Watch Video: ಹಗಲು ಹೊತ್ತಲ್ಲೇ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳ, ಊರ ತುಂಬೆಲ್ಲ ಮೆರವಣಿಗೆ

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನಕ್ಕೆ ಇಳಿದಂತ ಕಳ್ಳನೊಬ್ಬನನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಹಿಡಿದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಕಳ್ಳನನ್ನು ಊರ ತುಂಬೆಲ್ಲ ಮೆರವಣಿಗೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನಲೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಕೇರಿ ಗ್ರಾಮದಲ್ಲಿ ಹಾಡಹಗಲೇ ಕಳ್ಳನೊಬ್ಬ, ಕಬ್ಬಳ್ಳಿ ಹುಚ್ಚಪ್ಪ ಎಂಬುವರ ಮನೆಯ ಕಿಟಕಿ ಮುರಿದು ಒಳಗೆ ಹೋಗಿದ್ದಾನೆ. ಮನೆಯ ಒಳಗಡೆ ಶಬ್ದವಾಗುತ್ತಿದ್ದಂತ ಗಮನಿಸಿದಂತ ಗ್ರಾಮಸ್ಥರು, ಅನುಮಾನಗೊಂಡು ನೋಡಿದಾಗ ಕಳ್ಳನೊಬ್ಬ ನುಗ್ಗಿ, ಕಳ್ಳತನ ಮಾಡುತ್ತಿರೋದು ಕಂಡು ಬಂದಿದೆ. … Continue reading Watch Video: ಹಗಲು ಹೊತ್ತಲ್ಲೇ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳ, ಊರ ತುಂಬೆಲ್ಲ ಮೆರವಣಿಗೆ