Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

06/06/2025 7:13 AM

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ನಾಳೆ ಸಾಗರದಲ್ಲಿ ಡಾ.ಡಿ.ಎಂ ಸಾಗರ್ ಅವರ ‘ವಿಲಕ್ಷಣ ಜಲಜಾಲ’ ಪುಸ್ತಕ ಬಿಡುಗಡೆ
KARNATAKA

ಶಿವಮೊಗ್ಗ: ನಾಳೆ ಸಾಗರದಲ್ಲಿ ಡಾ.ಡಿ.ಎಂ ಸಾಗರ್ ಅವರ ‘ವಿಲಕ್ಷಣ ಜಲಜಾಲ’ ಪುಸ್ತಕ ಬಿಡುಗಡೆ

By kannadanewsnow0920/11/2024 7:54 PM

ಶಿವಮೊಗ್ಗ: ಸಾಗರದಲ್ಲಿ ಹುಟ್ಟಿ ಬೆಳೆದು ಅಮೇರಿಕಾದಲ್ಲಿ ವಾಸಿಯಾಗಿರುವಂತ ಅಪ್ಪಟ ಕನ್ನಡಿಗ ಡಾ.ಡಿಎಂ ಸಾಗರ್ ಅವರು ಕನ್ನಡದಲ್ಲಿ ಬರೆದಿರುವಂತ ವಿಲಕ್ಷಣ ಜಲಜಾಲ ಎನ್ನುವ ಪುಸ್ತಕವನ್ನು ನಾಳೆ ಬಿಡುಗಡೆಗೊಳಿಸಲಾಗುತ್ತಿದೆ.

ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಅಶ್ವಿನಿ ಕುಮಾರ್ ಅವರು, ದೊಡ್ಡೇರಿ ಮಹಾಬಲಗಿರಿರಾವ್, ಡಾ.ಡಿಎಂ ಸಾಗರ್ ಮತ್ತು ರಜನಿ ದೊಡ್ಡೇರಿ ಕುಟುಂಬ, ಅಭಿನಯ ಸಾಗರ(ರಿ) ಹಾಗೂ ಜೋಷಿ ಫೌಂಡೇಷನ್ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ನಾಳೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.

ದಿನಾಂಕ 21-11-2024ರ ನಾಳೆ ಸಂಜೆ 4 ಗಂಟೆಗೆ ಸಾಗರ ನಗರದ ಅಗ್ರಹಾರ ಬಳಿಯಲ್ಲಿ ಇರುವಂತ ಶೃಂಗೇರಿ ಶಂಕರಮಠದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಬಿಡುಗಡೆಗೂ ಮುನ್ನ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆ ಬಳಿಕ ಸಂಜೆ 7 ಗಂಟೆಗೆ ಡಾ.ಡಿಎಂ ಸಾಗರ್ ಅವರು ಬರೆದಿರುವಂತ ವಿಲಕ್ಷಣ ಜಲಜಾಲ ಎನ್ನುವಂತ ನೀರಿನ ಕುರಿತು ವೈಜ್ಞಾನಿಕ ಕೌತುಕಗಳು ಇರುವಂತ ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದಂತ ದೊಡ್ಡೇರಿ ಮಹಾಬಲಗಿರಿ ರಾವ್ ಅವರು “ವಿಲಕ್ಷಣ ಜಲಜಾಲ” ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಕುರಿತಂತೆ ಪರಿಸರ ಪ್ರೇಮಿ ಅಖಿಲೇಶ್ ಚಿಪ್ಳಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾಗರ ಸಮಾಜಿಕ ಮುಖಂಡರಾದಂತ ಟಿ.ವಿ ಪಾಂಡುರಂಗ, ನಗರಸಭಾ ಸದಸ್ಯ ಬಿ.ಹೆಚ್ ಲಿಂಗರಾಜು ಭಾಗಿಯಾಗಲಿದ್ದಾರೆ ಎಂದರು.

ಡಾ.ಡಿಎಂ ಸಾಗರ್ ಮಾತನಾಡಿ ನೀರಿನ ಬಗ್ಗೆ ಕುರಿತು ಬರೆದಂತ ವೈಜ್ಞಾನಿಕ ಪುಸ್ತಕ ಇದಾಗಿದೆ. ಇಂಗ್ಲೀಷ್ ನಲ್ಲಿರುವಂತ ಕಠಿಣ ಪದಗಳನ್ನು ಸರಳ ಕನ್ನಡದಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತ ರೀತಿಯಲ್ಲಿ ಬರೆದು ತಿಳಿಸುವಂತ ಪ್ರಯತ್ನ ಮಾಡಲಾಗಿದೆ. ಇದೊಂದು ನನ್ನ ಪ್ರಥಮ ಪುಸ್ತಕವಾಗಿದ್ದು, ನೀರಿನ ಬಗ್ಗೆ ಸಮಗ್ರ ಚಿತ್ರಣವನ್ನು ಓದುಗರಿಗೆ ತೆರದಿಡುವಂತ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಡಾ.ಡಿಎಸ್ ಸಾಗರ್ ಯಾರು.?

ಇವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿ ಬೆಳೆದು, ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಕುವೆಂಪು ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಅಲ್ಲದೇ ಸುವರ್ಣ ಪದಕ ಪಡೆದ ವಿದ್ಯಾರ್ಥಿ ಕೂಡ. ಆ ಬಳಿಕ ನೆದರ್ ಲ್ಯಾಂಡ್ಸ್ ನ ಗ್ರೋನಿರಂಜನ್ ವಿವಿಯಿಂದ ಅಪ್ಟಿಕಲ್ ಕಂಡೆನ್ಡ್ ಮ್ಯಾಟರ್ ಫಿಸಿಕ್ಸ್ ನಲ್ಲಿ ಪಿಹೆಚ್ ಡಿ ಪದವಿಯನ್ನು ಪಡೆದಿದ್ದಾರೆ.

ಸೆಮಿ ಕಂಡಕ್ಟರ್ ಕ್ವಾಂಟಮ್ ಡಾಟ್ಸ್, ನ್ಯಾನೋ ತಂತ್ರಜ್ಞಾನ, ಅಪ್ಟಿಕಲ್ ಫಿಸಿಕ್ಸ್, ಲೇಸರ್ ಸ್ಪೆಕ್ಟೋಸ್ಕೋಪಿ ಇತ್ಯಾದಿ ಭೌತ ಹಾಗೂ ಭೌತೀಯ ರಾಸಾಯನ ಶಾಸ್ತ್ರಗಳಲ್ಲಿ ಸಂಶೋಧನೆ ನಡೆಸಿದ, ನಡೆಸುತ್ತಿರುವಂತ ಸಂಶೋಧಕರು ಹೌದು.

ನ್ಯಾನೋ ಲೆಟರ್ಸ್, ಜರ್ನಲ್ ಆಫ್ ಅಮೇರಿಕಾ ಕೆಮಿಕಲ್ ಸೊಸೈಟಿ ಹಾಗೂ ಇನ್ನಿತರ ಪ್ರಭಾವಿ ಜರ್ನಲ್ಸ್ ಗಳಲ್ಲಿ ಇವರು ಭೌತೀಯ ಹಾಗೂ ಭೌತೀಯ ರಾಸಾಯನ ಶಾಸ್ತ್ರದ ಬಗ್ಗೆ ಬರೆದಂತ ಲೇಖನಗಳು ಪ್ರಕಟಗೊಂಡಿದ್ದಾವೆ.

ಪ್ರಸ್ತುತ ಪ್ರಿನ್ಸಿಪಾಲ್ ಅಪ್ಟಿಕಲ್ ಸೈಂಟಿಸ್ಟ್ ಆಗಿ ಅಮೇರಿಕಾದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಡಾ.ಡಿ.ಎಸ್ ಸಾಗರ್ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ವಿಲಕ್ಷಣ ಜಲಜಾಲ ಎನ್ನುವ ಕೃತಿ ನಾಳೆ ಸಾಗರದ ಅಗ್ರಹಾರದಲ್ಲಿರುವಂತ ಶೃಂಗೇರಿ ಶಂಕರ ಮಠದಲ್ಲಿ ಬಿಡುಗಡೆಯಾಗುತ್ತಿದೆ.

ವರದಿ: ವಸಂತ ಬಿ ಈಶ್ವರಗೆರೆ

BIGG NEWS: ಭಿನ್ನಮತೀಯರ ವಿರುದ್ಧ ಸಿಡಿದೆದ್ದ ‘ಕರ್ನಾಟಕ ಬಿಜೆಪಿ’ ನಿಷ್ಠಾವಂತ ನಾಯಕರು: ಕ್ರಮಕ್ಕೆ ಆಗ್ರಹ | Karnataka BJP

ರಾಜ್ಯದ ಜನತೆಗೆ ಗಮನಕ್ಕೆ: ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯಲು ಸಹಾಯವಾಣಿ ಆರಂಭ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

06/06/2025 7:13 AM1 Min Read

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM1 Min Read

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM1 Min Read
Recent News

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

06/06/2025 7:13 AM

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM

ಭಾರತದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳನ್ನು ರದ್ದುಗೊಳಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಪಾಕಿಸ್ತಾನ

06/06/2025 7:00 AM
State News
KARNATAKA

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

By kannadanewsnow5706/06/2025 7:13 AM KARNATAKA 1 Min Read

ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಅನರ್ಹರರ ಪತ್ತೆಗೆ ರಾಜ್ಯ ಸರ್ಕಾರವು ಮಹತ್ವದ…

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM

BIG NEWS : ರಾಜ್ಯ ಆರೋಗ್ಯ ಇಲಾಖೆಯ ನೌಕರರಿಗೆ ಇನ್ಮುಂದೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ.!

06/06/2025 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.