Author: kannadanewsnow05

ಬೆಂಗಳೂರು: ದಿನದಿಂದ ದಿನಕ್ಕೆ ಸೈಬರ್‌ ವಂಚಕರ ಹಾವಳಿ ಹಚ್ಚುತ್ತಿದ್ದರು ಕೂಡ ಜನತೆ ಬುದ್ದಿ ಕಲಿಯುತ್ತಿಲ್ಲ, ಅದರಲ್ಲೂ ಪೊಲೀಸ್‌ ಇಲಾಖೆ ಈ ಬಗ್ಗೆ ಎಚ್ಚರಿಂದ ಇರುವಂತೆ ಹೇಳುತ್ತಿದ್ದರು ಕೂಡ ಜನತೆ ಮೋಸ ಹೋಗುವುದು ಹೆಚ್ಚುತ್ತಿದೆ. ಈ ನಡುವೆ ಇನ್‌ಸ್ಟಾದಲ್ಲಿ ಸಾಲ ನೀಡುವ ಆಪ್‌ ನೋಡಿ ಸಾಲದ ಸಲುವಾಗಿ ಹಣವನ್ನು ಸೈಬರ್‌ ವಂಚಕನಿಗೆ ಸಿಲುಕಿಕೊಂಡು ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು ಸಾಲವನ್ನು ಪಡೆದುಕೊಳ್ಳುವ ಸಲುವಾಗಿ ಬರೋಬ್ಬರಿ 39750ರೂಗಳನ್ನು ಕಳೆದುಕೊಂಡು ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಆಗಿರುವುದು ಏನು? ಇನ್‌ಸ್ಟಾದಲ್ಲಿ ಇಂಡಿಯಾ ಬುಲ್ಸ್‌ ಎನ್ನುವ ಜಾಹೀರಾತನ್ನು ನೋಡಿದ ಯುವತಿ 98393 52034 ನಂಬರ್‌ಗೆ ಕರೆ ಮಾಡಿದ್ದಾಳೆ. ಅತ್ತ ಕಡೆಯಿಂದ ಸೈಬರ್ ವಂಚಕ ನಿಮಗೆ 10 ಲಕ್ಷ ಸಾಲವನ್ನು ನೀಡುವುದಾಗಿ ಅಂತ ಹೇಳಿ, ಸಾಲ ನೀಡಬೇಕಾದ್ರೆ ಪ್ರೋಸೆಸಿಂಗ್ ಫೀಸ್ ಅಂತ ಹಣ ನೀಡಬೇಕು ಅಂತ 17500 ಹಾಕಿಸಿಕೊಂಡಿದ್ದಾನೆ, ನಂತರ ವಿಮೆ ಎನ್ನುವ ಸಲುವಾಗಿ 16750 ಹಾಕಿಸಿಕೊಂಡಿದ್ದಾನೆ, ನಂತರ…

Read More

ಬೀದರ್ : ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ, ಅದರ ಅರ್ಥ ಬೈಗುಳ ಇದೆ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಅಂತಾ ಸೃಷ್ಟಿಸಿದ್ದಾರೆ. RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಹೇಳಿಕೆ ನೀಡಿದರು. ಸಲೀಂ ಅಹ್ಮದ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಬಿ.ಜಿ ಕೋಲ್ಸೆ ಪಾಟೀಲ್, ಹಿಂದೂ ಅನ್ನೋದು ಬ್ರಾಹ್ಮಣರ ಧರ್ಮವಾಗಿದೆ. ಪರಕೀಯರು ನೀಡಿದ ಬೈಗುಳವೇ ಹಿಂದೂ. ಈ ಪದದ ಅರ್ಥವನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿಲ್ಲ. ಬ್ರಾಹ್ಮಣರು ತಮ್ಮ ಬುದ್ಧಿವಂತಿಕೆಯಿಂದ ನಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡಲಾಯ್ತು. ಈ ಎಲ್ಲಾ ಸಂತರು, ಮೌಲ್ವಿಗಳು ಇದನ್ನು ತಿಳಿಸುವ ಕೆಲಸ ಮಾಡಬೇಕಿದೆ. ಹಿಂದೂ ಅರ್ಥ ತಿಳಿಸುವ ಕೆಲಸ ಮಾಡಲು ಇನ್ನು ಸಮಯವಿದೆ. ಸಿಖ್ ಸೇರಿದಂತೆ ಎಲ್ಲಾ ದಂಗೆಯ ಮೂಲ ಕಾರಣ ಆರ್‌ಎಸ್‌ಎಸ್‌. ಅವರೊಬ್ಬ ನಾಯಕ ಇಂದಿರಾ ಗಾಂಧಿ ಅವರನ್ನು ದುರ್ಗಾ ಎಂದು ಕರೆದ್ರು. ಆರ್‌ಎಸ್‌ಎಸ್‌ ಅವರೇ…

Read More

ಮೈಸೂರು: ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಮಾಡಿದ್ದ ಪ್ರಕರಣವನ್ನು ಪೊಲೀಸರು ಸಿನಿಮಿಯಾ ಶೈಲಿಯಲ್ಲಿ ಭೇದಿಸಿ ಕಿಡ್ನ್ಯಾಪ್ ಆದ ಕೆಲವೇ ಗಂಟೆಗಳಲ್ಲಿ ಅರೋಪಿಗಳ ಎಡೆಮುರಿಕಟ್ಟಿದ್ದಾರೆ. ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಎಂಬವರನ್ನು, ಟಾಟಾ ಸುಮೋದಲ್ಲಿ ಬಂದ ಐದು ಮಂದಿ ಅಪಹರಣ ಮಾಡಿದ್ದರು. ಬಳಿಕ ಲೋಕೇಶ್ ಮೊಬೈಲ್‌ನಿಂದ ಅವರ ಪತ್ನಿಗೆ ಕರೆ ಮಾಡಿ ಆರೋಪಿಗಳು 30 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಗಾಬರಿಗೊಂಡ ಲೋಕೇಶ್ ಪತ್ನಿ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಮೈಸೂರಿನಿಂದ 50 ಕಿ.ಮೀ. ದೂರದಲ್ಲಿ ಆರೋಪಗಳನ್ನು ಬಂಧಿಸಿ, ಅಪಹರಣವಾದ ಲೋಕೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಹದಿನೈದು ದಿನಗಳಿಂದ ನವೀನ್ ಚಲನವಲನ ಫಾಲೋ ಮಾಡುತ್ತಿದ್ದ ಆರೋಪಿಗಳು ಹೆರಿಟೇಜ್ ಕ್ಲಬ್‌ಗೆ ಹೋಗಿ ವಾಪಸ್ ಬರುವ ವೇಳೆ ಕಿಡ್ನ್ಯಾಪ್ ಮಾಡಿದ್ದರು.

Read More

ದಾವಣಗೆರೆ : ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ಮಾಡಿದೆ. ಬೀದಿ ನಾಯಿ ದಾಳಿಯಿಂದ 3 ವರ್ಷದ ಸಾಹಿತ್ಯ ಎನ್ನುವ ಬಾಲಕಿಗೆ ಗಂಭೀರವಾದ ಗಾಯಗಳಾಗಿದೆ ದಾವಣಗೆರೆ ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಗಾಯಗೊಂಡ ಮಗುವಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ ಸಾಹಿತ್ಯ ಮನೆ ಮುಂದೆ ಆಟವಾಡುತ್ತಿದ್ದಳು.ಆ ವೇಳೆ ಏಕಾಏಕಿ ಬಿದಿ ನಾಯಿ ದಾಳಿ ಮಾಡಿದೆ. ಮಗುವಿನ ಮುಖಕ್ಕೆ ಕಚ್ಚಿ ತೀವ್ರ ಗಾಯಗೊಳಿಸಿದೆ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Read More

ಮಂತ್ರ: ತಾಂತ್ರಿಕ ಲಕ್ಷ್ಮಿ ಮಂತ್ರ: || ಓಂ ಶ್ರಿಂಗ್‌ ಹ್ರಿಂಗ್‌ ಕ್ಲಿಂಗ್‌ ಐಂಗ್‌ ಸಾಂಗ್ ಓಂ ಹ್ರಿಂಗ್‌ ಕಾ ಅ ಇ ಲ ಹ್ರಿಂಗ್‌ ಹ ಸ ಕ ಹ ಲ ಹ್ರಿಂಗ್‌ ಸಕಲ್‌ ಹ್ರಿಂಗ್‌ ಸೌಂಗ್‌ ಐಂಗ್‌ ಕ್ಲಿಂಗ್‌ ಹ್ರಿಂಗ್‌ ಶ್ರಿಂಗ್‌ ಓಂ || ಈ ಮಂತ್ರವು ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುವ ಶಕ್ತಿಶಾಲಿ ತಾಂತ್ರಿಕ ಮಂತ್ರವಾಗಿದೆ ⁣ ಲಕ್ಷ್ಮಿ ಗಾಯತ್ರಿ ಮಂತ್ರ: || ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ || ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯ ನಾನು ನಿಮಗೆ ಶಿರಸಾ ಬಾಗಿ ನಮಸ್ಕರಿಸುತ್ತೇನೆ. ಬುದ್ದಿವಂತಿಕೆ , ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವಾದಿಸಿ ಎನ್ನುವುದೇ ಈ ಮಂತ್ರದ ಅರ್ಥವಾಗಿದೆ. ವಿಧಾನ:⁣ ⁣ ಯಂತ್ರ ಸ್ಥಾಪನೆ:⁣ ಒಂದು ಸ್ವಚ್ಛವಾದ ಪಾತ್ರ/ಸ್ಥಳದಲ್ಲಿ __ ಯಂತ್ರವನ್ನು ಪ್ರತಿಷ್ಠಾಪಿಸಿ.⁣ ⁣ ಪೂಜಾ ಸಾಮಗ್ರಿ:⁣ ಕುಂಕುಮ, ಅಕ್ಷತೆ (ಅರಿಶಿನ-ತುಪ್ಪ-ಮಿಶ್ರಿತ), ಹೂವುಗಳಿಂದ ಯಂತ್ರದ ಪೂಜೆ ಮಾಡಿ.⁣…

Read More

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯಥಯ ಉಂಟಾಗಿ ಪ್ರಾಣಿಕರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು ಇದೀಗ ಇಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವಂತಹ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಇಂಡಿಗೋ ಸಂಸ್ಥೆ ಸುಮಾರು 60ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು ಮಾಡಿದೆ. ವಿಮಾನ ರದ್ದು ಬಗ್ಗೆ 5 ಗಂಟೆ ವಂಚಿತವಾಗಿ ಪ್ರಯಾಣಿಕರಿಗೆ ಸಂದೇಶ ನೀಡಿತು ದೆಹಲಿ, ಲಖನೌ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ ಹಾಗು ಅಮೃತಸರಕ್ಕೆ ತರಬೇಕಿದ್ದ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಪ್ರಯಾಣಿಕರಿಗೆ 5 ಗಂಟೆ ಮೊದಲೇ ಸಂದೇಶ ರವಾನಿಸಿದ್ದರಿಂದ ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.

Read More

ಗಂಗಾವತಿ : ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಇನ್ನೆರಡು ವಾರದಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಜೋಡಿಯೊಂದು ಪ್ರಿವೆಡ್ಡಿಂಗ್ ಶೂಟಿಂಗ್‌ಗೆ ಹೋಗಿ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಭಾನುವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪ ನಡೆದಿದೆ. ಕರಿಯಪ್ಪ ಮಡಿವಾಳ್‌ ಹನುಮನಹಟ್ಟಿ (26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತ ಜೋಡಿ. 5 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿ.21ರಂದು ಮದುವೆ ನಿಶ್ಚಯವಾಗಿತ್ತು. ಅದರ ಪ್ರಯುಕ್ತ ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯದ ಕಡೆ ತೆರಳು ಮರಳುತ್ತಿದ್ದರು. ಕವಿತಾರನ್ನು ತಮ್ಮ ಗಂಗಾವತಿಯ ಮನೆಗೆ ಬಿಟ್ಟು ಹೋಗಲು ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕ್ವಾರಿಯ ಲಾರಿಯೊಂದು ಬೈಕ್ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕರಿಯಪ್ಪ ತೀವ್ರವಾಗಿ ಗಾಯಗೊಂಡು ಗಂಗಾವತಿ ಆಸತ್ರೆಯಲ್ಲಿ ಮೃತಪಟ್ಟಿದಾರೆ.

Read More

ವಿಜಯಪುರ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು, ಪತ್ನಿ ಮೂರು ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ನಾಲ್ಕನೇ ಮಗು ಗಂಡಾಗಲಿ ಎಂದು ಮಾಟಗಾತಿಯ ಮಾತು ಕೇಳಿ ಪಾಪಿ ಪತಿಯೊಬ್ಬ ಪತ್ನಿಯ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ. ಪತ್ನಿಯ ಕೂದಲು ಕತ್ತರಿಸಿದ ಗಂಡ, ಅತ್ತೆ, ಮಾವ ವಿಜಯಪುರ ತಾಲೂಕಿನ ಹೊನ್ನುಟಿಗಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕೂದಲು ಕತ್ತರಿಸಿ ಪತಿ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾನೆ. ನಾಲ್ಕನೇ ಮಗು ಗಂಡಾಗಲಿ ಎಂದು ಮಾಟ ಮಂತ್ರ ಮಾಡಲಾಗಿದೆ ಈಗಾಗಲೇ ಪತ್ನಿ ಮೂರು ಹೆಣ್ಣು ಹತ್ತಿದ್ದು ಪತಿ ಅತ್ತೆ ಮಾವನಿಂದ ಈ ಒಂದು ಅಮಾನವೀಯ ಘಟನೆ ನಡೆದಿದೆ. ಗ್ರಾಮದ ಜ್ಯೋತಿ ಪತಿ ದುಂಡೇಶ್ ಎಂಬಾತ ಈ ಒಂದು ಕೃತ್ಯ ಎಸಗಿದ್ದು, 12 ದಿನಗಳಿಂದ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Read More

ಬೆಳಗಾವಿ : ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲಿ ಸಂತೋಷ. ತಾಕತ್ ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ವಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಎದುರಿಸಲು ನಾವು ಸಿದ್ಧರಿದ್ದೇವೆ.ಆದರೆ ಅವರು ಸಿದ್ಧರಿಲ್ಲ ತಾಕತ್ತಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ ಅಂದರೆ ತಾಕತ್ ಇಲ್ಲ ಎಂದು ಅರ್ಥ ಎಂದು ಬೆಳಗಾವಿಯಲ್ಲಿ ಸಚಿವ ಎನ್ ಎಸ್ ಬೋಸರಾಜು ಹೇಳಿಕೆ ನೀಡಿದರು. ಹಿಂದೆ ಬಿಜೆಪಿ ಸರ್ಕಾರ ಕೊಟ್ಟಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಉತ್ತರ ಕರ್ನಾಟಕದಲ್ಲಿ ಇನ್ನೂ ಆಶ್ವಾಸನೆಗಳನ್ನು ಈಡೇರಿಸಿಲ್ಲ ಈ ಭಾಗದ ನೀರಾವರಿ ಯೋಜನೆಗಳು ಶೈಕ್ಷಣಿಕ ಹಾಗೂ ಆರೋಗ್ಯ ವಿಚಾರದಲ್ಲಿ ಬಿಜೆಪಿ ಸಾಧನೆವಾಗಿದೆ ಸರ್ಕಾರ ಇದ್ದರೂ ಕೂಡ ಜಾರಿಗೊಳಿಸಿರಲಿಲ್ಲ. ಆಲಮಟ್ಟಿ ಡ್ಯಾಮ್ ವಿಚಾರವಾಗಿ ಕೇಂದ್ರದಿಂದ ನೋಟಿಫಿಕೇಶನ್ ಆಗಿಲ್ಲ ಈ ಬಗ್ಗೆ ಕೇಂದ್ರವಾಗಲಿ ಬಿಜೆಪಿ ನಾಯಕರು ಆಗಲಿ ಚಕಾರ ಎತ್ತುತ್ತಿಲ್ಲ. ಮಹದಾಯಿ ಯೋಜನೆ ಆಗೋಗಿದೆ ಅಂತ ಬಿಜೆಪಿಗರು ಸಿಹಿ ಹಂಚಿದರು. ಅದರ ರಿಸಲ್ಟ್ ಈಗ ಏನಾಗಿದೆ? ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಹಣ…

Read More

ಬೆಂಗಳೂರು : ಬೆಳಗಾವಿ : ಬೆಳಗಾವಿಯಲ್ಲಿ ಕರ್ನಾಟಕದ ಚಳಿಗಾಲದ ಅಧಿವೇಶನ ಇಂದು ಆರಂಭವಾಗುತ್ತಿದೆ. ರೈತರ ಸಮಸ್ಯೆಗಳು, ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯದ ಆರೋಪಗಳೊಂದಿಗೆ ವಿಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಸಜ್ಜಾಗಿವೆ. ಬಿಜೆಪಿ 20,000 ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಲಾಗಿದೆ. ನಾಳೆ ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿ ಮಾಡಲಾಗಿದೆ. ವಿಪಕ್ಷ ನಾಯಕ ಆರ್ ಅಶೋಕ್ ನೇತ್ರತ್ವದಲ್ಲಿ ಈ ಒಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಈ ಒಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮೊದಲ ದಿನವಾದ ಇವತ್ತು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆ ನಡೆಯಲಿದೆ. ಆದರೆ, ಮೊದಲ ದಿನವೇ ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ನಿಲುವಳಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಅಧಿವೇಶನದಲ್ಲಿ ಭಾರೀ ಹಂಗಾಮ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅನ್ನದಾತರ ಸಮಸ್ಯೆಗಳನ್ನು…

Read More