Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೆಹಲಿ BMW ಅಪಘಾತ ಪ್ರಕರಣ: ಆರೋಪಿಯ ರಕ್ತ ಪರೀಕ್ಷೆಯಲ್ಲಿ ಆಲ್ಕೊಹಾಲ್ ನೆಗೆಟಿವ್

16/09/2025 12:44 PM

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ : ಸರ್ಕಾರದಿಂದ ಮಹತ್ವದ ಆದೇಶ

16/09/2025 12:31 PM

BREAKING: ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಬದಲಿಸುವ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದ ICC

16/09/2025 12:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೆ.22ರಿಂದ `ವಿಶ್ವವಿಖ್ಯಾತ ಮೈಸೂರು ದಸರಾ’ ಮಹೋತ್ಸವ : ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ನೇಮಿಸಿ ರಾಜ್ಯ ಸರ್ಕಾರ ಆದೇಶ.!
KARNATAKA

ಸೆ.22ರಿಂದ `ವಿಶ್ವವಿಖ್ಯಾತ ಮೈಸೂರು ದಸರಾ’ ಮಹೋತ್ಸವ : ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ನೇಮಿಸಿ ರಾಜ್ಯ ಸರ್ಕಾರ ಆದೇಶ.!

By kannadanewsnow5716/09/2025 7:59 AM

ಮೈಸೂರು : ಸೆಪ್ಟೆಂಬರ್ 22 ರಿಂದ ವಿಶ್ವ ಪ್ರಸಿದ್ಧ ದಸರಾ ನಡೆಯಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಅಪರಾಧವನ್ನು ತಡೆಗಟ್ಟುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸುವ ದೃಷ್ಟಿಯಿಂದ ಸಮಗ್ರ ಬಂದೋಬಸ್ತ್ ಯೋಜನೆಯನ್ನು ತಯಾರಿಸಲಾಗಿದೆ.

ಮೈಸೂರು ದಸರಾ ಹಬ್ಬದ ಕಾರ್ಯಕ್ರಮಗಳು ದಿನಾಂಕ 22-09-2025 ರಿಂದ ದಿನಾಂಕ 02-10-2025 ರವರೆಗೆ ಮೈಸೂರು ನಗರದಲ್ಲಿ ನಡೆಯಲಿವೆ. ಈ ನಾಡಹಬ್ಬಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಅಪರಾಧವನ್ನು ತಡೆಗಟ್ಟುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸುವ ದೃಷ್ಟಿಯಿಂದ ಸಮಗ್ರ ಬಂದೋಬಸ್ತ್ ಯೋಜನೆಯನ್ನು ತಯಾರಿಸಲಾಗಿದೆ.

ಈ ಸಾಲಿನಲ್ಲಿ ದಸರಾ ಪ್ರಯುಕ್ತ ಮೈಸೂರು ಅರಮನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಚಾಮುಂಡಿ ಬೆಟ್ಟದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನಗಳ ಭೇಟಿ, ಮೃಗಾಲಯ, ಯುವ ಸಂಭ್ರಮ, ಆಹಾರ ಮೇಳ, ರೈತ ದಸರಾ, ಕುಸ್ತಿ ಪಂದ್ಯಾವಳಿ, ವಿಶ್ವಪ್ರಸಿದ್ಧ ಜಂಬೂ ಸವಾರಿ, ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು, ಅರಮನೆಯ ಆವರಣದಲ್ಲಿ ಲಯ ಲಹರಿ ಕಾರ್ಯಕ್ರಮ. ಸಾರೋಟ್ ಪ್ರದರ್ಶನ, ದಸರಾ ಕವಿಗೋಷ್ಠಿ, ಸಮೂಹ ವಾಧ್ಯಮೇಳ, ಮಾರುಕಟ್ಟೆ ಪ್ರದರ್ಶನ, ದೀಪಾಲಂಕಾರ, ಏರ್ ಶೋ. ಡೋನ್ ಶೋ ಈ ರೀತಿಯ ಹತ್ತು ಹಲವಾರು ಕಾರ್ಯಕ್ರಮವನ್ನು ದಸರಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದು, ಲಕ್ಷಾಂತರ ಜನರು ದಸರಾ ಸಮಯದಲ್ಲಿ ಮೈಸೂರು ನಗರಕ್ಕೆ ಆಗಮಿಸುತ್ತಾರೆ.

ಅರಮನೆ ಸುತ್ತಾಮುತ್ತಾ ವಾಹನ ಸಂಚಾರವನ್ನು 1ನೇ ಹಂತದ ಬಂದೋಬಸ್ತ್ ಯೋಜನೆಯಲ್ಲಿ Clock & Anti Clock wise ಮಾದರಿಯಲ್ಲಿ ಹಾಗೂ 2ನೇ ಹಂತದ ಬಂದೋಬಸ್ತ್ ಯೋಜನೆಯಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಿ (No Traffic zone) ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಹೊಸದಾಗಿ ಏರ್ ಶೋ ಪ್ರದರ್ಶನವನ್ನು ಏರ್ಪಡಿಸಿದ್ದು ದಿನಾಂಕ 27-09-2025 ರಂದು ಹೆಲಿಕಾಪ್ಟರ್ ಮೂಲಕ ಸಾರಂಗ ತಂಡದಿಂದ ಪ್ರದರ್ಶನವನ್ನು ಮತ್ತು ದಿನಾಂಕ 01-10-2025 ರಂದು ಸೂರ್ಯಕಿರಣ್ ತಂಡದಿಂದ ಏರ್ ಶೋ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 28-09-2025 2 29-08-2025 क 01-10-2025 02-10-2025 ರಂದು ಡೋನ್ ಶೋ ಪ್ರದರ್ಶನವನ್ನು ನಾಲ್ಕು ದಿನಗಳ ಕಾಲ ಬನ್ನಿಮಂಟಪ ಮೈದಾನದಲ್ಲಿ ಏರ್ಪಡಿಸಲಾಗಿದೆ.

ಮೈಸೂರು ನಗರದಾದ್ಯಂತ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಒಟ್ಟು 138 ಕಿ.ಮೀ ಅಂತರದಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಿದ್ದು, ಕಳೆದ ಬಾರಿಗಿಂತ ಈ ಸಾಲಿನಲ್ಲಿ ದೀಪಾಲಂಕಾರದ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.

ದಸರಾ-2025 ರ ಉದ್ಘಾಟನೆಗೆ ಸಂಬಂಧಿಸಿದಂತೆ ದಿನಾಂಕ 09-09-2025 ರಂದು ದಕ್ಷಿಣ ಕನ್ನಡ, ಮಂಗಳೂರು, ಕೊಡಗು ಮತ್ತು ಮೈಸೂರು ಜಿಲ್ಲೆಯ ಅನೇಕ ಸಂಘಟನೆಯ ಕಾರ್ಯಕರ್ತರುಗಳು ಮೈಸೂರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟದ ಶ್ರೀ.ಚಾಮುಂಡೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರಿಂದ ಅಶಾಂತಿ ಉಂಟಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಸುಮಾರು 450 ರಿಂದ 500 ಕಾರ್ಯಕರ್ತರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಲಾಗಿದೆ.

ದಿನಾಂಕ 22-09-2025 ರಂದು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳ ಕಾರ್ಯಕರ್ತರುಗಳು ಪ್ರತಿಭಟನೆ ಹಾಗೂ ಕಪ್ಪುಪಟ್ಟಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬಂದೋಬಸ್ತ್ ಅವಶ್ಯಕತೆ ಇರುತ್ತದೆ.

ಬಂದೋಬಸ್ತ್ ಯೋಜನೆಯು ಎರಡು ಹಂತಗಳಲ್ಲಿದ್ದು. ಮೊದಲನೆಯ ಹಂತವು ದಿನಾಂಕ 22-09-2025 ರಿಂದ ದಿನಾಂಕ 29-09-2025ರ ವರೆಗೆ ಮತ್ತು ಎರಡನೇ ಹಂತವು ದಿನಾಂಕ 30-09-2025 ರಿಂದ ದಿನಾಂಕ 02-10-2025 ರ ವರೆಗೆ ಇರುತ್ತದೆ.

ಮೇಲ್ಕಂಡ ಬಂದೋಬಸ್ತ್ ಯೋಜನೆಗೆ ಮೈಸೂರು ನಗರದಲ್ಲಿ ಲಭ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಶಸ್ತ್ರ ತುಕಡಿಗಳನ್ನು ನಿಯೋಜಿಸಿದ್ದು, ಬಂದೋಬಸ್ತ್ ಯೋಜನೆಯಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಶಸ್ತ್ರ ತುಕಡಿಗಳನ್ನು ನಿಯೋಜಿಸಲು ಕೊರತೆ ಇರುವುದರಿಂದ, ಕೊರತೆಗೆ ಅನುಗುಣವಾಗಿ 1 ಮತ್ತು 2ನೇ ಹಂತದ ಬಂದೋಬಸ್ಗೆ ಹೊರ ಘಟಕಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಸಶಸ್ತ್ರ ತುಕಡಿಗಳನ್ನು ಕೆಳಕಂಡ ಟೇಬಲ್ನಲ್ಲಿ ನಮೂದಿಸಿರುವಂತೆ ನೀಡಲು ತಮ್ಮಲ್ಲಿ ಕೋರಲಾಗಿದೆ.

'World-famous Mysore Dasara' festival to begin from September 22: Government orders appointment of police officers and staff!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ : ಸರ್ಕಾರದಿಂದ ಮಹತ್ವದ ಆದೇಶ

16/09/2025 12:31 PM1 Min Read

ರಾಜ್ಯ ಸರ್ಕಾರದಿಂದ `ಕಲ್ಯಾಣ ಕರ್ನಾಟಕ’ದ ಜನತೆಗೆ ಗುಡ್ ನ್ಯೂಸ್ : ನಾಳೆ ಅತ್ಯಾಧುನಿಕ ಆಂಬುಲೆನ್ಸ್ ಗಳಿಗೆ ಚಾಲನೆ

16/09/2025 12:25 PM1 Min Read

ಸಣ್ಣ ಹೂಡಿಕೆ – ದೊಡ್ಡ ಲಾಭ : ಜಸ್ಟ್ 10 ರೂಪಾಯಿಯ ಈ ಸಸ್ಯ ಬೆಳೆಸಿ ಮಾರಾಟ ಮಾಡಿದ್ರೆ ಕೋಟ್ಯಾಧಿಪತಿ ಆಗಬಹುದು.!,

16/09/2025 11:53 AM2 Mins Read
Recent News

ದೆಹಲಿ BMW ಅಪಘಾತ ಪ್ರಕರಣ: ಆರೋಪಿಯ ರಕ್ತ ಪರೀಕ್ಷೆಯಲ್ಲಿ ಆಲ್ಕೊಹಾಲ್ ನೆಗೆಟಿವ್

16/09/2025 12:44 PM

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ : ಸರ್ಕಾರದಿಂದ ಮಹತ್ವದ ಆದೇಶ

16/09/2025 12:31 PM

BREAKING: ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಬದಲಿಸುವ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದ ICC

16/09/2025 12:27 PM

BREAKING : ‘ಆನ್ ಲೈನ್ ಬೆಟ್ಟಿಂಗ್ ಆ್ಯಪ್’ ಕೇಸ್ : ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ನಟ ಸೋನು ಸೂದ್ ಗೂ E.D ಯಿಂದ ಸಮನ್ಸ್ ಜಾರಿ.!

16/09/2025 12:26 PM
State News
KARNATAKA

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5716/09/2025 12:31 PM KARNATAKA 1 Min Read

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ, ನೋಂದಣಿಯಾಗಿ 15…

ರಾಜ್ಯ ಸರ್ಕಾರದಿಂದ `ಕಲ್ಯಾಣ ಕರ್ನಾಟಕ’ದ ಜನತೆಗೆ ಗುಡ್ ನ್ಯೂಸ್ : ನಾಳೆ ಅತ್ಯಾಧುನಿಕ ಆಂಬುಲೆನ್ಸ್ ಗಳಿಗೆ ಚಾಲನೆ

16/09/2025 12:25 PM

ಸಣ್ಣ ಹೂಡಿಕೆ – ದೊಡ್ಡ ಲಾಭ : ಜಸ್ಟ್ 10 ರೂಪಾಯಿಯ ಈ ಸಸ್ಯ ಬೆಳೆಸಿ ಮಾರಾಟ ಮಾಡಿದ್ರೆ ಕೋಟ್ಯಾಧಿಪತಿ ಆಗಬಹುದು.!,

16/09/2025 11:53 AM

ರಾಜ್ಯಾದ್ಯಂತ ‘ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ’ ಆರಂಭ : ನೋಂದಣಿಗೆ ಜಸ್ಟ್ ಹೀಗೆ ಮಾಡಿ.!

16/09/2025 11:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.