ವಿಜಯನಗರ : ಹಣ ಡಬಲ್ ಆಗುತ್ತೆ ಎಂಬ ಆಸೆಯಿಂದ ಕಂಡ ಕಂಡವರಿಗೆ ಹಣ ಕೊಡುವ ಮುನ್ನ ಎಚ್ಚರ. ರಾತ್ರಿ ಪೂಜೆಯ ಹೆಸರಿನಲ್ಲಿ ಹಣ ಡಬಲ್ ಮಾಡುತ್ತೇವೆಂದು ಒಂದೇ ಗ್ರಾಮದಲ್ಲಿ ಕೋಟ್ಯಾಂತರ ರೂ. ವಂಚಿಸಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕಲ್ಲಹಳ್ಳಿ ತಾಂಡಾದಲ್ಲಿ 6 ತಿಂಗಳಲ್ಲಿ 60 ಕ್ಕೂ ಹೆಚ್ಚು ಜನರಿಂದ ಹಣ ಡಬ್ಲಿಂಗ್ ಮಾಡುತ್ತೇವೆಂದು ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. 1 ಲಕ್ಷ ರೂ. ಕೊಟ್ರೆ 10 ಲಕ್ಷ ಕೊಡುವುದಾಗಿ ಹೇಳಿದ ಆರೋಪಿಗಳು ಮನೆಯಲ್ಲಿ ಆಳವಾದ ಗುಂಡಿ ತೋಡಿ ಅವರು ಕೊಡುವ ಹಣವನ್ನು ಬಾಕ್ಸ್ ನಲ್ಲಿ ಹಾಕಿ ಮುಚ್ಚಿ ಹಾಕಿದ್ದಾರೆ. ಇದನ್ನು 150 ದಿನಗಳ ನಂತರ ತೆಗೆದ್ರೆ ಹಣ ಡಬಲ್ ಆಗಲಿದೆ ಎಂದು ಹೇಳಿ ನಂಬಿಸಿ ಮೋಸ ಮಾಡಿದ್ದಾರೆ.
ಕಲ್ಲಹಳ್ಳಿ ಒಂದೇ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ರೂ.ಗಳನ್ನು ವಂಚಿಸಲಾಗಿದೆ. ಘಟನೆ ಸಂಬಂಧ ವಿಜಯನಗರ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.