ಹಾಸನ: ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆಯಲ್ಲಿ ಉಂಟಾದಂತ ಕಾಲ್ತುಳಿತ ದುರಂತದಲ್ಲಿ ಹಾಸನದ ಡಿ.ಟಿ ಲಕ್ಷ್ಮಣ್ ಅವರ ಪುತ್ರ ಭೂಮಿಕ್ ಕೂಡ ಪಾಲ್ಗೊಂಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದಂತ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಈ ಘಟನೆಯ ನಂತ್ರ ಪುತ್ರನ ಸಮಾಧಿಯ ಬಳಿಯಲ್ಲಿ ತಂದೆ ಮಲಗಿ ಕಣ್ಣೀರಿಡುತ್ತಿರುವಂತ ಹೃದಯ ವಿದ್ರಾವಕ ವೀಡಿಯೋ ವೈರಲ್ ಆಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಡಿ.ಟಿ ಲಕ್ಷ್ಮಣ್ ತಮ್ಮ ಮಗನ ಸಮಾಧಿಯ ಮೇಲೆ ಮಲಗಿ ಗೋಳಾಡುತ್ತಿರೋ ವೀಡಿಯೋ ವೈರಲ್ ಆಗಿದೆ. ಅಲ್ಲದೇ ಈ ಥರ ಪರಿಸ್ಥಿತಿ ಯಾವುದೇ ತಂದೆ-ತಾಯಿಗೂ ಬರಬಾರದು. ಇದೇ ಜಾಗದಲ್ಲಿ ನನ್ನ ಮಗನನ್ನು ಮಲಗಿಸಿದ್ದೇನೆ. ನನ್ನ ಮಗನಿಗೋಸ್ಕರ ಈ ಜಾಗ ಮಾಡಿದ್ದು. ಈಗ ಇಲ್ಲೇ ಮಲಗಿಸಿದ್ದೀನಿ ಎಂಬುದಾಗಿ ಗೋಳಾಡುತ್ತಿರುವುದು ಕಂಡು ಬಂದಿದೆ.
ಅಂದಹಾಗೆ ಡಿ.ಟಿ ಲಕ್ಷ್ಮಣ್ ಪುತ್ರ ಭೂಮಿಕ್ ಅಪ್ಪಟ ಆರ್ ಸಿ ಬಿ ಅಭಿಮಾನಿಯಾಗಿದ್ದರು. ಆರ್ ಸಿ ಬಿ ಗೆದ್ದ ಸಂಭ್ರಮಾಚರಣೆಯ ವಿಜಯೋತ್ಸವದಲ್ಲಿ ಪಾಲ್ಗೊಳ್ಳೋದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಗೆ ತೆರಳಿದ್ದರು.
ಬೆಂಗಳೂರಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಂತ ಭೂಮಿಕ್, ಸ್ನೇಹಿತರ ಜೊತೆಗೂಡಿ ಕ್ರೀಡಾಂಗಣದ ಬಳಿಗೆ ತೆರಳಿದ್ದರು. ಈ ವೇಳೆ ಉಂಟಾದಂತ ಕಾಲ್ತುಳಿತದಲ್ಲಿ ಡಿ.ಟಿ ಲಕ್ಷ್ಮಣ್ ಹಾಗೂ ಅಶ್ವಿನಿ ದಂಪತಿಗಳ ಏಕೈಕ ಪುತ್ರ ಭೂಮಿಕ್ ಸಾವನ್ನಪ್ಪಿದ್ದರು. ಪುತ್ರನನ್ನು ಮಣ್ಣುಮಾಡಿದಂತ ಸಮಾಧಿಯ ಮುಂದೆ ತಂದೆ ಮಲಗಿ ಗೋಳಾಡುತ್ತಿರುವುದು ಎಂತವರನ್ನು ಮನಕಲಕುತ್ತಿದೆ.
BREAKING: ಬೆಂಗಳೂರು ಉತ್ತರ ವಿವಿಯ ವಿಸಿ ಪ್ರೊ.ನಿರಂಜನ ವಾನಳ್ಳಿ ವಿರುದ್ಧ ‘FIR’ ದಾಖಲು
ಕಾಲ್ತುಳಿತ ದುರಂತ: ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ?- ಶೋಭಾ ಕರಂದ್ಲಾಜೆ ಪ್ರಶ್ನೆ