ಚೆನ್ನೈ(ತಮಿಳುನಾಡು): ತಮಿಳು ನಟ ವಿಶಾಲ್(Vishal) ಅವರ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟಂಬರ್​ 26 ರಾತ್ರಿ ಈ ಘಟನೆ ನಡೆದಿದೆ.

ವಿಶಾಲ್ ಅವರು ತಮ್ಮ ಕುಟುಂಬದೊಂದಿಗೆ ಚೆನ್ನೈನ ಅಣ್ಣಾನಗರ 12ನೇ ಬೀದಿಯಲ್ಲಿ ವಾಸವಾಗಿದ್ದಾರೆ. ಸೆಪ್ಟಂಬರ್​ 26 ರಾತ್ರಿ ಇವರ ಮನೆ ಬಳಿ ಕಾರಿನಲ್ಲಿ ಬಂದ ಕೆಲ ಅಪರಿಚಿತ ವ್ಯಕ್ತಿಗಳು ಮನೆಗೆ ಕಲ್ಲು ಎಸೆದಿದ್ದು, ಮನೆಯ ಕಿಟಕಿ ಗಾಜುಗಳು ಒಡೆದಿವೆ. ನಂತ್ರ ಆರರೋಪಗಳು ಪರಾರಿಯಾಗಿದ್ದಾರೆ.

ಘಟನೆ ಬಳಿಕ ವಿಶಾಲ್ ಪರವಾಗಿ ಅವರ ಮ್ಯಾನೇಜರ್ ಹರಿ ಕೃಷ್ಣನ್ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ʻವಿಶಾಲ್ ತನ್ನ ಕುಟುಂಬದೊಂದಿಗೆ ಚೆನ್ನೈನ ಅಣ್ಣಾ ನಗರದಲ್ಲಿ ವಾಸಿಸುತ್ತಿದ್ದಾರೆ. 26-09-2022 ರಾತ್ರಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವಿಶಾಲ್ ಅವರ ಮನೆಯ ಮೇಲೆ ಕಲ್ಲಿನ ದಾಳಿ ನಡೆಸಿದ್ದಾರೆ. ಅದಕ್ಕೆ ಪುರಾವೆಯಾಗಿ ಈ ದೂರಿನಲ್ಲಿ ನಮ್ಮ ಮನೆಗೆ ಅಳವಡಿಸಿರುವ ಸಿಸಿಟಿವಿ ವಿಡಿಯೋ ರೆಕಾರ್ಡಿಂಗ್ ಅನ್ನು ಲಗತ್ತಿಸಿದ್ದೇವೆ. ಆದ್ದರಿಂದ ಈ ದೂರನ್ನು ಸ್ವೀಕರಿಸಿ ತನಿಖೆ ನಡೆಸಿ ವಿಶಾಲ್ ಮನೆ ಮೇಲೆ ದಾಳಿ ಮಾಡಿದ ನಿಗೂಢ ವ್ಯಕ್ತಿಗಳನ್ನು ಪತ್ತೆ ಮಾಡಿ ತಕ್ಕ ಶಿಕ್ಷೆ ನೀಡಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆʼ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ವಿಶಾಲ್ ಅವರು ಹೊರಗೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು ಎನ್ನಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

BIG NEWS: ಪಾಕ್ ಮಾಜಿ ಅಧ್ಯಕ್ಷ ʻಆಸಿಫ್ ಅಲಿ ಜರ್ದಾರಿʼ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು | Asif Ali Zardari

BIG NEWS: ದೇಶದಲ್ಲಿ PFI ನಿಷೇಧ ಅತ್ಯಂತ ಸಮರ್ಥ ನಿರ್ಧಾರ;ನಳಿನ್‌ ಕುಮಾರ್‌ ಕಟೀಲ್‌

BIG NEWS: PFI ಪರವಾಗಿ ಮಾತನಾಡಿದ್ರೆ ‘ಕಠಿಣ ಕಾನೂನು ಕ್ರಮ’: ಖಡಕ್‌ ವಾರ್ನಿಂಗ್‌ ನೀಡಿದ ಡಿಜಿಪಿ ಪ್ರವೀಣ್ ಸೂದ್

Share.
Exit mobile version