Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪಂಚಭೂತಗಳಲ್ಲಿ ಸಾಹಿತಿ `ಎಸ್.ಎಲ್.ಭೈರಪ್ಪ’ ಲೀನ : ಕರುನಾಡಿನ `ಸಾಹಿತ್ಯ ದಂತಕಥೆ’ ಇನ್ನೂ ನೆನಪು ಮಾತ್ರ.!

26/09/2025 12:33 PM

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ, `ಯಾನ’ ಮಾಂತ್ರಿಕ ಇನ್ನೂ ನೆನಪು ಮಾತ್ರ.!

26/09/2025 12:32 PM

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | S. L. Bhyrappa

26/09/2025 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ, `ಯಾನ’ ಮಾಂತ್ರಿಕ ಇನ್ನೂ ನೆನಪು ಮಾತ್ರ.!
KARNATAKA

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ, `ಯಾನ’ ಮಾಂತ್ರಿಕ ಇನ್ನೂ ನೆನಪು ಮಾತ್ರ.!

By kannadanewsnow5726/09/2025 12:32 PM

ಮೈಸೂರು : ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು, ಇಂದು ಪಂಚಭೂತಗಳಲ್ಲಿ ಲೀನವಾದರು. ಮೈಸೂರು ಬೆಟ್ಟದ ತಪ್ಪಲಿನಲ್ಲಿರುವ ಚಿರಶಾಂತಿಧಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಲಂಡನ್ನಿಂದ ಆಗಮಿಸಿದ್ದ ಅವರ ಪುತ್ರ ರವಿಶಂಕರ್ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು.

ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದೆ.
ಡಾ.ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರ ಗುರುವಾರ ಮೈಸೂರಿಗೆ ತರಲಾಗಿತ್ತು. ನಗರದ ಕಲಾ ಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದುಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.

ಎಸ್.ಎಲ್ ಭೈರಪ್ಪ ಅವರ ಕುರಿತು…

ಎಸ್.ಎಲ್ ಭೈರಪ್ಪ ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಲ್ಲಿ ಜನಿಸಿದರು. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂಬುದು ಎಸ್‌.ಎಲ್. ಬೈರಪ್ಪ ಅವರ ಪೂರ್ಣ ಹೆಸರು. ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಭೈರಪ್ಪ ಅವರು ಜನಿಸುತ್ತಾರೆ. ಎಸ್ ಎಲ್ ಭೈರಪ್ಪ ಪ್ರಸಿದ್ಧ ಕಾದಂಬರಿಕಾರ ತತ್ವಜ್ಞಾನಿ ಲೇಖಕರಾಗಿದ್ದರು. 1958 ರಲ್ಲಿ ಎಂ ಎ ಫಿಲಾಸಫಿ ಪಡೆದಿದ್ದರು.1963 ರಲ್ಲಿ ಕ್ಷೇತ್ರದಲ್ಲಿ ಪಿಎಚ್ ಡಿ ಮಾಡಿದ್ದರು.

ಭೈರಪ್ಪ ಅವರ ಕೃತಿಗಳು ಕರ್ನಾಟಕ ರಾಜ್ಯದಲ್ಲಿ ಜನಪ್ರಿಯವಾಗಿವೆ ಮತ್ತು ಅವರನ್ನು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. 2023ರಲ್ಲಿ ಎಸ್‌ಎಲ್ ಭೈರಪ್ಪ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ತಮ್ಮ ಸ್ವಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ಕೂಡ ಶ್ರಮಿಸಿದ್ದರು. ಬಾಲ್ಯದಲ್ಲಿ ಕಷ್ಟದಲ್ಲೇ ಬೆಳೆದು ವಿದ್ಯಾಭ್ಯಾಸ ಮಾಡಿದ್ದರು. ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದರು. ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಓದುಗ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದ್ರೆ, ಜ್ಞಾನಪೀಠ ಪ್ರಶಸ್ತಿಗೆ ಪರ್ಯಾಯವಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಭೈರಪ್ಪ ಅವರಿಗೆ ಬಂದಿತ್ತು.

ತತ್ವಶಾಸ್ತ್ರ, ಇತಿಹಾಸ, ವಿದ್ಯಾಭ್ಯಾಸ ಸಂಸ್ಕೃತಿ, ಮಾನವೀಯ ಸಂವೇದನೆಗೆ ಸಂಬಂಧಿಸಿದ ಬರಹಗಳಿಗೆ ಹೆಸರುವಾಸಿಯಾಗಿದ್ದರು. ಭೈರಪ್ಪ ಅವರು ಕಾದಂಬರಿಗಳಲ್ಲದೆ ಸೌಂದರ್ಯಮೀಮಾಂಸೆ, ತತ್ವಶಾಸ್ತ್ರದ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಪ್ರಮುಖ ಕೃತಿಗಳೆಂದರೇ, ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು, ಮತದಾನ ಮುಂತಾದವು ಅವರ ಕಾದಂಬರಿಗಳಾಗಿವೆ.

ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ

ಬೈರಪ್ಪ ಅವರಿಗೆ ಬಂದ ಪದವಿಗಳು ಮತ್ತು ಪ್ರಶಸ್ತಿಗಳು ಅಂದರೇ, ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ವಿಶೇಷತೆ ಅಂದರೆ, ಭೈರಪ್ಪನವರ ಕಾದಂಬರಿಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅನೇಕ ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿವೆ.

ಪ್ಲೇಗ್ ರೋಗಕ್ಕೆ ತುತ್ತಾಗಿದ್ದ ತಮ್ಮನ ಶವವನ್ನು, ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿದ್ದ ಎಸ್.ಎಲ್ ಭೈರಪ್ಪ…!

ಎಸ್.ಎಲ್ ಭೈರಪ್ಪ ಅವರ ಬಾಲ್ಯದ ಕುರಿತು ಹೇಳಬೇಕೆಂದರೆ ಅವರ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಆಗಿನ ಕಾಲದಲ್ಲಿ ಭೈರಪ್ಪನವರು ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತಾಗಿದ್ದರು. ಆದರೆ ಹೇಗೋ ಇದರಿಂದ ಪಾರಾಗಿದ್ದರೂ ಅವರ ಕುಟುಂಬ ಸದಸ್ಯರು ಪ್ಲೇಗ್‌ ಬಲಿಯಾಗಿದ್ದರು. ಅವರ ತಾಯಿ ಪ್ಲೇಗ್‌ಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಅವರ ಅಣ್ಣ, ಅಕ್ಕ ಪ್ಲೇಗ್‌ ಬಂದು ಒಂದೇ ದಿವಸ ಒಂದು ಗಂಟೆಯ ಒಳಗಡೆ ಮೃತಪಟ್ಟರು.

ತಾಯಿ ಮೃತಪಟ್ಟು 3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವನ್ನಪ್ಪಿದ್ದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು ಬಂದಿದ್ದೆ. ನನಗೂ ಪ್ಲೇಗ್‌ ಬಂದಿತ್ತು. ಆದರೆ ನನು ಹೇಗೂ ಪಾರಾಗಿದ್ದೆ ಎಂದು ಹೇಳಿದ್ದರು.ಶಾಲೆ ಓದುವ ಸಮಯದಲ್ಲಿ ಭೈರಪ್ಪ ಅವರ ತಾಯಿ ಇವರನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸ್ಥಳೀಯ ದೇವಾಲಯದಲ್ಲಿ ಸೋದರ ಮಾವ ಅರ್ಚಕರಾಗಿದ್ದರು.

ಸ್ವತಃ ಭೈರಪ್ಪ ಅವರೇ ಹೇಳಿಕೊಂಡಿದ್ದ ಹಾಗೆ ಸೋದರ ಮಾವನ ಮನೆಯಲ್ಲಿದ್ದ ದಿನಗಳು ಅತ್ಯಂತ ಕಷ್ಟವಾಗಿದ್ದವು. ಆತನ ಬೈಗುಳಗಳಿಂದ ನಾನು ಹೆದರಿ ಹೋಗಿದ್ದೆ ಎಂದು ತಮ್ಮ ಆತ್ಮಚರಿತ್ರೆ ʼಭಿತ್ತಿʼಯಲ್ಲಿ ಬರೆದಿದ್ದಾರೆ. ತಮ್ಮ ಪ್ಲೇಗ್‌ನಿಂದ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಯಾರೂ ಸಹಾಯ ಮಾಡಿರಲಿಲ್ಲ. ಆಗ ಭೈರಪ್ಪ ಅವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಬಂದಿದ್ದರು.

ಎಸ್.ಎಲ್. ಭೈರಪ್ಪನವರ ಕಾದಂಬರಿಗಳು

ಗಾಥಾ ಜನ್ಮ ಮಾತೆರಡು ಕಥೆಗಳು (1955)
ಭೀಮಕಾಯ (1958)
ಧರ್ಮಶ್ರೀ (1961)
ದೂರ ಸರಿದರು (1962)
ಮಾತಾಡನಾ (1965)
ವಂಶವೃಕ್ಷ (1965)
ಜಲಪಾತ (1967)
ನಾಯಿ ನೇರಲು (1968)
ತಬ್ಬಲಿಯು ನೀನಾದೆ ಮಗನೆ (1968)
ಗೃಹಭಂಗ (1970)
ನಿರಾಕರಣ (1971)
ಗ್ರಹಾನಾ (1972)
ದಾತು (1972)
ಅನ್ವೇಷಣೆ (1976)
ಪರ್ವ (1979)
ನೆಲೆ (1983)
ಸಾಕ್ಷಿ (1986)
ಅಂಚು (1990)
ತಂತು (1993)
ಸಾರ್ಥ (1998)
ಮಂದ್ರ (2001)
ಆವರಣ (2007)
ಕವಲು (2010)
Yaana (2014)
ಉತ್ತರಕಾಂಡ (2017)

ಆತ್ಮಚರಿತ್ರೆ:

ಭಿಟ್ಟಿ (1996, ಮರುಮುದ್ರಣ:1997, 2000, 2006)

ತತ್ವಶಾಸ್ತ್ರ:

ಸತ್ಯ ಮಟ್ಟು ಸೌಂದರ್ಯ (1966) (ಡಾಕ್ಟರೇಟ್ ಪ್ರಬಂಧ)
ಸಾಹಿತ್ಯ ಮಟ್ಟು ಪ್ರತೀಕಾ (1967)
ಕಥೆ ಮಟ್ಟು ಕಥಾವಸ್ತು (1969)
ನಾನೇಕೆ ಬರೆಯುತ್ತೇನೆ? (1980)
ಸಂದರ್ಭ: ಸಂವಾದ (2011)

BREAKING: Writer `S.L. Bhairappa' is immersed in the five elements the magic of `Yana' is still just a memory!
Share. Facebook Twitter LinkedIn WhatsApp Email

Related Posts

BREAKING : ಪಂಚಭೂತಗಳಲ್ಲಿ ಸಾಹಿತಿ `ಎಸ್.ಎಲ್.ಭೈರಪ್ಪ’ ಲೀನ : ಕರುನಾಡಿನ `ಸಾಹಿತ್ಯ ದಂತಕಥೆ’ ಇನ್ನೂ ನೆನಪು ಮಾತ್ರ.!

26/09/2025 12:33 PM3 Mins Read

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | S. L. Bhyrappa

26/09/2025 12:31 PM3 Mins Read

ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಲಿಸಾ ಕೈಟ್ಲಿ ನೇಮಕ

26/09/2025 12:21 PM2 Mins Read
Recent News

BREAKING : ಪಂಚಭೂತಗಳಲ್ಲಿ ಸಾಹಿತಿ `ಎಸ್.ಎಲ್.ಭೈರಪ್ಪ’ ಲೀನ : ಕರುನಾಡಿನ `ಸಾಹಿತ್ಯ ದಂತಕಥೆ’ ಇನ್ನೂ ನೆನಪು ಮಾತ್ರ.!

26/09/2025 12:33 PM

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ, `ಯಾನ’ ಮಾಂತ್ರಿಕ ಇನ್ನೂ ನೆನಪು ಮಾತ್ರ.!

26/09/2025 12:32 PM

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | S. L. Bhyrappa

26/09/2025 12:31 PM

ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಲಿಸಾ ಕೈಟ್ಲಿ ನೇಮಕ

26/09/2025 12:21 PM
State News
KARNATAKA

BREAKING : ಪಂಚಭೂತಗಳಲ್ಲಿ ಸಾಹಿತಿ `ಎಸ್.ಎಲ್.ಭೈರಪ್ಪ’ ಲೀನ : ಕರುನಾಡಿನ `ಸಾಹಿತ್ಯ ದಂತಕಥೆ’ ಇನ್ನೂ ನೆನಪು ಮಾತ್ರ.!

By kannadanewsnow0526/09/2025 12:33 PM KARNATAKA 3 Mins Read

ವರದಿ : ಸುರೇಶ್ ಹಾಸಿಲ್ಕರ್ ಮೈಸೂರು : ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್…

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ, `ಯಾನ’ ಮಾಂತ್ರಿಕ ಇನ್ನೂ ನೆನಪು ಮಾತ್ರ.!

26/09/2025 12:32 PM

BREAKING : ಹಿರಿಯ ಸಾಹಿತಿ `ಎಸ್.ಎಲ್.ಭೈರಪ್ಪ’ ಪಂಚಭೂತಗಳಲ್ಲಿ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | S. L. Bhyrappa

26/09/2025 12:31 PM

ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಲಿಸಾ ಕೈಟ್ಲಿ ನೇಮಕ

26/09/2025 12:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.