ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಮಾತು ಸತ್ಯವಾಗುವಂತಿದೆ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆ ವೇಳೆ ಯಾರು ಇನ್? ಯಾರು ಔಟ್ ಎನ್ನುವ ಸಂಭಾವ್ಯ ಪಟ್ಟಿಯ ಬಗ್ಗೆ ಮುಂದೆ ಓದಿ.
ರಾಜ್ಯ ಸಂಪುಟ ಪುನಾರಚನೆ ಖಚಿತವೆನ್ನಲಾಗುತ್ತಿದೆ. ಹಾಲಿ ಸಚಿವ ಸಂಪುಟದ 12 ಮಂದಿಯನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಖಾಲಿ ಇದ್ದಂತ 2 ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಸಿದ್ಧರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಕಾಂಗ್ರೆಸ್ ಉನ್ನತ ಮೂಲಗಳಂತೆ ಹಾಲಿ 12 ಸಚಿವರಿಗೆ ಕೋಕ್ ಕೊಟ್ಟು, ಹೊಸಬರಿಗೆ ಅವಕಾಶವನ್ನು ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಒಂದು ವೇಳೆ ಇನ್ನೂ ಹೆಚ್ಚಿನ ಸಚಿವರಿಗೆ ಗೇಟ್ ಪಾಸ್ ನೀಡಿ ಅಂದ್ರೆ ಅದಕ್ಕೂ ಸಿಎಂ ಸಿದ್ಧರಾಮಯ್ಯ ಪ್ಲಾನ್ 2 ರೆಡಿ ಮಾಡಿಟ್ಟುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಹಾಗಾದ್ರೇ ಯಾರು ಔಟ್..? ಯಾರು ಇನ್ ಎನ್ನುವ ಸಂಭಾವ್ಯ ಪಟ್ಟಿ ಮುಂದಿದೆ ನೋಡಿ..
ಸಿಎಂ ಸಿದ್ಧರಾಮಯ್ಯ ಸಂಪುಟದಿಂದ ಯಾರೆಲ್ಲ ಔಟ್?
- ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರೀಕ ಸರಬರಾಜು (ದೇವನಹಳ್ಳಿ)
- ದಿನೇಶ್ ಗುಂಡೂರಾವ್- ಆರೋಗ್ಯ ಸಚಿವ (ಗಾಂಧಿನಗರ)
- ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ( ಟಿ.ನರಸೀಪುರ)
- ಶರಣಬಸ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ (ಶಹಾಪುರ್)
- ಎನ್.ಎಸ್.ಬೋಸರಾಜು- ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ (ವಿಧಾನ ಪರಿಷತ್)
- ಡಾ.ಎಂ.ಸಿ.ಸುಧಾಕರ- ಉನ್ನತ ಶಿಕ್ಷಣ ಸಚಿವ(ಚಿಂತಾಮಣಿ)
- ಶಿವಾನಂದ ಪಾಟೀಲ್- ಸಕ್ಕರೆ ಮತ್ತು ಜವಳಿ(ಬಸವನ ಬಾಗೇವಾಡಿ)
- ರಹೀಂಖಾನ್- ಪೌರಾಡಳಿತ(ಬೀದರ್)
- ಎಸ್.ಎಸ್.ಮಲ್ಲಿಕಾರ್ಜುನ- ತೋಟಗಾರಿಕೆ ಮತ್ತ ಗಣಿ (ದಾವಣಗೆರೆ)
- ಆರ್.ಬಿ.ತಿಮ್ಮಾಪುರ್- ಅಬಕಾರಿ (ಮುದೋಳ)
- ಕೆ.ವೆಂಕಟೇಶ್- ಪಶು ಸಂಗೋಪನೆ(ಪಿರಿಯ ಪಟ್ಟಣ)
- ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ (ಹಿರಿಯೂರು)
ಸಿಎಂ ಸಿದ್ಧರಾಮಯ್ಯ ಸಂಪುಟಕ್ಕೆ ಹೊಸದಾಗಿ ಯಾರೆಲ್ಲ ಶಾಸಕರು ಇನ್?
- ಯು.ಟಿ.ಖಾದರ್ – ವಿಧಾನಸಭೆ ಸ್ಪೀಕರ್
- ಕೆ.ಎನ್.ರಾಜಣ್ಣ – ಮಧುಗಿರಿ ಶಾಸಕ
- ಆರ್.ವಿ.ದೇಶಪಾಂಡೆ – ಹಳಿಯಾಳ ಶಾಸಕ
- ಬಿ.ಕೆ.ಹರಿಪ್ರಸಾದ್ – ವಿಧಾನ ಪರಿಷತ್ ಸದಸ್ಯ
- ಎಂ.ಕೃಷ್ಣಪ್ಪ – ವಿಜಯನಗರ ಶಾಸಕ
- ತನ್ವೀರ್ಸೇಠ್ – ನರಸಿಂಹರಾಜ ಶಾಸಕ
- ಸಲೀಂ ಅಹಮದ್ – ವಿಧಾನ ಪರಿಷತ್ ಸದಸ್ಯ
- ರಿಜ್ವಾನ್ ಅರ್ಷದ್ – ಶಿವಾಜಿನಗರ ಶಾಸಕ
- ಮಾಗಡಿ ಬಾಲಕೃಷ್ಣ – ಮಾಗಡಿ ಶಾಸಕ
- ಎನ್.ಎ.ಹ್ಯಾರಿಸ್ – ಶಾಸಕ
- ರೂಪಕಲಾ ಶಶಿಧರ್ – ಶಾಸಕಿ
- ಗೋಪಾಲಕೃಷ್ಣ ಬೇಳೂರು- ಸಾಗರ ಶಾಸಕ
Cricket news: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲು
SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!








