Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

ಕನ್ನಡಿಗರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ?: ಕೇಂದ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಹತ್ತು ಪ್ರಶ್ನೆ!

ಭಾರತೀಯರು ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗಬಹುದು? ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು ಗೊತ್ತಾ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕನ್ನಡಿಗರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ?: ಕೇಂದ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಹತ್ತು ಪ್ರಶ್ನೆ!
KARNATAKA

ಕನ್ನಡಿಗರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ?: ಕೇಂದ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಹತ್ತು ಪ್ರಶ್ನೆ!

By ವಸಂತ್‌ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಬೆನ್ನಲ್ಲೇ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಬಗ್ಗೆ ಪ್ರಧಾನಿಗಳ “ಉದ್ದೇಶ” ಮತ್ತು ಕೇಂದ್ರದ “ಮಲತಾಯಿ ಧೋರಣೆ”ಯನ್ನು ಪ್ರಶ್ನಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

1. ತೆರಿಗೆ ಹಂಚಿಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ

ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಆಗಿದೆ. 2025-26ರಲ್ಲಿ ಕರ್ನಾಟಕವು ₹4.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ (ಇದರಲ್ಲಿ ₹1.58 ಲಕ್ಷ ಕೋಟಿ ಜಿಎಸ್‌ಟಿ ಸೇರಿದೆ). ಆದರೆ, ಕರ್ನಾಟಕ ಕೇಂದ್ರಕ್ಕೆ ನೀಡುವ ಪ್ರತಿ 100 ರೂಪಾಯಿಯಲ್ಲಿ ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ ₹13ಕ್ಕಿಂತ ಕಡಿಮೆ ಎಂದು ಸಚಿವರು ಅಂಕಿಅಂಶಗಳ ಸಮೇತ ದೂರಿದ್ದಾರೆ.

2. ನೀರಾವರಿ ಯೋಜನೆಗಳಿಗೆ ಕೇಂದ್ರದ ತಡೆ

ರಾಜ್ಯದ ಜನತೆಯ ಜೀವನಾಡಿ ಯೋಜನೆಗಳಾದ ಮೇಕೆದಾಟು ಮತ್ತು ಮಹದಾಯಿ (ಕಳಸಾ-ಬಂಡೂರಿ) ಯೋಜನೆಗಳಿಗೆ ಪರಿಸರ ಅನುಮತಿ ನೀಡುವಲ್ಲಿ ಮತ್ತು ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

3. ಭದ್ರಾ ಮೇಲ್ದಂಡೆ ಯೋಜನೆಗೆ ಶೂನ್ಯ ಅನುದಾನ

ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸಿ ₹5,300 ಕೋಟಿ ನೀಡುವುದಾಗಿ ಬೆನ್ನು ತಟ್ಟಿಕೊಂಡಿದ್ದ ಕೇಂದ್ರ ಸರ್ಕಾರ, ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ರೆಡ್ಡಿ ಟೀಕಿಸಿದ್ದಾರೆ.

4. ಬರ ಪರಿಹಾರ ಮತ್ತು ಸುಪ್ರೀಂ ಕೋರ್ಟ್ ಚೀಮಾರಿ

ರಾಜ್ಯವು ಭೀಕರ ಬರಗಾಲ ಎದುರಿಸುತ್ತಿದ್ದಾಗ ₹18,000 ಕೋಟಿ ಪರಿಹಾರ ಕೋರಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚೀಮಾರಿ ಹಾಕುವವರೆಗೂ ಪರಿಹಾರದ ಹಣ ಬಿಡುಗಡೆಯಾಗಲಿಲ್ಲ. ಇದು ರೈತರ ಬಗ್ಗೆ ಕೇಂದ್ರಕ್ಕಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಸಚಿವರು ಕಿಡಿಕಾರಿದ್ದಾರೆ.

5. ಅನ್ನಭಾಗ್ಯಕ್ಕೆ ಅಡ್ಡಿಪಡಿಸಿದ ಕೇಂದ್ರ

ಬಡವರಿಗೆ ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆ ಜಾರಿಗೆ ತಂದಾಗ, ಎಫ್‌ಸಿಐ ಮೂಲಕ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರ ತಡೆಹಿಡಿಯಿತು. ಇದು ಬಡವರ ಹೊಟ್ಟೆ ಮೇಲೆ ಹೊಡೆಯುವ ತಂತ್ರವಾಗಿತ್ತು ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

6. ಮೂಲಸೌಕರ್ಯ ಯೋಜನೆಗಳ ಕಡೆಗಣನೆ

  • AIIMS: ರಾಯಚೂರಿನಲ್ಲಿ ಘೋಷಣೆಯಾದ ಏಮ್ಸ್ ಆಸ್ಪತ್ರೆ ಕಾಗದದ ಮೇಲೆಯೇ ಉಳಿದಿದೆ.

  • ರೈಲ್ವೆ ಕೋಚ್ ಕಾರ್ಖಾನೆ: ರಾಜ್ಯ ಸರ್ಕಾರ 1,100 ಎಕರೆ ಭೂಮಿ ನೀಡಿದರೂ ಯೋಜನೆ ಆರಂಭವಾಗಿಲ್ಲ.

  • ಸಬ್ ಅರ್ಬನ್ ರೈಲು: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವ ಈ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ.

7. ರಾಜಕಾರಣದ ಬಗ್ಗೆ ಸಚಿವರ ಪ್ರತಿಕ್ರಿಯೆ

ಪ್ರಧಾನಿಗಳು ಕೇವಲ “ಕುರ್ಚಿ” ರಾಜಕಾರಣ ಅಥವಾ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಬದಲು, ಕಳೆದ 12 ವರ್ಷಗಳಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕಿತ್ತು. ಕರ್ನಾಟಕದ ಜನರ ಆಶೀರ್ವಾದವಿರುವ ನಮ್ಮ ಸರ್ಕಾರ ಸುಭದ್ರವಾಗಿದೆ, ಆದರೆ ರಾಜ್ಯದ ಬಗ್ಗೆ ಕೇಂದ್ರದ ಧೋರಣೆ ಮಾತ್ರ ಅಲುಗಾಡುತ್ತಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

“ಕೇವಲ ಭಾಷಣ ಮಾಡಲು ಬೆಂಗಳೂರಿಗೆ ಬಂದರೆ ಉಪಯೋಗವಿಲ್ಲ; ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನ ಮತ್ತು ಬಾಕಿ ಇರುವ ಯೋಜನೆಗಳಿಗೆ ಅನುಮತಿಯೊಂದಿಗೆ ಬಂದರೆ ಸ್ವಾಗತಿಸುತ್ತೇವೆ” ಎಂದು ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

SHOCKING: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಕರುಳು ಕಟ್, ಸಾವು; ಪತಿಯ ಗಂಭೀರ ಆರೋಪ

BIG NEWS : ಚಿನ್ನ ಖರೀದಿ ಕಡಿಮೆ ಮಾಡಿ ಎಂಬ ಪ್ರಧಾನಿ ಮೋದಿ ಕರೆಯಿಂದ 1 ಕೋಟಿ ಉದ್ಯೋಗಗಳಿಗೆ ಕುತ್ತು : ಜ್ಯುವೆಲ್ಲರಿ ಕೌನ್ಸಿಲ್ ಆತಂಕ

Share. Facebook Twitter LinkedIn WhatsApp Email

Related Posts

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

2 Mins Read

SHOCKING: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಕರುಳು ಕಟ್, ಸಾವು; ಪತಿಯ ಗಂಭೀರ ಆರೋಪ

1 Min Read

BIG NEWS: ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಅಡುಗೆ ಎಣ್ಣೆ ದರದಲ್ಲಿ ದಿಢೀರ್ 3 ರೂ.ಏರಿಕೆ | Cooking oil price hike

1 Min Read
Recent News

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

ಕನ್ನಡಿಗರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ?: ಕೇಂದ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಹತ್ತು ಪ್ರಶ್ನೆ!

ಭಾರತೀಯರು ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗಬಹುದು? ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು ಗೊತ್ತಾ?

SHOCKING: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಕರುಳು ಕಟ್, ಸಾವು; ಪತಿಯ ಗಂಭೀರ ಆರೋಪ

State News
KARNATAKA

ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಟೈಪ್ 2 ಮಧುಮೇಹ ಹಾಗೂ ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ನೆಸ್ಲೆ ಇಂಡಿಯಾ ಲಿ.ನ…

ಕನ್ನಡಿಗರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ?: ಕೇಂದ್ರಕ್ಕೆ ಸಚಿವ ರಾಮಲಿಂಗಾರೆಡ್ಡಿ ಹತ್ತು ಪ್ರಶ್ನೆ!

SHOCKING: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಕರುಳು ಕಟ್, ಸಾವು; ಪತಿಯ ಗಂಭೀರ ಆರೋಪ

BIG NEWS: ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಅಡುಗೆ ಎಣ್ಣೆ ದರದಲ್ಲಿ ದಿಢೀರ್ 3 ರೂ.ಏರಿಕೆ | Cooking oil price hike

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.