ಬೆಂಗಳೂರು: ನಗರದಲ್ಲಿ ನಿವೃತ್ತ ಐಐಎಸ್ಸಿ ಪ್ರೊಫೇಸರ್ ಕುಟುಂಬದ ಮೂವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಇಂದು ನಿವೃತ್ತ ಐಐಎಸ್ಸಿ ಪ್ರೊಫೆಸರ್ ಕುಟುಂಬದ ಮೂವರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್, ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರಿದ್ದಂತ ಪೀಠವು ತೀರ್ಪು ಪ್ರಕಟಿಸಿದೆ.
ಐಐಎಸ್ಸಿ ನಿವೃತ್ತ ಪ್ರೊಫೆಸರ್ ಪುರುಷೋತ್ತಮ್ ಲಾಲ್ ಸಚ್ ದೇವ್, ಪತ್ನಿ ರೀಟಾ, ಪುತ್ರ ಮುನ್ನಾ ಎಂಬುವರನ್ನು ಮನೆ ಕೆಲಸದ ವಲಸೆ ಕಾರ್ಮಿಕ ದಂಪತಿಗಳು ಸೇರಿದಂತೆ ನಾಲ್ವರು ಹತ್ಯೆ ಮಾಡಿದ್ದರು.
ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರಾದಂತ ದೀಪಕ್ ಹಲ್ದಾರ್, ಸುಚಿತ್ರಾ ಹಲ್ವಾರ್, ಮೊಹಮ್ಮದ್ ಸರ್ಬಲ್ ಹಾಗೂ ಬಿದನ್ ಶಿಕಾರಿಯಿಂದ ಪ್ರೊಫೆಸರ್ ಕುಟುಂಬ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯನ್ನು ಹಣ, ಚಿನ್ನಾಭರಣಕ್ಕಾಗಿ ಮಾಡಲಾಗಿತ್ತು. ಇಂತಹ ನಾಲ್ವರು ಅಪರಾಧಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪಶ್ಚಿಮ ಬಂಗಾಳ ರಾಜ್ಯಪಾಲರ ಹುದ್ದೆಗೆ ಸಿ.ವಿ.ಆನಂದ ಬೋಸ್ ರಾಜೀನಾಮೆ | CV Ananda Bose resigns
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಪಾಹಪಿಗೆ ಸಾರಿಗೆ ಇಲಾಖೆ ‘ICU’ ಸೇರಿದೆ: ಜೆಡಿಎಸ್ ಪಕ್ಷ ವಾಗ್ಧಾಳಿ
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








