ಬೆಂಗಳೂರು : ಅಕ್ರಮ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಬರ್ಬರ ಕೊಲೆಯಾಗಿರುವ ಘಟನೆ ಬೆಂಗಳೂರಿನ ಬಾಗಲಕೋಟೆಯಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೊದಲನೇ ಪ್ರಕರಣದಲ್ಲಿ ಬಾಗಲಕುಂಟೆಯಲ್ಲಿ ಚಾಕುವಿನಿಂದ ಇರಿದು ಪತ್ನಿಯನ್ನು ಭೀಕರವಾಗಿ ಪತಿ ಕೊಲೆ ಮಾಡಿದ್ದಾನೆ. ಜ್ಯೋತಿ (55) ಕೊಲೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ. ನಂತರ ಜ್ಯೋತಿ ಪತಿ ಅಶ್ವಥ್ ನಾರಾಯಣ ನೇಣಿಗೆ ಶರಣಾಗಿದ್ದಾನೆ. ಜೂನ್ 10 ರಂದು ನಡೆದಿದ್ದ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಆದ್ದರಿಂದ ಜ್ಯೋತಿ ಹಾಗೂ ಪತಿ ಅಶ್ವಥ್ ಮೃತ ದೇಹ ಇದೀಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನೂ ಮತ್ತೊಂದು ಪ್ರಕರಣದಲ್ಲಿ ಪತ್ನಿಯಿಂದಲೇ ಪತಿಯ ಕೊಲೆಯಾಗಿದೆ. ಬಾಗಲಕುಂಟೆಯ ವಿನಾಯಕ ನಗರದ ಮನೆಯೊಂದರಲ್ಲಿ ಪತ್ನಿಯಿಂದ ಪತಿಯ ಹತ್ಯೆ ಮಾಡಲಾಗಿದೆ. ಅಕ್ರಮ ಸಂಬಂಧ ಕಲ್ಪಿಸಿ ಗಲಾಟೆ ವೇಳೆ ರಾಮಾಂಜಿನಪ್ಪ (30) ಕೊಲೆಯಾಗಿದ್ದಾನೆ ಎಂದು ತಿಳಿದುಬಂದಿದೆ ಚಾಕುವಿನಿಂದ ಇರಿದು ಪತ್ನಿ ಪ್ರೇಮ (27) ಕೊಲೆಗದಿದ್ದು ಸದ್ಯಪೋಲಿಸಲು ಆಕೆಯನ್ನು ಬಂಧಿಸಿದ್ದಾರೆ ಬಾಗಲಕುಂಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.