ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಆಸ್ತಿ ನೋಂದಣಿ ಬಳಿಕ ಖಾತೆ ಬದಲಾವಣೆ (ಮ್ಯುಟೇಶನ್) ಮಾಡಿಸಲು ತಹಶೀಲ್ದಾರ್ ಕಚೇರಿ ಅಥವಾ ಅಧಿಕಾರಿಗಳ ಹಿಂದೆ ಅಲೆಯುವ ಕಾಲ ಈಗ ಮುಕ್ತಾಯಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಧಾನಸೌಧದಲ್ಲಿ ‘ಸ್ವಯಂ ಚಾಲಿತ ಮ್ಯುಟೇಶನ್’ (Automated Mutation) ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ.
ಏನಿದು ಹೊಸ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ?
ಈ ಹೊಸ ತಂತ್ರಾಂಶದ ಮೂಲಕ ಮಾನವ ಹಸ್ತಕ್ಷೇಪವಿಲ್ಲದೆ ಮ್ಯುಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರ ಪ್ರಮುಖ ಅಂಶಗಳು ಇಲ್ಲಿವೆ:
ಸ್ವಯಂ ಅನುಮೋದನೆ: ಕ್ರಯ (Sale), ವಿಭಾಗ (Partition), ದಾನ (Gift), ಪೌತಿ (Inheritance) ಅಥವಾ ವಿಲ್ ಸಂಬಂಧಿತ ಮ್ಯುಟೇಶನ್ಗಳಿಗೆ ನಿಗದಿತ ನೋಟಿಸ್ ಅವಧಿ (7 ಅಥವಾ 15 ದಿನಗಳು) ಇರುತ್ತದೆ. ಈ ಅವಧಿ ಮುಗಿದ ತಕ್ಷಣ, ಸರ್ವರ್ ಮೂಲಕವೇ ಡಿಜಿಟಲ್ ಸಹಿಯೊಂದಿಗೆ ಮ್ಯುಟೇಶನ್ ಸ್ವಯಂ ಚಾಲಿತವಾಗಿ ಅನುಮೋದನೆಗೊಳ್ಳುತ್ತದೆ.
ತಕರಾರು ಇದ್ದರೆ ಮಾತ್ರ ತಡೆ: ನೋಟಿಸ್ ಅವಧಿಯೊಳಗೆ ಸಾರ್ವಜನಿಕರು ಅಥವಾ ಕಂದಾಯ ನಿರೀಕ್ಷಕರು ಯಾವುದಾದರೂ ತಕರಾರು (Objection) ಸಲ್ಲಿಸಿದರೆ ಮಾತ್ರ ಅಂತಹ ಪ್ರಕರಣಗಳು ‘ತಹಶೀಲ್ದಾರ್ ನ್ಯಾಯಾಲಯ’ಕ್ಕೆ ವರ್ಗಾವಣೆಯಾಗುತ್ತವೆ.
ಅಧಿಕಾರಿಗಳಿಗೂ ಸುಲಭ: ರಾಜಸ್ವ ನಿರೀಕ್ಷಕರು (RI) ಆಕ್ಷೇಪಣೆ ಸಲ್ಲಿಸಲು ತಾಲೂಕು ಕಚೇರಿಗೆ ಬರುವ ಅಗತ್ಯವಿಲ್ಲ. ಅವರಿಗೆ ಪ್ರತ್ಯೇಕ ಲಾಗಿನ್ ನೀಡಲಾಗಿದ್ದು, ಯಾವುದೇ ಸ್ಥಳದಿಂದಲೇ ಆನ್ಲೈನ್ ಮೂಲಕ ಆಕ್ಷೇಪಣೆ ದಾಖಲಿಸಬಹುದು.
ಪಹಣಿಗೆ ಆಧಾರ್ ಜೋಡಣೆ: ವಂಚನೆಗೆ ಬೀಳಲಿದೆ ಬ್ರೇಕ್!
ಇದೇ ಸಂದರ್ಭದಲ್ಲಿ ಸಚಿವರು ರೈತರು ಮತ್ತು ಆಸ್ತಿ ಮಾಲೀಕರಿಗೆ ಒಂದು ಮಹತ್ವದ ಮನವಿ ಮಾಡಿದ್ದಾರೆ.
“ಪ್ರತಿಯೊಬ್ಬರೂ ತಮ್ಮ ಪಹಣಿ (RTC) ಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸುವುದು ಕಡ್ಡಾಯ. ಇದರಿಂದ ಭೂ ದಾಖಲೆಗಳಲ್ಲಿ ನಡೆಯುವ ಅಕ್ರಮ ಮತ್ತು ವಂಚನೆಗಳನ್ನು ತಡೆಯಬಹುದು,” ಎಂದು ಸಚಿವರು ತಿಳಿಸಿದರು.
ಆಧಾರ್ ಜೋಡಣೆಯ ಪ್ರಯೋಜನಗಳು:
ನಿಮ್ಮ ಪಹಣಿಯಲ್ಲಿ ಯಾವುದೇ ಸಣ್ಣ ಬದಲಾವಣೆಯಾದರೂ ತಕ್ಷಣ ನಿಮ್ಮ ಮೊಬೈಲ್ಗೆ SMS ಸಂದೇಶ ಬರಲಿದೆ.
ನಿಮ್ಮ ಗಮನಕ್ಕೆ ಬಾರದೆ ಜಮೀನು ಪರಭಾರೆಯಾಗುವುದನ್ನು ಇದು ತಪ್ಪಿಸುತ್ತದೆ.
ರೈತರಿಗೆ ಆಗುವ ಲಾಭಗಳೇನು?
ಲಂಚ ಮುಕ್ತ ವ್ಯವಸ್ಥೆ: ಅಧಿಕಾರಿಗಳ ಹಸ್ತಕ್ಷೇಪವಿಲ್ಲದ ಕಾರಣ ಹಣದ ಬೇಡಿಕೆಗೆ ಅವಕಾಶವಿರುವುದಿಲ್ಲ.
ಸಮಯದ ಉಳಿತಾಯ: ನೋಟಿಸ್ ಅವಧಿ ಮುಗಿದ ಕೆಲವೇ ಕ್ಷಣಗಳಲ್ಲಿ ಮ್ಯುಟೇಶನ್ ಆರ್ಡರ್ ಸಿದ್ಧವಾಗುತ್ತದೆ.
ಪಾರದರ್ಶಕತೆ: ಪ್ರತಿಯೊಂದು ಹಂತವೂ ತಂತ್ರಾಂಶದ ಮೂಲಕ ನಡೆಯುವುದರಿಂದ ಪಾರದರ್ಶಕತೆ ಇರುತ್ತದೆ.
ಆನ್ಲೈನ್ ಮ್ಯುಟೇಶನ್ ವ್ಯವಸ್ಥೆ
ಅನುಕೂಲತೆಗಳು
– ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ 7 ದಿನ ನೋಟಿಸ್ ಅವಧಿ ಇರಲಿದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದಡಿ ತಕರಾರು ಸಲ್ಲಿಸಬಹುದು. ಯಾವುದೇ ತಕರಾರು ಸಲ್ಲಿಕೆಯಾಗದಿದ್ದರೆ 8ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
– ನೋಂದಣಿಯೇತರ ಖಾತೆ… pic.twitter.com/eQsf600A5b
— DIPR Karnataka (@KarnatakaVarthe) February 25, 2026
ನಿಗದಿತ ನೋಟಿಸ್ ಅವಧಿ ಮುಗಿದ ಬಳಿಕ ತಕ್ಷಣವೇ ಆನ್ ಲೈನ್ ಮೂಲಕ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಮಾಡುವ 'ಆನ್ಲೈನ್ ಮೈಟೇಶನ್ ವ್ಯವಸ್ಥೆ ಈಗ ರಾಜ್ಯಾದ್ಯಂತ ವಿಸ್ತರಣೆಯಾಗಿದೆ.
ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿಗೆ ಸ್ವಯಂ ಚಾಲಿತವಾಗಿ ಮ್ಯುಟೇಷನ್ ಪಡೆಯಬಹುದಾದ ಹೊಸ ವ್ಯವಸ್ಥೆಗೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಮಂಗಳವಾರ ಚಾಲನೆ… pic.twitter.com/ZhGFIVqYPx
— DIPR Karnataka (@KarnatakaVarthe) February 25, 2026








