ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೂರ್ಯ ಮತ್ತು ತ್ರಿಶಾ ಅಭಿನಯದ ಬಹುನಿರೀಕ್ಷಿತ ‘ಕರುಪ್ಪು’ (Karuppu) ಚಿತ್ರದ ಬಿಡುಗಡೆಯ ದಿನದಂದು ಬೆಳಗ್ಗೆ 9 ಗಂಟೆಯ ಪ್ರದರ್ಶನಕ್ಕೆ (Special Shows) ವಿಶೇಷ ಅನುಮತಿ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಕೂಡಲೇ ಚಿತ್ರರಂಗದ ಬೇಡಿಕೆಗೆ ಸ್ಪಂದಿಸಿರುವುದು ಅಭಿಮಾನಿಗಳಲ್ಲಿ ಸಡಗರ ಮೂಡಿಸಿದೆ.
ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’, ಮುಖ್ಯಮಂತ್ರಿ ಕಚೇರಿಯಲ್ಲಿ ವಿಜಯ್ ಅವರು ಫೈಲ್ ಸಹಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡು ವಿಶೇಷ ಧನ್ಯವಾದ ಅರ್ಪಿಸಿದೆ. “ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು, ಮೇ 14 ರಿಂದ ‘ಕರುಪ್ಪು’ ಚಿತ್ರದ 9 AM ಶೋಗಳು ಆರಂಭವಾಗಲಿವೆ” ಎಂದು ತಿಳಿಸಿದೆ.
ಈ ಹಿಂದೆ ತಮಿಳುನಾಡಿನಲ್ಲಿ ಮುಂಜಾನೆಯ ಶೋಗಳಿಗೆ (Early Morning Shows) ಕಠಿಣ ನಿರ್ಬಂಧಗಳಿದ್ದವು. ಆದರೆ ವಿಜಯ್ ಸಿಎಂ ಆದ ನಂತರ ಚಿತ್ರರಂಗದ ಹಿತದೃಷ್ಟಿಯಿಂದ ಮೊದಲ ಬಾರಿಗೆ ಇಂತಹ ವಿನಾಯಿತಿ ನೀಡಲಾಗಿದೆ.
ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ ಮತ್ತು ತ್ರಿಶಾ ಬಹಳ ವರ್ಷಗಳ ನಂತರ ಒಂದಾಗಿ ನಟಿಸುತ್ತಿದ್ದಾರೆ. ಚಿತ್ರವು ನಾಳೆ (ಮೇ 14) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.








