ದಕ್ಷಿಣ ಕನ್ನಡ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಕರಾವಳಿ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.
ಸಾಲು ಸಾಲು ರಜೆ ಇದ್ದ ದಿನ ಹಾಗೂ ಸಾಮಾನ್ಯ ದಿನಗಳಲ್ಲಿ ಈ ಟೂರ್ ಪ್ಯಾಕೇಜ್ ಲಭ್ಯವಿರಲಿದ್ದು, ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.
ಹೇಗಿರುತ್ತೆ ಈ ಪ್ಯಾಕೇಜ್..ಬೆಲೆ ಎಷ್ಟು..?
ಕುಮಟಾದಿಂದ 7.30ಕ್ಕೆ ಹೊರಡುವ ಬಸ್ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು 8.15ಕ್ಕೆ ತಲುಪಲಿದೆ ನಂತರ 9.45ಕ್ಕೆ ಮಿರ್ಜಾನ ಕೋಟೆ, 11.15ಕ್ಕೆ ಅಪ್ಸರಕೊಂಡ ತಲುಪಿ ಬಳಿಕ. 12.30ಕ್ಕೆ ಇಡಗುಂಜಿ ದೇವಾಲಯ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಮುರುಡೇಶ್ವರ ದೇವಸ್ಥಾನ ಮತ್ತು ಬೀಚ್ಗೆ ತಲುಪಲಿದೆ.
ಕೊನೆ ಹಂತವಾಗಿ ಇಕೋ ಬೀಚ್ ಮತ್ತು ಶರಾವತಿ ಕಾಂಡ್ಲಾ ಮ್ಯಾಂಗ್ರೋವ ಬೋರ್ಡ್ ವಾಕ್ ಹೊನ್ನಾವರಕ್ಕೆ 4 ಗಂಟೆಗೆ ತಲುಪಲಿದೆ. ನಂತರ 7 ಗಂಟೆಗೆ ಬಸ್ ಗೋಕರ್ಣಕ್ಕೆ ಆಗಮಿಸಲಿದೆ. ಈ ಪ್ಯಾಕೇಜ್ನಲ್ಲಿ ವಯಸ್ಕರಿಗೆ ದರ 300 ರೂ.ಗಳು. ಮಕ್ಕಳಿಗೆ 250 ರೂ.ಗಳು ನಿಗದಿ ಮಾಡಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆ ಮಾಹಿತಿ ನೀಡಿದೆ.
BIGG NEWS : ನಾಳೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ : ಧರ್ಮಸ್ಥಳದ ಪೂಜಾ ಸಮಯದಲ್ಲಿ ಬದಲಾವಣೆ | Chandra Grahan 2022
BIGG NEWS: ಕಾಂಗ್ರೆಸ್ ನಾಯಕರಿಗೆ ಐದು ಅಂಶ ಟಾಸ್ಕ್ ನೀಡಿದ ಮಲ್ಲಿಕಾರ್ಜುನ ಖರ್ಗೆ