ಇಸ್ಲಾಮಾಬಾದ್:ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ಕುತಂತ್ರ ಈಗ ಜಾಗತಿಕವಾಗಿ ಮತ್ತೊಮ್ಮೆ ಸಾಬೀತಾಗಿದೆ. ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂದೂರ್’ ದಾಳಿಯಲ್ಲಿ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್ ಸೇರಿದಂತೆ ಹಲವು ಉಗ್ರರು ಹತರಾಗಿದ್ದು, ಅವರಿಗೆ ಪಾಕಿಸ್ತಾನ ಸೇನೆಯು ಅಧಿಕೃತ ‘ಮಿಲಿಟರಿ ಗೌರವ’ಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ ಎಂಬ ಅಂಶವನ್ನು ಅಲ್ಲಿನ ರಾಜಕಾರಣಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷದ ನಾಯಕರೊಬ್ಬರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, “ಆಪರೇಷನ್ ಸಿಂದೂರ್ ನಂತರ ನಾವು ನಮ್ಮ ‘ವೀರರನ್ನು’ (ಭಯೋತ್ಪಾದಕರನ್ನು) ಕಳೆದುಕೊಂಡೆವು ಮತ್ತು ನಮ್ಮ ಸೇನೆಯು ಅವರಿಗೆ ಸಕಲ ಮಿಲಿಟರಿ ಗೌರವಗಳೊಂದಿಗೆ ವಿದಾಯ ಹೇಳಿತು” ಎಂದು ಹೇಳುತ್ತಿರುವುದು ಸೆರೆಯಾಗಿದೆ.
ಕಳೆದ ವರ್ಷ ಭಾರತ ನಡೆಸಿದ ಈ ನಿಖರ ಕ್ಷಿಪಣಿ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಸತ್ತಿದ್ದಾರೆ ಎಂಬ ವರದಿಯನ್ನು ಪಾಕಿಸ್ತಾನ ಈವರೆಗೆ ನಿರಾಕರಿಸುತ್ತಲೇ ಬಂದಿತ್ತು. ಆದರೆ ಈಗ ಸ್ವತಃ ಅಲ್ಲಿನ ರಾಜಕಾರಣಿಯೇ ಈ ವಿಷಯವನ್ನು ಒಪ್ಪಿಕೊಂಡಿರುವುದು ಭಾರತದ ‘ಸರ್ಜಿಕಲ್’ ಯಶಸ್ಸಿಗೆ ದೊಡ್ಡ ಸಾಕ್ಷಿಯಾಗಿದೆ.
ಹತರಾದ ಉಗ್ರರಿಗೆ ಮಿಲಿಟರಿ ಅಂತ್ಯಕ್ರಿಯೆ ನೀಡಿರುವುದು ಪಾಕಿಸ್ತಾನ ಸೇನೆ ಮತ್ತು ಜಾಗತಿಕ ಭಯೋತ್ಪಾದಕರ ನಡುವಿನ ಅಕ್ರಮ ಸಂಬಂಧವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಇದು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಜುಗರ ಉಂಟುಮಾಡಿದೆ.
Pakistani politician Shahveer Sialvi says that the Pakistan Army fought India to protect globally designated terrorists Hafiz Saeed and Masood Azhar. He further says Pakistan Army oversaw funerals and deployed uniformed soldiers to carry the bodies of eliminated terrorists.
On… pic.twitter.com/hDw8eFBmBV
— Mike Lima (@MikeLimaBravo12) May 4, 2026








