ಗುವಾಹಟಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಸ್ಸಾಂನ ಪೆರಾಧೋರಾ ಘಾಟ್ನಿಂದ ನಲ್ಬರಿ ಜಿಲ್ಲೆಯ ಲಾರ್ಕುಚಿ ಘಾಟ್ಗೆ ದೋಣಿ ಸಾಗುತ್ತಿತ್ತು. ಮೃತಪಟ್ಟವರನ್ನು ಗೋಫುಲ್ ಅಲಿ (50), ಆರ್ಯನ್ ಅಲಿ (8) 3 ನೇ ತರಗತಿ ವಿದ್ಯಾರ್ಥಿ ಮತ್ತು ರಾಂಪುರ ಜನತಾ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಮಜಿದುಲ್ ಇಸ್ಲಾಂ (15) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯಿಂದ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆದರೂ, ಈ ವರದಿ ಸಲ್ಲಿಕೆಯಾಗುವವರೆಗೂ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ದೋಣಿ ಮಗುಚಿದ ಬಗ್ಗೆ ನಮಗೆ ಬೆಳಿಗ್ಗೆ 7.30 ರ ಸುಮಾರಿಗೆ ಮಾಹಿತಿ ಸಿಕ್ಕಿತು ಮತ್ತು ತಕ್ಷಣ ಸ್ಥಳಕ್ಕೆ ಧಾವಿಸಿದೆ” ಎಂದು ಮುಕಲ್ಮುವಾ ಒಸಿ ಜ್ಯೋತಿಷ್ ಗೋಯಾರಿ ಹೇಳಿದರು.
ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ಮೊಜ್ನೂರ್ ಹುಸೇನ್, ಬಲವಾದ ಗಾಳಿಯಿಂದಾಗಿ ದೋಣಿಯ ಸ್ಟೀರಿಂಗ್ ಟಿಲ್ಲರ್ ಜ್ಯಾಮ್ ಆಗಿ ಅದರ ಛಾವಣಿ ಮುರಿದು ಹೋಯಿತು ಎಂದು ಹೇಳಿದರು. ನಂತರ, ದೋಣಿ ಪಕ್ಕಕ್ಕೆ ವಾಲಲು ಪ್ರಾರಂಭಿಸಿತು. ಹಡಗಿನಲ್ಲಿ 100 ಪ್ರಯಾಣಿಕರಿದ್ದರು.