Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯ, ರೈತರು ಆತಂಕಪಡುವ ಅಗತ್ಯವಿಲ್ಲ: ಕೃಷಿ ಇಲಾಖೆ ಸ್ಪಷ್ಟನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಎಂಟಿಸಿಯ ನೂತನ ಮಾರ್ಗದ ವೇಗದೂತ ಬಸ್ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ!
KARNATAKA

ಬಿಎಂಟಿಸಿಯ ನೂತನ ಮಾರ್ಗದ ವೇಗದೂತ ಬಸ್ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಗರದ ಹೊರವಲಯದ ಪ್ರಯಾಣಿಕರಿಗೆ ಮತ್ತೊಂದು ಮಹತ್ವದ ಕೊಡುಗೆಯನ್ನು ನೀಡಿದೆ. ಸಾರ್ವಜನಿಕರು, ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ವೇಗವಾದ ಮತ್ತು ಸುಲಭ ಪ್ರಯಾಣದ ಹಿತದೃಷ್ಟಿಯಿಂದ ಎರಡು ನೂತನ ವೇಗದೂತ ಸೀಮಿತ ನಿಲುಗಡೆ (Express) ಸಾರಿಗೆ ಸೇವೆಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವರಾದಂತ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದ್ದಾರೆ.

ಐಟಿಐ ಫ್ಯಾಕ್ಟರಿಯಿಂದ ಹೆಚ್.ಕ್ರಾಸ್‌ಗೆ ಹಾಗೂ ಹೊಸಕೋಟೆಯಿಂದ ನೆಲಮಂಗಲಕ್ಕೆ ಈ ನೂತನ ಬಸ್ ಸೇವೆಗಳನ್ನು ಆರಂಭಿಸಲಾಗಿದೆ.

ನೂತನ ವೇಗದೂತ ಸಾರಿಗೆ ಸೇವೆಗಳ ಸಂಪೂರ್ಣ ಮಾಹಿತಿ:

೧. ಐಟಿಐ ಫ್ಯಾಕ್ಟರಿ – ಹೆಚ್.ಕ್ರಾಸ್ ಸೇವೆ:

  • ಪ್ರಾರಂಭದ ದಿನಾಂಕ: ಈ ಹೊಸ ಸೇವೆಯನ್ನು ಮೇ 22, 2026 ರಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.

  • ಸುತ್ತುವಳಿಗಳು: 30 ನಿಮಿಷಗಳ ಕಾಲಾವಧಿಯ ಅಂತರದಲ್ಲಿ ಒಟ್ಟು 7 ಅನುಸೂಚಿಗಳ ಮೂಲಕ ಪ್ರತಿದಿನ 60 ಸುತ್ತುವಳಿಗಳು ಕಾರ್ಯಾಚರಣೆ ನಡೆಸಲಿವೆ.

  • ಪ್ರಯಾಣ ದರ: ಈ ಮಾರ್ಗದ ಪ್ರಯಾಣಿಕರಿಗೆ ರೂ. 60/- ಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.

೨. ಹೊಸಕೋಟೆ – ನೆಲಮಂಗಲ ಸೇವೆ (ಮಾರ್ಗ ಸಂಖ್ಯೆ: EX-STRR-1):

  • ಹೊಸಕೋಟೆಯಿಂದ ನೆಲಮಂಗಲದವರೆಗೆ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಈ ವಿಶೇಷ ವೇಗದೂತ ಸೇವೆಯನ್ನು ಆರಂಭಿಸಲಾಗಿದೆ.

  • ಪ್ರಮುಖ ನಿಲುಗಡೆಗಳು: ನೆಲಮಂಗಲ, ರೈಲ್ವೆ ಗೊಲ್ಲಹಳ್ಳಿ, ಕನಸವಾಡಿ, ಮಧುರ ದೇವಸ್ಥಾನ, ದೊಡ್ಡಬಳ್ಳಾಪುರ, ಡಿ ಕ್ರಾಸ್, ಚಪ್ಪರದಕಲ್ಲು, ವಿಶ್ವನಾಥಪುರ, ದೇವನಹಳ್ಳಿ, ಎಂ.ವಿ.ಜೆ. ಮೆಡಿಕಲ್ ಕಾಲೇಜು ಹಾಗೂ ಹೊಸಕೋಟೆ ಈ ಮಾರ್ಗದ ಪ್ರಮುಖ ನಿಲುಗಡೆಗಳಾಗಿವೆ.

  • ಪ್ರಯಾಣ ದರ: ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಕನಿಷ್ಠ ರೂ. 25 ರಿಂದ ಗರಿಷ್ಠ ರೂ. 110 ರವರೆಗೆ ದರವನ್ನು ನಿಗದಿಪಡಿಸಲಾಗಿದೆ.

ಪ್ರಯೋಜನ ಯಾರಿಗೆ?: ಈ ಹೊಸ ಸೇವೆಗಳಿಂದ ಕೆ.ಆರ್.ಪುರಂ, ಹೊಸಕೋಟೆ, ನಂದಗುಡಿ, ಹಿಂಡಗಾನಹಳ್ಳಿ, ಹೆಚ್.ಕ್ರಾಸ್, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಭಾಗದ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ನಿತ್ಯದ ಪ್ರಯಾಣ ಸುಲಭವಾಗಲಿದೆ.

ವಿಸ್ತರಣೆಗೊಂಡ ಬಿಎಂಟಿಸಿ ವ್ಯಾಪ್ತಿ ಮತ್ತು ಆದಾಯ:

ಸರ್ಕಾರದ ಆದೇಶದನ್ವಯ ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40 ಕಿ.ಮೀ ವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿಗೆ ಒಟ್ಟು 4 ಮಾರ್ಗಗಳಲ್ಲಿ 32 “ವಜ್ರ ವಿಸ್ತಾರ” ಹವಾನಿಯಂತ್ರಿತ (AC) ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಸದ್ಯ ಹೊಸಕೋಟೆ ರಸ್ತೆಯಲ್ಲಿ ಈಗಾಗಲೇ ಒಟ್ಟು 188 ಅನುಸೂಚಿಗಳಿಂದ 1,686 ಸುತ್ತುವಳಿಗಳನ್ನು ಚಲಾಯಿಸಲಾಗುತ್ತಿದ್ದು, ಹೊಸಕೋಟೆಯಿಂದ ಮುಂದಕ್ಕೆ 42 ಅನುಸೂಚಿಗಳಿಂದ 378 ಸುತ್ತುವಳಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸುತ್ತಮುತ್ತಲಿನ 9 ಪ್ರಮುಖ ಪಟ್ಟಣಗಳಿಗೆ ಒಟ್ಟು 11 ಮಾರ್ಗಗಳಲ್ಲಿ 124 ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸುತ್ತಿದ್ದು, ಪ್ರತಿದಿನ ಸರಾಸರಿ 60 ಸಾವಿರ ಪ್ರಯಾಣಿಕರು ಇದರ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಪ್ರತಿದಿನ ಸರಾಸರಿ ರೂ. 18.0 ಲಕ್ಷ ಆದಾಯ ಬರುತ್ತಿದೆ.

ಬಿಎಂಟಿಸಿ ನೌಕರರ ಕಲ್ಯಾಣಕ್ಕೆ ಭರ್ಜರಿ ಕ್ರಮಗಳು:

ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವೆಯ ಜೊತೆಗೆ ತನ್ನ ನೌಕರರ ಹಿತರಕ್ಷಣೆಗೂ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ:

  • ವೇತನ ಬಾಕಿ ಬಿಡುಗಡೆ: ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ 2020ನೇ ಸಾಲಿನ ವೇತನ ಪರಿಷ್ಕರಣೆ ಬಾಕಿಗೆ ಒಟ್ಟು ₹1,271.92 ಕೋಟಿ ಮಂಜೂರಾಗಿದ್ದು, ಅದರಲ್ಲಿ ಬಿಎಂಟಿಸಿಗೆ ₹137.24 ಕೋಟಿ ಬಿಡುಗಡೆಯಾಗಿದೆ. 2021ರ 11 ತಿಂಗಳ ವೇತನ ಬಾಕಿಯನ್ನು ಈಗಾಗಲೇ ಮೇ 16, 2026 ರಂದು ಸೇವೆಯಲ್ಲಿರುವ ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇನ್ನುಳಿದ ನಿವೃತ್ತ, ರಾಜೀನಾಮೆ ನೀಡಿದ ಹಾಗೂ ಮೃತಪಟ್ಟ ಅರ್ಹ ನೌಕರರಿಗೆ ಮೇ 21 ಮತ್ತು 22, 2026 ರಂದು ಪಾವತಿಸಲಾಗುತ್ತಿದೆ.

  • ಉಚಿತ ಆರೋಗ್ಯ ತಪಾಸಣೆ: ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ 40 ವರ್ಷ ಮೇಲ್ಪಟ್ಟ 13,668 ನೌಕರರಿಗೆ ಉಚಿತ ಹೃದಯ ತಪಾಸಣೆ ಮಾಡಿಸಲಾಗಿದೆ. ಹಾಗೆಯೇ, ಜಯನಗರ ಏರ್ ಚೆಸ್ಟ್ ಆಸ್ಪತ್ರೆಯ ಮೂಲಕ 4,186 ಮುಂಚೂಣಿ ಸಿಬ್ಬಂದಿಗೆ ಶ್ವಾಸಕೋಶ ತಪಾಸಣೆ ನಡೆಸಲಾಗಿದೆ.

  • ಸಾರಿಗೆ ಆಶಾಕಿರಣ ಯೋಜನೆ: ಸಿ-ಕ್ಯಾಂಪ್ ಸಹಯೋಗದಲ್ಲಿ ಸಂಸ್ಥೆಯ 50 ಘಟಕಗಳು ಹಾಗೂ 4 ಕಾರ್ಯಾಗಾರಗಳಲ್ಲಿ ನೌಕರರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ, ಉಚಿತ ಕನ್ನಡಕಗಳನ್ನು ವಿತರಿಸಲಾಗುತ್ತಿದೆ.

  • ಹೊಸ ನೇಮಕಾತಿ: ಕಾರ್ಯಕ್ಷಮತೆ ಹೆಚ್ಚಿಸಲು ನೇರ ನೇಮಕಾತಿ ಮೂಲಕ ಹೊಸದಾಗಿ 2,500 ನಿರ್ವಾಹಕ (Conductors) ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

ರಾಷ್ಟ್ರೀಯ ಮಟ್ಟದ ಗೌರವ: ಬಿಎಂಟಿಸಿಯ ಉತ್ತಮ ಕಾರ್ಯಾಚರಣೆಯನ್ನು ಗುರುತಿಸಿ Urban Mobility India ಹಾಗೂ ASRTU ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಇದುವರೆಗೆ ಒಟ್ಟು 156 ಪ್ರಶಸ್ತಿ ಮತ್ತು ಮಾನ್ಯತೆಗಳು ಲಭಿಸಿವೆ.

ಈ ನೂತನ ಸೇವೆಗಳ ಚಾಲನಾ ಕಾರ್ಯಕ್ರಮದ ಸಂದರ್ಭದಲ್ಲಿ ವಿ.ಎಸ್.ಆರಾಧ್ಯ, ಅಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಶರತ್ ಕುಮಾರ್ ಬಚ್ಚೇಗೌಡ, ಶಾಸಕರು, ಹೊಸಕೋಟೆ ವಿಧಾನಸಭಾ ಕ್ಷೇತ್ರ, ಬಿ.ಎನ್.ರವಿಕುಮಾರ್, ಶಾಸಕರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ, ಶಿವಕುಮಾರ್ K B , IAS, ವ್ಯವಸ್ಥಾಪಕ ನಿರ್ದೇಶಕರು , ನಿಕೇತ್ ರಾಜ್.ಎಂ, ಉಪಾಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ,ಮತ್ತು ಇತರೇ ಗಣ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

Share. Facebook Twitter LinkedIn WhatsApp Email

Related Posts

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

1 Min Read

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯ, ರೈತರು ಆತಂಕಪಡುವ ಅಗತ್ಯವಿಲ್ಲ: ಕೃಷಿ ಇಲಾಖೆ ಸ್ಪಷ್ಟನೆ

1 Min Read

BIG NEWS : ಹಿಂದೂ ರಾಷ್ಟ್ರ ಮಾಡಲು ‘SIR’ ಮಾಡ್ತಿದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಹೇಳಿಕೆ

1 Min Read
Recent News

BREAKING : ದೇಶಾದ್ಯಂತ ಡೆಡ್ಲಿ ಎಬೋಲಾ ವೈರಸ್‌ ಆತಂಕ : ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯ, ರೈತರು ಆತಂಕಪಡುವ ಅಗತ್ಯವಿಲ್ಲ: ಕೃಷಿ ಇಲಾಖೆ ಸ್ಪಷ್ಟನೆ

BIG NEWS : ಹಿಂದೂ ರಾಷ್ಟ್ರ ಮಾಡಲು ‘SIR’ ಮಾಡ್ತಿದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಹೇಳಿಕೆ

State News
KARNATAKA

BREAKING : ಗುಬ್ಬಿ JDS ಅಭ್ಯರ್ಥಿ ನಾಗರಾಜ್ ಹನಿಟ್ರ್ಯಾಪ್ ಗೆ ಸಂಚು : ಶಾಸಕ SR ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ!

By ಸುರೇಶ್‌ KARNATAKA 1 Min Read

ತುಮಕೂರು :ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದ್ದು, ಜೆಡಿಎಸ್ ಅಭ್ಯರ್ಥಿ ನಾಗರಾಜ್ ಅವರು ಹಾಲಿ ಶಾಸಕ ಎಸ್.ಆರ್.…

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯ, ರೈತರು ಆತಂಕಪಡುವ ಅಗತ್ಯವಿಲ್ಲ: ಕೃಷಿ ಇಲಾಖೆ ಸ್ಪಷ್ಟನೆ

BIG NEWS : ಹಿಂದೂ ರಾಷ್ಟ್ರ ಮಾಡಲು ‘SIR’ ಮಾಡ್ತಿದಾರೆ : ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಹೇಳಿಕೆ

BREAKING: ಸಾಗರದ ಬೇಸೂರಿನಲ್ಲಿ ಅಣು ಸ್ಥಾಪವರ ವಿರೋಧಿಸಿ ಕೆಡಿಪಿ ಸಭೆಯಲ್ಲೇ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ನಿರ್ಣಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.