ಬೆಂಗಳೂರು : ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ತಿಂಗಳಿನಿಂದ ನಿನ್ನೆಯವರೆಗೂ ಹಾಸನ ಜಿಲ್ಲೆ ಒಂದರಲ್ಲಿಯೇ ಹರ್ಯಾಘಾತಕ್ಕೆ 19 ಜನರು ಬಿಳಿಯಾಗಿದ್ದಾರೆ ಇದೀಗ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ಶಾಕಿಂಗ್ ವರದಿಯೊಂದು ಬಹಿರಂಗಪಡಿಸಿದ್ದು ನಗರ ಪ್ರದೇಶದ ಮಹಿಳೆಯರೇ ಈ ಒಂದು ಹೃದಯಘಾತಕ್ಕೆ ಹೆಚ್ಚು ಬರಿಯಾಗುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದ್ದಾರೆ.
ಹೌದು ಹೃದಯಾಘಾತದ ಬಗ್ಗೆ ಮತ್ತೊಂದು ಶಾಕಿಂಗ್ ವರದಿ ಬಹಿರಂಗವಾಗಿದ್ದು, ಹೃದಯಾಘಾತಕ್ಕೆ ಮಹಿಳೆಯರೇ ಫಸ್ಟ್ ಟಾರ್ಗೆಟ್ ಎಂದು ತಿಳಿದುಬಂದಿದೆ. ನಗರದಲ್ಲಿ ಹಾರ್ಟ್ ಅಟ್ಯಾಕ್ ಗೆ ಯುವತಿಯರೇ ಹೆಚ್ಚು ಬಳಿಯಾಗಿದ್ದಾರೆ. ಯುವಜನತೆಯ ಪ್ರಾಣವನ್ನು ಹೃದಯ ಹಿಂಡುತ್ತಿದೆ. ಹೃದಯಾಘಾತದ ಬಗ್ಗೆ ಜಯದೇವ ಆಸ್ಪತ್ರೆಯ ವೈದ್ಯರು ಇದೀಗ ಬೆಚ್ಚಿ ಬೀಳಿಸುವ ವರದಿ ನೀಡಿದ್ದು, ನಗರ ಪ್ರದೇಶದ ಮಹಿಳೆಯರಲ್ಲಿ ಹೆಚ್ಚು ಹೃದಯಘಾತವಾಗುತ್ತಿದೆ.
ಪ್ರತಿ 10 ಪ್ರಕರಣಗಳಲ್ಲಿ 3-4 ಮಹಿಳೆಯರಲ್ಲಿ ಹೃದಯಾಘಾತ ಸಂಭವಿಸುತ್ತಿದೆ. 18ರಿಂದ 40 ವರ್ಷದೊಳಗಿನ ಮಹಿಳೆಯರೇ ಹೃದಯಘಾತಕ್ಕೆ ಟಾರ್ಗೆಟ್ ಆಗಿದ್ದಾರೆ. ನಗರದಲ್ಲಿ ಮೂರರಿಂದ ನಾಲ್ಕು ಮಹಿಳೆಯರು ಈ ಒಂದು ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ.ಕೆಲಸದ ಒತ್ತಡ, ಕೌಟುಂಬಿಕ ಮತ್ತು ಮಕ್ಕಳ ಬಗ್ಗೆ ಟೆನ್ಶನ್ ನಿಂದ ಅತಿ ಹೆಚ್ಚಾಗಿ ಯೋಚನೆ ಮಾಡುವುದರಿಂದ ಹೃದಯಾಘಾತಕ್ಕೆ ಬರಿಯಾಗುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ತಜ್ಞರು ಶಾಕಿಂಗ್ ವರದಿ ನೀಡಿದ್ದಾರೆ.