Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಹಾಸ್ಟೆಲ್ ಅಡುಗೆ ಮನೆಯಲ್ಲಿ ಬಾಂಬ್ ನಂತೆ ಸಿಡಿದ `ಪ್ರೆಶರ್ ಕುಕ್ಕರ್’, ಮಹಿಳಾ ಸಿಬ್ಬಂದಿಗೆ ಗಂಭೀರ ಗಾಯ | WATCH VIDEO

ರಾಜ್ಯದ ರೈತರೇ ಗಮನಿಸಿ :`ಫಸಲ್ ಬೀಮಾ’ ನೋಂದಣಿಗೆ ಜುಲೈ 31ರವರೆಗೆ ಅವಕಾಶ!

​ವಿಶ್ವಕಪ್ ಫುಟ್‌ಬಾಲ್: ಕಲೆಬ್ ಯಿರೆಂಕಿ ದಾಖಲಿಸಿದ ಕೊನೆ ಕ್ಷಣದ ಗೋಲು; ಪನಾಮಾ ವಿರುದ್ಧ ಘಾನಾಗೆ ರೋಮಾಂಚಕ ಜಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರೇ ಗಮನಿಸಿ :`ಫಸಲ್ ಬೀಮಾ’ ನೋಂದಣಿಗೆ ಜುಲೈ 31ರವರೆಗೆ ಅವಕಾಶ!
KARNATAKA

ರಾಜ್ಯದ ರೈತರೇ ಗಮನಿಸಿ :`ಫಸಲ್ ಬೀಮಾ’ ನೋಂದಣಿಗೆ ಜುಲೈ 31ರವರೆಗೆ ಅವಕಾಶ!

By kannadanewsnow57

2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ ರೈತರು ತಮ್ಮ ಬೆಳೆಗಳ ವಿಮಾ ರಕ್ಷಣೆಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಸರ್ಕಾರದ ಅಧಿಸೂಚನೆಯಂತೆ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಯ ರೈತರು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಪಡೆಯಲು ನಿಗದಿತ ಕೊನೆಯ ದಿನಾಂಕದೊಳಗೆ ನೋಂದಾಯಿಸಿಕೊಳ್ಳಬೇಕಾಗಿದ್ದು, ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರಿಗೆ ಯೋಜನೆಯ ಮಾಹಿತಿ ತಲುಪಿಸುವ ಉದ್ದೇಶದಿಂದ, ಕೊಪ್ಪಳ ಜಿಲ್ಲೆಗೆ ಸಂಬAಧಿಸಿದAತೆ ಬೆಳೆವಾರು ನೋಂದಣಿ ಕೊನೆಯ ದಿನಾಂಕ, ರೈತರು ತುಂಬುವ ವಂತಿಕೆ, ಪ್ರತಿ ಹೆಕ್ಟರ್ಗೆ ವಿಮಾ ಮೊತ್ತ ಹಾಗೂ ಯೋಜನೆಯ ಇತರ ಮುಖ್ಯ ಮಾಹಿತಿಯೊಂದಿಗೆ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.

ನೀರಾವರಿ ಭತ್ತಕ್ಕೆ 1,08,600 (ರೂ./ಹೆಕ್ಟರ್) ವಿಮಾ ಮೊತ್ತ ಆಗಿದ್ದು, ರೈತರು ಶೇ. 2ರ ವಂತಿಕೆಯೊಂದಿಗೆ ಜುಲೈ 31 ನೋಂದಣಿ ಮಾಡಿಕೊಳ್ಳಬೇಕು. ಅದೇ ರೀತಿ ಮಳೆ ಆಶ್ರಿತ ಭತ್ತಕ್ಕೆ 75,600 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಮುಸುಕಿನಜೋಳಕ್ಕೆ 76,200 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಮುಸುಕಿನಜೋಳಕ್ಕೆ 67,500 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವತಿ ಜೋಳಕ್ಕೆ 52,600 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಜೋಳಕ್ಕೆ 44,400 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಸಜ್ಜೆಗೆ 43,300 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಸಜ್ಜೆಗೆ 34,800 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ನವಣೆಗೆ 32,200 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ತೊಗರಿಗೆ 60,300 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ತೊಗರಿಗೆ 57,600 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಹುರುಳಿಗೆ 23,500 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಅಲಸಂದೆಗೆ 35,000 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಎಳ್ಳು ಬೆಳೆಗೆ 31,900 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ನೆಲಗಡಲೆ (ಶೇಂಗಾ)ಗೆ 77,800 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ನೆಲಗಡಲೆ (ಶೇಂಗಾ)ಗೆ 65,400 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಸೂರ್ಯಕಾಂತಿಗೆ 57,900 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಸೂರ್ಯಕಾಂತಿಗೆ 48,200 (ರೂ./ಹೆಕ್ಟರ್) ವಿಮಾ ಮೊತ್ತ ಆಗಿದ್ದು, ರೈತರು ಆಯಾ ಬೆಳೆಗಳ ವಿಮಾ ಮೊತ್ತಕ್ಕೆ ಶೇ. 2ರ ವಂತಿಕೆಯೊಂದಿಗೆ ಜುಲೈ 31 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು.

ಮಳೆ ಆಶ್ರಿತ ಹೆಸರು ಬೆಳೆಗೆ ಸಂಬಂಧಿಸಿದಂತೆ 39,700 (ರೂ./ಹೆಕ್ಟರ್) ವಿಮಾ ಮೊತ್ತಕ್ಕೆ ಶೇ. 2ರ ವಂತಿಕೆಯೊಂದಿಗೆ ಮತ್ತು ನೀರಾವರಿ ಹತ್ತಿಯ 86,400 (ರೂ./ಹೆಕ್ಟರ್) ವಿಮಾ ಮೊತ್ತಕ್ಕೆ ಶೇ. 5ರ ವಂತಿಕೆಯೊಂದಿಗೆ ಜುಲೈ 15 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಮಳೆ ಆಶ್ರಿತ ಹತ್ತಿಗೆ 59,700 (ರೂ./ಹೆಕ್ಟರ್) ವಿಮಾ ಮೊತ್ತ, ಟೊಮ್ಯಾಟೊಗೆ 1,69,800 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಈರುಳ್ಳಿಗೆ 93,900 (ರೂ./ಹೆಕ್ಟರ್) ವಿಮಾ ಮೊತ್ತ ಹಾಗೂ ಮಳೆ ಆಶ್ರಿತ ಈರುಳ್ಳಿಗೆ 85,600 (ರೂ./ಹೆಕ್ಟರ್) ವಿಮಾ ಮೊತ್ತ ಆಗಿದ್ದು, ಈ ಎಲ್ಲಾ ಬೆಳೆಗಳ ಮೊತ್ತಕ್ಕೆ ರೈತರು ಶೇ. 5ರ ವಂತಿಕೆಯೊಂದಿಗೆ ಜುಲೈ 31 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು.

ಯೋಜನೆಯ ಇತರ ಮುಖ್ಯ ಮಾಹಿತಿ

ಇಂಡೆಮ್ನಿಟಿ ಮಟ್ಟವು ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಶೇ.80. ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರು ಯೋಜನೆಯಲ್ಲಿ ಭಾಗವಹಿಸಬಹುದು. ರೈತರ ಫ್ರೂಟ್ಸ್ ಐಡಿ (ಎಫ್ಐಡಿ) ಕಡ್ಡಾಯ. ಬೆಳೆ ಸಾಲ ಪಡೆಯದ ರೈತರು ಸಮೀಪದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ), ಗ್ರಾಮ-ಒನ್ ಕೇಂದ್ರ ಮೂಲಕ ನೋಂದಾಯಿಸಿಕೊಳ್ಳಬಹುದು.

ಜಿಲ್ಲೆಯ ಅನುಷ್ಠಾನ ವಿಮಾ ಸಂಸ್ಥೆಯು ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್. ಟೋಲ್ ಫ್ರೀ ಸಂಖ್ಯೆ: 1800-103-5490 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Attention farmers of the state: Registration for 'Fasal Bima' is open until July 31st!
Share. Facebook Twitter LinkedIn WhatsApp Email

Related Posts

ALERT : ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕ್ಕರ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು | WATCH VIDEO

2 Mins Read

ಬೈಕ್ ಸವಾರರೇ ಎಚ್ಚರ: ಮಾಡಿಫೈಡ್ ಸೈಲೆನ್ಸರ್, ಹೈ-ಬೀಮ್ ಲೈಟ್ ಬಳಸಿದರೆ ₹10,000 ದಂಡದ ಜೊತೆಗೆ ಲೈಸೆನ್ಸ್ ರದ್ದು!

2 Mins Read

`LPG’ ಗ್ರಾಹಕರೇ ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಕಟ್ | LPG Gas Subsidy

2 Mins Read
Recent News

SHOCKING : ಹಾಸ್ಟೆಲ್ ಅಡುಗೆ ಮನೆಯಲ್ಲಿ ಬಾಂಬ್ ನಂತೆ ಸಿಡಿದ `ಪ್ರೆಶರ್ ಕುಕ್ಕರ್’, ಮಹಿಳಾ ಸಿಬ್ಬಂದಿಗೆ ಗಂಭೀರ ಗಾಯ | WATCH VIDEO

ರಾಜ್ಯದ ರೈತರೇ ಗಮನಿಸಿ :`ಫಸಲ್ ಬೀಮಾ’ ನೋಂದಣಿಗೆ ಜುಲೈ 31ರವರೆಗೆ ಅವಕಾಶ!

​ವಿಶ್ವಕಪ್ ಫುಟ್‌ಬಾಲ್: ಕಲೆಬ್ ಯಿರೆಂಕಿ ದಾಖಲಿಸಿದ ಕೊನೆ ಕ್ಷಣದ ಗೋಲು; ಪನಾಮಾ ವಿರುದ್ಧ ಘಾನಾಗೆ ರೋಮಾಂಚಕ ಜಯ

ALERT : ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕ್ಕರ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು | WATCH VIDEO

State News
KARNATAKA

ರಾಜ್ಯದ ರೈತರೇ ಗಮನಿಸಿ :`ಫಸಲ್ ಬೀಮಾ’ ನೋಂದಣಿಗೆ ಜುಲೈ 31ರವರೆಗೆ ಅವಕಾಶ!

By kannadanewsnow57 KARNATAKA 2 Mins Read

2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ ರೈತರು ತಮ್ಮ…

ALERT : ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕ್ಕರ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು | WATCH VIDEO

ಬೈಕ್ ಸವಾರರೇ ಎಚ್ಚರ: ಮಾಡಿಫೈಡ್ ಸೈಲೆನ್ಸರ್, ಹೈ-ಬೀಮ್ ಲೈಟ್ ಬಳಸಿದರೆ ₹10,000 ದಂಡದ ಜೊತೆಗೆ ಲೈಸೆನ್ಸ್ ರದ್ದು!

`LPG’ ಗ್ರಾಹಕರೇ ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಕಟ್ | LPG Gas Subsidy

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.