ಶಿವಮೊಗ್ಗ: ದೇಶದ ಜನರು ಇಡೀ ಪಾಕಿಸ್ತಾನವನ್ನೇ ಉಡೀಸ್ ಮಾಡುವಂತ ಆಶಯ ಇಟ್ಟುಕೊಂಡಿದ್ದರು. ಆದರೇ ಹಾಗೆ ಆಗಲಿಲ್ಲ ಎಂಬುದಾಗಿ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಡೆಸಿದ ಸೈನಿಕರಿಗೆ ಅಭಿನಂದನೆಯನ್ನು ತಿಳಿಸಿದರು. ನಮ್ಮ ಸೈನಿಕರು ಬಹಳ ಚೆನ್ನಾಗಿ ಹೋರಾಡಿದ್ದಾರೆ ಎಂಬುದಾಗಿ ಶ್ಲಾಘನೆ ವ್ಯಕ್ತ ಪಡಿಸಿದರು. ಅಲ್ಲದೇ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ನಮ್ಮ ಯೋಧರು ಮಾಡಿದ್ದಾರೆ ಎಂದರು.
ಮುಸಲ್ಮಾನ್, ಕ್ರಿಶ್ಚಿಯನ್, ಹಿಂದೂ ಸೇರಿದಂತೆ ಎಲ್ಲರೂ ಪಾಕಿಸ್ತಾನವನ್ನು ಉಡೀಸ್ ಮಾಡುವ ಆಶಯ ಇಟ್ಟುಕೊಂಡಿದ್ದರು. ಆದರೇ ಹಾಗೆ ಆಗಲಿಲ್ಲ. ಈ ಬಗ್ಗೆ ದೇಶದ ಜನರಲ್ಲಿ ಬೇಸರವಿದೆ ಎಂಬುದಾಗಿ ತಿಳಿಸಿದರು.
BREAKING: ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು