ಬೆಂಗಳೂರು: ಕೆಲ ದಿನಗಳ ಹಿಂದೆ ಸುರಿದಂತ ಮಳೆಯಿಂದಾಗಿ ( Bengaluru Rain ) ಬೆಂಗಳೂರು ಕೆರೆಯಂತಾಗಿತ್ತು. ಅದರಲ್ಲೂ ಅಂಡರ್ ಪಾಸ್ ನಲ್ಲಿ ಭಾರೀ ನೀರಿನಲ್ಲಿ ( Heavy Rain ) ವಾಹನಗಳೇ ಮುಳುಗಡೆಯಾಗುವಂತೆ ಆಗಿದ್ದವು. ಈ ಹಿನ್ನಲೆಯಲ್ಲಿಯೇ ಮಳೆ ಬಂದಾಗ ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸುವಂತಿಲ್ಲ. ನಿಲ್ಲಿಸಿದ್ರೇ ದಂಡ ಹಾಕೋದಾಗಿ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ( Ravikantegowdha ) ಖಡಕ್ ಎಚ್ಚರಿಕೆ ನೀಡಿದ್ದಾರೆ.
BIGG NEWS : “ನಾನು ಸತ್ತಿದ್ದೇನೆ ಎಂಬ ಸುದ್ದಿ ಮಾಡಿದ್ರು” ; ‘ವಿಚಿತ್ರ ವದಂತಿ’ ನೆನೆದು ನಕ್ಕ ‘ಜಡೇಜಾ’
ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು, ನಗರದ ನಾಯಂಡಹಳ್ಳಿ, ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್ ನಲ್ಲಿ ಮಳೆ ಬಂದ್ರೇ ವಾಹನ ನಿಲ್ಲಿಸಲಾಗುತ್ತಿದೆ. ಹೀಗೆ ವಾಹನ ನಿಲ್ಲಿಸೋದ್ರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿ, ಟ್ರಾಫಿಕ್ ಜಾಮ್ ಆಗುತ್ತಿದೆ ಎಂದರು.
ನಗರದಲ್ಲಿನ ಅಂಡರ್ ಪಾಸ್ ಗಳಲ್ಲಿ ವಾಹನ ನಿಲ್ಲಿಸೋದ್ರಿಂದ ಭಾರೀ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿ ಅಪಘಾತಗಳಾಗುತ್ತಿವೆ. ಈ ಹಿನ್ನಲೆಯಲ್ಲಿ ನಗರದ ಯಾವುದೇ ಅಂಡರ್ ಪಾಸ್ ಗಳಲ್ಲಿ ಇನ್ಮುಂದೆ ವಾಹನ ನಿಲ್ಲಿಸುವಂತಿಲ್ಲ. ನಿಲ್ಲಿಸಿದ್ರೇ ಅಂತಹ ವಾಹನಗಳ ಮಾಲೀಕರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಭಾವೈಕ್ಯಕ್ಕೆ ಸಾಕ್ಷಿಯಾದ ಎನ್ಆರ್ ಪುರದ ಗಣಪತಿ ಹಬ್ಬ: ಇಲ್ಲಿ ಗಣೇಶೋತ್ಸವಕ್ಕೆ ಮುಸ್ಲಿಂ ಲೇಡಿ ಪ್ರೆಸಿಡೆಂಟ್