Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾರಾಮತಿ ವಿಮಾನ ಅಪಘಾತ ; ಕೈಗಡಿಯಾರದಿಂದ ‘ಅಜಿತ್ ಪವಾರ್’ ಅವ್ರ ದೇಹ ಗುರುತಿಸಲಾಗಿದೆ ; ವರದಿ

28/01/2026 4:51 PM

‘ರಿಲಯನ್ಸ್ ಜಿಯೋ’ದಿಂದ ಮಹತ್ವದ ನಿರ್ಧಾರ: ಕರ್ನಾಟಕದ ಶಾಲಾ ಮಕ್ಕಳಿಗೆ ‘AI ತರಬೇತಿ’

28/01/2026 4:51 PM

BREAKING : ವಿಶ್ವಾದ್ಯಂತ 3 ತಿಂಗಳಲ್ಲಿ ‘16,000 ಕಾರ್ಪೊರೇಟ್ ಉದ್ಯೋಗಿ’ಗಳ ವಜಾಗೊಳಿಸುವುದಾಗಿ ‘ಅಮೆಜಾನ್’ ಘೋಷಣೆ!

28/01/2026 4:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ರಿಲಯನ್ಸ್ ಜಿಯೋ’ದಿಂದ ಮಹತ್ವದ ನಿರ್ಧಾರ: ಕರ್ನಾಟಕದ ಶಾಲಾ ಮಕ್ಕಳಿಗೆ ‘AI ತರಬೇತಿ’
INDIA

‘ರಿಲಯನ್ಸ್ ಜಿಯೋ’ದಿಂದ ಮಹತ್ವದ ನಿರ್ಧಾರ: ಕರ್ನಾಟಕದ ಶಾಲಾ ಮಕ್ಕಳಿಗೆ ‘AI ತರಬೇತಿ’

By kannadanewsnow0928/01/2026 4:51 PM

ಬೆಂಗಳೂರು : ಸುಧಾರಿತ ಕೃತಕ ಬುದ್ಧಿಮತ್ತೆಯನ್ನು (ಎಐ- ಆರ್ಟಿಫಿಷಿಯಲ್ ಇಂಟೆಲೆಜೆನ್ಸ್) ಎಲ್ಲರಿಗೂ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ರಿಲಯನ್ಸ್ ಜಿಯೋ ಮತ್ತಷ್ಟು ಬಲಪಡಿಸುತ್ತಿದೆ. ಈ ಉದ್ದೇಶದ್ದೇ ಭಾಗವಾಗಿ, ಜಿಯೋ ಕರ್ನಾಟಕದಾದ್ಯಂತ ಸಮಗ್ರ ಎಐ ಶಿಕ್ಷಣ ಅಭಿಯಾನ ಪ್ರಾರಂಭಿಸಿದೆ. ಡಿಜಿಟಲ್ ಒಳಗೊಳ್ಳುವಿಕೆ ಬಲಪಡಿಸುವ ಹಾಗೂ ರಾಜ್ಯದ ಶಾಲೆ ಮತ್ತು ಕಾಲೇಜುಗಳ ಜೊತೆಗೆ ಸಂಪರ್ಕವನ್ನು ಸಾಧಿಸಿ, ‘ಜಿಯೋ ಎಐ ಕ್ಲಾಸ್‌ರೂಮ್’ (Jio AI Classroom) ಉಪಕ್ರಮದ ಮೂಲಕ ಪ್ರಾಯೋಗಿಕ ಎಐ ತರಬೇತಿಯನ್ನು ನೀಡುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಭಾರತದಾದ್ಯಂತ ಇರುವ ಶಾಲೆಗಳು ಎಐ ತಂತ್ರಜ್ಞಾನವನ್ನು ತರಗತಿಯ ಕಲಿಕೆಯಲ್ಲಿ ವೇಗವಾಗಿ ಅಳವಡಿಸಿಕೊಳ್ಳುತ್ತಾ ಇವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭವಿಷ್ಯಕ್ಕಾಗಿ ಸಿದ್ಧರಾಗುವ ರೀತಿಯಲ್ಲಿ ಶಿಕ್ಷಣದ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗೆ ಸಾಕ್ಷಿ ಆಗುತ್ತಿದೆ. ಜಿಯೋ ಎಐ ಕ್ಲಾಸ್‌ರೂಮ್ ಮೂಲಕ ಶಿಕ್ಷಣ ಸಂಸ್ಥೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಎಐ ಕೌಶಲಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳಿಗಾಗಿ ನಿಜವಾದ ‘ಎಐ-ರೆಡಿ’ (AI-Ready) ಶಾಲೆಗಳನ್ನು ಸಜ್ಜುಗೊಳಿಸುತ್ತಿದೆ.

ಈ ಅಭಿಯಾನವು ಆರಂಭಿಕ ಹಂತದಲ್ಲೇ ಭರ್ಜರಿ ಯಶಸ್ಸನ್ನು ಕಂಡಿದ್ದು, ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಶಾಲೆಗಳನ್ನು ತಲುಪಿದೆ. ಜಿಯೋದ ಹಿರಿಯ ಕಾರ್ಯನಿರ್ವಾಹಕರು ನಡೆಸಿಕೊಡುತ್ತಿರುವ ಈ ವಿಶೇಷ ತರಬೇತಿ ಅವಧಿಗಳಿಗಾಗಿ 10,000ಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಯುವಜನತೆಯ ಕೌಶಲ ಅಭಿವೃದ್ಧಿಗೆ ಪೂರಕವಾಗಿ, ಕಂಪನಿಯು ನಾಲ್ಕು ವಾರಗಳ ಉಚಿತ ಆನ್‌ಲೈನ್ ಸರ್ಟಿಫಿಕೇಷನ್ ಕಾರ್ಯಕ್ರಮವಾದ ‘ಜಿಯೋ ಎಐ ಕ್ಲಾಸ್‌ರೂಮ್’ ಅನ್ನು ಪರಿಚಯಿಸಿದೆ. ಈ ಕಾರ್ಯಕ್ರಮವು ವಿಡಿಯೋ ಉಪನ್ಯಾಸಗಳು, ಪಿಡಿಎಫ್ ಅಧ್ಯಯನ ಸಾಮಗ್ರಿಗಳು, ರೆಫರೆನ್ಸ್ ವಿಡಿಯೊಗಳು ಮತ್ತು ಪ್ರತಿ ಮಾಡ್ಯೂಲ್‌ನ ನಂತರ ಸಂವಾದಾತ್ಮಕ ರಸಪ್ರಶ್ನೆಗಳು ಹಾಗೂ ಅಸೈನ್‌ಮೆಂಟ್‌ಗಳನ್ನು ಒಳಗೊಂಡಿರುವ ನಾಲ್ಕು ಹಂತದ ಸಮಗ್ರ ಪಠ್ಯಕ್ರಮವನ್ನು ನೀಡುತ್ತದೆ.

ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಭಾಗವಹಿಸುವವರಿಗೆ ‘ಕಂಪ್ಲೀಷನ್ ಬ್ಯಾಡ್ಜ್’ ನೀಡಲಾಗುತ್ತದೆ. ಜಿಯೋ ಪಿಸಿ (JioPC) ಮೂಲಕ ಈ ಕಾರ್ಯಕ್ರಮವನ್ನು ಪಡೆಯುವ ಕಲಿಯುವವರು ಜಿಯೋ ಇನ್‌ಸ್ಟಿಟ್ಯೂಟ್ ಪ್ರಮಾಣಪತ್ರವನ್ನು ಸಹ ಪಡೆಯಲಿದ್ದಾರೆ. ಇದು ಅವರ ಎಐ ಪರಿಕಲ್ಪನೆಯ ತಿಳಿವಳಿಕೆ ಮತ್ತು ಅಸೈನ್‌ಮೆಂಟ್‌ಗಳ ಮೂಲಕ ಪಡೆದ ಪ್ರಾಯೋಗಿಕ ಜ್ಞಾನವನ್ನು ದೃಢೀಕರಿಸುತ್ತದೆ. ಈ ವ್ಯವಸ್ಥಿತ ಕೋರ್ಸ್ ಅನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಮೂಲಕ ಕಲಿಯುವವರಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಮತ್ತು ಎಐ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವ ಪಡೆಯಲು ವಿನ್ಯಾಸ ಮಾಡಲಾಗಿದೆ.

ಈ ಡಿಜಿಟಲ್ ಸಬಲೀಕರಣ ಅಭಿವೃದ್ಧಿಯ ಮುಖ್ಯವಾದ ಅಂಶ ಏನೆಂದರೆ, ಯಾವುದೇ ವೆಚ್ಚವಿಲ್ಲದೆ ಬಳಕೆದಾರರಿಗೆ ಪ್ರೀಮಿಯಂ ತಂತ್ರಜ್ಞಾನವನ್ನು ಒದಗಿಸುವುದು. ಜಿಯೋ ತನ್ನ ಅನ್‌ಲಿಮಿಟೆಡ್ 5ಜಿ ಚಂದಾದಾರರಿಗೆ ₹35,100 ಮೌಲ್ಯದ 18 ತಿಂಗಳ ‘ಗೂಗಲ್ ಜೆಮಿನಿ ಪ್ರೊ’ (Google Gemini Pro) ಪ್ಲಾನ್ ಅನ್ನು ಉಚಿತವಾಗಿ ನೀಡುತ್ತಿದೆ. ಬಳಕೆದಾರರು ಇದನ್ನು ನೇರವಾಗಿ ಮೈಜಿಯೋ (MyJio) ಆಪ್ ಮೂಲಕ ಸಕ್ರಿಯಗೊಳಿಸಬಹುದು. ಇದು ಅತ್ಯಾಧುನಿಕ ಜೆಮಿನಿ 3 ಪ್ರೊ ಮಾಡೆಲ್ ಮತ್ತು ಉನ್ನತ ಮಟ್ಟದ ಸೃಜನಶೀಲ ಸಾಧನಗಳಿಗೆ ಸಂಪರ್ಕವನ್ನು ನೀಡುತ್ತದೆ. ಇದರಲ್ಲಿ ಎಐ-ಚಾಲಿತ ಚಿತ್ರ ರಚನೆಗಾಗಿ ‘ನ್ಯಾನೋ ಬನಾನಾ ಪ್ರೊ’ (Nano Banana Pro) ಮತ್ತು ಸುಧಾರಿತ ವಿಡಿಯೋ ನಿರ್ಮಾಣಕ್ಕಾಗಿ ‘ವಿಯೋ 3.1’ (Veo 3.1) ಸೇರಿವೆ. ಈ ಪ್ಲಾನ್ ಶೈಕ್ಷಣಿಕ ಸಂಶೋಧನಾ ಸಾಧನವಾದ ‘ನೋಟ್‌ಬುಕ್ ಎಲ್‌ಎಂ’ (NotebookLM) ಅನ್ನು ಸಹ ಒಳಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅವರ ಡಿಜಿಟಲ್ ಪೋರ್ಟ್‌ಫೋಲಿಯೊಗಳು ಮತ್ತು ಸಂಶೋಧನಾ ಡೇಟಾಗಳನ್ನು ಸಂಗ್ರಹಿಸಲು 2 ಟಿಬಿ ಕ್ಲೌಡ್ ಸ್ಟೋರೇಜ್ ಅನ್ನು ಸಹ ಒದಗಿಸುತ್ತದೆ.

ತನ್ನ ಎಐ ಕ್ಲಾಸ್‌ರೂಮ್ ಉಪಕ್ರಮದ ಭಾಗವಾಗಿ, ಜಿಯೋ ಪಿಸಿಯು ‘ಜಿಯೋ ಪಿಸಿ ಎಐ ಕ್ಲಾಸ್‌ರೂಮ್ ಸ್ಕಾಲರ್‌ಶಿಪ್’ ಅನ್ನು ಸಹ ಘೋಷಿಸಿದೆ. ಎಐ ಫೌಂಡೇಷನ್ ಕೋರ್ಸ್ ಪೂರ್ಣಗೊಳಿಸಿದ ಕಲಿಕಾರ್ಥಿಗಳಿಗೆ ಜಿಯೋ ಪಿಸಿ ಖರೀದಿಸಲು ಈ ವಿದ್ಯಾರ್ಥಿವೇತನವು ಸಹಾಯ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳು ದುಬಾರಿ ಕಂಪ್ಯೂಟರ್‌ಗಳನ್ನು ಖರೀದಿಸುವ ಅನಿವಾರ್ಯ ಇಲ್ಲದೆ ಎಐ ಪ್ರಾಜೆಕ್ಟ್‌ಗಳು ಮತ್ತು ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗುತ್ತದೆ.

ಕರ್ನಾಟಕದ ವಿದ್ಯಾರ್ಥಿಗಳು http://www.jio.com/ai-classroom ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಅಗತ್ಯವಾದ ಮೂಲಭೂತ ಜ್ಞಾನವನ್ನು ಪಡೆಯಬಹುದು. ಇದು ಪ್ರಾದೇಶಿಕ ಉದ್ಯೋಗಿಗಳು ತಾಂತ್ರಿಕ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ.

BIG NEWS: ‘ಸರ್ಕಾರಿ ವೈದ್ಯ’ರು ತಮ್ಮ ಆಸ್ಪತ್ರೆಗಳಲ್ಲಿ ‘OPD ಸೇವೆ’ ಮಾತ್ರ ನೀಡಬೇಕು, ‘IPD ಚಿಕಿತ್ಸೆ’ ನೀಡುವಂತಿಲ್ಲ: ರಾಜ್ಯ ಸರ್ಕಾರ

ಅಜಿತ್ ಪವಾರ್ ಇದ್ದ ವಿಮಾನ ಪಥನದ ಹಿಂದಿನ ಕಾರಣ ಬಿಚ್ಚಿಟ್ಟ DGCA: ಅದೇನು ಗೊತ್ತಾ? | Ajit Pawar plane crash

Share. Facebook Twitter LinkedIn WhatsApp Email

Related Posts

BREAKING : ಬಾರಾಮತಿ ವಿಮಾನ ಅಪಘಾತ ; ಕೈಗಡಿಯಾರದಿಂದ ‘ಅಜಿತ್ ಪವಾರ್’ ಅವ್ರ ದೇಹ ಗುರುತಿಸಲಾಗಿದೆ ; ವರದಿ

28/01/2026 4:51 PM1 Min Read

BREAKING : ವಿಶ್ವಾದ್ಯಂತ 3 ತಿಂಗಳಲ್ಲಿ ‘16,000 ಕಾರ್ಪೊರೇಟ್ ಉದ್ಯೋಗಿ’ಗಳ ವಜಾಗೊಳಿಸುವುದಾಗಿ ‘ಅಮೆಜಾನ್’ ಘೋಷಣೆ!

28/01/2026 4:46 PM1 Min Read

BREAKING : 16,000 ಕಾರ್ಪೊರೇಟ್ ಉದ್ಯೋಗಿಗಳ ವಜಾಗೊಳಿಸುವುದಾಗಿ ‘ಅಮೆಜಾನ್’ ಘೋಷಣೆ!

28/01/2026 4:38 PM1 Min Read
Recent News

BREAKING : ಬಾರಾಮತಿ ವಿಮಾನ ಅಪಘಾತ ; ಕೈಗಡಿಯಾರದಿಂದ ‘ಅಜಿತ್ ಪವಾರ್’ ಅವ್ರ ದೇಹ ಗುರುತಿಸಲಾಗಿದೆ ; ವರದಿ

28/01/2026 4:51 PM

‘ರಿಲಯನ್ಸ್ ಜಿಯೋ’ದಿಂದ ಮಹತ್ವದ ನಿರ್ಧಾರ: ಕರ್ನಾಟಕದ ಶಾಲಾ ಮಕ್ಕಳಿಗೆ ‘AI ತರಬೇತಿ’

28/01/2026 4:51 PM

BREAKING : ವಿಶ್ವಾದ್ಯಂತ 3 ತಿಂಗಳಲ್ಲಿ ‘16,000 ಕಾರ್ಪೊರೇಟ್ ಉದ್ಯೋಗಿ’ಗಳ ವಜಾಗೊಳಿಸುವುದಾಗಿ ‘ಅಮೆಜಾನ್’ ಘೋಷಣೆ!

28/01/2026 4:46 PM

BREAKING : 16,000 ಕಾರ್ಪೊರೇಟ್ ಉದ್ಯೋಗಿಗಳ ವಜಾಗೊಳಿಸುವುದಾಗಿ ‘ಅಮೆಜಾನ್’ ಘೋಷಣೆ!

28/01/2026 4:38 PM
State News
KARNATAKA

BIG NEWS: ‘ಸರ್ಕಾರಿ ವೈದ್ಯ’ರು ತಮ್ಮ ಆಸ್ಪತ್ರೆಗಳಲ್ಲಿ ‘OPD ಸೇವೆ’ ಮಾತ್ರ ನೀಡಬೇಕು, ‘IPD ಚಿಕಿತ್ಸೆ’ ನೀಡುವಂತಿಲ್ಲ: ರಾಜ್ಯ ಸರ್ಕಾರ

By kannadanewsnow0928/01/2026 4:37 PM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆ, ಕ್ಲಿನಿಕ್ ನಡೆಸುವುದರ ಬಗ್ಗೆ ಹಲವು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಈ…

ಧಾರವಾಡದಲ್ಲಿ ಹುಚ್ಚು ನಾಯಿ ಭೀಕರ ದಾಳಿ : ಮಹಿಳೆಯರು, ಮಕ್ಕಳು ಸೇರಿ 9 ಜನರಿಗೆ ಗಂಭೀರ ಗಾಯ

28/01/2026 3:54 PM

BREAKING : ಬೆಳಗಾವಿಯಲ್ಲಿ ಪತ್ನಿ ಹೆರಿಗೆಗೆ ತೆರಳಿದಾಗ, ಹಳೆ ಪ್ರಿಯತಮೆಯ ಜೊತೆ ಪ್ರಿಯಕರ ನದಿಗೆ ಹಾರಿ ಆತ್ಮಹತ್ಯೆ

28/01/2026 3:44 PM

BIG NEWS : ಬೀದರ್ ನಲ್ಲಿ ಭೀಕರ ಅಪಘಾತ : ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಉದ್ಯಮಿ ದುರ್ಮರಣ

28/01/2026 3:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.