ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಬಗ್ಗೆ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಜನಪ್ರಿಯ ಮಾಡೆಲ್ ಅಂತ ದರ ಹೆಚ್ಚಳ, ಭ್ರಷ್ಟಾಚಾರ, ರೈತರು, ಯುವಕರಿಗೆ ವಂಚನೆ ಮಾಡಿದೆ ಎಂದು ಕಿಡಿಕಾರಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ದೇಶಾದ್ಯಂತ ಕುಖ್ಯಾತಿಗಳಿಸಿ, ಕರುನಾಡನ್ನು ದಿವಾಳಿಯಂಚಿಗೆ ತಳ್ಳಿದ ಸಿದ್ಧರಾಮಯ್ಯ ಅವರ ಪಂಚನೀತಿಗಳು ಈಗ ತಿಗಣೆರೂಪ ಪಡೆದುಕೊಂಡು ಕನ್ನಡಿಗರ ರಕ್ತ ಹೀರತೊಡಗಿವೆ ಎಂದಿದೆ.

ಪ್ರಬುದ್ಧ ಕನ್ನಡಿಗರು ಏನೂ ಕೇಳಲಿಲ್ಲ. ಆದರೆ, ಅಧಿಕಾರದ ಹಪಾಹಪಿಗೆ ಬಿದ್ದ ಕಾಂಗ್ರೆಸ್  ಜನರಿಗೆ ಅಂಗೈನಲ್ಲಿ ಆಕಾಶ ತೋರಿಸಿ, ಈಗ ಬೆಲೆ ಏರಿಕೆ ಎಂಬ ಚಕ್ರವ್ಯೂಹದೊಳಗೆ ಸಿಲುಕಿಸಿ ನೆಮ್ಮದಿ ಕಿತ್ತುಕೊಂಡಿದೆ ಎಂಬುದಾಗಿ ವಾಗ್ಧಾಳಿ ನಡೆಸಿದೆ.

ಮಾನ್ಯ ಸಿದ್ಧರಾಮಯ್ಯನವರು ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಜಾಸ್ತಿ. ಮಿತಿ ಮೀರಿದ ಭ್ರಷ್ಟಾಚಾರ, ಬೆಲೆ ಏರಿಕೆ, ರೈತರು-ಯುವಕರ ಕೈಗೆ ಚೊಂಬು, ಹದಗೆಟ್ಟ ಕಾನೂನು ಸುವ್ಯವಸ್ಥೆ, ಅಭಿವೃದ್ಧಿಗಿಲ್ಲ ನಯಾಪೈಸೆ. ಇದು ಕಾಂಗ್ರೆಸ್ ಸರ್ಕಾರದ ಬಳುವಳಿ ಅಂತ ಕಿಡಿಕಾರಿದೆ.

ಬೆಂಗಳೂರಲ್ಲಿ ‘HIV’ ಸೊಂಕಿತನ ಮೇಲೆ ‘ಸಲಿಂಗಕಾಮಿ’ಯಿಂದ ಅತ್ಯಾಚಾರ : ಮನೆಯಲ್ಲಿದ್ದ ನಗದು ದೋಚಿ ಪರಾರಿ

ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗಲೇಬೇಕು, ಆಗೇ ಆಗುತ್ತಾರೆ : ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ

Share.
Exit mobile version