ಬೆಂಗಳೂರು : ಕಾವೇರಿ ಆರತಿ ಕುರಿತಂತೆ ನಿನ್ನೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಕೃಷ್ಣರಾಜ ಸಾಗರ(ಕೆಆರ್ಎಸ್) ಜಲಾಶಯದ ಬಳಿ ಉದ್ದೇಶಿತ ಕಾವೇರಿ ಆರತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಸಂಭಾವ್ಯ ಪರಿಸರ ಮತ್ತು ಸುರಕ್ಷತಾ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಇದೆ ವಿಚಾರವಾಗಿ ಇಂದು ಬೆಂಗಳೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಏನೇ ಇದ್ದರೂ ಕಾನೂನು ಪ್ರಕಾರ ಉತ್ತರ ನೀಡುತ್ತೇವೆ. ಪ್ರಾರ್ಥನೆ, ಪೂಜೆ ಮಾಡುವುದಕ್ಕೆ ಯಾರು ಅಡ್ಡಿ ಮಾಡುತ್ತಿಲ್ಲ. ಕೆಲವರಿಗೆ ಆತಂಕ ಇದೆ ಆರತಿ ವಿಚಾರಕ್ಕೆ ಯಾರು ಅನುಮತಿ ಕೇಳುತ್ತಿಲ್ಲ. ನಾವು ಪ್ರತಿದಿನ ಆರತಿ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿಗೆ ಶಿವಕುಮಾರ್ ಹೇಳಿಕೆ ನೀಡಿದರು.
ಇನ್ನು ಸಿಎಂ ಬದಲಾವಣೆ ಆಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ವಿಪಕ್ಷ ಆರ್ ಅಶೋಕ್ ಏನಾದರೂ ಜ್ಯೋತಿಷ್ಯ ಕಲಿತಿದ್ದಾರಾ? ನನಗೂ ಟೈಮ್ ಕೊಡಿಸಿ ನಾನು ಸಹ ಅವರನ್ನು ಭೇಟಿ ಮಾಡುತ್ತೇನೆ. ಏನೋ ಕೇಳುವುದಿದೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು. ನಾಳೆ ಬೆಂಗಳೂರಿಗೆ ರಣದೀಪ ಸಿಂಗ ಸುರ್ಜೆವಾಲಾ ಬೇಟಿ ಮಾಡುತ್ತಿರುವ ವಿಚಾರವಾಗಿ ಹೌದು ನಾಳೆ ರಾಜ್ಯಕ್ಕೆ ರಣದೀಪ ಸಿಂಗ್ ಸುರ್ಜೆವಾಲಾ ಆಗಮಿಸುತ್ತಿದ್ದಾರೆ. ಶಾಸಕರ ಜೊತೆಗೆ ಸಭೆ ಇದೆ ಅವರೇ ಎಲ್ಲರಿಗೂ ತಿಳಿಸಿದ್ದಾರೆ. ನನಗೂ ತಿಳಿಸಿದ್ದಾರೆ ನಾನು ನಮ್ಮ ಶಾಸಕರಿಗೆ ಈ ಕುರಿತು ತಿಳಿಸುತ್ತಿದ್ದೇನೆ ಎಂದು ಹೇಳಿದರು.