ಬೆಂಗಳೂರು: ನಗರದ ಬಿ.ಟಿ.ಎಂ ಲೇಔಟ್ ವ್ಯಾಪ್ತಿಯ ಜನತೆಗೆ ನವೀಕೃತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆಗೊಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಸ್ವ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ತೊಟ್ಟಂತೆ, ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನವೀಕೃತ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಬೆಂಗಳೂರು ನಗರದ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರ ಎಂದರೆ ಅಭಿವೃದ್ಧಿ,ಅಭಿವೃದ್ಧಿ ಮಾತ್ರ. ಶಿಕ್ಷಣ ಕ್ಷೇತ್ರವಿರಲಿ, Solid Waste Management, ರಸ್ತೆ ಮೂಲಭೂತ ಸೌಕರ್ಯವಿರಲಿ ಅಥವಾ ಆರೋಗ್ಯ ಕ್ಷೇತ್ರವಿರಲಿ, ಎಲ್ಲದರಲ್ಲೂ ಮಾದರಿ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಬಿ.ಟಿಎಂ ವಿಧಾನಸಭಾ ಕ್ಷೇತ್ರ ಎಂದರೆ ಅತಿಶಯೋಕ್ತಿ ಏನಿಲ್ಲ.
ಅದಕ್ಕೆ ಹೊಸ ಸೇರ್ಪಡೆ ಎನ್ ಎಸ್ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಮೃತ ನಗರೋತ್ಥಾನದಡಿ ನವೀಕರಿಸಿ, ಮೊದಲನೇ ಮಹಡಿಯನ್ನು ಹೊಸದಾಗಿ ನಿರ್ಮಾಣ ಮಾಡಿ ಎನ್ ಎಸ್ ಪಾಳ್ಯ ಹಾಗೂ ಬಿ ಟಿ ಎಂ ಲೇಔಟ್ ಜನತೆಗೆ ಇಂದು ರಾಮಲಿಂಗಾ ರೆಡ್ಡಿ ಅವರು ಲೋಕಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿ ಎನ್ ಆರ್ ಬಾಬು, ಡಾ.ಅನುಪಮ, ಆರೋಗ್ಯಧಿಕಾರಿ, ಆಸ್ಪತ್ರೆಯ ಸಿಬ್ಬ೦ದಿಗಳು ,ವಿವಿಧ ಇಲಾಖೆಯ ಅಧಿಕಾರಿಗಳು ,ಸಾರ್ವಜನಿಕರು ಉಪಸ್ಥಿತರಿದ್ದರು.
ಆಸ್ಪತ್ರೆಯ ವಿಶೇಷ: ಅಂದಾಜು ರೂ.90 ಲಕ್ಷ ರೂ ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯನ್ನೂ ಮೀರಿಸುವSir ರೀತಿಯಲ್ಲಿ ಸುಸಜ್ಜಿತವಾಗಿ ಆಸ್ಪತ್ರೆಯನ್ನು ನವೀಕರಿಸಲಾಗಿದೆ.
ಆಸ್ಪತ್ರೆಯಲ್ಲಿ ಆಯುಷ್ಮತಿ ಕ್ಲೀನಿಕ್ ಅಡಿಯಲ್ಲಿ
* ಪ್ರತಿ ಸೋಮವಾರ ಸ್ತ್ರೀ ರೋಗ ತಜ್ಞರು (Obstetristic and gynaecologist )
* ಮಂಗಳವಾರ ಮಕ್ಕಳ ತಜ್ಞರ(Paediatricianಭೇಟಿ, ಉಚಿತ ಸೇವೆ.
* ಪ್ರತಿ ದಿನ ಸ್ಮಾರ್ಟ್ ಕ್ಲೀನಿಕ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ರೋಗಿಗಳಿಗೆ ಆನುಕೂಲವಾಗುವ ರೀತಿಯಲ್ಲಿ online ನಲ್ಲಿ ಚರ್ಮ ರೋಗ ತಜ್ಞರು (Dermatologist), ENT ತಜ್ಞರು, ಹಾಗು ಮೂಳೆ ತಜ್ಞರು (Orthopedician) ಕಣ್ಣಿನ ತಜ್ಞರು (Opthalmologist) ಉಚಿತ ಕನ್ಸಲ್ಟೇಷನ್
* ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಈ ಎಲ್ಲಾ ವಿಶೇಷ ತಜ್ಞರುಗಳಿಂದ (Specialist) ಜನತೆಯು ಉಚಿತ ಸಮಾಲೋಚನೆ
* ಪ್ರತಿ ಗುರವಾರ ಮಕ್ಕಳಿಗೆ vaccination ಕಾರ್ಯಕ್ರಮ
ಶಾಸಕರುಗಳು ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂಬ ಮನಸ್ಸು ಮಾಡಿದ್ದೇ ಆದಲ್ಲಿ ಅಭಿವೃದ್ಧಿಯನ್ನು ಯಾವ ರೀತಿ ಮಾಡಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಶ್ರೀ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ.
ಈ ಮುಖ್ಯಮಂತ್ರಿಗೆ ಮಾನ ಮರ್ಯಾದೆ ಎನ್ನುವುದು ಇದೆಯಾ?: HDK ಕೆಂಡಾಮಂಡಲ
BREAKING : ಬೆಂಗಳೂರಲ್ಲಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಮೃತದೇಹ ಪತ್ತೆ : ಪತಿಯೇ ಹತ್ಯೆಗೈದಿರುವ ಶಂಕೆ!