ದಾವಣಗೆರೆ : ಕಳೆದ ಕೆಲವು ದಿನಗಳ ಹಿಂದೆ ದಾವಣಗೆರೆಯಲ್ಲಿ ಒಂದು ಬೆಚ್ಚಿಬಿಳಿಸುವ ಘಟನೆ ನಡೆದಿತ್ತು . ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಬಿಟ್ಟು ಆಕೆಯ ಮಲತಾಯಿಯ ಜೊತೆಗೆ ಪರಾರಿಯಾಗಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೆಳಿಸಿತ್ತು ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಆರು ತಿಂಗಳು ಬಳಿಕ ಇದೀಗ ಅಳಿಯ ಜೊತೆಗೆ ಪರಾರಿಯಾಗಿದ್ದ ಅತ್ತೆ ಶಾಂತ ದಿಢೀರ್ ಎಂದು ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದಾಳೆ.
ಹೌದು ಅಳಿಯನ ಜೊತೆಗೆ ಅತ್ತೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರು ತಿಂಗಳ ಬಳಿಕ ಅತ್ತೆ ಶಾಂತ ಇದೀಗ ಮನೆಗೆ ಮರಳಿದ್ದಾರೆ. ಚೆನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮಕ್ಕೆ ವಾಪಸ್ ಆಗಿದ್ದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಮರಳಿ ಬಂದು ನಾನು ಎಲ್ಲೂ ಹೋಗಿಲ್ಲ ಊರಿನಲ್ಲಿಯೇ ಇದ್ದೇನೆ ಆದರೆ ಅಳಿಯ ಎಲ್ಲಿ ಹೋಗಿದ್ದಾನೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರು ಪತಿಯ ಮನೆಯವರ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ನನಗೂ ಅವನಿಗೂ ಯಾವುದೇ ರೀತಿಯ ಸಂಬಂಧವಿಲ್ಲ.ನನ್ನಿಂದ ಸಾಲ ಮಾಡಿಸಿ ಹಿಂಸೆ ಕೊಟ್ಟು, ಮಾರಣಾಂತಿಕವಾಗಿ ಹಲ್ಲೆ ಮಾಡಿ, ನನ್ನನ್ನು ಓಡಿಸಿದ್ದಾರೆ.ಈಗ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದಿಢೀರ್ ಪ್ರತ್ಯಕ್ಷವಾಗಿ ಅತ್ತೆ ಶಾಂತ ಗಂಭೀರ ಆರೋಪ ಮಾಡಿದ್ದಾರೆ.