Author: kannadanewsnow05

ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಒಬ್ಬಳು ತನ್ನ 3 ವರ್ಷದ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚನ್ನಮ್ಮದೇವಿ ದೇವಸ್ಥಾನದ ಬಳಿ ಈ ಒಂದು ಘಟನೆ ಸಂಭವಿಸಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಪುತ್ರ ಅಬ್ದುಲ್ (3) ಜೊತೆಗೆ ತಾಯಿ ಫಾತಿಮಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಿ ಕಟ್ಟಿಯ ಫಾತಿಮಾ ವಾಲಿಕರ್ ಮತ್ತು ಅಬ್ದುಲ್ ರಹಮಾನ್ ಮೃತರು ಎಂದು ತಿಳಿದುಬಂದಿದ್ದು, ಪತಿ ಮಸ್ತಾನ್ ಸಾಬ್ ಕಿರುಕುಳದಿಂದ ಬೆಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. 8 ವರ್ಷದ ಹಿಂದೆ ಆತ ಮೊದಲನೇ ಮದುವೆಯಾಗಿದ್ದು, ನಂತರ ಫಾತೀಮಾಳನ್ನು ಮಸ್ತಾನ್ ಸಾಬ್ ಪ್ರೀತಿಸಿ ಮದುವೆಯಾಗಿದ್ದಾನೆ. ಐದು ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಮದುವೆಯಾಗಿದ್ದ. ಗ್ರಾಮಸ್ಥರ ಸಮ್ಮುಖದಲ್ಲಿ ಮಸ್ತಾನ್ ಫಾತಿಮಾಳನ್ನು ಮದುವೆಯಾಗಿದ್ದಾನೆ ಇತ್ತೀಚಿಗೆ ಫಾತಿಮಾಳಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದ, ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು…

Read More

ಬೆಂಗಳೂರು : ಬೆಂಗಳೂರಿನಲ್ಲಿ ತಿಗಣಿ ಔಷಧಿ ವಾಸನೆಗೆ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಿರುಪತಿ ಮೂಲದ ಪವನ್ ಎಂದು ತಿಳಿದುಬಂದಿದೆ. HAL ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಆಗಿರುವಂತಹ ಘಟನೆಗಾಗಿದ್ದು, ಪವನ್ ವಾಸವಿದ್ದ ಪಿಜಿ ಅಲ್ಲಿ ತಿಗಣಿ ಔಷಧಿಯನ್ನು ಸಿಂಪಡಣೆ ಮಾಡಿದ್ದಾರೆ.ಈ ವಿಚಾರ ಗೊತ್ತಿಲ್ಲದೇ ಆದ ತನ್ನ ರೂಮ್ಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಬಿಟೆಕ್ ವಿದ್ಯಾರ್ಥಿಯಾಗಿದ್ದ ಪವನ್ ಈತ ವಾಸವಾಗಿದ್ದ ಕೊಠಡಿ ಯಲ್ಲಿ ತಿಗಣೆ ಔಷಧಿ ಸಿಂಪಡನೆ ಮಾಡಲಾಗಿರುತ್ತದೆ. ಈ ಮಾಹಿತಿ ಪವನ್ ಗೆ ಗೊತ್ತಿರಲಿಲ್ಲ. ನಿನ್ನೆ ರಾತ್ರಿ ಈತ ಹೋಗಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದ ತಕ್ಷಣ ನೋಡಿದಾಗ ಈತ ಶವವಾಗಿ ಪತ್ತೆ ಆಗಿದ್ದಾನೆ. ಹಾಗಾಗಿ ತಿಗಣೆ ಔಷಧದ ವಾಸನೆಗೆ ಪವನ್ ಸಾವ್ಕಾನ್ನಪ್ಪಿರಬಹುದು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ HAL ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿತದಿಂದ ಗಾಯಗೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದೀಗ 150ಕ್ಕೆ ಪಟಾಕಿ ಸಿಡಿತದಿಂದ ಗಾಯಗೊಂಡಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇದುವರೆಗೂ ಎಂಟು ಜನರು ಶಾಶ್ವತವಾಗಿ ತಮ್ಮ ಕಣ್ಣು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಪಟಾಕಿ ಸಿಡಿತ ಪ್ರಕರಣ ಮತ್ತೆ ಏರಿಕೆಯಾಗಿದ್ದು ಪಟಾಕಿ ಹಿಡಿದು 150ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಶಾಶ್ವತವಾಗಿ 8 ಜನರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಜನ ನಿಂತು ನೋಡುವಾಗ ಪಟಾಕಿ ಸಿಡಿದು ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ. ಶೇಕಡ 60 ರಷ್ಟು ಜನರಿಗೆ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿದೆ. ನಾರಾಯಣ ನೇತ್ರಾಲಯಕ್ಕೆ 75 ಜನರನ್ನು ದಾಖಲು ಮಾಡಲಾಗಿದೆ. ಇನ್ನು ಮಿಂಟೋ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚು ಜನರು ದಾಖಲಾಗಿದ್ದಾರೆ.

Read More

ಬೀದರ್ : ರಾಜ್ಯದಲ್ಲಿ RSS ಪಥ ಸಂಚಲನದಲ್ಲಿ ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.ಇದರ ಬೆನ್ನಲ್ಲೀ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಿಡಿಒ ಅಧಿಕಾರಿಯೊಬ್ಬರನ್ನು RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಮತ್ತೋರ್ವ ಸರ್ಕಾರಿ ಅಧಿಕಾರಿ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಅಮಾನತುಗೊಳಿಸಲಾಗಿದೆ. ಹೌದು ಆರ್​​ಎಸ್​​ಎಸ್​ ಪಥಸಂಚಲನದಲ್ಲಿ ಭಾಗಿಯಾದ ಆರೋಪ ಮೇಲೆ ಮೊನ್ನೆ ಅಷ್ಟೇ ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯ್ತಿ ಪಿಡಿಒ ಒಬ್ಬರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಅಮಾನತು ಮಾಡಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳ ನಡುವೆ ಇದೀಗ ಮತ್ತೊಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆ ಸಹಾಯಕರಾದ ಪ್ರಮೋದ್​ ರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಸೆಪ್ಟೆಂಬರ್ ‌ 13 ರಂದು ಬಸವಕಲ್ಯಾಣದಲ್ಲಿ ನಡೆದ RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ…

Read More

ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ನೀಡುವ ವಿಚಾರವಾಗಿ ಇದೀಗ ಸಿಎಂ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ನಾಯಕರು ವಿರುದ್ಧ ಹಾಗೂ ಬಿಜೆಪಿ ಸಂಸದರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯ ದ್ರೋಹ ಮಾಡುತ್ತಿದ್ದಾರೆ ನಮಗೆ ಕೇಂದ್ರ ಸರ್ಕಾರದಿಂದ ಅನುದಾನ ಬರಬೇಕಿತ್ತು, ಆದರೆ ಒಂದು ರೂಪಾಯಿ ಕೂಡ ನೀಡಲಿಲ್ಲ ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ಕೊಡಲಿಲ್ಲ. ನಿರ್ಮಲ ಸೀತಾರಾಮನ್ ಕೂಡ ಒಂದು ರೂಪಾಯಿ ನೀಡಿಲ್ಲ. ಚುನಾವಣೆಯ ವೇಳೆ ಮೋದಿ ಮೋದಿ ಎಂದು ಮತ ಹಾಕ್ತೀರಾ,? ನಿಮ್ಮ ಪಿ.ಸಿ ಮೋಹನ್ ಮಾತನಾಡಿದ್ದಾನ? ಸಂಸತ್ ನಲ್ಲಿ ಎಂದಾದರೂ ಒಂದು ದಿನ ಮಾತನಾಡಿದ್ದಾನ? ಸೂರ್ಯ ಅಂತ ಸಂಸದ ಇದ್ದಾನೆ, ಅವನನ್ನ ಅಮಾವಾಸ್ಯೆ ಅಂತ ಕರೀತೀನಿ. ಶೋಭಾ ಕುಮಾರಸ್ವಾಮಿ ಕೂಡ ಒಂದು ದಿನ ಬಾಯಿ ಬಿಡಲಿಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಬಗ್ಗೆ ಇವರು ಬಾಯಿ ಬಿಡಲಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Read More

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಸಾಕು ನಾಯಿಗಳಿಗೆ ವಿಷ ಹಾಕಿ ಕಿಡಿಗೇಡಿಗಳು ಕೊಂದಿರುವ ಘಟನೆ ನಡೆದಿದೆ. ವಿಷದ ಆಹಾರ ತಿಂದು 8 ಸಾಕು ನಾಯಿಗಳು ಮೃತಪಟ್ಟಿವೆ. ಎನ್ಆರ್ ಪುರ ತಾಲೂಕಿನ ಅಬ್ಬಿಗುಂಡಿಯಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಅಬ್ಬಿಗುಂಡಿ ಗ್ರಾಮದಲ್ಲಿ ಸತ್ಯನಾರಾಯಣ ಎಂಬುವರ ಮನೆಯಲ್ಲಿ ಸಾಕು ನಾಯಿಗಳು ಇದ್ದವು. ಸತ್ತ ಕೋಳಿಗಳನ್ನು 8 ಸಾಕು ನಾಯಿಗಳು ಸೇವಿಸಿ ಇದೀಗ ಸಾವನ್ನಪ್ಪಿವೆ. ಕಿಡಿಗೇಡಿಗಳು ಸತ್ತ ಕೋಳಿಗಳಿಗೆ ಕ್ರಿಮಿನಾಶಕ ಬೆರೆಸಿದ್ದು ಬೆಳಕಿಗೆ ಬಂದಿದೆ. ನಾಯಿಗಳಿಗೆ ವಿಷ ಇಟ್ಟವರೆ ವಿರುದ್ಧ ಸ್ಥಳೀಯರು ಇದೀಗ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಡಿಗೇಡಿಗಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Read More

ಮೈಸೂರು : ಮೈಸೂರಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ನಾಲೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ನಡೆದಿದೆ. ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿ ನಿವಾಸಿಗಳಾದ ಅಯಾನ್ (16), ಆಜಾನ್ (13) ಹಾಗೂ ಲುಕ್ಮಾನ್ (14) ಮೃತ ಬಾಲಕರು. ಅಯಾನ್ ಹಾಗೂ ಆಜಾನ್ ಕೆ ಆರ್ ಪೇಟೆ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ಕಾರಣ ಊರಿಗೆ ಬಂದಿದ್ದರು. ಸೋಮವಾರ ಮಧ್ಯಾಹ್ನ ಸಮಯಕ್ಕೆ ಇಬ್ಬರು ಸ್ನೇಹಿತರ ಜೊತೆ ಸ್ಥಳೀಯ ಲುಕ್ಮಾನ್ ಜೊತೆ ಭಾಸ್ಕರ ದೇವಾಲಯದ ಬಳಿ ಇರುವ ಚಾಮರಾಜ ಎಡೆ ದಂಡೆ ನಾಲೆಗೆ ಈಜಲು ಹೋಗಿದ್ದರು. ನಾಲೆಯಲ್ಲಿ ಈಜುವಾಗ ನೀರಿನ ರವಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು : ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ಬಳಿ ಹೋಗಿ ರಾಜ್ಯಕ್ಕೆ ಪರಿಹಾರ ಕೊಡಿಸುವ ತಾಕತ್ತು ಇಲ್ಲ. NDA ಇಂದ ಗೆದ್ದ ರಾಜ್ಯದ 19 ಸಂಸದರು ಏನು ಇಂಡಿಯಾ ಗೇಟ್ ಕಾಯುತ್ತಿದ್ದಾರಾ? ಕೇಂದ್ರಕ್ಕೆ ಹೋಗಿ ರಾಜ್ಯಕ್ಕೆ ಬರುವ ಪರಿಹಾರವನ್ನು ಕೇಳಿ ಎಂದು ಶಾಸಕ ಪ್ರದೀಪ ಈಶ್ವರ ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರಕ್ಕೆ ರಾಜ್ಯದ ಮೇಲೆ ತುಂಬಾ ಕೋಪ ಇದೆ ಅಂತ ಅನಿಸುತ್ತದೆ. ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ನಾವು ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಕೇಳಿದ್ದೆವು. ಮಹಾರಾಷ್ಟ್ರಕ್ಕೆ 1556 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಆದರೆ ಕರ್ನಾಟಕಕ್ಕೆ ಮಾತ್ರ 384 ಕೋಟಿ ರೂಪಾಯಿ ನೀಡಿದ್ದಾರೆ. ಇದೇ ದೊಡ್ಡ ಸಾಧನೆ ಅನ್ನುವ ರೀತಿಯಲ್ಲಿ ಆರ್ ಅಶೋಕ ಟ್ವೀಟ್ ಮಾಡಿದ್ದಾರೆ. ಪರಿಹಾರದ ಬಗ್ಗೆ ಕೇಳಿದರೆ ಅಶೋಕ್ ನಮ್ಮನ್ನೆ ಕೇಳಲು ಹೇಳುತ್ತಾರೆ. ಎನ್.ಡಿ.ಎ ಇಂದ ಗೆದ್ದ 19 ಸಂಸದರು ಇಂಡಿಯಾ ಗೇಟ್ ಕಾಯುತ್ತಿದ್ದಾರಾ? ಕಾಂಗ್ರೆಸ್ಗೆ ಪರಿಹಾರ ಕೇಳುತ್ತಿಲ್ಲ ರಾಜ್ಯಕ್ಕೆ ಪರಿಹಾರ…

Read More

ಕೋಲಾರ : ಕೋಲಾರದಲ್ಲಿ ಆಟೋ ಚಾಲಕನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರಾಕ್ಷಸರು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಂಗಾರಪೇಟೆಯ ಎಳೆಸಂದ್ರ ಗ್ರಾಮದ ಆಫ್ರಿದ್ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಕೆಂದಟ್ಟಿ ಬಳಿ ಈ ಒಂದು ಕೊಲೆ ನಡೆದಿದೆ. ರಸ್ತೆ ಬದಿ ನಿಂತಿರುವ ಆಟೋದಲ್ಲಿ ರಕ್ತ ಹರಿದಿದೆ. ಮೃತ ಆಫೀದ್ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ ಕಳೆದ ಎರಡು ದಿನಗಳ ಹಿಂದೆ ಆಫ್ರಿದ್ ಪತ್ನಿ ಜಗಳವಾಡಿ ಮನೆ ಸೇರಿದ್ದಾಳೆ. ಪತ್ನಿ ಗರ್ಭಿಣಿಯಾಗಿದ್ದು ಮೂರನೇ ಮಗುವಿನ ನಿರೀಕ್ಷೆಯಲ್ಲಿ ಆಫ್ರಿದ್ ಇದ್ದ. ಬೆಂಗಳೂರಿಗೆ ಹೊರಟಿದ್ದ ಬೆಳಿಗ್ಗೆ ರಸ್ತೆ ಬದಿ ಆಟೋದಲ್ಲಿ ಆಫ್ರಿದ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.

Read More

ಬೆಂಗಳೂರು : ಪಥ ಸಂಚಲನ ಮಾಡೋಕೆ ಆರ್ ಎಸ್ ಎಸ್ ಗೆ ಅಷ್ಟು ಅರ್ಜೆಂಟ್ ಏನಿತ್ತು? ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶಿಕ್ಷಣ ಇಲಾಖೆ ಅನುಮತಿ ಕೊಟ್ಟಿರಲಿಲ್ಲ. ಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿಯೇ ಇರುವುದು ಜಗದೀಶ ಶೆಟ್ಟರ್ ಅಚಾನಕ್ಕಾಗಿ ಸಿಎಂ ಆಗಿದ್ದಕ್ಕೆ ಮರೆತು ಹೋದರು ಅಂತ ಅನಿಸುತ್ತದೆ ಎಂದು ಕಾಂಗ್ರೆಸ್ ಶಾಸಕ  ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು. ನಮ್ಮ ಪಕ್ಷದಿಂದಲೂ ಎಂಎಲ್ಸಿ ಆಗಿದ್ದರು ಈಗ ಬಿಜೆಪಿಗೆ ಹೋದರು ಆರ್ ಎಸ್ ಎಸ್ ನವರ ಭಾಷಣಕ್ಕೆ ಬಡಮಕ್ಕಳು ಬಲಿಯಾಗುತ್ತಿದ್ದಾರೆ. ಕೇಸ್ ಆದಾಗ ಯಾವೊಬ್ಬ ಬಿಜೆಪಿ ನಾಯಕರು ಜಾಮೀನು ಕೊಡಿಸಲ್ಲ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಕರೆದು ತಿಂಡಿ ಕೊಡಿಸಲ್ಲ. ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು. RSS ಬಗ್ಗೆ ಜೆಡಿಎಸ್ ನಿಲುವು ಏನು ಅಂತ ತಿಳಿಸಬೇಕು. ಎಚ್ ಡಿ ಕುಮಾರಸ್ವಾಮಿಗೆ ಆರ್ಎಸ್ಎಸ್ ಬಗ್ಗೆ ಇರುವ ನೀಲವು ಏನು ಅಂತ ಅವರು ತಿಳಿಸಬೇಕು ಆರ್ಎಸ್ಎಸ್ ಬೈದು ಸಂಪಾದಕೀಯ ಕಾಲಂ ಬರೆದಿದ್ದ ನಿಮ್ಮ…

Read More