ಕೊಪ್ಪಳ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿನಲ್ಲಿ ಮಟನ್ ಚಿಕನ್ ಅಂಗಡಿ ಒಂದು ಓಪನ್ ಆಗಿದ್ದು, ಇದೀಗ ಅಂಗಡಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ಈ ಒಂದು ಅಂಗಡಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಅಂಗಡಿಯ ಮಾಲಕ ಖಾದಿರ್ ಬಾಬಣ್ಣ ಕಲಾಲ್ 20 ವರ್ಷಗಳಿಂದ ಸಚಿವೆ ಶೋಭಾ ಅವರ ಅಭಿಮಾನಿಯಾಗಿದ್ದಾರೆ. ಅಂಗಡಿಗೂ ಸಹ ಶೋಭಾ ಕರಂದ್ಲಾಜೆ ಮಟನ್ ಚಿಕನ್ ಸೆಂಟರ್ ಎನ್ನುವ ಬೋರ್ಡ್ ಹಾಕಿಸಿದ್ದಾರೆ.
ಕುಕನೂರು ಪಟ್ಟಣದ ಯುವಕ ಖಾಧೀರ್ ಕಲಾಲ್ ಎನ್ನುವ ಯುವಕ ಆರಂಭಿಸಿರುವ ಉದ್ಯಮ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಅದಕ್ಕೆ ಆತ ತನ್ನ ಉದ್ಯಮಕ್ಕೆ ಇಟ್ಟಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು. ಪಟ್ಟಣದ ನಿವಾಸಿ ಖಾಧೀರ್ ಬಾಬಣ್ಣ ಕಲಾಲ್ ಎನ್ನುವ ಯುವಕ ಕಳೆದ 20 ವರ್ಷಗಳಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ.
ಕುಕನೂರಿನ ಖಾಧೀರ್ ಬಾಬಣ್ಣ ಕಲಾಲ ಎನ್ನುವ ಯುವಕ 2008ರಲ್ಲಿ ಚುನಾವಣೆಗೆ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಆಗಿದ್ದರು. ಅವರ ರಾಜಕೀಯ ಮಾತುಗಳನ್ನು ಕೇಳಿ ಅಭಿಮಾನಿ ಆಗಿದ್ದೇನೆ ಎಂದಿದ್ದಾರೆ. ಖಾಧೀರ್ ಕಲಾಲ್ ಇದೀಗ ಕುಕನೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಆಂಡ್ ಚಿಕನ್ ಸೆಂಟರ್ ಹೆಸರು ಬರೆಸಿದ್ದಾನೆ. ನಾಮಫಲಕದ ಹೆಸರೀಗ ಭಾರೀ ವೈರಲ್ ಆಗಿದೆ.