ಶಿವಮೊಗ್ಗ: ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಟಿಪ್ಪಣಿಯಿಂದಾಗಿ ಸಾಗರದ ಶರಾವತಿ ಮುಳುಗಡೆ ಸಂತ್ರಸ್ತರನ್ನು ಸಂಕಷ್ಟಕ್ಕೆ ದೂಡುವಂತಾಗಿತ್ತು. ಇಂತಹ ಸಾಗರದ ಯಡಮನೆ ಗ್ರಾಮಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿದರು. ಅಲ್ಲದೇ ಗ್ರಾಮಸ್ಥರಿಂದ ಮಾಹಿತಿ ಪಡೆದು, ಸರ್ಕಾರದ ಗಮನ ಸೆಳೆದು, ಪರಿಹಾರದ ಭರವಸೆಯನ್ನು ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಕಟ್ಟಿನಕಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಡಮನೆ ಗ್ರಾಮಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿದರು. ಈ ಗ್ರಾಮದಲ್ಲಿದ್ದಂತ 16 ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಮನೆ, ಜಮೀನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದ ಹಿನ್ನಲೆಯಲ್ಲಿ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಅವರನ್ನು ಭೇಟಿ ಮಾಡಿರು.
ಮಾಜಿ ಸಚಿವ ಹರತಾಳು ಹಾಲಪ್ಪ ಬಳಿಯಲ್ಲಿ ಯಡಮನೆ ಗ್ರಾಮದ ಗ್ರಾಮಸ್ಥರು ತಮ್ಮ ಕಣ್ಣೀರಿನ ಕತೆಯನ್ನೇ ಬಿಚ್ಚಿಟ್ಟಿದರು. ಮನೆ, ಜಮೀನು, ಕೊಚ್ಚಿಗೆಯಯನ್ನು ಖಾಲಿ ಮಾಡಿರೋದು, ಹಾಳಾದ ಮನೆಯ ಸಂಪೂರ್ಣ ಚಿತ್ರಣವನ್ನೇ ಮಾಜಿ ಸಚಿವರ ಮುಂದಿಟ್ಟಿದರು. ಯಡಮನೆ ಗ್ರಾಮಸ್ಥರ ಸಂಕಷ್ಟ ಕೇಳಿದಂತ ಹಾಲಪ್ಪ ಅವರು, ಕೆಲವೊತ್ತು ಭಾವುಕರಾಗಿ ಬಿಟ್ಟರು.

ಯಡಮನೆ ಗ್ರಾಮಸ್ಥರು ಹಾಗೂ ಅವರಿಗೆ ಅರಣ್ಯ ಇಲಾಖೆ ನೀಡಿರುವಂತ ನೋಟಿಸ್, ಮನೆಗಳನ್ನು ಖಾಲಿ ಮಾಡಿದ್ದರ ವಿವರವಾದಂತ ಮಾಹಿತಿಯನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಪಡೆದರು. ಅಲ್ಲದೇ ನಿಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವಂತ ಭರವಸೆಯನ್ನು ನೀಡಿದರು. ಜೊತೆ ಜೊತೆಗೆ ಒಂದು ವೇಳೆ ಸರ್ಕಾರ ಪರಿಹರಿಸದೇ ಇದ್ದರೇ, ನಿಮ್ಮೊಟ್ಟಿಗೆ ಮುಂದೆ ನಿಂತು ಹೋರಾಟ ಮಾಡೋಣ. ಧೈರ್ಯವಾಗಿರಿ, ಯಾರೂ ಎದೆಗುಂದಬೇಡಿ ಎಂಬುದಾಗಿ ಧೈರ್ಯ ತುಂಬಿದರು.
ಈ ವೇಳೆ ಸಾಗರ ಗ್ರಾಮಾಂತರ ಮಂಡಲದ ಬಿಜೆಪಿ ಅಧ್ಯಕ್ಷ ದೇವೇಂದ್ರ ಯಲ್ಲಕುಂದ್ಲಿ, ಸಾಗರ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಬಿ.ಸಿ ಲಕ್ಷ್ಮೀ ನಾರಾಯಣ್, ಮಹಾಶಕ್ತಿ ಕೇಂದ್ರದ ಪ್ರಮುಖರಾದಂತ ದಿನೇಶ್ ಆರೋಡಿ, ಕಾರ್ಗಲ್ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ವಾಟೆ ಮಕ್ಕಿ ನಾಗರಾಜ್, ಅರಳಗೋಡು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ರಾಜೇಶ್, ಪ್ರಮುಖರಾದಂತ ಲೋಲಾಕ್ಷಿ, ಚಂದ್ರಹಾಸ, ಸಂದೀಪ್, ಸಂದೀಪ್, ಮಂಜುನಾಥ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ನಿಂತ ಶಾಸಕ ಬೇಳೂರು: ಟಿಪ್ಪಣಿ ಹಿಂಪಡೆಯಲು ಸಚಿವ ಈಶ್ವರ್ ಖಂಡ್ರೆಗೆ ಪತ್ರ
Watch Video: ಹಗಲು ಹೊತ್ತಲ್ಲೇ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳ, ಊರ ತುಂಬೆಲ್ಲ ಮೆರವಣಿಗೆ
BREAKING: ಶಾಸಕ ಸುನೀಲ್ ಕುಮಾರ್, MLC ರವಿಕುಮಾರ್ ಸೇರಿ ಇತರರ ವಿರುದ್ಧ ಪೊಲೀಸ್ ಕಮೀಷನರಿಗೆ ರಮೇಶ್ ಬಾಬು ದೂರು








