸೆ ಒಬ್ಬಳೇ ಇದ್ದಾಗ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ನೀನು ಸುಂದರವಾಗಿದ್ದೀಯ ನನ್ನ ಆಸೆ ಈಡೇರಿಸುವೆ ಎಂದು ಕಿರುಕುಳ ನೀಡಿದ್ದಾನೆ. ಶಾಲೆಯ ಕ್ಯಾಬಿನಲ್ಲಿ ಕೂಡ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.…
ಕೆನಡಾ : ಕೆನಡಾದ ಉತ್ತರ ಬ್ರಿಟಿಷ್ ಕೊಲಂಬಿಯಾದ ಪ್ರೌಢಶಾಲೆಯನ್ನು ಗುರಿಯಾಗಿಸಿಕೊಂಡು ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಶಂಕಿತ ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಡಾದ ಇತಿಹಾಸದಲ್ಲಿ ಈ ರೀತಿಯ ಮಾರಕ ಘಟನೆಗಳಲ್ಲಿ ಒಂದೆಂದು ಪರಿಗಣಿಸಲಾದ “ಊಹಿಸಲಾಗದ ದುರಂತ” ಎಂದು ಪ್ರಧಾನ ಮಂತ್ರಿ ಡೇವಿಡ್ ಎಬಿ ಕರೆದ ಘಟನೆಯಲ್ಲಿ ಎರಡು ಡಜನ್ಗಿಂತಲೂ ಹೆಚ್ಚು ಬಲಿಪಶುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಂಬ್ಲರ್ ರಿಡ್ಜ್ ಮಾಧ್ಯಮಿಕ ಶಾಲೆಯೊಳಗೆ ಆರು ಜನರು ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 2,500 ಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಸಮುದಾಯದಲ್ಲಿ ಇಬ್ಬರು ಮೃತಪಟ್ಟಿರುವುದು ಪತ್ತೆಯಾಗಿದೆ. ಶಂಕಿತ ವ್ಯಕ್ತಿ ಸ್ವಯಂ-ಏಸಗಿಕೊಂಡ ಗಾಯಗಳೊಂದಿಗೆ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಧಾನಿ ಮಾರ್ಕ್ ಕಾರ್ನಿ ಅವರು ಗುಂಡಿನ ದಾಳಿಯಿಂದ ದುಃಖಿತರಾಗಿದ್ದು, “ಇಂದು ತಮ್ಮ ಜೀವನವನ್ನು ಬದಲಾಯಿಸಲಾಗದಂತೆ ಬದಲಾಯಿಸಿದವರ ದುಃಖದಲ್ಲಿ ನಾನು ಕೆನಡಿಯನ್ನರೊಂದಿಗೆ ಸೇರುತ್ತೇನೆ ಮತ್ತು ತಮ್ಮ ಸಹವರ್ತಿ ನಾಗರಿಕರನ್ನು ರಕ್ಷಿಸಲು ತಮ್ಮ…
ಹಾಸನ : ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ರೈತನ ಮೇಲೆ ಹಲ್ಲೆ ನಡೆಸಲಾಗಿದೆ ಅನುದಾನ ದುರ್ಬಳಕೆ ಆರೋಪ ಮಾಡಿದ್ದ ರೈತ ರವಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ವಿರುದ್ಧ ಆರೋಪ ಮಾಡಿದ್ದರು. ರೈತನ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅರಕಲಗೂಡಿನ ಕಾಳೆನಹಳ್ಳಿ ಗ್ರಾಮದಲ್ಲಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ದುಡ್ಡಿಲ್ಲದೆ ಹಸು ಮಾರಿ ಆರ್ಟಿಐಗೆ ಅರ್ಜಿ ಹಾಕಿರುತ್ತಾರೆ ಅರ್ಜಿ ಹಾಕಿ 32,340 ಪಾವತಿಸಿರುತ್ತಾರೆ. ಹಸು ಮಾರಾಟ ಮಾಡಿ ಜೆರಾಕ್ಸ್ ಗೆ ಹಣ ಕಟ್ಟಿರುತ್ತಾರೆ. ಹೀಗಾಗಿ ರೈತನ ನಡೆಯಿಂದ ಸಿಟ್ಟಿಗೆದ್ದು ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ರೈತ ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ ರೈತ ರವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೈತರ ರವಿ ದುಡ್ಡಿಲ್ಲದೆ ಹಸು ಮಾರಿ ಆರ್ಟಿಐಗೆ ಅರ್ಜಿ ಹಾಕಿರುತ್ತಾರೆ ಅರ್ಜಿ ಹಾಕಿ 32,340 ರೂಪಾಯಿ ಪಾವತಿಸುತ್ತಾರೆ. ಅಲ್ಲದೇ 16, 370 ಪುಟದ ದಾಖಲೆಗಳನ್ನು ಕೊಟ್ಟಿದ್ದಕ್ಕೆ ಇದೀಗ ಗ್ರಾಮ ಪಂಚಾಯಿತಿ…
ಮಂಗಳೂರು : ಮಂಗಳೂರಿನಲ್ಲಿ ಮ್ಯಾಟ್ರಿಮೋನಿ ಮನ್ಮಥನ ಲೀಲೆ ಇದೀಗ ಬಯಲಾಗಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಮದುವೆಯಾಗಿದ್ದಾನೆ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ ಕಿಲಾಡಿ, ಮದುವೆಯಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದಾನೆ ಸುಶಾಂತ್ ಪೂಜಾರಿ ಎಂಬ ಆರೋಪಿಯಣ್ಣ ಇದೀಗ ಅರೆಸ್ಟ್ ಮಾಡಲಾಗಿದೆ. ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಆನ್ಲೈನ್ ಮದುವೆ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 2025 ಫೆ. 2 ರಂದು ಮದುವೆಯಾಗಿದ್ದರು. ಈ ಮಹಿಳೆಯನ್ನು ನಂಬಿಸಿ ಸುಶಾಂತ್ ಪೂಜಾರಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡಿದ್ದನು. ಮೋಸ ಮಾಡುವ ಉದ್ದೇಶದಿಂದ 2025ರ ನವೆಂಬರ್ 15 ರಿಂದ ನಾಪತ್ತೆಯಾಗಿದ್ದನು. ನಂತರದ ದಿನಗಳಲ್ಲಿ ಈ ಬಗ್ಗೆ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಹಲವು ಕಡೆಗಳಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದಿದೆ. ಹೀಗಾಗಿ ನೊಂದ ಮಹಿಳೆಯು ಕಾವೂರು ಪೊಲೀಸ್…
ನವದೆಹಲಿ : ನಾಳೆ ವಿವಿಧ ಕಾರ್ಮಿಕ ಸಂಘಟನೆಗಳಿಂದ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಕಂಡಿಹಿಸಿ ಭಾರತ ಬಂದಿಗೆ ಕರೆ ನೀಡಲಾಗಿದೆ. ಸಿಐಟಿಯು, ಎಐಟಿಯುಸಿ, ಐಎನ್ ಟಿಯುಸಿ, ಹೆಚ್ಎಂಎಸ್, ಎಐಸಿಸಿಟಿಯು, ಎಲ್ಪಿಎಫ್, ಯುಟಿಯುಸಿ ಇಂದ ಬಂದ್ ಗೆ ಕರೆ ನೀಡಲಾಗಿದೆ. ಹೊಸದಾಗಿ ಪರಿಚಯಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದರಿಂದ ಕಾರ್ಮಿಕರ ಹಕ್ಕು ಮತ್ತು ಉದ್ಯೋಗ ಭದ್ರತೆ ಕಡಿಮೆ ಮಾಡಲಿವೆ ಕಾರ್ಮಿಕ ಸಂಸ್ಥೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ೩೦ ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಬಹುದು ಎಂದು ಸಂಘಟಕರು ಹೇಳಿದ್ದಾರೆ. ಹತ್ತು ಕೇಂದ್ರ ಕಾರ್ಮಿಕ ಸಂಘಗಳನ್ನು ಪ್ರತಿನಿಧಿಸುವ ಜಂಟಿ ವೇದಿಕೆಯು ಮುಷ್ಕರವು ಯೋಜಿಸಿದಂತೆ ಮುಂದುವರಿಯುತ್ತದೆ ಎಂದು ದೃಢಪಡಿಸಿದೆ. ರೈತ ಸಂಘಟನೆಗಳ ಬೆಂಬಲವು ಪ್ರತಿಭಟನೆಯ ಪ್ರಮಾಣವನ್ನು ಬಲಪಡಿಸುವ ನಿರೀಕ್ಷೆಯಿದೆ. ಅಗತ್ಯ ಸೇವೆಗಳು ಅಡಚಣೆಗಳನ್ನು ಎದುರಿಸುವ ಸಾಧ್ಯತೆಯಿರುವುದರಿಂದ, ಅಧಿಕಾರಿಗಳು ಸಾರ್ವಜನಿಕ ಸೇವೆಗಳು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಂಭವನೀಯ ಅಡಚಣೆಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಇದರ ಬೆನ್ನಲ್ಲೇ ಭೈರತಿ ಬಸವರಾಜ್ ತಲೆಮರೆಸಿಕೊಂಡಿದ್ದು ಸಿಐಡಿ ಪೋಲೀಸರು ಅವರ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಶಾಸಕ ಭೈರತಿ ಬಸವರಾಜ್ ತಲೆಮರೆಸಿಕೊಂಡಿದ್ದು, ಅವರಾಗಿಯೇ ಬಂದು ಸರೆಂಡರ್ ಆದರೆ ಒಳ್ಳೆಯದು ಇಲ್ಲದಿದ್ದರೆ ಪೊಲೀಸರು ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಹುಡುಕುತ್ತಾರೆ ಎಂದು ಎಚ್ಚರಿಕೆ ನೀಡಿದರು.













