ಉತ್ತರಪ್ರದೇಶ : ಉತ್ತರ ಪ್ರದೇಶದ ಏಳು ಜಿಲ್ಲೆಗಳಲ್ಲಿ ಚಂಡಮಾರುತದ ಪರಿಣಾಮ ಪ್ರಯಾಗ್ರಾಜ್ನಲ್ಲಿ ಅತಿ ಹೆಚ್ಚು (16) ಸಾವು ಸಂಭವಿಸಿದ್ದು, ನಂತರ ಭದೋಹಿ (15) ಮತ್ತು ಮಿರ್ಜಾಪುರ (10) ಸಾವು ಸಂಭವಿಸಿವೆ.ಬುಧವಾರ ಸಂಜೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಧೂಳು ಮತ್ತು ಬಲವಾದ ಗಾಳಿಯೊಂದಿಗೆ ಬೀಸಿದ ಪ್ರಬಲ ಚಂಡಮಾರುತವು ವ್ಯಾಪಕ ನಾಶನಷ್ಟಕ್ಕೆ ಕಾರಣವಾಗಿದ್ದು, ಕನಿಷ್ಠ 54 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವು ಮರಗಳು ಉರುಳಿ, ಮನೆಗಳಿಗೆ ಹಾನಿಯಾಗಿದೆ, ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ ಮತ್ತು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಸಂವಹನ ಜಾಲಗಳ ಮೇಲೆ ಪರಿಣಾಮ ಬೀರಿದೆ, ಅಧಿಕಾರಿಗಳು ಪರಿಹಾರ ಮತ್ತು ಪುನಃಸ್ಥಾಪನೆ ಕಾರ್ಯಗಳನ್ನು ಮುಂದುವರೆಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ, ಜಿಲ್ಲೆಯ ಹಲವಾರು ಭಾಗಗಳಲ್ಲಿ ಭಾರೀ ಧೂಳಿನ ಬಿರುಗಾಳಿ ಮತ್ತು ಬಲವಾದ ಗಾಳಿ ಬೀಸಿದ ಪರಿಣಾಮ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.ಅಲ್ಲದೇ ಭೀಕರ ಬೀರಿಗಳಿಗೆ ವ್ಯಕ್ತಿಯೊಬ್ಬ ಹಾರಿ ಹೋಗುತ್ತಿರುವ ದೃಶ್ಯ ಇದಿಗ ವೈರಲ್ ಆಗಿದೆ. ಬಲವಾದ ಗಾಳಿಯಿಂದಾಗಿ ಟಿನ್ ಶೆಡ್ಗಳು ಮತ್ತು ಸೌರ ಫಲಕಗಳು ಹಾರಿಹೋಗಿವೆ, ಆದರೆ ಗೋಡೆಗಳು ಬಿದ್ದು ಕಾರುಗಳು ಮತ್ತು ಮೋಟಾರ್ಸೈಕಲ್ಗಳು ಹಲವಾರು ಸ್ಥಳಗಳಲ್ಲಿ ಜಖಂಗೊಂಡಿವೆ.
Bareilly, Uttar Pradesh: A tin shed suddenly blew away in strong winds, lifting the young man into the air. The viral video shows the young man leaping to a considerable height. According to reports, he suffered serious injuries to his arms and legs and is currently being treated… pic.twitter.com/GEFtSA39sc
— Dharm (@dhram00) May 14, 2026








