ಕನ್ಯಾಕುಮಾರಿ: ತಮಿಳು ನಟ ಹಾಗೂ ಟಿವಿಪಿ (TVK) ಪಕ್ಷದ ಅಧ್ಯಕ್ಷ ವಿಜಯ್ ಅವರು ಚುನಾವಣಾ ಪ್ರಚಾರದ ಭಾಗವಾಗಿ ನಡೆಸುತ್ತಿದ್ದ ಸೈಕಲ್ ಸವಾರಿ ವೇಳೆ ನಡೆದ ಒಂದು ಸಣ್ಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ಹಾಸ್ಯಕ್ಕೆ ಕಾರಣವಾಗಿದೆ. ಅಭಿಮಾನಿಯೊಬ್ಬರು ಹೂವಿನ ಎಸಳುಗಳನ್ನು ಎಸೆದಿದ್ದಕ್ಕೆ ವಿಜಯ್ ಅವರು ಗಾಬರಿಯಾಗಿ ಪ್ರತಿಕ್ರಿಯಿಸಿದ ವಿಡಿಯೋ ಈಗ ಹೊಸ ‘ಮೀಮ್ ಟೆಂಪ್ಲೇಟ್’ ಆಗಿ ಬದಲಾಗಿದೆ.
ಏಪ್ರಿಲ್ 13, 2026 ರಂದು ಕನ್ಯಾಕುಮಾರಿಯಲ್ಲಿ ಸೈಕಲ್ ರ್ಯಾಲಿ ನಡೆಸುತ್ತಿದ್ದಾಗ ಈ ವಿಚಿತ್ರ ಘಟನೆ ಸಂಭವಿಸಿದೆ.
ವಿಜಯ್ ಅವರು ಸೈಕಲ್ ತುಳಿಯುತ್ತಾ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಅತೀವ ಪ್ರೀತಿಯಿಂದ ಹೂವಿನ ಎಸಳುಗಳನ್ನು ತುಂಬಿದ್ದ ಚೆಂಡಿನಂತಹ ವಸ್ತುವನ್ನು ಅವರತ್ತ ಎಸೆದರು. ಆದರೆ ಇದನ್ನು ಅಪಾಯಕಾರಿ ವಸ್ತು ಎಂದು ತಪ್ಪಾಗಿ ಭಾವಿಸಿದ ವಿಜಯ್, ತಕ್ಷಣವೇ ಗಾಬರಿಯಿಂದ ಸೈಕಲ್ ಬಿಟ್ಟು ಹಾರಿ ಪಕ್ಕದಲ್ಲಿದ್ದ ವ್ಯಾನ್ನತ್ತ ಓಡಿದರು.ವಿಜಯ್ ಅವರ ಈ ‘ಪ್ಯಾನಿಕ್’ ರಿಯಾಕ್ಷನ್ ನೋಡಿದ ನೆಟ್ಟಿಗರು ಇದನ್ನು ಸಿನಿಮಾ ದೃಶ್ಯಗಳಿಗೆ ಹೋಲಿಸಿ ತರಹೇವಾರಿ ಮೀಮ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ಮಾಸ್ಟರ್ ಎಂದುಕೊಂಡಿದ್ದು ಬ್ಲಾಸ್ಟರ್ ಎಂದು ಓಡಿಹೋದರು” ಎಂಬಂತಹ ಹಾಸ್ಯದ ಸಾಲುಗಳು ಎಕ್ಸ್ (X) ನಲ್ಲಿ ಟ್ರೆಂಡ್ ಆಗುತ್ತಿವೆ.
ವಿಜಯ್ ಅಭಿಮಾನಿಗಳು ತಮ್ಮ ನಾಯಕನ ಪರವಾಗಿ ನಿಂತಿದ್ದಾರೆ. “ಹಿಂದೆ ನಡೆದ ಕೆಲವು ಕಹಿ ಘಟನೆಗಳಿಂದಾಗಿ ಅವರು ಸುರಕ್ಷತೆಯ ದೃಷ್ಟಿಯಿಂದ ಹಾಗೆ ಪ್ರತಿಕ್ರಿಯಿಸಿರಬಹುದು. ಅದನ್ನು ಹಾಸ್ಯ ಮಾಡುವುದು ಸರಿಯಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.ಸಾರ್ವಜನಿಕ ರ್ಯಾಲಿಗಳಲ್ಲಿ ನಟರ ಮೇಲೆ ಇಂತಹ ವಸ್ತುಗಳನ್ನು ಎಸೆಯುವುದು ಭದ್ರತಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಘಟನೆ ನಡೆದ ಕೂಡಲೇ ಭದ್ರತಾ ಸಿಬ್ಬಂದಿ ವಿಜಯ್ ಸುತ್ತಲೂ ಕಾವಲು ನಿಂತರು.
A video taken down by @TVKVijayHQ is now going viral everywhere.
During his cycle campaign, Vijay suddenly threw his cycle and ran back as if it was a bomb when a fan tried to shower flowers on him. pic.twitter.com/imuDSz245j
— Telangana Maata (@TelanganaMaata) April 13, 2026








