ರಾಯಚೂರು : ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಿಂದ ನನಗೆ ನೋವಾಗಿದೆ ಹಾಗಾಗಿ ಎರಡು ದಿನದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟರು ಯಾವುದೇ ಆಶ್ಚರ್ಯ ಇಲ್ಲ ಎಂದು ಶಾಸಕ ರಾಜು ಕಾಗೆ ಎಚ್ಚರಿಸಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಅವರನ್ನು ಕರೆದು ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ರಾಯಚೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಅನುದಾನದಲ್ಲಿ ಕ್ಷೇತ್ರಕ್ಕೆ ಹಣ ಬಂದರೂ ಆರ್ಡರ್ ಕೊಟ್ಟಿಲ್ಲ ಎಂಬ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಸಿಎಂ ಅನುದಾನ ಅಂತ ಇದೆಯಾ? ಅವರು ಏನು ಬೇಕಾದರೂ ಹೇಳುತ್ತಾರೆ. ಆದರೆ ಸಿಎಂ ವಿಶೇಷ ಅನುದಾನ ಅಂತ ಎಲ್ಲಿಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇನ್ನು ಈ ವಿಚಾರವಾಗಿ ನೀವು ಕರೆ ಮಾಡಿ ಬಿ ಆರ್ ಪಾಟೀಲ್ ಗೆ ಕರೆದಿದ್ದೀರಿ ಅಂತ ಪ್ರಶ್ನೆ ಕೇಳಿದಾಗ ನಾನು ರಾಯಚೂರಿಗೆ ಬರುತ್ತೇನೆ ಅಂತ ಹೇಳಿದ್ದೆ. ಆಗ ಅವರು ರಾಯಚೂರಿಗೆ ನನ್ನ ಕರೆದಿಲ್ಲ ನಾನು ಬರಲ್ಲ ಅಂತ ಹೇಳಿದ್ದರು. 25ನೇ ತಾರೀಕು ಬೆಂಗಳೂರಿಗೆ ಬರುತ್ತೇನೆ ಅಂತ ಹೇಳಿದ್ದೆ ಆಗ ಹಾನಾನು ಸರಿ ಬೆಂಗಳೂರಿಗೆ ಬಂದು ಭೇಟಿಯಾಗಿ ಅಂತ ಅವರಿಗೆ ಹೇಳಿದ್ದೆನೆ ಎಂದು ತಿಳಿಸಿದರು.