Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

April Fools : ಏನಿದು ‘ಏಪ್ರಿಲ್ ಫೂಲ್ಸ್ ಡೇ’? ಇದರ ಇತಿಹಾಸ, ಮಹತ್ವವೇನು ತಿಳಿಯಿರಿ

01/04/2026 6:15 AM

ಕರ್ನಾಟಕದಲ್ಲಿ ಇಂದಿನಿಂದ ಜನಗಣತಿ ಆರಂಭ : ಜನರು ಸಕ್ರಿಯವಾಗಿ ಪಾಲ್ಗೊಳ್ಳಲು ರಾಜ್ಯಪಾಲ, CM ಸಿದ್ದರಾಮಯ್ಯ ಕರೆ

01/04/2026 6:14 AM

ವಾಹನ ಸವಾರರಿಗೆ ಗುಡ್‌ ನ್ಯೂಸ್: ಅವಧಿ ಮುಗಿದ ನಂತರವೂ 30 ದಿನಗಳ ಕಾಲ `DL’ ಮಾನ್ಯ!

01/04/2026 6:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಹನ ಸವಾರರಿಗೆ ಗುಡ್‌ ನ್ಯೂಸ್: ಅವಧಿ ಮುಗಿದ ನಂತರವೂ 30 ದಿನಗಳ ಕಾಲ `DL’ ಮಾನ್ಯ!
KARNATAKA

ವಾಹನ ಸವಾರರಿಗೆ ಗುಡ್‌ ನ್ಯೂಸ್: ಅವಧಿ ಮುಗಿದ ನಂತರವೂ 30 ದಿನಗಳ ಕಾಲ `DL’ ಮಾನ್ಯ!

By kannadanewsnow5701/04/2026 6:06 AM

ಬೆಂಗಳೂರು: ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ಪ್ರಮುಖ ತಿದ್ದುಪಡಿ ತಂದಿದ್ದು, ಚಾಲನಾ ಪರವಾನಗಿ (Driving License – DL) ಅವಧಿ ಮುಗಿದ ನಂತರವೂ ಮುಂದಿನ 30 ದಿನಗಳವರೆಗೆ ಅದರ ಮಾನ್ಯತೆ ಮುಂದುವರಿಯಲಿದೆ. ಈ ಬದಲಾವಣೆಯು ವಿಮೆ ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸವಾರರಿಗೆ ಸುಲಭಗೊಳಿಸಲಿದೆ.

ಪ್ರಮುಖ ಬದಲಾವಣೆಗಳು:
30 ದಿನಗಳ ಗ್ರೇಸ್ ಅವಧಿ: ಈ ಹಿಂದೆ 2019ರ ತಿದ್ದುಪಡಿಯಲ್ಲಿ ರದ್ದುಗೊಳಿಸಲಾಗಿದ್ದ 30 ದಿನಗಳ ಕಾಲಾವಕಾಶವನ್ನು ಈಗ ಮತ್ತೆ ಜಾರಿಗೆ ತರಲಾಗಿದೆ. ಇದರಿಂದ ಡಿಎಲ್ ಅವಧಿ ಮುಗಿದ ಮೊದಲ 30 ದಿನಗಳಲ್ಲಿ ಅಪಘಾತ ಸಂಭವಿಸಿದರೂ ವಿಮೆ ಕ್ಲೇಮ್ ಮಾಡಲು ಅವಕಾಶ ಸಿಗಲಿದೆ.

ಅರ್ಜಿ ಸಲ್ಲಿಸಿದ ದಿನದಿಂದಲೇ ನವೀಕರಣ: ಡಿಎಲ್ ಎಕ್ಸ್‌ಪೈರಿ ದಿನಾಂಕದ ಬದಲಾಗಿ, ಅರ್ಜಿದಾರರು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಡಿಎಲ್ ಹೊಸ ಅವಧಿಗೆ ಚಾಲ್ತಿಗೆ ಬರಲಿದೆ.

ಆರ್‌ಟಿಒ ವ್ಯಾಪ್ತಿ ಸಡಿಲಿಕೆ: ಸವಾರರು ತಮ್ಮ ನಿರ್ದಿಷ್ಟ ಕಚೇರಿ ವ್ಯಾಪ್ತಿಯಲ್ಲಷ್ಟೇ ಅಲ್ಲದೆ, ರಾಜ್ಯದ ಯಾವುದೇ ಆರ್‌ಟಿಒ ಕಚೇರಿಯಲ್ಲಾದರೂ ವಾಹನ ನೋಂದಣಿ ಅಥವಾ ಪರವಾನಗಿ ಕೆಲಸಗಳನ್ನು ಮಾಡಿಸಿಕೊಳ್ಳಬಹುದು.

ಮಾಲೀಕತ್ವ ವರ್ಗಾವಣೆ: ವಾಹನ ಮಾಲೀಕತ್ವ ಬದಲಾವಣೆಯ ಸಂದರ್ಭದಲ್ಲಿ ವಿಮಾ ಸಂಸ್ಥೆಗೆ ಮಾಹಿತಿ ನೀಡುವ ಅವಧಿಯನ್ನು 14 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಲಾಗಿದೆ.

ದಂಡ ಮತ್ತು ಕಠಿಣ ನಿಯಮಗಳು:
ಹೊಸ ನಿಯಮಗಳು ಸೌಲಭ್ಯಗಳ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಠಿಣ ದಂಡನೆಯನ್ನೂ ವಿಧಿಸಿವೆ:

ಗದ್ದಲಕ್ಕೆ ಭಾರಿ ದಂಡ: ವಾಹನಗಳಿಂದ ಕರ್ಕಶ ಶಬ್ದ ಉಂಟುಮಾಡಿದರೆ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿ ಅದೇ ತಪ್ಪು ಮರುಕಳಿಸಿದರೆ ₹10,000 ದಂಡ ವಿಧಿಸಲಾಗುತ್ತದೆ.

ರಸ್ತೆ ಸುರಕ್ಷತೆ ಮತ್ತು ಮಾಲಿನ್ಯ: ರಸ್ತೆ ಸುರಕ್ಷತೆಗೆ ಭಂಗ ತಂದರೆ ಅಥವಾ ವಾಯು ಮಾಲಿನ್ಯ ಉಂಟುಮಾಡಿದರೆ ಮೊದಲ ಉಲ್ಲಂಘನೆಗೆ ₹10,000 ದಂಡ ಮತ್ತು 3 ತಿಂಗಳ ಕಾಲ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಎರಡನೇ ಬಾರಿ ತಪ್ಪು ಮಾಡಿದರೆ 6 ತಿಂಗಳ ಜೈಲು ಶಿಕ್ಷೆ ಅಥವಾ ₹10,000 ದಂಡ ವಿಧಿಸಲು ಅವಕಾಶವಿದೆ.

ಅಪಘಾತ ಮತ್ತು ಹಾನಿ: ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ದೋಷವಿದ್ದು, ಅದರಿಂದ ಅಪಘಾತ ಸಂಭವಿಸಿ ದೈಹಿಕ ಗಾಯ ಅಥವಾ ಆಸ್ತಿ ಹಾನಿಯಾದರೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹5,000 ದಿಂದ ₹10,000 ವರೆಗೆ ದಂಡ ವಿಧಿಸಲಾಗುತ್ತದೆ.

ಗಮನಿಸಿ: 30 ದಿನಗಳ ಗ್ರೇಸ್ ಅವಧಿಯು ವಿಮೆಯ ಹಣ ಪಡೆಯಲು ಸಹಕಾರಿಯಾಗಿದ್ದರೂ, ನಿಗದಿತ ಅವಧಿಯೊಳಗೆ ವಿಮಾ ಪ್ರಮಾಣಪತ್ರ ನವೀಕರಿಸದಿದ್ದರೆ ವಾಹನವನ್ನು ಭೌತಿಕವಾಗಿ ಪರಿಶೀಲಿಸಿದ ನಂತರವಷ್ಟೇ ಹೊಸ ವಿಮೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Good news for motorists: `DL' valid for 30 days even after expiry!
Share. Facebook Twitter LinkedIn WhatsApp Email

Related Posts

April Fools : ಏನಿದು ‘ಏಪ್ರಿಲ್ ಫೂಲ್ಸ್ ಡೇ’? ಇದರ ಇತಿಹಾಸ, ಮಹತ್ವವೇನು ತಿಳಿಯಿರಿ

01/04/2026 6:15 AM2 Mins Read

ಕರ್ನಾಟಕದಲ್ಲಿ ಇಂದಿನಿಂದ ಜನಗಣತಿ ಆರಂಭ : ಜನರು ಸಕ್ರಿಯವಾಗಿ ಪಾಲ್ಗೊಳ್ಳಲು ರಾಜ್ಯಪಾಲ, CM ಸಿದ್ದರಾಮಯ್ಯ ಕರೆ

01/04/2026 6:14 AM2 Mins Read

ಪೋಷಕರೇ ಗಮನಿಸಿ : ನಿಮ್ಮ ಮಗು ತೊದಲುತ್ತಿದೆಯೇ? ಈ 5 ಟಿಪ್ಸ್‌ ಗಳನ್ನು ತಪ್ಪದೇ ಫಾಲೋ ಮಾಡಿ.!

01/04/2026 6:00 AM2 Mins Read
Recent News

April Fools : ಏನಿದು ‘ಏಪ್ರಿಲ್ ಫೂಲ್ಸ್ ಡೇ’? ಇದರ ಇತಿಹಾಸ, ಮಹತ್ವವೇನು ತಿಳಿಯಿರಿ

01/04/2026 6:15 AM

ಕರ್ನಾಟಕದಲ್ಲಿ ಇಂದಿನಿಂದ ಜನಗಣತಿ ಆರಂಭ : ಜನರು ಸಕ್ರಿಯವಾಗಿ ಪಾಲ್ಗೊಳ್ಳಲು ರಾಜ್ಯಪಾಲ, CM ಸಿದ್ದರಾಮಯ್ಯ ಕರೆ

01/04/2026 6:14 AM

ವಾಹನ ಸವಾರರಿಗೆ ಗುಡ್‌ ನ್ಯೂಸ್: ಅವಧಿ ಮುಗಿದ ನಂತರವೂ 30 ದಿನಗಳ ಕಾಲ `DL’ ಮಾನ್ಯ!

01/04/2026 6:06 AM

ಪೋಷಕರೇ ಗಮನಿಸಿ : ನಿಮ್ಮ ಮಗು ತೊದಲುತ್ತಿದೆಯೇ? ಈ 5 ಟಿಪ್ಸ್‌ ಗಳನ್ನು ತಪ್ಪದೇ ಫಾಲೋ ಮಾಡಿ.!

01/04/2026 6:00 AM
State News
KARNATAKA

April Fools : ಏನಿದು ‘ಏಪ್ರಿಲ್ ಫೂಲ್ಸ್ ಡೇ’? ಇದರ ಇತಿಹಾಸ, ಮಹತ್ವವೇನು ತಿಳಿಯಿರಿ

By kannadanewsnow5701/04/2026 6:15 AM KARNATAKA 2 Mins Read

ಪ್ರತಿ ವರ್ಷ ಏಪ್ರಿಲ್ ಮೊದಲ ದಿನದಂದು ಜನರು ಯಾವುದಾದರೂ ಒಂದು ನೆಪದಲ್ಲಿ ನಕ್ಕು ನಲಿಯುತ್ತಾರೆ. ‘ಏಪ್ರಿಲ್ ಫೂಲ್ಸ್ ಡೇ’ ಎಂದು…

ಕರ್ನಾಟಕದಲ್ಲಿ ಇಂದಿನಿಂದ ಜನಗಣತಿ ಆರಂಭ : ಜನರು ಸಕ್ರಿಯವಾಗಿ ಪಾಲ್ಗೊಳ್ಳಲು ರಾಜ್ಯಪಾಲ, CM ಸಿದ್ದರಾಮಯ್ಯ ಕರೆ

01/04/2026 6:14 AM

ವಾಹನ ಸವಾರರಿಗೆ ಗುಡ್‌ ನ್ಯೂಸ್: ಅವಧಿ ಮುಗಿದ ನಂತರವೂ 30 ದಿನಗಳ ಕಾಲ `DL’ ಮಾನ್ಯ!

01/04/2026 6:06 AM

ಪೋಷಕರೇ ಗಮನಿಸಿ : ನಿಮ್ಮ ಮಗು ತೊದಲುತ್ತಿದೆಯೇ? ಈ 5 ಟಿಪ್ಸ್‌ ಗಳನ್ನು ತಪ್ಪದೇ ಫಾಲೋ ಮಾಡಿ.!

01/04/2026 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.