Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಷೇರುದಾರರಿಗೆ ನಿರಾಶೆ ; ಸೆನ್ಸೆಕ್ಸ್ 450 ಅಂಕಗಳ ಕುಸಿತ, ನಿಫ್ಟಿ 25,600ಕ್ಕೆ ಇಳಿಕೆ

30/06/2025 4:08 PM

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

30/06/2025 3:57 PM

ನೀವು ‘ಮೊಣಕಾಲು’ ನೋವಿನಿಂದ ಬಳಲುತ್ತಿದ್ದೀರಾ? ಈ ವೈದ್ಯರ ಸಲಹೆ ಪಾಲಿಸಿ, ಪರಿಣಾಮ ನೋಡಿ

30/06/2025 3:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿಗೆ ಕಿರುಕುಳ ನೀಡಿದರೆ ದೂರು ಸಲ್ಲಿಸಿ: ಮಂಡ್ಯ ಡಿಸಿ ಡಾ.ಕುಮಾರ
KARNATAKA

ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿಗೆ ಕಿರುಕುಳ ನೀಡಿದರೆ ದೂರು ಸಲ್ಲಿಸಿ: ಮಂಡ್ಯ ಡಿಸಿ ಡಾ.ಕುಮಾರ

By kannadanewsnow0929/01/2025 9:17 PM

ಮಂಡ್ಯ: ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿ ಸಂದರ್ಭದಲ್ಲಿ ಕಿರುಕುಳ ನೀಡಿದರೆ 08232- 224655 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಕಂಪನಿಗಳ ಸಭೆ ನಡೆಸಿ ಮಾತನಾಡಿದರು. ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಸಮಾಜದಲ್ಲಿ ಅವಕಾಶವಿಲ್ಲ. ಸಾಲ ಮರುಪಾವತಿ ಮಾಡದೆ ಇರುವವರನ್ನು ಅವಾಚ್ಯ ಪದಗಳಿಂದ ನಿಂದಿಸುವುದು, ಮನೆಯ ಮೇಲೆ ಅವಮಾನವಾಗುವ ರೀತಿ ಮನೆ ಅಡಮಾನ ಮಾಡಿಕೊಳ್ಳಲಾಗಿದೆ ಎಂದು ಬರೆಯುವ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಅವರು ನೇರವಾಗಿ ಸ್ವಯಂ ಹಿತಶಕ್ತಿಯಿಂದ ಎಫ್‌.ಐ.ಆರ್ ದಾಖಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮೈಕ್ರೋ ಫೈನಾನ್ಸ್ ಬಗ್ಗೆ ಬರುವ ದೂರುಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ತಾಲ್ಲೂಕು‌ ಮಟ್ಟದಲ್ಲಿ ಸಹ ತಾಲ್ಲೂಕು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.

ಸಾಲ ವಸೂಲಾತಿ ಮಾಡಲು ಆರ್.ಬಿ.ಐ ನಿಯಮಗಳಿವೆ. ನಿಯಮ ಉಲ್ಲಂಘಿಸಿದರೆ ಮೈಕ್ರೋ ಫೈನಾನ್ಸ್ ವಿರುದ್ಧ ಸ್ಥಳೀಯವಾಗಿ ದೂರು ದಾಖಲಿಸುವುದರ ಜೊತೆಗೆ ಕ್ರಮ ಕೈಗೊಳ್ಳುವಂತೆ ಆರ್.ಬಿ.ಐ ಗೆ ಪತ್ರ ಬರೆಯಲಾಗುವುದು ಎಂದರು

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಅವರು ಸಭೆ ನಡೆಸಿ ಸ್ಥಳೀಯವಾಗಿ ಮೈಕ್ರೋ ಫೈನಾನ್ಸ್ ಹಾಗೂ ಸಾಲ ಪಡೆದವರ ನಡುವೆ ಯಾವುದಾದರೂ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಾಲ ನೀಡುವಾಗ ಸಾಲ ಮರುಪಾವತಿ ಸಾಮಥ್ಯ ದ ಬಗ್ಗೆ ತಿಳಿದುಕೊಳ್ಳದೇ ಸಾಲ ನೀಡುವುದು, ಮೂರು ಅಥವಾ ನಾಲ್ಕು ಮೈಕ್ರೋ ಫೈನಾನ್ಸ್ ಗಳು ಒಬ್ಬರಿಗೇ ಸಾಲ ನೀಡುವುದು ತಪ್ಪು‌. ಮೈಕ್ರೋ ಫೈನಾನ್ಸ್ ಗಳಿಗೆ 2 ಲಕ್ಷ ರೂ ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂದರ್ಭದಲ್ಲಿ ಅರ್ಜಿ ಹಾಗೂ ಷರತ್ತುಗಳು ಕನ್ನಡ ಭಾಷೆಯಲ್ಲಿರಬೇಕು ಸಾಲ ನೀಡುವ ಸಂದರ್ಭದಲ್ಲಿ ಸಾಲ ಪಡೆಯುವವರಿಗೆ ಸಾಲ ಮರುಪವಾತಿಯ ಷರತ್ತುಗಳನ್ನು ವಿವರಿಸಿ, ಅದರ ವಿಡಿಯೋ ಮಾಡಿಕೊಳ್ಳಬೇಕು ಎಂದರು.

ಸಾಲ ವಸೂಲಾತಿಗೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ ಸಾಲ ವಸೂಲಾತಿಗೆ ತೆರಳಬೇಕು, ಸೌಜನ್ಯದಿಂದ ವರ್ತಿಸಬೇಕು ಈ ಬಗ್ಗೆ ಮೈಕ್ರೋ ಫೈನಾನ್ಸ್ ಮುಖ್ಯಸ್ಥರು ಸಿಬ್ಬಂದಿಗಳಿಗೆ
ತರಬೇತಿ ನೀಡುವಂತೆ ತಿಳಿಸಿದರು.

ಜಿಲ್ಲಾಡಳಿತ ಈ ಹಿಂದೆ ಎರಡು ಬಾರಿ ಮೈಕ್ರೋ ಫೈನಾನ್ಸ್ ಗಳ ಮುಖ್ಯಸ್ಥರ ಸಭೆ ಕರೆದು ಸಲಹೆ ಗಳನ್ನು ನೀಡಿತ್ತು. ಅದರೂ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಹಲವಾರು ದೂರುಗಳು ಬರುತ್ತಿದ್ದು, ಮೈಕ್ರೋ ಫೈನಾನ್ಸ್ ಗಳು ತಮ್ಮ ಕಾರ್ಯವೈಖರಿಯನ್ನು ‌ಬದಲಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರು ಮಾತನಾಡಿ ಪ್ರತಿ ವಾರ ಸಾಲ ವಸೂಲಾತಿ ಮಾಡಿದರೆ ಸಾಲ ಪಡೆದವರಿಗೂ ಸಾಲ ವಾಪಸ್ಸು ನೀಡುವುದು ಕಷ್ಟಕರ. ಇದನ್ನು ಮಾಸಿಕ ನಿಯಮಕ್ಕೆ ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಕಷ್ಟದಲ್ಲಿದ್ದಾಗ ಅದರ ಪರಿಹಾರಕ್ಕೆ ಸಾಲ ಪಡೆದುಕೊಳ್ಳುತ್ತಾರೆ. ನೀವು ನೀಡಿದ ಸಾಲದ ಮೊತ್ತದಿಂದಲೇ ಒಂದು ಅಥವಾ ಎರಡು ಕಂತನ್ನು ಮರುಪಾವತಿ ಮಾಡುತ್ತಾರೆ. ಮೈಕ್ರೋ ಫೈನಾನ್ಸ್ ಗಳು ಸಹ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಗಳನ್ನು ನೋಡಿ ಸಾಲ ನೀಡಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿ.ಒ.ಎಸ್.ಪಿ ಮುರುಳಿ, ಕೃಷ್ಣಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಮುಖ್ಯಸ್ಥರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

BIG NEWS: ಬೆಂಗಳೂರು ಸೇರಿ 6 ನಗರಗಳಲ್ಲಿ ಕೈಯಿಂದ ಒಳಚರಂಡಿ ಸ್ವಚ್ಛಗೊಳಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧ

“ನಾನು ಅದೇ ನೀರನ್ನ ಕುಡಿಯುತ್ತೇನೆ” : ಎಎಪಿಯ ‘ವಿಷಕಾರಿ ಯಮುನಾ’ ಆರೋಪಕ್ಕೆ ‘ಪ್ರಧಾನಿ ಮೋದಿ’ ತಿರುಗೇಟು

Share. Facebook Twitter LinkedIn WhatsApp Email

Related Posts

BREAKING : ಇನ್ಮುಂದೆ ಸುಳ್ಳು ಸುದ್ದಿ ಹರಡುವವರೆಗೆ 7 ವರ್ಷ ಜೈಲು ಶಿಕ್ಷೆ 10 ಲಕ್ಷ ದಂಡ : ಹೊಸ ಕಾನೂನು ತರಲು ಸರ್ಕಾರ ಸಿದ್ಧತೆ

30/06/2025 3:49 PM1 Min Read

BREAKING : ಮಂಗಳೂರಲ್ಲಿ ಘೋರ ಘಟನೆ : ಶಾಲೆಯ ಮೇಲ್ಚಾವಣಿ ಕುಸಿದು ಓರ್ವ ವಿದ್ಯಾರ್ಥಿಗೆ ಗಾಯ!

30/06/2025 3:27 PM1 Min Read

BIG NEWS : ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ : ಶಾಸಕ HC ಬಾಲಕೃಷ್ಣ ಹೇಳಿಕೆ

30/06/2025 3:16 PM1 Min Read
Recent News

BREAKING : ಷೇರುದಾರರಿಗೆ ನಿರಾಶೆ ; ಸೆನ್ಸೆಕ್ಸ್ 450 ಅಂಕಗಳ ಕುಸಿತ, ನಿಫ್ಟಿ 25,600ಕ್ಕೆ ಇಳಿಕೆ

30/06/2025 4:08 PM

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

30/06/2025 3:57 PM

ನೀವು ‘ಮೊಣಕಾಲು’ ನೋವಿನಿಂದ ಬಳಲುತ್ತಿದ್ದೀರಾ? ಈ ವೈದ್ಯರ ಸಲಹೆ ಪಾಲಿಸಿ, ಪರಿಣಾಮ ನೋಡಿ

30/06/2025 3:53 PM

ತೋಳು, ಮೊಣಕೈ ನೋವು ನಿರ್ಲಕ್ಷಿಸಬೇಡಿ, ಅದು ‘ಹೃದಯ ಸಮಸ್ಯೆ’ಯ ಸಂಕೇತ: ಹೃದ್ರೋಗ ತಜ್ಞರ ಎಚ್ಚರಿಕೆ | Heart Attack

30/06/2025 3:51 PM
State News
KARNATAKA

BREAKING : ಇನ್ಮುಂದೆ ಸುಳ್ಳು ಸುದ್ದಿ ಹರಡುವವರೆಗೆ 7 ವರ್ಷ ಜೈಲು ಶಿಕ್ಷೆ 10 ಲಕ್ಷ ದಂಡ : ಹೊಸ ಕಾನೂನು ತರಲು ಸರ್ಕಾರ ಸಿದ್ಧತೆ

By kannadanewsnow0530/06/2025 3:49 PM KARNATAKA 1 Min Read

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇದೀಗ ಹೊಸ ಕಾನೂನು…

BREAKING : ಮಂಗಳೂರಲ್ಲಿ ಘೋರ ಘಟನೆ : ಶಾಲೆಯ ಮೇಲ್ಚಾವಣಿ ಕುಸಿದು ಓರ್ವ ವಿದ್ಯಾರ್ಥಿಗೆ ಗಾಯ!

30/06/2025 3:27 PM

BIG NEWS : ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ : ಶಾಸಕ HC ಬಾಲಕೃಷ್ಣ ಹೇಳಿಕೆ

30/06/2025 3:16 PM

BREAKING: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ನಿಧನ

30/06/2025 2:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.