Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನೆ ಕಟ್ಟೋರಿಗೆ ಗುಡ್‌ನ್ಯೂಸ್‌: ಸಿಮೆಂಟ್ ಚೀಲ ಬೆಲೆ 35 ರೂ.ವರೆಗೆ ಇಳಿಕೆ…..!

11/09/2025 1:04 PM

BREAKING: ನೇಪಾಳ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆ, ಮಧ್ಯಂತರ ಸರ್ಕಾರ ರಚನೆಗೆ ಮಾತುಕತೆ

11/09/2025 1:00 PM

ತುಮಕೂರು : ನೀರಿನ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ : ಗೂಡ್ಸ್ ವಾಹನ ಹರಿಸಿ ವ್ಯಕ್ತಿಯ ಭೀಕರ ಹತ್ಯೆ!

11/09/2025 12:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಚಿವ ದಿನೇಶ್ ಗುಂಡೂರಾವ್ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ
KARNATAKA

ಸಚಿವ ದಿನೇಶ್ ಗುಂಡೂರಾವ್ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

By kannadanewsnow0930/11/2024 5:42 PM

ಬೆಂಗಳೂರು: ಕರ್ನಾಟಕದಲ್ಲಿ ಆರೋಗ್ಯ ಇಲಾಖೆಗೆ ಅನಾರೋಗ್ಯ ಬಡಿದಿದೆ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರ್ಲಕ್ಷ್ಯ, ದುರಹಂಕಾರದಿಂದ ತುಂಬಿತುಳುಕಿ ಇವತ್ತು ನಮ್ಮ ರಾಜ್ಯದ ಮಹಿಳೆಯರ ಮತ್ತು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಎಂದು ಅವರು ಟೀಕಿಸಿದರು. ಲೋಕಾಯುಕ್ತದವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಛೀಮಾರಿ ಹಾಕಿದ್ದಾರೆ. ಹಲವಾರು ತಜ್ಞರ ತಂಡಗಳು ಆಸ್ಪತ್ರೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿ ಕೊಟ್ಟಿವೆ. ಆಸ್ಪತ್ರೆಗೆ ಹೋಗುವ ಸಾರ್ವಜನಿಕರು ಬದುಕಿ ವಾಪಸ್ ಬರುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ ಆಗುವ ಸಾವು ಕರ್ನಾಟಕವನ್ನು ಆತಂಕಕ್ಕೆ ಈಡು ಮಾಡಿದೆ. ಕರ್ನಾಟಕದಲ್ಲಿ ಹೆರಿಗೆ ಆಸ್ಪತ್ರೆಗಳಲ್ಲಿ ಆಗುವ ಸಾವನ್ನು ಸರಕಾರ ಮುಚ್ಚಿಡುತ್ತಿದೆ. ಒಂದೆಡೆ ಬಾಣಂತಿಯರ ಸಾವು, ಮತ್ತೊಂದೆಡೆ ಮಕ್ಕಳ ಸಾವು ಸಂಭವಿಸುತ್ತಿದೆ ಎಂದು ವಿವರಿಸಿದರು.

ಬಳ್ಳಾರಿ ನಮ್ಮ ಕಣ್ಣಿಗೆ ಕಾಣುವ ಉದಾಹರಣೆಯಷ್ಟೇ. ಬಳ್ಳಾರಿಯಲ್ಲಿ ಒಟ್ಟು 5 ಸಾವಾಗಿದೆ. ಸಿಸೇರಿಯನ್ ಆದಂಥ ಹೆಣ್ಮಕ್ಕಳು ಅವರಿಗೆ ಕೊಟ್ಟ ಗ್ಲುಕೋಸ್ ಕಾರಣಕ್ಕಾಗಿ ಮೃತಪಟ್ಟಿದ್ದಾರೆ. ರಾಜೀವ್ ಗಾಂಧಿ ವಿವಿ ಮತ್ತು ಇತರ ವೈದ್ಯರ ತಂಡಗಳು ಇದೇ ಕಾರಣಕ್ಕಾಗಿ ಸಾವು ಸಂಭವಿಸಿದೆ ಎಂದು ವರದಿ ನೀಡಿವೆ ಎಂದು ತಿಳಿಸಿದರು.

ಮುಖ್ಯಮಂತ್ರಿ, ಸಚಿವರ ದುಡ್ಡಿನ ಆಸೆಗೆ ಬಡವರು ಬಲಿ

ಈ ಗ್ಲುಕೋಸ್ ಸರಬರಾಜು ಬೇಡ ಎಂದರೂ ಅದನ್ನೇ ಪೂರೈಸಲಾಗುತ್ತಿದೆ. ಒಂದೆಡೆ ಶರಣಪ್ರಕಾಶ್ ಪಾಟೀಲ್ ಅವರು ನಮ್ಮ ಆಸ್ಪತ್ರೆ ಮುಂದೆ ಇರುವ ಕೇಂದ್ರ ಸರಕಾರದ ಜನೌಷಧಿ ಕೇಂದ್ರವನ್ನೂ ಮುಚ್ಚುತ್ತೇನೆ ಎನ್ನುತ್ತಾರೆ. ಅಂದರೆ ಇವರೇನು ಮಾಡಲು ಹೊರಟಿದ್ದಾರೆ? ಮತ್ಯಾವುದೋ ದಂಧೆ ಮಾಡಲು ಹೊರಟಿದ್ದೀರಿ. ಇನ್ಯಾವುದೋ ಶೆಲ್ ಕಂಪೆನಿಗೆ ಟೆಂಡರ್ ಕೊಡಲು ಹೊರಟಿದ್ದೀರಿ ಎಂದು ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಜನೌಷಧಿ, ಸೌಲಭ್ಯಗಳನ್ನು ತೆಗೆದುಕೊಳ್ಳಲು ನೀವು ಸಿದ್ಧರಿಲ್ಲ; ನೀವೇ ಸ್ವಂತ ಟೆಂಡರ್ ಕರೆದು, ಭ್ರಷ್ಟಾಚಾರ ಮಾಡಿ ಪರ್ಸೆಂಟೇಜ್ ಹೊಡೆಯಲು ಮುಂದಾಗಿದ್ದೀರಿ. ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳ, ಮಂತ್ರಿಗಳ ದುಡ್ಡಿನ ಆಸೆಗೆ ನಮ್ಮ ಬಡವರು ಇವತ್ತು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ದಿನೇಶ್ ಗುಂಡೂರಾವ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಿದ್ದರಾಮಯ್ಯರನ್ನು ಆಗ್ರಹಿಸಿದರು. ಬಡವರು, ಹಿಂದುಳಿದವರು, ದಲಿತರ ಪರ ಎಂದು ಮುಖ್ಯಮಂತ್ರಿಗಳು ಭಾಷಣ ಮಾಡಿದರೆ ಸಾಲದು; ಕಳಕಳಿ ಇರಬೇಕಲ್ಲವೇ? ಆ ಹೆಣ್ಮಕ್ಕಳ ಕುಟುಂಬಕ್ಕೆ, ಸತ್ತಿರುವ ಹೆಣ್ಮಕ್ಕಳ ಶಿಶುವಿಗೆ ಯಾರು ಗತಿ ಎಂದು ಪ್ರಶ್ನಿಸಿದರು. ದುರ್ಘಟನೆಗಳ ಕುರಿತು ತನಿಖೆ ನಡೆಸಬೇಕು ಮತ್ತು ಸತ್ತ ಬಾಣಂತಿಯರ, ಮಕ್ಕಳ ಕುಟುಂಬಕ್ಕೆ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.

ನಿಗದಿತ ಕಂಪೆನಿಯ 2ನೇ ಬ್ಯಾಚಿನ ಗ್ಲುಕೋಸ್ ಬ್ಯಾನ್ ಮಾಡಲು ಕೇಂದ್ರ ಸರಕಾರ ತಿಳಿಸಿದ್ದರೂ, ರಾಜ್ಯ ಸರಕಾರದ ಸುತ್ತೋಲೆ ಹೋದರೂ ಆಸ್ಪತ್ರೆಗಳಿಗೆ ಇದು ಹೇಗೆ ಬಂತು? ಅವನ್ನೇ ನಮ್ಮ ಬಾಣಂತಿ ಹೆಣ್ಮಕ್ಕಳಿಗೆ ಹೇಗೆ ಕೊಟ್ಟರು? ಇದರ ಹಿಂದಿರುವ ಕೈವಾಡ ಯಾವುದು? ಈ ಕಂಪೆನಿಯ ನಿರ್ದೇಶಕರು, ಹಿನ್ನೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಶೆಲ್ ಕಂಪೆನಿ ಮೂಲಕ ನಕಲಿ ಔಷಧಿ ಮಾರಾಟ ಮಾಡುತ್ತಿದ್ದಾರೆ. ಇದು ಬಹಳ ಆಶ್ಚರ್ಯ ಮತ್ತು ದುಃಖ ತರುತ್ತಿದೆ ಎಂದು ನುಡಿದರು.

ಕರುಣೆ ಇಲ್ಲದ, ನಿರ್ದಯಿ ಸರಕಾರ

ಸಿದ್ದರಾಮಯ್ಯರ ಸರಕಾರ ನಿರ್ದಯಿ ಸರಕಾರವಾಗಿದೆ. ಕರುಣೆ ಇಲ್ಲದ, ಕೊಲೆಗಡುಕರ ಸರಕಾರವಾಗಿದೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಟೀಕಿಸಿದರು.
ನಾನೇ ಕೆ.ಆರ್.ಪುರ ಆಸ್ಪತ್ರೆಗೆ ಭೇಟಿ ನೀಡಿದ್ದೆ; ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ ಎಂದು ತಿಳಿಸಿದರು. ಔಷಧಿ ಸರಿಯಾಗಿ ಇಲ್ಲ; ಶಸ್ತ್ರಚಿಕಿತ್ಸೆಗೆ ಉಪಕರಣ ಸರಿಯಾಗಿ ಬರುವುದಿಲ್ಲ; ವೈದ್ಯರಿಲ್ಲ; ಕಂಪ್ಯೂಟರ್ ಸಿಬ್ಬಂದಿಗಳೂ ಇಲ್ಲ. ಇದೆಲ್ಲಕ್ಕೂ ದಿನೇಶ್ ಗುಂಡೂರಾವ್ ಅವರು ನೇರ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.

ಕೇವಲ ಮಧ್ಯ ಕರ್ನಾಟಕದಲ್ಲಿ ಜನವರಿಯಿಂದ 111 ನವಜಾತ ಶಿಶುಗಳು ಸಾವನ್ನಪ್ಪಿದ ಮಾಹಿತಿ ಸಿಕ್ಕಿದೆ. ಸಿಸೇರಿಯನ್ ಆದ 27 ತಾಯಂದಿರು ಇದೇ ಭಾಗದಲ್ಲಿ ಮೃತಪಟ್ಟಿದ್ದಾರೆ. ಸರಕಾರ ಏನು ಮಾಡುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಜಿಕಿ ನ್ಯೂಸ್ ಸ್ಕೋರ್: ‘ರಿಲಯನ್ಸ್‌’ಗೆ ಅಗ್ರ ಸ್ಥಾನ

BIG NEWS : ಯಾರು ಕಣ್ಣೀರು ಹಾಕಬಾರದು, ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ : ನಿಖಿಲ್ ಕುಮಾರಸ್ವಾಮಿ ಹೇಳಿಕೆ

Share. Facebook Twitter LinkedIn WhatsApp Email

Related Posts

ತುಮಕೂರು : ನೀರಿನ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ : ಗೂಡ್ಸ್ ವಾಹನ ಹರಿಸಿ ವ್ಯಕ್ತಿಯ ಭೀಕರ ಹತ್ಯೆ!

11/09/2025 12:59 PM1 Min Read

BREAKING : ಕಾಂಗ್ರೆಸ್ ಶಾಸಕರಿಗೆ ಬಂಪರ್ ಗಿಫ್ಟ್ : 50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

11/09/2025 12:50 PM1 Min Read

BIG NEWS : ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : ಸಹಜ ಸ್ಥಿತಿಯತ್ತ ಮದ್ದೂರು ಪಟ್ಟಣ

11/09/2025 12:38 PM1 Min Read
Recent News

ಮನೆ ಕಟ್ಟೋರಿಗೆ ಗುಡ್‌ನ್ಯೂಸ್‌: ಸಿಮೆಂಟ್ ಚೀಲ ಬೆಲೆ 35 ರೂ.ವರೆಗೆ ಇಳಿಕೆ…..!

11/09/2025 1:04 PM

BREAKING: ನೇಪಾಳ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆ, ಮಧ್ಯಂತರ ಸರ್ಕಾರ ರಚನೆಗೆ ಮಾತುಕತೆ

11/09/2025 1:00 PM

ತುಮಕೂರು : ನೀರಿನ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ : ಗೂಡ್ಸ್ ವಾಹನ ಹರಿಸಿ ವ್ಯಕ್ತಿಯ ಭೀಕರ ಹತ್ಯೆ!

11/09/2025 12:59 PM

Shocking: ಪತ್ನಿ, ಪ್ರಿಯಕರನ ಹತ್ಯೆ ಮಾಡಿ,ಕತ್ತರಿಸಿದ ತಲೆಗಳ ಜೊತೆಗೆ ಪೊಲೀಸರಿಗೆ ಶರಣಾದ ಪತಿ

11/09/2025 12:52 PM
State News
KARNATAKA

ತುಮಕೂರು : ನೀರಿನ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ : ಗೂಡ್ಸ್ ವಾಹನ ಹರಿಸಿ ವ್ಯಕ್ತಿಯ ಭೀಕರ ಹತ್ಯೆ!

By kannadanewsnow0511/09/2025 12:59 PM KARNATAKA 1 Min Read

ತುಮಕೂರು : ನೀರಿನ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡುಗೆನಹಳ್ಳಿ ಹೋಬಳಿಯ ಪೊಲೇನಳ್ಳಿಯಲ್ಲಿ ಈ ಒಂದು ಘಟನೆ…

BREAKING : ಕಾಂಗ್ರೆಸ್ ಶಾಸಕರಿಗೆ ಬಂಪರ್ ಗಿಫ್ಟ್ : 50 ಕೋಟಿ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

11/09/2025 12:50 PM

BIG NEWS : ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : ಸಹಜ ಸ್ಥಿತಿಯತ್ತ ಮದ್ದೂರು ಪಟ್ಟಣ

11/09/2025 12:38 PM

ಮಾನವರ ಅಳಿವು ಉಳಿವು ಅರಣ್ಯದ ಉಳಿವಿನ ಮೇಲೆ ಅವಲಂಬಿತ : ಸಿ.ಎಂ.ಸಿದ್ದರಾಮಯ್ಯ

11/09/2025 12:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.