Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

25/02/2026 3:45 PM

GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!

25/02/2026 3:41 PM

BREAKING : ಟಿ20 ವಿಶ್ವಕಪ್ ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೆ ಭಾರತ ತಂಡ ಸೇರಿದ ‘ರಿಂಕು ಸಿಂಗ್’

25/02/2026 3:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!
KARNATAKA

GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!

By kannadanewsnow0525/02/2026 3:41 PM

ಬೆಂಗಳೂರು : ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮಹಿಳೆಯರು ಮರಣ ಹೊಂದಿದ್ದರು, ಗೃಹಲಕ್ಷ್ಮಿ ಯೋಜನೆಯ ಹಣ ಪಡೆದಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ, ಇದೀಗ ಮರಣ ಹೊಂದಿದ ಫಲಾನುಭವಿಗಳ ಮನೆಯ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಪಡೆದುಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮಧು ಹೆಚ್.ಸಿ ತಿಳಿಸಿದ್ದಾರೆ.

ಮರಣ ಹೊಂದಿದ ಫಲಾನುಭವಿಗಳ ಹೆಸರಿಗೆ ಹಣ ವರ್ಗಾವಣೆಯಾಗುವುದನ್ನು ತಡೆದು, ಮನೆಯ ಮುಂದಿನ ಯಜಮಾನಿಯರು ಈ ಬಗ್ಗೆ ಮಾಹಿತಿ ನೀಡಿ ಹೊಸ ಅರ್ಜಿ ಸಲ್ಲಿಸಬೇಕು. ಮರಣ ಹೊಂದಿದ ವ್ಯಕ್ತಿಯ ಜೀವಂತ ಪ್ರಮಾಣ ಪತ್ರದ ಬಗ್ಗೆ ಸದ್ಯಕ್ಕೆ ಆತಂಕ ಬೇಡ; ಸರ್ಕಾರದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.2,044 ಫಲಾನುಭವಿಗಳನ್ನು ಐಟಿ/ಜಿಎಸ್‌ಟಿ ವ್ಯಾಪ್ತಿಯಡಿ ಪರಿಗಣಿಸಲಾಗಿದ್ದು, 42 ಫಲಾನುಭವಿಗಳ ಎನ್‌ಪಿಸಿಐ (NPCI) ಬಾಕಿ ಇದೆ.

ಹೌದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯು ಮರಣ ಹೊಂದಿದ ಸಂದರ್ಭದಲ್ಲಿ, ಅವರ ಕುಟುಂಬದ ಸದಸ್ಯರು ಯೋಜನೆಯ ಲಾಭವನ್ನು ಮುಂದುವರಿಸಲು ಅವಕಾಶವಿದೆ.ಈ ಬಗ್ಗೆ ಸರ್ಕಾರವು ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಮರಣ ಹೊಂದಿದ ಫಲಾನುಭವಿಯ ಹೆಸರನ್ನು ಬದಲಾಯಿಸಿ, ಮನೆಯ ಮತ್ತೊಬ್ಬ ಅರ್ಹ ಮಹಿಳೆಯನ್ನು (ಉದಾಹರಣೆಗೆ: ಸೊಸೆ ಅಥವಾ ಮಗಳು) ಹೊಸ ಫಲಾನುಭವಿಯನ್ನಾಗಿ ನೋಂದಾಯಿಸಬಹುದು.

ಈ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ಹಂತಗಳು ಇಲ್ಲಿವೆ:

ಅಗತ್ಯವಿರುವ ದಾಖಲೆಗಳು:

  • ಮರಣ ಪ್ರಮಾಣ ಪತ್ರ: ಮೂಲ ಫಲಾನುಭವಿಯ ಮರಣ ಪ್ರಮಾಣ ಪತ್ರದ ನಕಲು.

  • ಹೊಸ ಅರ್ಜಿದಾರರ ಆಧಾರ್ ಕಾರ್ಡ್: ಕುಟುಂಬದ ಹೊಸ ಯಜಮಾನಿಯ ಆಧಾರ್ ಕಾರ್ಡ್.

  • ರೇಷನ್ ಕಾರ್ಡ್ (BPL/APL): ಇದರಲ್ಲಿ ಹೊಸ ಯಜಮಾನಿಯ ಹೆಸರು ‘ಕುಟುಂಬದ ಮುಖ್ಯಸ್ಥೆ’ ಎಂದು ನಮೂದಾಗಿರಬೇಕು.

  • ಬ್ಯಾಂಕ್ ಪಾಸ್‌ಬುಕ್: ಹೊಸ ಅರ್ಜಿದಾರರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರ.

ಅರ್ಜಿ ಸಲ್ಲಿಸುವ ವಿಧಾನ:

  1. ರೇಷನ್ ಕಾರ್ಡ್ ತಿದ್ದುಪಡಿ: ಮೊದಲು ಆಹಾರ ಇಲಾಖೆಯ ಕಚೇರಿ ಅಥವಾ ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ, ರೇಷನ್ ಕಾರ್ಡ್‌ನಲ್ಲಿ ಮನೆಯ ಯಜಮಾನಿಯ ಹೆಸರನ್ನು ಬದಲಾಯಿಸಬೇಕು (ತೀರಿಹೋದವರ ಹೆಸರನ್ನು ತೆಗೆದು ಹೊಸಬರ ಹೆಸರು ಸೇರಿಸುವುದು).

  2. ನೋಂದಣಿ: ರೇಷನ್ ಕಾರ್ಡ್‌ನಲ್ಲಿ ಹೆಸರು ಬದಲಾದ ನಂತರ, ನೀವು ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ಮರು-ನೋಂದಣಿ ಮಾಡಿಕೊಳ್ಳಬಹುದು.

ಗಮನಿಸಿ: ಈ ಪ್ರಕ್ರಿಯೆಯು ಕೇವಲ ಅರ್ಹ ಕುಟುಂಬಗಳಿಗೆ ಮಾತ್ರ ಅನ್ವಯಿಸುತ್ತದೆ. ರೇಷನ್ ಕಾರ್ಡ್‌ನಲ್ಲಿ ‘ಕುಟುಂಬದ ಮುಖ್ಯಸ್ಥೆ’ ಯಾರು ಇರುತ್ತಾರೋ ಅವರಿಗೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.

Share. Facebook Twitter LinkedIn WhatsApp Email

Related Posts

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

25/02/2026 3:45 PM1 Min Read

ಚಿಕ್ಕಮಂಗಳೂರು : 5 ಸಾವಿರ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ, ಲೋಕಾಯುಕ್ತ ಬಲೆಗೆ ಬಿದ್ದ ‘PDO’ ಅಧಿಕಾರಿ!

25/02/2026 3:28 PM1 Min Read

BREAKING : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಮಹಾ ಎಡವಟ್ಟು : ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ವಿತರಣೆ!

25/02/2026 3:20 PM2 Mins Read
Recent News

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

25/02/2026 3:45 PM

GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!

25/02/2026 3:41 PM

BREAKING : ಟಿ20 ವಿಶ್ವಕಪ್ ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೆ ಭಾರತ ತಂಡ ಸೇರಿದ ‘ರಿಂಕು ಸಿಂಗ್’

25/02/2026 3:31 PM

ಚಿಕ್ಕಮಂಗಳೂರು : 5 ಸಾವಿರ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ, ಲೋಕಾಯುಕ್ತ ಬಲೆಗೆ ಬಿದ್ದ ‘PDO’ ಅಧಿಕಾರಿ!

25/02/2026 3:28 PM
State News
KARNATAKA

BREAKING : ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ : ಶಾಸಕ ಯತ್ನಾಳ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು!

By kannadanewsnow0525/02/2026 3:45 PM KARNATAKA 1 Min Read

ಯಾದಗಿರಿ : ಯಾದಗಿರಿಯ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಷ್ಟ್ರಪಿತ ಗಾಂಧಿ ಹಾಗೂ ಮೊದಲ ಪ್ರಧಾನಿ…

GOOD NEWS : ಮರಣ ಹೊಂದಿದ ಫಲಾನುಭವಿಗಳ ಮನೆಯವರು, ಗೃಹಲಕ್ಷೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು!

25/02/2026 3:41 PM

ಚಿಕ್ಕಮಂಗಳೂರು : 5 ಸಾವಿರ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ, ಲೋಕಾಯುಕ್ತ ಬಲೆಗೆ ಬಿದ್ದ ‘PDO’ ಅಧಿಕಾರಿ!

25/02/2026 3:28 PM

BREAKING : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಮಹಾ ಎಡವಟ್ಟು : ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ವಿತರಣೆ!

25/02/2026 3:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.