Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ : ಸಿಎಂ ಸಿದ್ದರಾಮಯ್ಯ

BIG NEWS : ದೇಶಾದ್ಯಂತ `ಕಾಕ್ರೋಚ್ ಜನತಾ ಪಾರ್ಟಿ’ ಸಂಚಲನ : ಸೋಶಿಯಲ್ ಮೀಡಿಯಾದಲ್ಲಿ `CJP’ ಭಾರೀ ಅಬ್ಬರ | Cockroach Janata Party

BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶಾದ್ಯಂತ `ಕಾಕ್ರೋಚ್ ಜನತಾ ಪಾರ್ಟಿ’ ಸಂಚಲನ : ಸೋಶಿಯಲ್ ಮೀಡಿಯಾದಲ್ಲಿ `CJP’ ಭಾರೀ ಅಬ್ಬರ | Cockroach Janata Party
INDIA

BIG NEWS : ದೇಶಾದ್ಯಂತ `ಕಾಕ್ರೋಚ್ ಜನತಾ ಪಾರ್ಟಿ’ ಸಂಚಲನ : ಸೋಶಿಯಲ್ ಮೀಡಿಯಾದಲ್ಲಿ `CJP’ ಭಾರೀ ಅಬ್ಬರ | Cockroach Janata Party

By kannadanewsnow57

ನವದೆಹಲಿ : ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಸಂಚಲನ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಜೆಪಿ ಭಾರೀ ಅಬ್ಬರವಾಗಿ ಪ್ರಚಾರ ಪಡೆಯುತ್ತಿದೆ.
ಯುವಜನತೆ ಮತ್ತು ಜಿರಳೆಗಳನ್ನು (ಕಾಕ್ರಾಚ್) ಹೋಲಿಸಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (CJI) ಜಸ್ಟಿಸ್ ಸೂರ್ಯಕಾಂತ್ ಅವರು ನೀಡಿದ್ದಾರೆನ್ನಲಾದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯ ಬೆನ್ನಲ್ಲೇ ಇಂಟರ್ನೆಟ್ನಲ್ಲಿ ‘ಕಾಕ್ರಾಚ್ ಜನತಾ ಪಾರ್ಟಿ’ (CJP) ಎಂಬ ಅಭೂತಪೂರ್ವ ವ್ಯಂಗ್ಯಾತ್ಮಕ (Parody) ಸೋಷಿಯಲ್ ಮೀಡಿಯಾ ಅಭಿಯಾನವೊಂದು ಆರಂಭವಾಗಿದ್ದು, ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ಆದರೆ, ಈ ಕುರಿತು ಶನಿವಾರ ಸ್ಪಷ್ಟನೆ ನೀಡಿರುವ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, “ಮಾಧ್ಯಮಗಳ ಒಂದು ವರ್ಗವು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ತಿರುಚಿ ಪ್ರಸ್ತುತಪಡಿಸಿದೆ” ಎಂದು ಹೇಳಿದ್ದಾರೆ.

ಏನಿದು ‘ಕಾಕ್ರಾಚ್ ಜನತಾ ಪಾರ್ಟಿ’ (CJP)?
ನ್ಯಾಯಮೂರ್ತಿಗಳ ಹೇಳಿಕೆಯಿಂದ ಬೇಸತ್ತ ಯುವಕನೊಬ್ಬ ಆರಂಭಿಸಿದ ಈ ಡಿಜಿಟಲ್ ಪ್ರತಿಭಟನೆ ಈಗ ದೊಡ್ಡ ಆಂದೋಲನವಾಗಿ ಮಾರ್ಪಟ್ಟಿದೆ. ಸದ್ಯ ಇಂಟರ್ನೆಟ್ನಲ್ಲಿ ಈ ಪಾರ್ಟಿಯ ಹೆಸರಿನಲ್ಲಿ ಪ್ರತ್ಯೇಕ ವೆಬ್ಸೈಟ್ ಲಾಂಚ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 13 ಮಿಲಿಯನ್ ಗೂ ಹೆಚ್ಚು (13 Million) ಫಾಲೋವರ್ಸ್ ಹೊಂದುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಅಷ್ಟೇ ಅಲ್ಲದೇ, ಕೇವಲ ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೆಬ್ಸೈಟ್ಗೆ ಭೇಟಿ ನೀಡಿ ಈ ‘ಕಾಕ್ರಾಚ್ ಜನತಾ ಪಾರ್ಟಿ’ಯ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ!

ಅಭಿಯಾನದ ಆರಂಭದ ಹಿನ್ನೆಲೆ:
ಈ ವಿಭಿನ್ನ ಆನ್ಲೈನ್ ಅಭಿಯಾನದ ಸಂಸ್ಥಾಪಕ ಮತ್ತು ಸಂಯೋಜಕ ಅಭಿಜೀತ್ ದೀಪ್ಕೆ. ಈ ಕುರಿತು ‘ಬಿಬಿಸಿ ನ್ಯೂಸ್ ಮರಾಠಿ’ ಜೊತೆ ವಿಸ್ತೃತವಾಗಿ ಮಾತನಾಡಿರುವ ಅವರು, ಈ ಆಲೋಚನೆ ತಮಗೆ ಹೇಗೆ ಬಂತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

“ನಾನು ಟ್ವಿಟರ್ (ಈಗಿನ ಎಕ್ಸ್) ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ (CJI) ಹೇಳಿಕೆಯನ್ನು ನೋಡುತ್ತಿದ್ದೆ. ದೇಶದ ವ್ಯವಸ್ಥೆಯನ್ನು ಟೀಕಿಸುವ ಮತ್ತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಯುವಕರನ್ನು ಅವರು ‘ಜಿರಳೆಗಳು’ (ಕಾಕ್ರಾಚ್) ಮತ್ತು ‘ಪರಾವಲಂಬಿಗಳಿಗೆ’ ಹೋಲಿಸಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುವ ಸಂವಿಧಾನದ ರಕ್ಷಕರೇ ಯುವಕರನ್ನು ಹೀಗೆ ನಿಂದಿಸಿದ್ದು ನನಗೆ ತೀವ್ರ ಆಶ್ಚರ್ಯ ಮತ್ತು ಆಕ್ರೋಶ ತರಿಸಿತು” ಎಂದು ಅಭಿಜೀತ್ ಹೇಳಿದ್ದಾರೆ.

ಜಿಎನ್ ಜಿ (Gen Z) ಯುವಕರ ಬೆಂಬಲ:
ಇದಕ್ಕೆ ಪ್ರತಿಕ್ರಿಯೆಯಾಗಿ ಅಭಿಜೀತ್ ಅವರು, “ಎಲ್ಲಾ ಜಿರಳೆಗಳು ಒಟ್ಟಿಗೆ ಸೇರಿದರೆ ಏನಾಗಬಹುದು?” ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ 25 ವರ್ಷದೊಳಗಿನ ‘ಜೆನ್ ಜಿ’ ಯುವಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ನಾವೆಲ್ಲರೂ ಸೇರಿ ಒಂದು ವೇದಿಕೆ ನಿರ್ಮಿಸಬೇಕು ಎಂದು ಯುವಕರು ಒತ್ತಾಯಿಸಿದರು.

“ಅವರು ನಮ್ಮನ್ನು ಜಿರಳೆ ಎಂದು ಕರೆದರೆ, ನಾವು ‘ಕಾಕ್ರಾಚ್ ಜನತಾ ಪಾರ್ಟಿ’ಯನ್ನೇ ಕಟ್ಟೋಣ ಎಂದು ತೀರ್ಮಾನಿಸಿದೆವು. ಸಿಜೆಐ ಅವರು ಯುವಕರನ್ನು ಅವಮಾನಿಸಲು ಯಾವೆಲ್ಲಾ ಪದಗಳನ್ನು ಬಳಸಿದ್ದರೋ (ಸೋಮಾರಿಗಳು, ನಿರುದ್ಯೋಗಿಗಳು, ಸದಾ ಆನ್ಲೈನ್ನಲ್ಲಿ ಇರುವವರು), ಅವುಗಳನ್ನೇ ಈ ಪಾರ್ಟಿಯ ಸದಸ್ಯರಾಗಲು ಇರಬೇಕಾದ ‘ಅರ್ಹತೆಗಳು’ ಎಂದು ನಾವು ಘೋಷಿಸಿದೆವು. ಇದು ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು” ಎಂದು ಅಭಿಜೀತ್ ವಿವರಿಸಿದ್ದಾರೆ.

ಕೇವಲ ತಮಾಷೆಯಲ್ಲ, ಇದು ಯುವಕರ ಆಕ್ರೋಶ!
ಮೊದಲು ಕೇವಲ ತಮಾಷೆಗಾಗಿ ಆರಂಭವಾದ ಈ ಅಭಿಯಾನ, ವ್ಯವಸ್ಥೆಯ ವಿರುದ್ಧ ಯುವಜನತೆಗಿರುವ ತೀವ್ರ ನಿರಾಶೆಯನ್ನು ಹೊರಹಾಕುವ ವೇದಿಕೆಯಾಗಿ ಬದಲಾಗಿದೆ. ಸದ್ಯ ಈ ಪಾರ್ಟಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು (Manifesto) ಸಹ ಸಿದ್ಧಪಡಿಸಲಾಗಿದೆ. ಭಾರತೀಯ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳ ಇತಿಹಾಸದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆನ್ಲೈನ್ ಪ್ರತಿಭಟನೆ ದಾಖಲಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

https://t.co/qnAkl8gajR

Must Watch Guys
Dont let them spread their propaganda

— Himanshu Sharma (@Hsharma2712) May 21, 2026

BIG NEWS: `Cockroach Janata Party' stir across the country: `CJP' huge buzz on social media
Share. Facebook Twitter LinkedIn WhatsApp Email

Related Posts

BREAKING : ಶೃಂಗೇರಿ ಅಂಚೆ ಮರುಮತೆ ಎಣಿಕೆ ಕೇಸ್ : ಜು. 23ರ ವರೆಗೆ ಮಧ್ಯಂತರ ಆದೇಶ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ

1 Min Read

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

2 Mins Read

SHOCKING : ಪೋಷಕರೇ ಎಚ್ಚರ : ಬಿಸಿಲಿನ ತಾಪಕ್ಕೆ ಲಾಕ್ ಆಗಿದ್ದ ಕಾರಿನೊಳಗೆ ಸಿಲುಕಿ ಅಕ್ಕ-ತಂಗಿ ಸಾವು | WATCH VIDEO

2 Mins Read
Recent News

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ : ಸಿಎಂ ಸಿದ್ದರಾಮಯ್ಯ

BIG NEWS : ದೇಶಾದ್ಯಂತ `ಕಾಕ್ರೋಚ್ ಜನತಾ ಪಾರ್ಟಿ’ ಸಂಚಲನ : ಸೋಶಿಯಲ್ ಮೀಡಿಯಾದಲ್ಲಿ `CJP’ ಭಾರೀ ಅಬ್ಬರ | Cockroach Janata Party

BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!

ಚಿಕ್ಕಮಗಳೂರು : ಪಾಗಲ್ ಪ್ರೇಮಿಯಿಂದ ತಾಯಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿ ಠಾಣೆಗೆ ಶರಣು!

State News
KARNATAKA

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ : ಸಿಎಂ ಸಿದ್ದರಾಮಯ್ಯ

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ…

BIG NEWS : ರಾಜ್ಯದ ರೈತರೇ ಕೃಷಿ ಹೊಂಡ, ಕೆರೆ ಹೂಳು ತೆಗೆಯುವ ಮುನ್ನ ಗಮನಿಸಿ: `ಮಣ್ಣು’ ಬಳಕೆಗೆ ಸರ್ಕಾರದ ಹೊಸ ರೂಲ್ಸ್!

ಚಿಕ್ಕಮಗಳೂರು : ಪಾಗಲ್ ಪ್ರೇಮಿಯಿಂದ ತಾಯಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿ ಠಾಣೆಗೆ ಶರಣು!

BREAKING: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ : ಹೀಗೆ ರಿಸಲ್ಟ್ ಚೆಕ್ ಮಾಡಿಕೊಳ್ಳಿ | Karnataka 2nd PUC Exam-2 Results

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.