Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಕಿಸ್ತಾನದ 4 ವಾಯು ರಕ್ಷಣಾ ನೆಲೆಗಳ ಮೇಲೆ ಡ್ರೋನ್ ದಾಳಿ, ಒಂದು ರಾಡಾರ್ ಹೊಡೆದುರುಳಿಸಿದ ಭಾರತ

09/05/2025 6:22 PM

ಮೇ, 26 ರಿಂದ 31 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2

09/05/2025 6:22 PM

ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

09/05/2025 6:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಸಂಸದ ಪ್ರಜ್ವಲ್ ರೇವಣ್ಣ’ ವಿರುದ್ಧ ‘ರೇಪ್ ಕೇಸ್’ ದಾಖಲಿಸುವಂತೆ ‘ಪೊಲೀಸ್ ಮಹಾನಿರ್ದೇಶಕ’ರಿಗೆ ದೂರು
KARNATAKA

BIG NEWS: ‘ಸಂಸದ ಪ್ರಜ್ವಲ್ ರೇವಣ್ಣ’ ವಿರುದ್ಧ ‘ರೇಪ್ ಕೇಸ್’ ದಾಖಲಿಸುವಂತೆ ‘ಪೊಲೀಸ್ ಮಹಾನಿರ್ದೇಶಕ’ರಿಗೆ ದೂರು

By kannadanewsnow0929/04/2024 5:04 PM

ಬೆಂಗಳೂರು: ಅತ್ಯಾಚಾರ ಆರೋಪದ ದೂರು ನೀಡಿದ್ರೂ ಹೊಳೆನರಸೀಪುರ ಪೊಲೀಸರು ರೇಪ್ ಸೆಕ್ಷನ್ ದಾಖಲಿಸದೇ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ.

ಈ ಕುರಿತಂತೆ ಸಮಾನ ಮನಸ್ಕರು ಕರ್ನಾಟಕ ಪೊಲೀಸ್ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದು, ದಿನಾಂಕ 28.04.2024 ರಂದು 47 ವರ್ಷದ ಸಂತ್ರಸ್ತ ಮಹಿಳೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ರಿ ದೂರನ್ನು ಪಡೆದುಕೊಂಡಿರುವ ಹೊಳೆನರಸೀಪುರ ಪೊಲೀಸರು ಅಪರಾಧ ಸಂಖ್ಯೆ 107/2024 ಎಂದು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 354a, 354d, 506, 509 ದಾಖಲಿಸಿಕೊಂಡಿದ್ದಾರೆ ಎಂದಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿರುವ ದೂರು ಮತ್ತು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಸಾರಾಂಶದಲ್ಲಿ “ಪಿರ್ಯಾದಿಗೆ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಎಚ್ ಡಿ ರೇವಣ್ಣರವರ ಮನೆಯಲ್ಲಿ ಮೂರುವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ 4 ತಿಂಗಳ ನಂತರ ಹೆಚ್ ಡಿ ರೇವಣ್ಣ ರವರು ತಮ್ಮ ಕೊಠಡಿಗೆ ಬರುವಂತೆ ಅಹ್ವಾನಿಸುತ್ತಿದ್ದರು. ಮನೆಯಲ್ಲಿ 6 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರು ಪ್ರಜ್ವಲ್ ರೇವಣ್ಣ ಬಂದಾಗ ನಮಗೆ ಭಯವಾಗುತ್ತದೆ ಎಂದು ಭಯ ಹೊರ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ.

 ರೇವಣ್ಣರವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಸ್ಟೋರ್ ರೂಮ್ ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರ. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಪ್ರಜ್ವಲ್ ರೇವಣ್ಣ ಅಡುಗೆ ಮನೆಯಲ್ಲಿ ಇದ್ದಾಗ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಭಾಗದಲ್ಲಿ, ಜಿಗುಟುತ್ತಿದ್ದರು. ಎಣ್ಣೆ ಹಚ್ಚಲು ನನ್ನನ್ನು ಕಳಿಸು ಎಂದು ಕೆಲಸ ಮಾಡುವ ಹುಡುಗನ ಹೇಳಿ ಕಳುಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಮನೆಯಲ್ಲಿದ್ದಾಗ ಪೋನ್ ಮಾಡಿ ಮನೆಯಲ್ಲಿ ಮಗಳು ಇರುತ್ತಿದ್ದು ಸುಮಾರು ಸಲ ವಿಡಿಯೋ ಕಾಲ್ ಮಾಡಿ ಪಿರ್ಯಾದಿ ಮಗಳ ಜೊತೆಯೂ ಅಸಭ್ಯ ಸಂಬಾಷಣೆ ಮೂಲಕ ಪ್ರಚೋದಿಸಲು ಯತ್ನಿಸುತ್ತಿದ್ದು, ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಮಾಡಿದ್ದು, ಇದರಿಂದ ಪಿರ್ಯಾದಿಯವರು ಮನೆಯಿಂದ ಕೆಲಸ ಬಿಟ್ಟು ಹೊರ ಬಂದಿದ್ದರು” ಎಂದು ಎಫ್ಐಆರ್ ಸಾರಾಂಶದಲ್ಲಿ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರೇ ದಾಖಲಿಕೊಂಡಿರುವ ಎಫ್ಐಅರ್ ಸಾರಾಂಶದ ಪ್ರಕಾರ ಈ ಪ್ರಕರಣ ಅತ್ಯಾಚಾರದ ಪ್ರಕರಣ ಆಗಿರುತ್ತದೆ. ಹಾಗಾಗಿ ಲೈಂಗಿಕ ದೌರ್ಜನ್ಯಗಳನ್ನು ವಿವರಿಸಿರುವ ಪ್ರಕರಣಗಳಲ್ಲಿ ರೇಪ್ ಗೆ ಸಂಬಂಧಪಟ್ಟ ಹಲವು ಸೆಕ್ಷನ್ ಗಳನ್ನು ದಾಖಲಿಸಿಕೊಳ್ಳಬೇಕಿತ್ತು. “ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು” ಎಂಬ ಆರೋಪವು ಅತ್ಯಾಚಾರವನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಭರವಸೆಗಳನ್ನು ನೀಡಿ, ಅಮಿಷವೊಡ್ಡಿ ಒಪ್ಪಿತ ಲೈಂಗಿಕ ಚಟುವಟಿಕೆ ಮಾಡುವುದು ಕೂಡಾ ಅತ್ಯಾಚಾರ ಎಂದು ಪರಿಗಣಿತವಾಗಿದೆ. ಕೆಲ ವಿಡಿಯೊಗಳಲ್ಲಿ ಒಪ್ಪಿತ ಲೈಂಗಿಕ ಚಟುವಟಿಕೆ ಎಂದು ಕಂಡು ಬಂದರೆ ಇನ್ನು ಕೆಲ ವಿಡಿಯೋಗಳಲ್ಲಿ ಮಹಿಳೆಯರು ಪ್ರತಿರೋಧ ಮಾಡಿದರೂ ಲೈಂಗಿಕ ಕ್ರೀಯೆ ನಡೆಸಲಾಗಿದೆ‌. ಹಾಗಾಗಿ ಆರೋಪಿಯೇ ಚಿತ್ರಿಕರಿಸಿರುವ ನೂರಾರು ವಿಡಿಯೋಗಳಲ್ಲಿ ಅತ್ಯಾಚಾರ ಮಾಡಿರುವುದು ಸ್ಪಷ್ಟವಾಗಿದೆ‌. ಇವೆಲ್ಲವನ್ನೂ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಜತೆಗೇ ನೋಡಬೇಕಿದೆ ಎಂದಿದ್ದಾರೆ.

ಮಹಿಳೆ ನೀಡಿರುವ ದೂರಿನ ಎಫ್ಐಆರ್ ಸಾರಾಂಶದಲ್ಲಿ, ಮಹಿಳೆಯ ಇಚ್ಚೆಗೆ ವಿರುದ್ದವಾಗಿ ಮಹಿಳೆಯ ಮೈ ಮುಟ್ಟಿರುವುದಲ್ಲದೇ, ದೌರ್ಜನ್ಯವನ್ನು ಮುಂದುವರೆಸಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲದೇ ಸಂತ್ರಸ್ತ ಮಹಿಳೆಯ ಮಗಳಿಗೂ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಎಫ್ಐಆರ್ ನ ಸಂತ್ರಸ್ತರ ಕಾಲಂನಲ್ಲಿ ಒರ್ವ ಸಂತ್ರಸ್ತರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಇಬ್ಬರು ಸಂತ್ರಸ್ತರು ಎಂಬುದನ್ನು ದಾಖಲಿಸದೇ ಎಫ್ಐಆರ್ ಅನ್ನು ಸರಳೀಕರಿಸಿ ಆರೋಪಿ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಗೆ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ದು, ಎಚ್ ಡಿ ರೇವಣ್ಣ ಹಲವು ಭಾರಿ ಪ್ರಭಾವಿ ಸಚಿವರಾಗಿದ್ದವರು. ಇಡೀ ಕುಟುಂಬ ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬವಾಗಿದ್ದು, ಅವರನ್ನು ರಕ್ಷಣೆ ಮಾಡಲೆಂದೇ ಪೊಲೀಸರು ದುರ್ಬಲ ಸೆಕ್ಷನ್ ಗಳನ್ನು ದಾಖಲಿಸಿದ್ದಾರೆ ಮತ್ತು ರೇಪ್ ಸೆಕ್ಷನ್ ಗಳನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಹೊಳೆನರಸೀಪುರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಈ ಎಫ್ಐಆರ್ ಗೆ ಸಂಬಂಧಿಸಿದ ಎಲ್ಲಾ ಪೊಲೀಸರನ್ನು ಅಮಾನತ್ತು ಮಾಡಿ, ಪ್ರಾಮಾಣಿಕ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸುವಂತೆ ದೂರು ನೀಡಲಾಗಿದೆ.

ನಮ್ಮ ಬೇಡಿಕೆಗಳು

1. ದೂರುದಾರ ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಮಹಿಳಾ ಆಪ್ತಸಮಾಲೋಚಕರು ಇರಬೇಕು
2. ಅತ್ಯಾಚಾರದ ಸ್ಪಷ್ಟ ಸಂಕೇತಗಳು ಇದ್ದರೂ ದುರ್ಬಲ ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲಿಸಿದ ಹೊಳೆನರಸೀಪುರದ ಇನ್ಸ್ ಪೆಕ್ಟರ್ ಅನ್ನು ಅಮಾನತ್ತು ಮಾಡಬೇಕು
3. ದೂರುದಾರ ಸಂತ್ರಸ್ತ ಮಹಿಳೆಯರಿಗೆ ಭದ್ರತೆ ಒದಗಿಸಬೇಕು
4. ವಿಡಿಯೋದಲ್ಲಿರುವ ಮಹಿಳೆಯರನ್ನು ಪೊಲೀಸರೇ ಪತ್ತೆ ಹಚ್ಚಿ ಹೇಳಿಕೆ ದಾಖಲಿಸಬೇಕು.
5. ಈಗಾಗಲೇ ದೂರು ದಾಖಲಿಸಿರುವ ಮಹಿಳೆಯ ಮರು ಹೇಳಿಕೆ ತೆಗೆದುಕೊಳ್ಳಬೇಕು.6. FIR 107/2024 ನಲ್ಲಿ ಇಬ್ಬರು ಸಂತ್ರಸ್ತರಿದ್ದರೂ ಸಂತ್ರಸ್ತರ ಕಾಲಂನಲ್ಲಿ ಹಾಕದೇ ಇರುವ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು
7. ಈಗಾಗಲೇ ದಾಖಲಿಸಿರುವ ಎಫ್ಐಆರ್ ಗೆ ಹೆಚ್ಚುವರಿ ಅಂಶಗಳನ್ನು, ಸೆಕ್ಷನ್ ಗಳನ್ನು ಸೇರ್ಪಡೆಗೊಳಿಸಿ ಬಲಗೊಳಿಸಬೇಕು
8. ಆರೋಪಿ ಕುಟುಂಬದ ಜೊತೆ ನಿಕಟ ಸಂಪರ್ಕ ಹೊಂದಿರುವ ಪೊಲೀಸರನ್ನು ವರ್ಗಾಹಿಸಬೇಕು
9. ಆರೋಪಿಯ ಕುಟುಂಬದ ಯಾವುದೇ ವ್ಯಕ್ತಿಯ ಶಿಫಾರಸ್ಸು ಪತ್ರದ ಮೇರೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳನ್ನು ಹಾಸನದಿಂದ ವರ್ಗಾಯಿಸಬೇಕು
10. ತನ್ನ ಪ್ರಭಾವವನ್ನೆ ಅಸ್ತ್ರವನ್ನಾಗಿಸಿಕೊಂಡು ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಅತಿ ಘೋರ ಪ್ರಕರಣ ಇದಾಗಿರುವುದರಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತ, ನಿರ್ಭೀತಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ಖಾತ್ರಿಗೊಳಿಸಬೇಕು.

ಈ ಕೆಳಗಿನ ಸಮಾನ ಮನಸ್ಕರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ

1. ಮೀನಾಕ್ಷಿ ಬಾಳಿ, ಅಧ್ಯಕ್ಷರು ಜನವಾದಿ ಮಹಿಳಾ ಸಂಘಟನೆ.
2. ಸಬೀಹಾ ಭೂಮಿಗೌಡ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ
3. ಮುನೀರ್ ಕಾಟಿಪಳ್ಳ, ರಾಜ್ಯ ಅಧ್ಯಕ್ಷರು ಡಿವೈಎಫ್ಐ
4. ಕೆ ನೀಲಾ, ಉಪಾಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ
5. ನವೀನ್ ಸೂರಿಂಜೆ, ಬರಹಗಾರರು
6. ಅಖಿಲಾ ವಿದ್ಯಾಸಂದ್ರ, ವಕೀಲರು
7. ಜ್ಯೋತಿ ಅನಂತ ಸುಬ್ಬರಾವ್, ಎನ್ಎಫ್ಐಡಬ್ಲ್ಯು
8. ವಿನಯ್ ಶ್ರೀನಿವಾಸ್, ವಕೀಲರು
9. ನಾಗೇಗೌಡ ಕೆ ಎಸ್, ಚಿಂತಕರು
10. ಬೈರಪ್ಪ ಹರೀಶ್ ಕುಮಾರ್, ಕನ್ನಡ ಹೋರಾಟಗಾರರು
11. ಪ್ರಭಾ ಬೆಳವಂಗಲ, ಜನವಾದಿ ಮಹಿಳಾ ಸಂಘಟನೆ
12. ಮಧುಭೂಷನ್, ಮಹಿಳಾ ಹಕ್ಕು ಹೋರಾಟಗಾರರು
13. ಸತ್ಯಾ ಎಸ್. ಜನವಾದಿ ಮಹಿಳಾ ಸಂಘಟನೆ
14. ಕಾವ್ಯ ಅಚ್ಯುತ್, ಸಮುದಾಯ ಬೆಂಗಳೂರು

BREAKING: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

BREAKING: ‘ಮೇಕೆದಾಟು ಸಂಗಮ’ದಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ‘ಐವರು ವಿದ್ಯಾರ್ಥಿ’ಗಳು ನೀರುಪಾಲು

Share. Facebook Twitter LinkedIn WhatsApp Email

Related Posts

ಮೇ, 26 ರಿಂದ 31 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2

09/05/2025 6:22 PM1 Min Read

ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

09/05/2025 6:20 PM1 Min Read
Retirement simplified pension application

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

09/05/2025 6:19 PM2 Mins Read
Recent News

ಪಾಕಿಸ್ತಾನದ 4 ವಾಯು ರಕ್ಷಣಾ ನೆಲೆಗಳ ಮೇಲೆ ಡ್ರೋನ್ ದಾಳಿ, ಒಂದು ರಾಡಾರ್ ಹೊಡೆದುರುಳಿಸಿದ ಭಾರತ

09/05/2025 6:22 PM

ಮೇ, 26 ರಿಂದ 31 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2

09/05/2025 6:22 PM

ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

09/05/2025 6:20 PM
Retirement simplified pension application

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

09/05/2025 6:19 PM
State News
KARNATAKA

ಮೇ, 26 ರಿಂದ 31 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2

By kannadanewsnow0709/05/2025 6:22 PM KARNATAKA 1 Min Read

ಮಡಿಕೇರಿ: 2025 ಮಾರ್ಚ್ -ಏಪ್ರಿಲ್ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-1 ಕ್ಕೆ ಜಿಲ್ಲೆಯ 171 ಪ್ರೌಢ ಶಾಲೆಗಳಿಂದ 6255 ವಿದ್ಯಾರ್ಥಿಗಳು ಪರೀಕ್ಷೆಗೆ…

ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

09/05/2025 6:20 PM
Retirement simplified pension application

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

09/05/2025 6:19 PM

ಮಡಿಕೇರಿ: ವಿದ್ಯುತ್ ಅಡಚಣೆ: ಸಹಾಯವಾಣಿ ಕೇಂದ್ರ ಆರಂಭ

09/05/2025 6:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.