ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸು ಸಾವನ್ನಪ್ಪಿದೆ. ಈ ಸಾವಿನ ಹಿಂದೆ ಹಲವು ಅನುಮಾನಗಳು ಕಾರಣವಾಗಿವೆ. ಕಣ್ಣು ಬಿಡುವ ಮೊದಲೇ ಗಂಡು ಮಗುವಿನ ಉಸಿರನ್ನೇ ನಿಲ್ಲಿಸಿರುವಂತ ಹೀನ ಕೃತ್ಯವೊಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಈ ಘಟನೆ ನಡೆದಿದೆ. ಮದುವೆಗೆ ಮುಂಚೆ ಸ್ಟಾಫ್ ನರ್ಸ್ ಒಬ್ಬರು ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ನರ್ಸ್ ಆಗಿದ್ದ ಕಾರಣಕ್ಕಾಗಿ ತಾನೇ ಡೆಲಿವರಿಯನ್ನು ಯುವತಿ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.
ಇದಾದ ಬಳಿಕ ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸನ್ನೇ ಕೊಂದಿರೋದಾಗಿ ಹೇಳಲಾಗುತ್ತಿದೆ. ಬಾವಿಕೆರೆಯಲ್ಲಿ 15 ದಿನಗಳ ಹಿಂದೆ ನಡೆದಿದ್ದಂತ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಸಹಾಯದಿಂದ ಸ್ಟಾಫ್ ನರ್ಸ್ ತಾನೇ ಹೆರಿಗೆ ಮಾಡಿಸಿಕೊಂಡು ಈ ಕೃತ್ಯ ಎಸಗಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
BREAKING: ಸಂಸದ ಬಿ.ವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ | MP B.Y Raghavendra
SHOCKING: ಹಣಕ್ಕಾಗಿ ದೊಡ್ಡಪ್ಪ, ದೊಡ್ಡಮ್ಮನಿಗೆ ಹೈಡೋಸೇಜ್ ಇಂಜೆಕ್ಷನ್ ನೀಡಿ ಕೊಂಡ ಪಾಪಿ ವೈದ್ಯ








