Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

20/09/2025 6:57 PM

BREAKING : ಸೂಪರ್ ಸ್ಟಾರ್ ‘ಮೋಹನ್ ಲಾಲ್’ಗೆ ಒಲಿದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’

20/09/2025 6:57 PM

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ
KARNATAKA

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

By kannadanewsnow0920/09/2025 6:54 PM

ಬೆಂಗಳೂರು: ಯಾವುದೇ ಸರ್ಕಾರಗಳು ಬರಲಿ ಕೃಷಿ ಅಧಿಕಾರಿಗಳು ಪ್ರಾಮಾಣಿಕವಾಗಿ ರೈತರ ಪರವಾದ ಕೆಲಸಗಳನ್ನು ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

ಕೃಷಿ ಆಯುಕ್ತಾಲಯದಲ್ಲಿರುವ ಸಂಗಮ ಸಂಭಾಗಣದಲ್ಲಿ, NABL ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮತನಾಡಿದ ಸಚಿವರು, ಕೃಷಿ ಇಲಾಖೆಯ ಯೋಜನೆಗಳು ರೈತರಿಗೆ ತಲುಪಬೇಕು, ಇದಕ್ಕಾಗಿ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಉತ್ತಮ ಫಲಿತಾಂಶ ಹೊರಬರಲಿದೆ ಎಂದು ಸಚಿವರು ತಿಳಿಸಿದರು..

ಕೃಷಿ ಇಲಾಖೆಯ 29, ತೋಟಗಾರಿಕೆ ಇಲಾಖೆಯ 6, ರೇಷ್ಮೆ ಇಲಾಖೆಯ 1, ಕೃಷಿ ವಿಶ್ವವಿದ್ಯಾಲಯಗಳ 3 ಮತ್ತು ಕೃಷಿ ವಿಜ್ಞಾನ ಕೇಂದ್ರಗಳ 5 ಮಣ್ಣು ಪರೀಕ್ಷಾ ಪ್ರಯೋಗಾಲಗಳು ಸೇರಿ ಒಟ್ಟು 44 ಮಣ್ಣು ಪರೀಕ್ಷಾ ಪ್ರಯೋಗಾಲಯಗಳು NABL Recognition ಪಡೆದಿರುವುದಕ್ಕೆ ಸಚಿವರು ಅಭಿನಂದನೆ ತಿಳಿಸಿದರು.‌

ಅಲ್ಲದೆ, ಕೃಷಿ ಇಲಾಖೆಯ 6 ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಗಳು, 2 ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ 1 ಬೀಜ ಪರೀಕ್ಷಾ ಪ್ರಯೋಗಾಲಯ ಸೇರಿ 9 ಪ್ರಯೋಗಾಲಯಗಳು NABL Accreditation ಪಡೆದಿರುತ್ತವೆ. ಈ ಹಿನ್ನಲೆಯಲ್ಲಿ, NABL ಸಹಯೋಗದೊಂದಿಗೆ “NABL ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳ ಅಧಿಕಾರಿಗಳಿಗೆ ಸಚಿವರು ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಿದರು..

ಕಾರ್ಯಕ್ರಮದಲ್ಲಿ NABL ಮಾನ್ಯತೆ ಪಡೆದ ವಿವಿಧ 53 ಪ್ರಯೋಗಾಲಯಗಳನ್ನು ಸನ್ಮಾನಿಸುವ ಜೊತೆಗೆ ಇತರೆ ಪ್ರಯೋಗಾಲಯಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ನಡೆಸಲಾಯಿತು.

ಕೃಷಿ ಸಚಿವರು ಎಲ್ಲಾ NABL ಮಾನ್ಯತೆ ಪಡೆದ ಪ್ರಯೋಗಾಲಯಗಳನ್ನು ಅಭಿನಂದಿಸುತ್ತಾ, ರಾಜ್ಯದ ರೈತರ ಏಳಿಗೆಗೆ ಗುಣಮಟ್ಟದ ಪರಿಕ್ಷಾ ಫಲಿತಾಂಶ ನೀಡುವಲ್ಲಿ ಮತ್ತು ಗುಣಮಟ್ಟವನ್ನು Lab to Land ಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಕಾರ್ಯ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದು, ಈ ನಿಟ್ಟಿನಲ್ಲಿ “NABL ಮಾನ್ಯತೆ” ಅತ್ಯಂತ ಅವಶ್ಯವಾಗಿರುತ್ತದೆ ಎಂದು ತಿಳಿಸಿದರು..

NABL ಮಾನ್ಯತೆ ಪಡೆಯುವಲ್ಲಿ ಶ್ರಮಿಸಿದ ಎಲ್ಲಾ ಹಂತದ ಇಲಾಖಾ ಅಧಿಕಾರಿಗಳು/ ಸಿಬ್ಬಂದಿಗಳ ಪ್ರಯತ್ನ ಪ್ರಶಂಸನೀಯ ಎಂದು ಇದೇ ವೇಳೆ ಸಚಿವರು ತಿಳಿಸಿದರು..

NABL ಎಂದರೆ?

National Accreditation Board for Testing and Calibration Laboratories, ಈ ಸಂಸ್ಥೆಯ ಪ್ರಯೋಗಾಲಯಗಳ ಪರೀಕ್ಷೆ, ಮಾಪನಾಂಕ ನಿರ್ಣಯ ಮತ್ತು ಇತರ ತಾಂತ್ರಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ನಿರ್ಣಯಿಸುವುದು ಮತ್ತು ಗುರುತಿಸುವುದು ಪ್ರಮುಖ ಉದ್ದೇಶ ಆಗಿರುತ್ತದೆ. NABL ಮಾನ್ಯತೆ ಪ್ರಕ್ರಿಯೆಯು ಕಠಿಣ ಮೌಲ್ಯಮಾಪನಗಳನ್ನು ಒಳಗೊಂಡಿದ್ದು, ಪ್ರಯೋಗಾಲಯಗಳು ನಿರಂತರ ವಿಶ್ವಾಸ ಮತ್ತು ನಿಖರವಾದ ಫಲಿತಾಂಶ ನೀಡುವುದನ್ನು ಎಂದು ಖಚಿತಪಡಿಸುತ್ತವೆ. NABL ಮಾನ್ಯತೆ ಪಡೆದ ಪ್ರಯೋಗಾಲಯಗಳು ಅಂತರ ರಾಷ್ಟ್ರೀಯ ಮಾನದಂಡಗಳನ್ನೊಳಗೊಂಡಂತೆ ನಿಖರ ಹಾಗೂ ವಿಶ್ವಾಸಾರ್ಹವಾಗಿರುತ್ತವೆ.

NABL ಮಾನದಂಡಗಳಿಗೆ ಅನುಗುಣವಾಗಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಇತರೆ ಇಲಾಖೆಗಳ ಪ್ರಯೋಗಾಲಯಗಳನ್ನು ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(RKVY), SMSP ಹಾಗೂ ರಾಜ್ಯ ವಲಯ ಯೋಜನೆಗಳಡಿ ಅನುದಾನ ಒದಗಿಸಿ ಬಲವರ್ಧನೆಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, NABL ಸಿಇಒ ವೆಂಕಟೇಶ್ವರನ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ. ಜಿ‌.ಟಿ.ಪುತ್ರ, ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ, ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು‌‌‌.

ಬೆಂಗಳೂರಲ್ಲಿ ಈವರೆಗೆ 7,000 ಗುಂಡಿ ಮುಚ್ಚಿದ್ದು, 5,000 ಬಾಕಿ ಇವೆ: ಡಿಸಿಎಂ ಡಿ.ಕೆ ಶಿವಕುಮಾರ್

19 ವರ್ಷದ ಯುವಕನನ್ನು ಮದುವೆಯಾದ 19 ವರ್ಷದ ಯುವತಿ ವಿರುದ್ಧ ಕೇಸ್ ದಾಖಲು

Share. Facebook Twitter LinkedIn WhatsApp Email

Related Posts

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

20/09/2025 6:57 PM3 Mins Read

ಬೆಂಗಳೂರಲ್ಲಿ ಈವರೆಗೆ 7,000 ಗುಂಡಿ ಮುಚ್ಚಿದ್ದು, 5,000 ಬಾಕಿ ಇವೆ: ಡಿಸಿಎಂ ಡಿ.ಕೆ ಶಿವಕುಮಾರ್

20/09/2025 6:17 PM1 Min Read

ರಾಜ್ಯದಲ್ಲಿ ‘ಪ್ರವಾಸಿ ಮಿತ್ರ ಯೋಜನೆ’ಯಿಂದ ‘50,000 ಉದ್ಯೋಗ’ ಸೃಷ್ಟಿ: ಸಿಎಂ ಸಿದ್ಧರಾಮಯ್ಯ

20/09/2025 5:59 PM1 Min Read
Recent News

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

20/09/2025 6:57 PM

BREAKING : ಸೂಪರ್ ಸ್ಟಾರ್ ‘ಮೋಹನ್ ಲಾಲ್’ಗೆ ಒಲಿದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’

20/09/2025 6:57 PM

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM

BREAKING : ಮಲಯಾಳಂ ಸೂಪರ್ ಸ್ಟಾರ್ ‘ಮೋಹನ್ ಲಾಲ್’ಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಘೋಷಣೆ

20/09/2025 6:34 PM
State News
KARNATAKA

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

By kannadanewsnow0920/09/2025 6:57 PM KARNATAKA 3 Mins Read

ನಾಳೆ, ಭಾನುವಾರ, ಸೆಪ್ಟೆಂಬರ್ 21, 2025, ಮಹಾಲಯ ಅಮಾವಾಸ್ಯೆ ದಿನ. ಈ ದಿನದಂದು, ಪೂರ್ವಜರನ್ನು ಪೂಜಿಸುವುದು, ಅವರಿಗೆ ತಿಥಿ ತರ್ಪಣ…

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM

ಬೆಂಗಳೂರಲ್ಲಿ ಈವರೆಗೆ 7,000 ಗುಂಡಿ ಮುಚ್ಚಿದ್ದು, 5,000 ಬಾಕಿ ಇವೆ: ಡಿಸಿಎಂ ಡಿ.ಕೆ ಶಿವಕುಮಾರ್

20/09/2025 6:17 PM

ರಾಜ್ಯದಲ್ಲಿ ‘ಪ್ರವಾಸಿ ಮಿತ್ರ ಯೋಜನೆ’ಯಿಂದ ‘50,000 ಉದ್ಯೋಗ’ ಸೃಷ್ಟಿ: ಸಿಎಂ ಸಿದ್ಧರಾಮಯ್ಯ

20/09/2025 5:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.