ಬೆಂಗಳೂರು : RSS ನವರು ಮನುಸ್ಮೃತಿಯ ಮೇಲೆ ನಂಬಿಕೆ ಇಟ್ಟವರು. ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ದತ್ತಾತ್ರೇಯ ಹೊಸಬಾಳೆ ಹೇಳಿದಂತೆ ಸಂವಿಧಾನ ಅದು ಮಾಡಿರುವುದಲ್ಲ. ಪಾರ್ಲಿಮೆಂಟ್ ನಲ್ಲಿ ಚರ್ಚಿಸಿ ಸಂವಿಧಾನ ರಚನೆ ಆಗಿರುವುದು ಎಂದು ದತ್ತಾತ್ರೇಯ ಹೊಸಬಾಳೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಆರ್ ಎಸ್ ಎಸ್ ಮೊದಲಿನಿಂದಲೂ ಸಂವಿಧಾನ ಬದಲಾವಣೆಯಾಗಬೇಕು ಮನುಸ್ಮೃತಿ ಜಾರಿಗೆ ಬರಬೇಕು ಅನ್ನುವಂತಹ ಮನಸ್ಥಿತಿಯಲ್ಲಿ ಇದ್ದಾರೆ ಅವರು ಅದನ್ನು ಬಿಟ್ಟು ಬೇರೆ ಇನ್ನೇನು ಹೇಳುತ್ತಾರೆ? ಸಂವಿಧಾನ ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಗಿ ತೀರ್ಮಾನ ಆಗಿರುವಂತದ್ದು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?
ದತ್ತಾತ್ರೇಯ ಹೊಸಬಾಳೆಯವರು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಎರಡು ಪದಗಳನ್ನು ಸೇರಿಸಲಾಗಿದೆ. ಎರಡು ಪದಗಳನ್ನು ಜೋಡಿಸಲಾಗಿದೆ. ನಮಗೆಲ್ಲರಿಗೂ ಯುವಕರಿಗೆ ಗೊತ್ತಿಲ್ಲ ಜಾತ್ಯತೀತ ಮತ್ತು ಸಮಾಜವಾದಿ ಮೊದಲು ಈ ಎರಡು ಪದಗಳು ಸಂವಿಧಾನದ ಪೀಠಿಕೆಯಲ್ಲಿ ಇರಲಿಲ್ಲ. ಎರಡು ಸುದ್ದಿಗಳನ್ನು ಸೇರಿಸಲಾಗಿದೆ. ಸಂವಿಧಾನದ ಪ್ರಸ್ತಾವನೆ ಶಾಶ್ವತ ರೂಪದಲ್ಲಿದೆ.
ಆದರೆ ಸಮಾಜವಾದಿ, ವೈಚಾರಿಕತೆ ಸೈದಾಂತಿಕ ದೃಷ್ಟಿಯಿಂದ ನೋಡೋದಾದರೆ ಸಮಾಜವಾದಿ ಶಾಶ್ವತವಾಗಿದೆಯಾ? ಜಾತ್ಯತೀತ ಪದ ಸಂವಿಧಾನದಲ್ಲಿ ಇರಲಿಲ್ಲ. ಪೀಠಿಕೆಯಲ್ಲಿ ಸೇರಿಸಲಾಗಿದೆ. ಸರ್ಕಾರದ ನೀತಿಗಳಲ್ಲಿ ಜಾತ್ಯತೀತ ವಿಚಾರ ಇರುತ್ತದೆ. ಅದು ಬೇರೆ ವಿಚಾರ ಎರಡು ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ. ನಂತರ ಎರಡು ಪದಗಳನ್ನು ತೆಗೆದು ಹಾಕುವ ಪ್ರಯತ್ನ ನಡೆಯಲೇ ಇಲ್ಲ. ಸಂವಿಧಾನದ ಪೀಠಿಕೆಯಲ್ಲಿ ಈ ಎರಡು ಪದಗಳು ಇರಬೇಕಾ? ಎಂದು ಚರ್ಚೆ ಆಗಬೇಕಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿದರು.