Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೋಕಾಯುಕ್ತ ಬಲೆಗೆ ನೆಲಮಂಗಲದ ಇಬ್ಬರು ಆರ್‌ಟಿಓ ಅಧಿಕಾರಿಗಳು: ವಾಹನ ಸವಾರರಿಂದ ಲಂಚ ಪಡೆಯುತ್ತಿದ್ದಾಗ ಟ್ರ್ಯಾಪ್!

13/04/2026 3:10 PM

BREAKING : 30 ಸಾವಿರ ಲಂಚ ಸ್ವೀಕಾರ : ಬೆಂಗಳೂರಲ್ಲಿ ಇಬ್ಬರು ಆರ್‌ಟಿಓ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

13/04/2026 3:05 PM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಿಗಲಿದೆ `ನಿರುದ್ಯೋಗ ದೃಢೀಕರಣ’ ಸೇರಿ ಈ ಎಲ್ಲಾ ದಾಖಲೆಗಳು.!

13/04/2026 3:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ
KARNATAKA

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

By kannadanewsnow0915/03/2026 7:47 PM

ಹಾವೇರಿ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಸವಣೂರ ರಸ್ತೆಯಲ್ಲಿರುವ ಶ್ರೀ ಬಸವರಾಜ ಬೊಮ್ಮಾಯಿರವರ ನಿವಾಸದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಶಿಗ್ಗಾಂವ – ಸವಣೂರ ವಿಧಾನ ಸಭಾ ಮತಕ್ಷೇತ್ರದ ಬಿ.ಎಲ್.ಎ – 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನನಗೆ ನಿಮ್ಮನ್ನು ನೊಡಿ ಬಹಳ ಸಂತೋಷವಾಗಿದೆ. ಗಡಿಯಲ್ಲಿ ಸೈನಿಕರು ಇರುವಂತೆ ಕಷ್ಟ ಕಾಲದಲ್ಲಿ ನೀವು ನನ್ನನ್ನು ಸುರಕ್ಷೆ ಮಾಡುವ ಸೈನಿಕರ ಥರ ಕಾಣುತ್ತಿದ್ದಿರಿ ಎಂದು ಹೇಳಿದರು.

ಬಿಎಲ್ ಎ 2 ಗಳು ಸರಿಯಾಗಿ ಕೆಲಸ ಮಾಡಿದರೆ ಪಾಕಿಸ್ತಾನ ಭಾರತ ಮ್ಯಾಚ್ ಆದ ಹಾಗೆ ಆಗುತ್ತದೆ. ಭಾರತ ಗೆದ್ದೆ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಕುಂತಹಾಗೆ ನೀವು ಕುಂತಿದ್ದಿರಿ.

ಶಿಗ್ಗಾವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಗೆ ಸಂಕಲ್ಪ ಮಾಡಿ ಸಂಘಟಿತ ರಾಗಿ ನೀವು ಬಂದಿದ್ದೀರಿ, ಬಿಎಲ್ ಎ 2 ಗಳು, ನಿಮ್ ಕೆಲಸ ಏನಿದೆ ಅಂತ ತಿಳಿದಕೊಳ್ಳಿ, ಒಂದು ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಯಾರು ಅನಧಿಕೃತವಾಗಿದ್ದಾರೆ. ಯಾವ ರೀತಿ ಸುಳ್ಳು ಹೇಳಿ ಹೆಸರು ಸೇರಿಸಿದ್ದಾರೆ. ಅದನ್ನು ಪತ್ತೆ ಹಚ್ಚಬೇಕು. ಎಸ್ ಆರ್ ಐ ಕೆಲಸ ಸರ್ಕಾರಿ ಕೆಲಸ ಅಲ್ಲ ಸರ್ಕಾರಿ ಅಧಿಕಾರಿಗಳ ಮುಖಾಂತರ ಮಾಡುವ ಕೆಲಸ ಅಷ್ಟೆ ಆದರೆ ನಿವು ನ್ಯಾಯ ಸಮ್ಮತವಾಗಿ ಸತ್ಯದ ಪರವಾಗಿ ಕಾನೂನು ಪರವಾಗಿ ಇರಬೇಕು.

ದೇಶದ ಭದ್ರತೆಯಲ್ಲಿ ಸೈನಿಕರು ಎಷ್ಟು ಪ್ರಮುಖವೊ, ಪ್ರಜಾಪ್ರಭುತ್ವದಡಿಯಲ್ಲಿ ದೇಶವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬಿಎಲ್ಓಗಳ ಮೇಲಿದ್ದು, ನಡೆಯುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಶಿಗ್ಗಾವಿ ಸವಣೂರ ಕ್ಷೇತ್ರವನ್ನು ಮೊದಲಿನ ರೀತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಎರಡನೇಯದಾಗಿ ಹದಿನೈದು ಸಾವಿರ ಮನೆಗಳನ್ನು ಕೊಟ್ಟಿದ್ದೇವೆ. ಸುಳ್ಳು ಹೇಳಿ ರಾಜಕಾರಣ ಮಾಡುವ ಅವಶ್ಯಕತೆ ನನಗೆ ಇಲ್ಲ. ಕ್ಷೇತ್ರದ ಜನರ ಮನದಲ್ಲಿ ನಾನು ನೆಲೆ ಊರಿದ್ದೇನೆ. ಇವತ್ತು ಈ ಜನ ಪ್ರೀತಿ ವಿಶ್ವಾಸ ಯಾಕೆ ತೊರಿಸುತ್ತಾರೆ ಎಂದರೆ ನಾವು ಏನು ಮಾತನಾಡುತ್ತೇವೆ ಅದನ್ನು ಮಾಡುತ್ತೇವೆ. ನಮಗಿಂತ ಒಳ್ಳೆಯ ಕೆಲಸ ಮಾಡಿದರೆ ನಾನೆ ಶಹಬ್ಬಾಶಗಿರಿ ಕೊಡುತ್ತೇನೆ. ಆದರೆ ಜನರನ್ನು ದಾರಿ ತಪ್ಪಿಸಿ ನಾನೊಬ್ಬನಿಂದ ಕೆಲಸ ಆಗಿದೆ. ನಾನೇ ಸೂರ್ಯನ ಹುಟ್ಟಿಸಿದೆ ಅಂದರೆ ದೇವರು ನೋಡಿಕೊಳ್ಳುತ್ತಾನೆ ಎಂದರು.

*ಅಕ್ರಮ ಚಟುವಟಿಕೆ ತಾಣ*
ಕ್ಷೇತ್ರದಲ್ಲಿ ಯಾವುದೇ ತೋಟಗಳಿಗೆ ಹೋದರೆ ಇಸ್ಪೆಟು, ಒಸಿ ಆಡುವುದು ಕಾಣಿಸುತ್ತದೆ. ಅಲ್ಲಿ ಊಟದ ಎಲಿ ಬದಲು ಇಸ್ಪೀಟ್ ಎಲೆ ಇಟ್ಟಿರುತ್ತಾರೆ. ಈ ಕ್ಷೇತ್ರದ ಯುವಕರು ಹಾಳಾಗುತ್ತಿದ್ದಾರೆ‌. ಎಸ್ಪಿ ಸೇರಿದಂತೆ ಯಾವುದೇ ಅಧಿಕಾರಿಗಳ ಭಯ ಇಲ್ಲದಂತಾಗಿದೆ. ಕ್ಷೇತ್ರದಲ್ಲಿ ಗಾಂಜಾ, ಮಟ್ಕಾ ಸೇರಿದಂತೆ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಾವು ತಂದ ಯೋಜನೆಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ಶಿಗ್ಗಾವಿ ಬಂಕಾಪುರ ಸವಣೂರು ಮೂರು ಪಟ್ಟಣಗಳಿಗೆ ನಾನು ಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ಆದರೆ, ಈಗಿನವರು ಈ ಯೋಜನೆಗೆ ಅನುಮೋದನೆ ಪಡೆದು ನಾನೇ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಿಎಂ ಹೆಚ್ಚು ಸಾಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು. ಸಿದ್ದರಾಮಯ್ಯ ಅವರ ಸರ್ಕಾರ ಸುಳ್ಳಿನ ಸರ್ಕಾರ ಬಜೆಟ್ ನಲ್ಲಿ 1.32 ಲಕ್ಷ ಕೋಟಿ ಸಾಲ ಮಾಡಿದ್ದಾರೆ.‌ ನಾವಿದ್ದಾಗ 54 ಸಾವಿರ ಕೋಟಿ ಸಲಾ ಮಾಡಿದ್ದೇವು. ನಾವು ಅಧಿಕಾರದಲ್ಲಿದ್ದಾಗ ಸಾಲದ ಲೆಕ್ಕಾ ಮಾಡುತ್ತಿದ್ದಾಗ ಸಿದ್ದರಾಮಯ್ಯ ಹತ್ತು ವರ್ಷಕ್ಕೆ ಸಾಲ ಮಾಡಿದ್ದರು ಆ ಸಾಲವನ್ನು ನಾವು ತೀರಿಸಿದೆವು ಎಂದು ಹೇಳಿದರು.

ನ್ಯಾಯ ಸಮ್ಮತ ಕೆಲಸ ಮಾಡಿ

ಇಡಿ ಕರ್ನಾಟಕ ಅಭಿವೃದ್ದಿ ಅಷ್ಟೆ ಅಲ್ಲಾ ಶಿಗ್ಗಾವಿ ಸವಣುರು ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಚಾಕು ಚೂರಿ ಸಂಸ್ಕೃತಿ ಬಂದಾಗಬೇಕು ನೀವು ಎಷ್ಟು ಸಕ್ರೀಯರಾಗಿ ಕೆಲಸ ಮಾಡುತ್ತೀರಿ ಅಷ್ಟು ಅನುಕೂಲ ಆಗುತ್ತದೆ. ಎಲ್ಲಿ ಅನ್ಯಾಯ ಆಗಿದೆ ಅದನ್ನು ಸರಿ ಪಡಿಸಿ, ಶುದ್ದವಾದ ಮತದಾರರ ಪಟ್ಟಿ ಸಿದ್ದವಾಗಲಿ, ಇದೊಂದು ಅವಕಾಶ ಸಿಕ್ಕಿದೆ. ಇನ್ನೊಬ್ಬರನ್ನು ನೋಡಬೇಡಿ ನ್ಯಾಯ ಸಮ್ಮತವಾಗಿ ಮತದಾರರ ಮಟ್ಟಿ ಸಿದ್ದ ಪಡಿಸಿ ನಿಮ್ಮ ಕೆಲಸ ಮಾಡಿ, ನಾನೂ ಕೂಡ ಕೆಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುತ್ತೇನೆ, ಮುಂಬರುವ ಝಡ್ ಪಿ, ಟಿಪಿ ಚುನಾವಣೆಗಳಿಗೆ ಸನ್ನದ್ದರಾಗಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯರಾದ ಎಸ್.ವಿ.ಸಂಕನೂರ, ಯುವ ಮುಖಂಡರಾದ ಭರತ್ ಬೊಮ್ಮಾಯಿ, ಶಿಗ್ಗಾಂವ ಮಂಡಳದ ಅಧ್ಯಕ್ಷರಾದ ವಿಶ್ವನಾಥ ಹರವಿ, ಸವಣೂರ ಮಂಡಳದ ಅಧ್ಯಕ್ಷರಾದ ಶಿವಪುತ್ರಪ್ಪ ಕಲಕೋಟಿ, ಮುಖಂಡರುಗಳಾದ ಮಹಾಂತೇಶ ಬಿಜ್ಜೂರ, ಡಿ.ಎಸ್.ಮಾಳಗಿ, ಎಂ.ಎನ್ ಹೊನಕೇರಿ, ಶಿವಾನಂದ ಮ್ಯಾಗೇರಿ, ಕರೆಪ್ಪ ಕಟ್ಟಿಮನಿ, ಶಿವಪ್ರಸಾದ ಸುರಗೀಮಠ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಯಶೋಧಾ ಪಾಟೀಲ್, ಬಿ.ಎಲ್.ಎ 1 ನವೀನ ಸವಣೂರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಲೋಕಾಯುಕ್ತ ಬಲೆಗೆ ನೆಲಮಂಗಲದ ಇಬ್ಬರು ಆರ್‌ಟಿಓ ಅಧಿಕಾರಿಗಳು: ವಾಹನ ಸವಾರರಿಂದ ಲಂಚ ಪಡೆಯುತ್ತಿದ್ದಾಗ ಟ್ರ್ಯಾಪ್!

13/04/2026 3:10 PM1 Min Read

BREAKING : 30 ಸಾವಿರ ಲಂಚ ಸ್ವೀಕಾರ : ಬೆಂಗಳೂರಲ್ಲಿ ಇಬ್ಬರು ಆರ್‌ಟಿಓ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

13/04/2026 3:05 PM1 Min Read

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಿಗಲಿದೆ `ನಿರುದ್ಯೋಗ ದೃಢೀಕರಣ’ ಸೇರಿ ಈ ಎಲ್ಲಾ ದಾಖಲೆಗಳು.!

13/04/2026 3:01 PM2 Mins Read
Recent News

ಲೋಕಾಯುಕ್ತ ಬಲೆಗೆ ನೆಲಮಂಗಲದ ಇಬ್ಬರು ಆರ್‌ಟಿಓ ಅಧಿಕಾರಿಗಳು: ವಾಹನ ಸವಾರರಿಂದ ಲಂಚ ಪಡೆಯುತ್ತಿದ್ದಾಗ ಟ್ರ್ಯಾಪ್!

13/04/2026 3:10 PM

BREAKING : 30 ಸಾವಿರ ಲಂಚ ಸ್ವೀಕಾರ : ಬೆಂಗಳೂರಲ್ಲಿ ಇಬ್ಬರು ಆರ್‌ಟಿಓ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

13/04/2026 3:05 PM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಿಗಲಿದೆ `ನಿರುದ್ಯೋಗ ದೃಢೀಕರಣ’ ಸೇರಿ ಈ ಎಲ್ಲಾ ದಾಖಲೆಗಳು.!

13/04/2026 3:01 PM

BIG NEWS : ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಂದಿನಿಂದ ಏ.15ರವರೆಗೆ ಮದ್ಯ ಮಾರಾಟ ಬಂದ್.!

13/04/2026 2:37 PM
State News
KARNATAKA

ಲೋಕಾಯುಕ್ತ ಬಲೆಗೆ ನೆಲಮಂಗಲದ ಇಬ್ಬರು ಆರ್‌ಟಿಓ ಅಧಿಕಾರಿಗಳು: ವಾಹನ ಸವಾರರಿಂದ ಲಂಚ ಪಡೆಯುತ್ತಿದ್ದಾಗ ಟ್ರ್ಯಾಪ್!

By kannadanewsnow0913/04/2026 3:10 PM KARNATAKA 1 Min Read

ಬೆಂಗಳೂರು ಗ್ರಾಮಾಂತರ: ವಾಹನ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ನೆಲಮಂಗಲದ ಇಬ್ಬರು ಆರ್‌ಟಿಓ (RTO) ಅಧಿಕಾರಿಗಳು ಇಂದು ಲೋಕಾಯುಕ್ತ…

BREAKING : 30 ಸಾವಿರ ಲಂಚ ಸ್ವೀಕಾರ : ಬೆಂಗಳೂರಲ್ಲಿ ಇಬ್ಬರು ಆರ್‌ಟಿಓ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

13/04/2026 3:05 PM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಿಗಲಿದೆ `ನಿರುದ್ಯೋಗ ದೃಢೀಕರಣ’ ಸೇರಿ ಈ ಎಲ್ಲಾ ದಾಖಲೆಗಳು.!

13/04/2026 3:01 PM

BIG NEWS : ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಂದಿನಿಂದ ಏ.15ರವರೆಗೆ ಮದ್ಯ ಮಾರಾಟ ಬಂದ್.!

13/04/2026 2:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.