Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC ಮಹಿಳಾ ಕ್ರಿಕೆಟ್ ವಿಶ್ವಕಪ್ 2025: ಟೂರ್ನಿಯ ಮೊದಲ 13 ಪಂದ್ಯಗಳ ನಂತರ ದಾಖಲೆಯ ವೀಕ್ಷಣೆ

17/10/2025 10:26 AM

ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ : ವಿಚಾರಣೆಯಲ್ಲಿ ಬಯಲಾಯ್ತು ವೈದ್ಯ ಪತಿಯ ಹೇಯ ಕೃತ್ಯ!

17/10/2025 10:18 AM

BREAKING : ರಾಜ್ಯದಲ್ಲಿ ಮಹಿಳೆಯರು, ಅಪ್ರಾಪ್ತೆಯರ ಮೇಲೆ ದೌರ್ಜನ್ಯ ಹೆಚ್ಚಳ : ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆರ್. ಅಶೋಕ್ ಪತ್ರ.!

17/10/2025 10:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲೆಚುಕ್ಕಿ, ಅಡಿಕೆ ಕೊಳೆ ರೋಗ ರೈತರ ಬದುಕನ್ನು ಕಸಿಯುತ್ತಿದೆ: ಶಾಸಕ ಗೋಪಾಲಕೃಷ್ಣ ಬೇಳೂರು ಕಳವಳ
KARNATAKA

ಎಲೆಚುಕ್ಕಿ, ಅಡಿಕೆ ಕೊಳೆ ರೋಗ ರೈತರ ಬದುಕನ್ನು ಕಸಿಯುತ್ತಿದೆ: ಶಾಸಕ ಗೋಪಾಲಕೃಷ್ಣ ಬೇಳೂರು ಕಳವಳ

By kannadanewsnow0923/09/2025 8:26 PM

ಶಿವಮೊಗ್ಗ : ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ 13 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡಿನ ಭಾಗದಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಹಾಗೂ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಉಂಟಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಎತ್ತರಕ್ಕೆ ಬೆಳೆಯಬೇಕಾದ ಮರಗಳು ಈ ರೋಗದಿಂದ ನೆಲಕಚ್ಚುತ್ತಿವೆ. ಹಾಗಾಗಿ ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಚರ್ಚಿಸಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಔಷಧಿಯನ್ನು ಕಂಡುಹಿಡಿಯಬೇಕು. ಇದರಿಂದ ರೈತರ ಬದುಕಿಗೆ ಅನುಕೂಲಕವಾಗುತ್ತದೆ ಎಂದು ಹೇಳಿದರು.

ರೈತರು ಪ್ರಗತಿಯಾದಾಗ ಮಾತ್ರ ಈ ದೇಶ ಪ್ರಗತಿಯಾಗುವುದು. ಆದ್ದರಿಂದ ರೈತರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದರಿಂದ ಅವರ ಆದಾಯವೂ ಕೂಡ ಹೆಚ್ಚಾಗುತ್ತದೆ. ಆದರೆ ಇತ್ತೀಚಿಗೆ ಕೃಷಿ ವಲಯವು ಸಾಕಷ್ಟು ನಷ್ಟಕ್ಕೀಡಾಗಿದ್ದು, ಉತ್ಪಾದನೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಹಾಗಾಗಿ ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅವಳಡಿಸಿಕೊಳ್ಳಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಇಲಾಖೆಗಳು ವಿಶ್ವವಿದ್ಯಾಲಯದ ಮೂಲಕ ಹಲವಾರು ಯೋಜನೆಗಳನ್ನು ರೈತರಿಗೆ ತಲುಪಿಸುವಂತಹ ಕಾರ್ಯ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದು, ಯಾವುದೇ ನಷ್ಟ ಅನುಭವಿಸದೆ ಕೃಷಿ ಉತ್ಪನ್ನಗಳನ್ನು ಬೆಳೆಯಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ರೈತರು ಇಂತಹ ಕಾರ್ಯಸಾಧನೆ ಮಾಡಲು ವಿಶ್ವವಿದ್ಯಾಲಯಗಳು, ಇಲ್ಲಿನ ವಿಜ್ಞಾನಿಗಳು ಕೂಡ ಸಹಕಾರ ನೀಡಬೇಕು ಎಂದರು.

 ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಎಸ್.ಹೂವಯ್ಯ ಗೌಡ ಮಾತನಾಡಿ, ಒಂದು ಸಂಸ್ಥೆಯ ಪ್ರಾರಂಭ, ಅದರ ಬೆಳವಣಿಗೆ, ಅದು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸಲು ಇಂತಹ ಸಂಸ್ಥಾಪನಾ ದಿನ ಆಚರಣೆ ಮಾಡಲಾಗುತ್ತದೆ. ಅದರಂತೆ ಕೆಳದಿ ಶಿವಪ್ಪನಾಯಕರ ಹೆಸರು ಪಡೆದಿರುವ ವಿಶ್ವವಿದ್ಯಾಲಯವು ತನ್ನದೇ ಆದ ಅನೇಕ ಸಾಧನೆಗಳನ್ನು ಜನರಿಗೆ ತಿಳಿಸುವ ದಿಸೆಯಲ್ಲಿ ಈ ಆಚರಣೆ ಮಾಡಿಕೊಳ್ಳುತ್ತಿದೆ.

 ಶಿಸ್ತಿಗೆ ಇನ್ನೊಂದು ಹೆಸರೇ ಶಿವಪ್ಪನಾಯಕ. ಅವರ ಆಡಳಿತ ಅವಧಿಯಲ್ಲಿ ಅವರು ವಿಧಿಸಿದ ಕಂದಾಯ ತೆರಿಗೆ ವೈಜ್ಞಾನಿಕತೆಯಿಂದ ಕೂಡಿತ್ತು. ಹಾಗಾಗಿ ಈಗಲೂ ಶಿವಪ್ಪನಾಯಕರ ತೆರಿಗೆ ನೀತಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಮೂಲಕ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ವಿಜ್ಞಾನದ ವಿದ್ಯಾರ್ಥಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಸ್ವಾಮಿನಾಥನ್, ವರ್ಗೀಸ್‌ರಂತಹ ವಿಜ್ಞಾನಿಗಳ ಆಹಾರ ಕ್ರಾಂತಿ, ಹಸಿರು ಕ್ರಾಂತಿಗಳ ಮೂಲಕ ರೈತರಿಗೆ ಸಹಕಾರಿಯಾಗಿದ್ದಾರೆ. ನೀವುಗಳು ಇಂತಹ ಮಾರ್ಗದಲ್ಲಿ ಸಾಗಬೇಕು. ವಿಜ್ಞಾನದಲ್ಲಿ ಮಿತಿಯಿಲ್ಲದಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷ ನುಡಿಗಳನ್ನಾಡಿದರು.

ಈ ವೇಳೆ ವಿಶ್ವವಿದ್ಯಾಲಯದ ಅತ್ಯುತ್ತಮ ಶಿಕ್ಷಕ, ಸಂಶೋಧಕ, ವಿಸ್ತರಣಾ ವಿಜ್ಞಾನಿ ಹಾಗೂ ಬಾಹ್ಯ ಅನುದಾನಿ ಯೋಜನೆಗಳನ್ನು ಪಡೆದ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರದಲ್ಲಿ ಕುಲಸಚಿವ ಡಾ.ಜಿ.ಕೆ.ಗಿರಿಜೇಶ್, ಪ್ರಗತಿಪರ ರೈತರುಗಳು, ಕೃಷಿ ಉದ್ದಿಮೆದಾರರು, ವಿವಿಧ ಕೃಷಿ ಕಾಲೇಜಿನ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

BREAKING: ರಾಜ್ಯ ಸರ್ಕಾರದಿಂದ ಅಧಿಕಾರಿಗಳ ‘ವಿದೇಶ ಪ್ರವಾಸ ನಿರ್ಬಂಧಿಸಿ’ ಆದೇಶ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಸೆ.29ರವರೆಗೆ ಭಾರಿ ಮಳೆ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ : ವಿಚಾರಣೆಯಲ್ಲಿ ಬಯಲಾಯ್ತು ವೈದ್ಯ ಪತಿಯ ಹೇಯ ಕೃತ್ಯ!

17/10/2025 10:18 AM1 Min Read

BREAKING : ರಾಜ್ಯದಲ್ಲಿ ಮಹಿಳೆಯರು, ಅಪ್ರಾಪ್ತೆಯರ ಮೇಲೆ ದೌರ್ಜನ್ಯ ಹೆಚ್ಚಳ : ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆರ್. ಅಶೋಕ್ ಪತ್ರ.!

17/10/2025 10:04 AM1 Min Read

BREAKING : ಬೆಂಗಳೂರಿನ ಕಾಲೇಜಿನಲ್ಲೇ `ಸೀನಿಯರ್ ವಿದ್ಯಾರ್ಥಿನಿ’ ಮೇಲೆ ರೇಪ್: ಜೂನಿಯರ್ ವಿದ್ಯಾರ್ಥಿ ಅರೆಸ್ಟ್.!

17/10/2025 9:56 AM1 Min Read
Recent News

ICC ಮಹಿಳಾ ಕ್ರಿಕೆಟ್ ವಿಶ್ವಕಪ್ 2025: ಟೂರ್ನಿಯ ಮೊದಲ 13 ಪಂದ್ಯಗಳ ನಂತರ ದಾಖಲೆಯ ವೀಕ್ಷಣೆ

17/10/2025 10:26 AM

ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ : ವಿಚಾರಣೆಯಲ್ಲಿ ಬಯಲಾಯ್ತು ವೈದ್ಯ ಪತಿಯ ಹೇಯ ಕೃತ್ಯ!

17/10/2025 10:18 AM

BREAKING : ರಾಜ್ಯದಲ್ಲಿ ಮಹಿಳೆಯರು, ಅಪ್ರಾಪ್ತೆಯರ ಮೇಲೆ ದೌರ್ಜನ್ಯ ಹೆಚ್ಚಳ : ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆರ್. ಅಶೋಕ್ ಪತ್ರ.!

17/10/2025 10:04 AM

BREAKING : ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ

17/10/2025 10:03 AM
State News
KARNATAKA

ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ : ವಿಚಾರಣೆಯಲ್ಲಿ ಬಯಲಾಯ್ತು ವೈದ್ಯ ಪತಿಯ ಹೇಯ ಕೃತ್ಯ!

By kannadanewsnow0517/10/2025 10:18 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ವೈದ್ಯ ಪತಿಯಿಂದಲೇ ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರತಿದೆ. ಸಿನಿಮಾ ಸ್ಟೈಲ್…

BREAKING : ರಾಜ್ಯದಲ್ಲಿ ಮಹಿಳೆಯರು, ಅಪ್ರಾಪ್ತೆಯರ ಮೇಲೆ ದೌರ್ಜನ್ಯ ಹೆಚ್ಚಳ : ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆರ್. ಅಶೋಕ್ ಪತ್ರ.!

17/10/2025 10:04 AM

BREAKING : ಬೆಂಗಳೂರಿನ ಕಾಲೇಜಿನಲ್ಲೇ `ಸೀನಿಯರ್ ವಿದ್ಯಾರ್ಥಿನಿ’ ಮೇಲೆ ರೇಪ್: ಜೂನಿಯರ್ ವಿದ್ಯಾರ್ಥಿ ಅರೆಸ್ಟ್.!

17/10/2025 9:56 AM

SHOCKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಕಾಲೇಜಿನ ವಾಶ್ ರೂಂಗೆ ಎಳೆದೋಯ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

17/10/2025 9:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.