ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ಹೇಳಿ, ಮಂಚಕ್ಕೆ ಕರೆದಂತ ಆರೋಪದಲ್ಲಿ ನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ನಟಿ ಅಮೂಲ್ಯಗೌಡ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಮಂಚಕ್ಕೆ ಬಾ ಎಂಬುದಾಗಿ ನಿರ್ದೇಶಕ ಸೂರ್ಯ ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ್ದರಂತೆ. ಇದಕ್ಕೆ ಸಿಟ್ಟಾದಂತ ನಟಿ ಅಮೂಲ್ಯಗೌಡ ಆಕ್ಷೇಪಿಸಿದಾಗ, ನೀನು ಯಾರಿಗೆ ಹೇಳಿಕೊಳ್ತೀಯೋ ಹೇಳಿಕೋ ಹೋಗು, ಯಾರಿಗೆ ದೂರು ಕೊಡ್ತೀಯೋ ಕೊಡು ಹೋಗು ಎಂಬುದಾಗಿ ಅವಾಜ್ ಹಾಕಿದ್ದರಂತೆ.

ಈ ಹಿನ್ನಲೆಯಲ್ಲಿ ಏಪ್ರಿಲ್.30ರಂದು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ರಾತ್ರಿ ತೆರಳಿದ್ದಂತ ನಟಿ ಅಮೂಲ್ಯಗೌಡ ಅವರು, ನಿರ್ದೇಶಕ ಸೂರ್ಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಂದು ನಿರ್ದೇಶಕ ಸೂರ್ಯ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ನಿರ್ದೇಶಕ ಸೂರ್ಯ ಅವರು ನಟಿ ಅಮೂಲ್ಯಗೌಡ ಅವರಿಗೆ ಆಡಿಷನ್ ಗೆ ಕರೆಯುವ ನೆಪದಲ್ಲಿ ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದರಂತೆ. ವಾಟ್ಸಾಪ್ ನಲ್ಲಿ ಕೆಟ್ಟದ್ದಾಗಿ ಮೆಸೇಜ್ ಮಾಡಿದ್ದಾನೆ. ಸಿನಿಮಾದಲ್ಲಿ ನಟಿಸೋದಕ್ಕೆ ಅವಕಾಶ ಕೊಡಬೇಕು ಅಂದ್ರೆ ಮಂಚಕ್ಕೆ ಬರುವಂತೆಯೂ ಕರೆದಿದ್ದಾರೆ ಎಂಬುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ

Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share.
Exit mobile version