ಬೆಂಗಳೂರು : ಈ ಬಾರಿ ದಸರಾ ಹಬ್ಬವನ್ನು 11 ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಪೂರ್ವಭಾವಿ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಬೆಂಗಳೂರಿನ ವಿಧಾನಸೌಧದಲ್ಲಿ ದಸರಾ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
9 ದಿನದ ಬದಲು 11 ದಿನ ದಸರಾ ಆಚರಣೆಗೆ ನಿರ್ಧರಿಸಿದ್ದೇವೆ.ಅಧಿಕ ಪಂಚಮಿ ಬಂದಿರುವುದರಿಂದ 11 ದಿನಗಳ ಕಾಲ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಹಿಂದೆಯೂ 8 ಬಾರಿ 11 ದಿನ ದಸರಾ ನಡೆದಿದೆ. ರಾಜ್ಯದಲ್ಲಿ ಉತ್ತಮ ಮಳೆಯಿಂದ ರೈತರು ಸಂತಸದಿಂದ ಇದ್ದಾರೆ. ಹಾಗಾಗಿ ವಿಗ್ರಂಬಣೆಯಿಂದ ಮೈಸೂರು ದಸರಾ ಹಬ್ಬ ಆಚರಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ದಸರಾ ವೀಕ್ಷಣೆಗೆ 10 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಹಾಗಾಗಿ ನೂಕು ನುಗ್ಗುಲು ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನಸ್ನೇಹಿಗಳಾಗಿ ಪೊಲೀಸರು ವರ್ಜಿಸಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದೇನೆ. ವಸ್ತು ಪ್ರದರ್ಶನದ ಮಳಿಗೆ ಆರಂಭದ ದಿನವೇ ತುಂಬಬೇಕು. ಕಳೆದ ಬಾರಿ ಮೈಸೂರು ದಸರಾ ಗೆ 40 ಕೋಟಿ ರೂಪಾಯಿ ಖರ್ಚಾಗಿತ್ತು. ಯಾವುದೇ ಬಿಲ್ ಗಳು ಪೆಂಡಿಂಗ್ ಇಲ್ಲ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.