ಬೆಂಗಳೂರು ನಗರದಲ್ಲಿ ಚೀಟಿ ವಂಚಕರ ಹಾವಳಿ ಹೆಚ್ಚುತ್ತಿದ್ದು, ಚೀಟಿ ಹಾಕುವ ವ್ಯಕ್ತಿಯೊಬ್ಬ ಸುಮಾರು ನಲವತ್ತಕ್ಕೂ ಹೆಚ್ಚು ಜನರಿಗೆ ಒಂದೂವರೆ ಕೋಟಿಗೂ ಅಧಿಕ ಹಣ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.ದೇವರ ಚಿಕ್ಕನಹಳ್ಳಿಯ ಶ್ರೀನಿವಾಸ ಲೇಔಟ್ ನ ಪಾಂಡುರಂಗ ಎಂಬ ವ್ಯಕ್ತಿ ಒಂದೂವರೆ ಕೋಟಿಗೂ ಅಧಿಕ ವಂಚನೆಯ ಎಸಗಿದ್ದಾನೆ.
ಕಳೆದ 20 ವರ್ಷಗಳಿಂದ ಪಾಂಡುರಂಗ ಚೀಟಿ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಹಣ ಪಡೆದು ರಾತ್ರೋರಾತ್ರಿ ಪಾಂಡುರಂಗ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ. ಮನೆ ಲೀಸ್ ಗೆ ನೀಡಿ ಬ್ಯಾಂಕಿನಿಂದ ಪಾಂಡುರಂಗ ಲೋನ್ ಪಡೆದಿದ್ದ. ಲೀಸ್ ಗೆ ಇದ್ದವರನ್ನು ಪೊಲೀಸರು ಮತ್ತು ಬ್ಯಾಂಕ್ ನವರು ಇದೀಗ ಮನೆ ಖಾಲಿ ಮಾಡಿಸಿದ್ದಾರೆ. ಇಂದು ತಮಿಳುನಾಡಿಗೆ ಓಡಿ ಹೋಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆ ಸಂಭಂದ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.