Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ: ಭಾರಿ ನಷ್ಟ ತಪ್ಪಿಸಲು ಈ 7 ಸ್ಥಳಗಳಲ್ಲಿ ಕಾರ್ಡ್ ಬಳಸುವುದನ್ನು ಇಂದೇ ನಿಲ್ಲಿಸಿ!

23/12/2025 10:52 AM

‘ಮದುವೆಯಾದ ನಾಲ್ಕು ತಿಂಗಳ ನಂತರ ಜನಿಸಿದ ಮಗುವಿಗೆ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತದೆ’: ಕೇರಳ ಹೈಕೋರ್ಟ್

23/12/2025 10:42 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

23/12/2025 10:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್
KARNATAKA

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

By kannadanewsnow0919/06/2025 8:11 PM

ಬೆಂಗಳೂರು: ಇಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ, ಬೆಂಗಳೂರು ಪ್ರದೇಶದ ವಿವಿಧ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಆ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.

ಪತ್ರಿಕಾ ಗೋಷ್ಠಿಯಲ್ಲಿ , ಬೆಂಗಳೂರು ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ವಿವಿಧ ನಡೆಯುತ್ತಿರುವ ರೈಲ್ವೆ ಮೂಲಸೌಕರ್ಯ ಯೋಜನೆಗಳು ಮತ್ತು ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ(Final Location Survey) ನೀಡಲಾದ ರೈಲ್ವೆ ಯೋಜನೆಗಳ ಕುರಿತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ವಿವರ ನೀಡಿದರು.

ಬೆಂಗಳೂರು ಕಂಟೋನ್ಮೆಂಟ್ ನಿಂದ ವೈಟ್‌ಫೀಲ್ಡ್ ಚತುಷ್ಪಥ ಹಳಿ ಯೋಜನೆಯು ಅಂದಾಜು ರೂ. 492.87 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಇದು 38 ಕಿಲೋಮೀಟರ್‌ ಒಳಗೊಂಡಿದೆ. ಇದರ ಸಂಪೂರ್ಣವನ್ನು ವೆಚ್ಚವನ್ನು ರೈಲ್ವೆ ಭರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯಲ್ಲಿ ಇದುವರೆಗೆ ಅರ್ಥ್ ವರ್ಕ್, ರೀಟೇನಿಂಗ್‌ ವಾಲ್ಸ್ ಮತ್ತು ಹಲವು ಸೇತುವೆ ವಿಸ್ತರಣೆ ಕಾಮಗಾರಿಗಳು ಸೇರಿದಂತೆ 75% ಕಾಮಗಾರಿಗಳು ಪೂರ್ಣಗೊಂಡಿವೆ. ಈ ಯೋಜನೆಯು ಈ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಸಮಯವನ್ನು ಉಳಿಸುತ್ತದೆ. ಬೆಂಗಳೂರಿನೊಳಗೆ ಪ್ರಯಾಣವನ್ನು ವೇಗವಾಗಿ ಹೆಚ್ಚಿಸುವುದು ಮಾತ್ರವಲ್ಲದೆ ಸುಲಭವಾಗಿಸುತ್ತದೆ ಎಂದರು.

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ರೂ 484.58 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ಪುನರಾಭಿವೃದ್ಧಿಯಲ್ಲಿ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಹೊಸ ನಿಲ್ದಾಣ ಕಟ್ಟಡಗಳು ಬರಲಿವೆ. ನಿಲ್ದಾಣವು ಏರ್ ಕಾನ್ಕೋರ್ಸ್‌ಗಳು, ನಿರೀಕ್ಷಣಾ ಕೊಠಡಿಗಳು, ವಿಐಪಿ ಲಾಂಜ್‌ಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ವಿಶ್ರಾಂತಿ ಕೊಠಡಿಗಳು, ಡಾರ್ಮಿಟರಿಗಳು ಮತ್ತು ನೆಲಮಾಳಿಗೆಯ ಪಾರ್ಕಿಂಗ್‌ನಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಮೇಲ್ಛಾವಣಿಯ ಸೌರ ಫಲಕ ಅಳವಡಿಕೆ, ಒಳಚರಂಡಿ ಸಂಸ್ಕರಣಾ ಘಟಕ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಯಶವಂತಪುರ ರೈಲು ನಿಲ್ದಾಣವು ಅಂದಾಜು 377.86 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಪುನರಾಭಿವೃದ್ಧಿಗೆ ಒಳಗಾಗುತ್ತಿದ್ದು, ನಿಲ್ದಾಣವನ್ನು 2 ಹಂತಗಳಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಹಂತ 1 ರಲ್ಲಿ ಲಿನಿನ್ ಕೇಂದ್ರ, ಆರ್‌ಪಿಎಫ್ ಕಟ್ಟಡ, ಬಹು-ಹಂತದ ಪಾರ್ಕಿಂಗ್, ಪೂರ್ವ ಭಾಗದ ಎಲಿವೇಟೆಡ್ ಆಗಮನ/ನಿರ್ಗಮನ ಪ್ಲಾಜಾ, ಇತ್ಯಾದಿ ಸೌಲಭ್ಯಗಳು ಇರಲಿವೆ. ಹಂತ 2 ರಲ್ಲಿ, 4 ಅಂತಸ್ತಿನ ಪಶ್ಚಿಮ ಭಾಗದ ಹೊಸ ಕಟ್ಟಡ , ಪ್ರವೇಶ ಮತ್ತು ನಿರ್ಗಮನಕ್ಕಾಗಿ ಪ್ರತ್ಯೇಕ ಮಾರ್ಗ, ಪ್ಲಾಟ್‌ಫಾರ್ಮ್‌ಗಳ ಮೇಲೆ ಏರ್ ಕಾನ್ಕೋರ್ಸ್, ಪಾರ್ಕಿಂಗ್ ಗೆ ದಾರಿ ಇತ್ಯಾದಿಗಳನ್ನು ಒದಗಿಸಲಾಗುವುದು. ನಿಲ್ದಾಣದಲ್ಲಿ ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳನ್ನು ಒದಗಿಸಲಾಗುವುದು ಎಂದರು.

ಯಶವಂತಪುರದಿಂದ ಚನ್ನಸಂದ್ರ 25 ಕಿಲೋಮೀಟರ್‌ಗಳ ಡಬ್ಲಿಂಗ್ ಕಾಮಗಾರಿ ರೂ 683.57 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. 48 ಕಿಲೋಮೀಟರ್‌ಗಳ ಬೈಯಪ್ಪನಹಳ್ಳಿಯಿಂದ ಹೊಸೂರು ಡಬ್ಲಿಂಗ್ ಯೋಜನೆಗೆ ರೂ 1148 ಕೋಟಿ. ವೆಚ್ಚವಾಗಲಿದ್ದು, 83% ಪ್ರಗತಿ ಕಂಡಿದೆ. ಕಾರ್ಮೆಲರಾಂ ನಿಂದ ಹೀಲಲಿಗೆವರೆಗಿನ ಭಾಗವು 2022-23 ರಲ್ಲಿ ಪೂರ್ಣಗೊಂಡಿದ್ದು ಉಳಿದ ಭಾಗದ ಕಾಮಗಾರಿ ಮುಂದುವರೆದಿದೆ ಎಂದರು.

ಮಾರಿಕುಪ್ಪಂನಿಂದ ಕುಪ್ಪಂವರೆಗಿನ ಹೊಸ ಮಾರ್ಗ ಯೋಜನೆಯು 23.7 ಕಿಲೋಮೀಟರ್‌ಗಳನ್ನು ಒಳಗೊಂಡಿದೆ. ಮಾರಿಕುಪ್ಪಂನಿಂದ ವಿರೂಪಾಕ್ಷಪುರ ವಿಭಾಗದ (4.3 ಕಿಮೀ) ಕೆಲಸ ಈಗ ನಡೆಯುತ್ತಿದೆ, ವಿರೂಪಾಕ್ಷಪುರದಿಂದ ಕುಪ್ಪಂ ವಿಭಾಗದ ಕಾಮಗಾರಿಗೆ ಟೆಂಡರ್ ಶೀಘ್ರದಲ್ಲೇ ಕರೆಯಲಾಗುವುದು. ಬೆಟ್ಟಹಲಸೂರುನಿಂದ ರಾಜನುಕುಂಟೆಗೆ 6.14 ಕಿಲೋಮೀಟರ್‌ಗಳ ಬೈಪಾಸ್ ಮಾರ್ಗಕ್ಕೆ 248.24 ಕೋಟಿ ರೂ.ಗಳಗೆ ಮಂಜೂರಾತಿ ನೀಡಲಾಗಿದ್ದು, ಪ್ರಸ್ತುತ ಭೂಸ್ವಾಧೀನ ಪ್ರಗತಿಯಲ್ಲಿದೆ.
ಬೆಂಗಳೂರಿನ ಸುತ್ತಮುತ್ತಲಿನ ಹಲವಾರು ರೈಲ್ವೆ ಯೋಜನೆಗಳಿಗೆ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ದೊರೆತಿದೆ. ಬೆಂಗಳೂರು ನಗರದ ಸುತ್ತಲಿನ ಸರ್ಕ್ಯುಲರ್ ರೈಲು ಯೋಜನೆಗೆ ಆಗಸ್ಟ್ 2025 ರೊಳಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗುವುದು.

ಯಲಹಂಕದಿಂದ ದೇವನಹಳ್ಳಿಗೆ ಡಬ್ಲಿಂಗ್ ಯೋಜನೆಯ (23.7 ಕಿಲೋಮೀಟರ್) ಡಿಪಿಆರ್ ಸಲ್ಲಿಸಲಾಗಿದೆ. 125 ಕಿಲೋಮೀಟರ್ ಉದ್ದದ ದೇವನಹಳ್ಳಿ-ಕೋಲಾರ-ಬಂಗಾರಪೇಟೆ ಡಬ್ಲಿಂಗ್ ಯೋಜನೆಯು ಡಿಪಿಆರ್ ಸಿದ್ಧತೆ ಹಂತದಲ್ಲಿದೆ. 47 ಕಿಲೋಮೀಟರ್ ಉದ್ದದ ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಚತುಷ್ಪಥ ಯೋಜನೆಗೆ ಡಿಪಿಆರ್ ಸಲ್ಲಿಸಲಾಗಿದೆ. ಬೈಯಪ್ಪನಹಳ್ಳಿ- ಹೊಸೂರು ಚತುಷ್ಫಥ ಯೋಜನೆಗೆ ಡಿಪಿಆರ್‌ ಸಲ್ಲಿಸಲಾಗಿದೆ. ಬೆಂಗಳೂರು- ತುಮಕೂರು 70 ಕಿಲೋಮೀಟರ್ ಉದ್ದದ ಚತುಷ್ಪಥ ಯೋಜನೆಯ ಡಿಪಿಆರ್ ಸಿದ್ಧಗೊಳ್ಳುತ್ತಿದೆ. ಚಿಕ್ಕಬಾಣಾವರ-ಕುಣಿಗಲ್-ಹಾಸನ ಜೋಡಿ ಮಾರ್ಗ ಯೋಜನೆಗೆ ಸಮೀಕ್ಷೆ ಪೂರ್ಣಗೊಂಡಿದ್ದು, ಇದು 166 ಕಿಲೋಮೀಟರ್ ಉದ್ದವಾಗಿದ್ದು, ಆಗಸ್ಟ್ 2025 ರೊಳಗೆ ಡಿಪಿಆರ್ ಸಲ್ಲಿಸಲಾಗುವುದು. ಬೆಂಗಳೂರು-ಮೈಸೂರು ಚತುಷ್ಪಥ ಯೋಜನೆ ಮತ್ತು ಬಂಗಾರಪೇಟೆ-ಜೋಲಾರಪೇಟೆ ಚತುಷ್ಪಥ ಯೋಜನೆಯ ಡಿಪಿಆರ್‌ಗಳನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು ಎಂದು ಶ್ರೀ ಅಶುತೋಷ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿದರು.

ಬೆಂಗಳೂರು ಪ್ರದೇಶದ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ – ಅಶುತೋಷ್ ಮಾಥುರ್ ಮತ್ತು ಶ್ರೀ ಪರೀಕ್ಷಿತ್ ಮೋಹನ್ ಪುರಿಯಾ; ಮುಖ್ಯ ಎಂಜಿನಿಯರ್ (ನಿರ್ಮಾಣ), ಪ್ರೇಮ್ ನಾರಾಯಣ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೆ ಎನ್ ಮಾಹಿತಿ ಹಂಚಿಕೊಂಡಿದ್ದಾರೆ.

BIG NEWS: ಕರ್ನಾಟಕದಲ್ಲಿ ಕಾಲ್ತುಳಿತ ತಡೆಗೆ ಹೊಸ ಕಾನೂನು: ಇನ್ಮುಂದೆ 3 ವರ್ಷ ಜೈಲು, 5 ಲಕ್ಷ ದಂಡ ಫಿಕ್ಸ್ | Bengaluru Stampede

BREAKING : ಮೇ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ

Share. Facebook Twitter LinkedIn WhatsApp Email

Related Posts

ALERT : ಹೊಸ ರೀತಿಯಲ್ಲಿ ಹ್ಯಾಕ್ ಮಾಡಲಾಗುತ್ತಿದೆ `ವಾಟ್ಸಪ್’ : ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಜಸ್ಟ್ ಹೀಗೆ ಮಾಡಿ.! 

23/12/2025 10:10 AM1 Min Read

ಹಣದ ಹರಿವನ್ನು ಹೆಚ್ಚಿಸಲು ಯಾರಿಗೂ ಹೇಳದೆ ಏಳು ಲವಂಗವನ್ನು ಇರಿಸಿ ಮತ್ತು ಈ ರಹಸ್ಯ ಪರಿಹಾರವನ್ನು ಮಾಡಿ

23/12/2025 10:05 AM3 Mins Read

ALERT : ಪ್ರತಿದಿನ `ಪ್ಲಾಸ್ಟಿಕ್ ಬಾಟಲಿ’ಯಲ್ಲಿ ನೀರು ಕುಡಿಯುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

23/12/2025 9:50 AM2 Mins Read
Recent News

ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ: ಭಾರಿ ನಷ್ಟ ತಪ್ಪಿಸಲು ಈ 7 ಸ್ಥಳಗಳಲ್ಲಿ ಕಾರ್ಡ್ ಬಳಸುವುದನ್ನು ಇಂದೇ ನಿಲ್ಲಿಸಿ!

23/12/2025 10:52 AM

‘ಮದುವೆಯಾದ ನಾಲ್ಕು ತಿಂಗಳ ನಂತರ ಜನಿಸಿದ ಮಗುವಿಗೆ ಆಸ್ತಿಯಲ್ಲಿ ಸಮಾನ ಪಾಲು ಸಿಗುತ್ತದೆ’: ಕೇರಳ ಹೈಕೋರ್ಟ್

23/12/2025 10:42 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

23/12/2025 10:41 AM

SHOCKING : ಭೀಕರ ಬಸ್ ಅಪಘಾತದಲ್ಲಿ 16 ಮಂದಿ ಪ್ರಯಾಣಿಕರು ಸಾವು : ಭಯಾನಕ ವಿಡಿಯೋ ವೈರಲ್ | WATCH VIDEO

23/12/2025 10:27 AM
State News
KARNATAKA

ALERT : ಹೊಸ ರೀತಿಯಲ್ಲಿ ಹ್ಯಾಕ್ ಮಾಡಲಾಗುತ್ತಿದೆ `ವಾಟ್ಸಪ್’ : ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಜಸ್ಟ್ ಹೀಗೆ ಮಾಡಿ.! 

By kannadanewsnow5723/12/2025 10:10 AM KARNATAKA 1 Min Read

ಸರ್ಕಾರಿ ಸಂಸ್ಥೆಯೊಂದು ವಾಟ್ಸಾಪ್ ಬಳಕೆದಾರರಿಗೆ ಒಂದು ಪ್ರಮುಖ ಎಚ್ಚರಿಕೆ ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ಏಜೆನ್ಸಿಯಾದ…

ಹಣದ ಹರಿವನ್ನು ಹೆಚ್ಚಿಸಲು ಯಾರಿಗೂ ಹೇಳದೆ ಏಳು ಲವಂಗವನ್ನು ಇರಿಸಿ ಮತ್ತು ಈ ರಹಸ್ಯ ಪರಿಹಾರವನ್ನು ಮಾಡಿ

23/12/2025 10:05 AM

ALERT : ಪ್ರತಿದಿನ `ಪ್ಲಾಸ್ಟಿಕ್ ಬಾಟಲಿ’ಯಲ್ಲಿ ನೀರು ಕುಡಿಯುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

23/12/2025 9:50 AM

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

23/12/2025 9:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.