Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೃದಯಕ್ಕೆ ಕುತ್ತು ತರುವ ‘ಸೈಲೆಂಟ್ ಕಿಲ್ಲರ್’ ಆಹಾರಗಳು: ಇಂದೇ ಇವುಗಳಿಂದ ದೂರವಿರಿ!

03/04/2026 9:56 AM

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಬಿ-ಖಾತಾ’ ಪಡೆಯಲು ಈ ದಾಖಲೆಗಳು ಕಡ್ಡಾಯ.!
KARNATAKA

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಬಿ-ಖಾತಾ’ ಪಡೆಯಲು ಈ ದಾಖಲೆಗಳು ಕಡ್ಡಾಯ.!

By kannadanewsnow5720/02/2025 6:13 AM

ಬಳ್ಳಾರಿ : ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಸರ್ಕಾರಿ ಹಾಗೂ ಸರ್ಕಾರದ ಅಧೀನ ಇಲಾಖೆ, ನಿಗಮ, ಮಂಡಳಿಗಳ ಜಾಗಗಳನ್ನು ಹೊರತುಪಡಿಸಿ, ಅನಧಿಕೃತ ಬಡಾವಣೆ, ಭೂ ಪರಿವರ್ತನೆ ಹೊಂದದೆ ಸ್ವಂತವಾಗಿ ತಮ್ಮದೇ ಮಾಲೀಕತ್ವ ಹೊಂದಿದ ನಿವೇಶನ/ಜಾಗಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ನಿವೇಶನ/ಕಟ್ಟಡಗಳನ್ನು 2024 ಸೆ.10 ರ ಒಳಗಾಗಿ ನೋಂದಾವಣೆ ಮೂಲಕ ಖರೀದಿ ಮಾಡಿದಂತಹ ಆಸ್ತಿಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಬಿ-ಖಾತೆ ಪಡೆಯಬಹುದಾಗಿದೆ.

ಒಂದು ಬಾರಿ ಮಾತ್ರ ಮೇ 10 ರೊಳಗಾಗಿ ಅರ್ಜಿ ಸಲ್ಲಿಸಿ 2024-25ನೇ ಸಾಲಿನ ಆಸ್ತಿ ತೆರಿಗೆಯ 02 ಪಟ್ಟು ದಂಡ ಪಾವತಿಸಿ, ಮಹಾನಗರ ಪಾಲಿಕೆಯಲ್ಲಿ ನಮೂನೆ-2ಎ ಮತ್ತು ಇತರೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ-3ಎ ಪಡೆಯಲು ಅವಕಾಶ ನೀಡಲಾಗಿದೆ.

‘ಬಿ’ ರಿಜಿಸ್ಟರ್ ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆ:

ಆಸ್ತಿಗೆ ಸಂಬAಧಿಸಿದAತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ:10.09.2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.

ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ (ಆಸ್ತಿ ತೆರಿಗೆ 02 ಪಟ್ಟು ಮೊತ್ತದ ದಂಡದೊAದಿಗೆ), ಮಾಲೀಕರ ಫೋಟೋ ಮತ್ತು ಸ್ವತ್ತಿನ (4 ಪಾರ್ಶ್ವಗಳನ್ನು ತೋರಿಸುವಂತೆ ಪಡೆದ) ಫೋಟೋ, ಸರ್ಕಾರದ ಇಲಾಖೆಗಳಿಂದ ವಿತರಿಸಿದ ಗುರುತಿನ ಚೀಟಿ.

ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಿ ಬಿ-ಖಾತಾ ಪಡೆಯಬಹುದು. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ನೇರವಾಗಿ ಸಂಬಂಧಿಸಿದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿ, ತಮ್ಮ ಆಸ್ತಿಗಳನ್ನು ಬಿ-ಖಾತೆಯಲ್ಲಿ ಸೇರ್ಪಡೆಗೊಳಿಸಿಕೊಳ್ಳಲು ಕಲ್ಪಿಸಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು.

ಸಹಾಯವಾಣಿ ಕೇಂದ್ರ:
ಬಳ್ಳಾರಿ ಮಹಾನಗರ ಪಾಲಿಕೆಯ ವೀರೇಶಯ್ಯ(ಮೊ.7019141268), ಅಬ್ದುಲ್ ಖಾದರ್ ಎಸ್.ಕೆ(ಮೊ.9845469264), ಕೆ.ವೆಂಕಟೇಶ್(ಮೊ.9986174981).
ಸಿರುಗುಪ್ಪ ನಗರಸಭೆಯ ರಾಜಭಕ್ಷ ಮೊ.9036525396, ಕಂಪ್ಲಿ ಪುರಸಭೆಯ ಸಿ.ಪ್ರಶಾಂತ್ ಮೊ.9916907008, ಸಂಡೂರು ಪುರಸಭೆಯ ದಿನಕರ್ ಮೊ.7899696662, ಕುರುಗೋಡು ಪುರಸಭೆಯ ಮೋಹನ್ ಶಾಸ್ತಿçà ಮೊ.9980865286, ಕುರೇಕುಪ್ಪ ಪುರಸಭೆಯ ರವಿ.ಎಂ ಮೊ.8880949944, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಸುಬ್ರಮಣ್ಯಂ ಮೊ.9980863962, ಕುಡತಿನಿ ಪಟ್ಟಣ ಪಂಚಾಯಿತಿಯ ಬಸವರಾಜ ಮೊ.9844772449 ಗೆ ಸಂಪರ್ಕಿಸಬಹುದು.

BIG NEWS: 'Property' owners note: These documents are mandatory to get 'B-Khata'.
Share. Facebook Twitter LinkedIn WhatsApp Email

Related Posts

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM2 Mins Read

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM1 Min Read

ALERT : ಸಾರ್ವಜನಿಕರೇ ಎಚ್ಚರ : ನಿಮ್ಮ ಹೃದಯದ ಆರೋಗ್ಯ ಕೆಡಿಸಬಹುದು ಈ 7 ಆಹಾರಗಳು!

03/04/2026 9:24 AM2 Mins Read
Recent News

ಹೃದಯಕ್ಕೆ ಕುತ್ತು ತರುವ ‘ಸೈಲೆಂಟ್ ಕಿಲ್ಲರ್’ ಆಹಾರಗಳು: ಇಂದೇ ಇವುಗಳಿಂದ ದೂರವಿರಿ!

03/04/2026 9:56 AM

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM

ಹೃದಯಾಘಾತ- ಪಾರ್ಶ್ವವಾಯು ತಡೆಗೆ ಮಹತ್ವದ ಕ್ರಮ: ಬೊಜ್ಜು ಇಳಿಸುವ ಚುಚ್ಚುಮದ್ದಿಗೆ ಅನುಮೋದನೆ.!

03/04/2026 9:31 AM
State News
KARNATAKA

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

By kannadanewsnow5703/04/2026 9:45 AM KARNATAKA 2 Mins Read

ಬೆಂಗಳೂರು: ಪ್ರತಿಯೊಬ್ಬರಿಗೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ಆಭರಣಗಳೆಂದರೆ ಪಂಚಪ್ರಾಣ. ಅಕ್ಕಪಕ್ಕದ ಮನೆಯವರ ಕಾರ್ಯಕ್ರಮಕ್ಕೋ ಅಥವಾ ಮದುವೆ ಸಮಾರಂಭಕ್ಕೋ…

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM

ALERT : ಸಾರ್ವಜನಿಕರೇ ಎಚ್ಚರ : ನಿಮ್ಮ ಹೃದಯದ ಆರೋಗ್ಯ ಕೆಡಿಸಬಹುದು ಈ 7 ಆಹಾರಗಳು!

03/04/2026 9:24 AM

ಪೋಷಕರೇ ಗಮನಿಸಿ : ನವಜಾತ ಶಿಶುಗಳ ಉತ್ತಮ ನಿದ್ರೆಗೆ `ವೈಟ್ ನಾಯ್ಸ್ Vs ಜೋಗುಳ’? ಯಾವುದ ಬೆಸ್ಟ್ ತಿಳಿಯಿರಿ

03/04/2026 9:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.